ಸೈನಿಕ ಸಂದೀಪ್ ಪಾರ್ಥಿವ ಶರೀರ ನೋಡದ ಜನಪ್ರತಿನಿಧಿಗಳು:ಸಾರ್ವತ್ರಿಕ ಅಸಮಾಧಾನ, ಆಕ್ರೋಶ.

ಜಾರಕಂಡ ರಾಜ್ಯದ ಹಜಾರಿಭಾಗ್ ಬರಿ ಸಿ.ಆರ್.ಪಿ.ಫ್ ಕೋಬ್ರಾ ಕಮಾಂಡೋ ಪಡೆಯ ಯೋಧ ಸಿದ್ಧಾಪುರ ಹಂಗಾರಖಂಡದ ಸಂದೀಪ್ ನಾರಾಯಣ ನಾಯ್ಕ ಸಾವು ಉತ್ತರ ಕನ್ನಡ ಜಿಲ್ಲೆಯ ಜನರ ಮನಸ್ಸನ್ನು ಘಾಸಿ ಮಾಡಿದೆ. ಈ ಆಕಸ್ಮಿಕ ಸಾವಿನ ಹಿನ್ನೆಲೆಯಲ್ಲಿ ಜಿಲ್ಲೆ, ಪರಜಿಲ್ಲೆಗಳ ಜನರು ಸಾಂತ್ವನ ಹೇಳಿದ್ದಾರೆ. ಆದರೆ ಶಿರಸಿ-ಸಿದ್ದಾಪುರದ ಶಾಸಕ ರಾಜ್ಯ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕೇಂದ್ರದ ಮಾಜಿ ಸಚಿವ ಸಂಸದ ಅನಂತಕುಮಾರ ಹೆಗಡೆ ಯೋಧನ ಸಾವನ್ನು ಉಪೇಕ್ಷಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಗುರುವಾರ ಮುಂಜಾನೆ ಜಾರಕಂಡ ಹಜಾರಿಭಾಗನಿಂದ ಹೊರಟ ಯೋಧನ ಶವ ಇಂದು ಮುಂಜಾನೆ ಗೋವಾ ಮೂಲಕ ಕಾರವಾರ ಮಾರ್ಗವಾಗಿ ಶಿರಸಿ ತಲುಪಿ ನಂತರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆಯೊಂದಿಗೆ ಸ್ವಗ್ರಾಮ ತಲುಪಿತು. ಈ ಅವಧಿಯಲ್ಲಿ ತ್ಯಾಗಲಿ, ಕಾನಸೂರು ಗ್ರಾಮ ಪಂಚಾಯತ್ ಗಳ ಜನಪ್ರತಿನಿಧಿಗಳು ಭೇಟಿ ನೀಡಿದ್ದು ಬಿಟ್ಟರೆ ಈ ಭಾಗದ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು, ಅಧ್ಯಕ್ಷರು ಬರಲೇ ಇಲ್ಲ. ಕೆಲವು ಮುಖಂಡರು, ರಾಜಕೀಯ ನಾಯಕರು ಸೌಜನ್ಯದ ಭೇಟಿ ಮಾಡಿ ಯೋಧನ ಶವದ ಅಂತಿಮ ದರ್ಶನ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇಂದು ಮುಂಜಾನೆ ಎರಡ್ಮೂರು ಘಂಟೆಗಳ ಕಾಲ ಯೋಧನ ಶವದ ಅಂತಿಮ ದರ್ಶನ ನಡೆದರೂ ಸ್ವ ಕ್ಷೇತ್ರ, ಊರಿನಲ್ಲಿದ್ದ ಶಾಸಕ, ಸಂಸದರು ಯೋಧನ ಪಾರ್ಥಿವ ಶರೀರ ದರ್ಶನ ಮಾಡದ ಬಗ್ಗೆ ಸಾರ್ವಜನಿಕ ವಲಯ, ಸಾಮಾಜಿಕ ಜಾಲತಾಣಗಳಲ್ಲಿ ತೀವೃ ವಿರೋಧ ವ್ಯಕ್ತವಾಗಿದೆ. ಶಿರಸಿ ಮೂಲದ ಸಂಸದ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಇಂದು ಸ್ವ ಕ್ಷೇತ್ರದಲ್ಲೇ ಇದ್ದು ಸಿದ್ಧಾಪುರದ ಕೊಂಡ್ಲಿ ಜಾತ್ರೆ, ಹಬ್ಬಗಳ ಮೋಜು ಮಸ್ತಿಯಲ್ಲಿ ತೊಡಗಿ ಸೈನಿಕನನ್ನು ಉಪೇಕ್ಷಿಸಿರುವ ಈ ಜನಪ್ರತಿನಿಧಿಗಳ ಉಡಾಫೆ, ಬೇಜವಾಬ್ಧಾರಿತನ ಟೀಕಿಸಿರುವ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.

ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಶಿರಸಿ ಅಜ್ಜೀಬಳದ ದಿನೇಶ್ ನಾಯ್ಕ ಶಾಸಕ, ಸಂಸದರು ಹಿಂದತ್ವ, ಕೋಮುವಾದದ ಅಮಲಲ್ಲಿ ತೇಲುತಿದ್ದಾರೆ. ಚುನಾವಣಾ ವೇಳೆ ಕ್ಷೇತ್ರ, ಸೈನಿಕರು, ಹಿಂದುತ್ವದ ಬೂಟಾಟಿಕೆಯ ಬೊಗಳೆ ಬಿಡುವ ನಮ್ಮ ಪ್ರತಿನಿಧಿಗಳು ಸೈನಿಕನ ಸಾವನ್ನು ಉಪೇಕ್ಷಿಸಿ ನಮಗೆ ದ್ರೋಹ ಬಗೆದಿದ್ದಾರೆ ಇವರು ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದರೆ ಅವರ ವಿರುದ್ಧ ಸಾರ್ವಜನಿಕ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಆಕ್ರೋಶದ ಮಾತುಗಳನ್ನಾಡಿರುವ ಜಿಲ್ಲಾ ಜನಪರ ವೇದಿಕೆಯ ಸದಸ್ಯ ಕೆ.ಟಿ. ನಾಯ್ಕ ಹೆಗ್ಗೇರಿ 25 ವರ್ಷಗಳಿಂದ ದೇವರು, ಧರ್ಮದ ಕ್ಷುಲ್ಲಕ ರಾಜಕೀಯ ಮಾಡುತ್ತಿರುವ ಈ ಕ್ಷೇತ್ರದ ಶಾಸಕ, ಸಂಸದರು ಜಾತ್ರೆ, ಹಬ್ಬ, ಧರ್ಮದ ನಾಟಕ ಮಾಡುತ್ತಾ ದೇವರ ಪೂಜೆ ಮಾಡುವ ಪುರೋಹಿತರಾಗಲು ಲಾಯಕ್ಕೇ ಹೊರತು ಇವರು ಜನಪ್ರತಿನಿಧಿಗಳಾಗಲು ಅಯೋಗ್ಯರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ತ ಸೈನಿಕನ ಅಂತಿಮಯಾತ್ರೆ, ಶವಸಂಸ್ಕಾರದ ಕ್ರೀಯಾವಿಧಿ ನಡೆಯುತಿದ್ದರೆ… ಇತ್ತ ಗೌರವಾನ್ವಿತ ಸಭಾಪತಿಗಳು ಜಾತ್ರೆಯಲ್ಲಿ ಪಕ್ಷದ ಲೋಕಲ್ ಮುಖಂಡರ ಜೊತೆ ಪೋಟೋ ಗಳಿಗೆ ಪೋಜ್ ನೀಡುತ್ತಿರುವ ದೃಶ್ಯ
ಸಾಮಾಜಿಕ ಜಾಲತಾಣದಲ್ಲಿ ಸಂಸದ,ಶಾಸಕರಿಗೆ ಶಾಕ್…

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *