

ಮಕ್ಕಳಲ್ಲಿಯೂ ತಮ್ಮದೇ ಆದ ಕಲ್ಪನೆ, ಪರಿಕಲ್ಪನೆಗಳು, ಕೌಶಲಗಳು ಇರುತ್ತವೆ.ಅವುಗಳನ್ನು ಬರಹರೂಪಕ್ಕೆ ಇಳಿಸಲು ಅವರಿಗೆ ಅಭ್ಯಾಸ ಬೇಕಾಗುತ್ತದೆ. ಅಂತಹ ಅಭ್ಯಾಸದ ಅವಕಾಶ , ಮಾರ್ಗದರ್ಶನ ಸಿಕ್ಕಾಗ ಅವರಲ್ಲಿಯೂ ಸೃಜನಶೀಲ ಬರವಣಿಗೆ ಸಾಧ್ಯವಾಗುತ್ತದೆ.
ಅದಕ್ಕಾಗಿ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ, ಮಕ್ಕಳ ಮಂದಾರ ಪತ್ರಿಕಾ ಬಳಗ ವತಿಯಿಂದ ಜಿಲ್ಲೆಯಾದ್ಯಂತ ಸೃಜನಶೀಲ ಬರವಣಿಗೆಯ ಕಾರ್ಯಗಾರ ಏರ್ಪಡಿಸಲಾಗುತ್ತಿದೆ ಎಂದು ಸೊರಬದ ಮೆಟ್ರಿಕ್ ಪೂರ್ವ ಎಸ್ ಸಿ ಎಸ್ಟಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ರವಿರಾಜ್ ಮಂಡಗಳಲೆ ಅವರು ಹೇಳಿದರು.

ಮಕ್ಕಳಲ್ಲಿ ಸೃಜನಶೀಲ ಬರವಣಿಗೆ ಸಾಮರ್ಥ್ಯ ಹೆಚ್ಚಿಸಲು ಮಕ್ಕಳ ಸಾಹಿತಿಗಳೂ ಆದ ರವಿರಾಜ್ ಅವರು ರೂಪಿಸಿರುವ ಸಾಹಿತ್ಯ ಅಧ್ಯಯನ ಸಾಮಗ್ರಿಗಳನ್ನು ಮಕ್ಕಳಿಗೆ ನೀಡಿ ಸುಮಾರು 40 ಸಾಹಿತ್ಯ ಆಸಕ್ತ ಪ್ರತಿಭಾವಂತ ಮಕ್ಕಳಿಗೆ ತರಬೇತಿ ನೀಡಿದರು.ಮಕ್ಕಳು ಕ್ರಿಯಾಶೀಲವಾಗಿ ಆರು ತಂಡಗಳಾಗಿ ತೊಡಗಿಕೊಂಡು ಸ್ಥಳದಲ್ಲಿಯೇ ಕಥೆ,ಕವನ,ಕಿರುನಾಟಕ ಸಹ ರಚಿಸಿದರು. ಸಂಜೆ ವೇಳೆಗೆ ಸ್ಥಳದಲ್ಲಿಯೇ ಮಕ್ಕಳ ಮಂದಾರ ಕೈಬರಹ ಪತ್ರಿಕೆ ಸಿದ್ದಪಡಿಸಿ ಗಮನ ಸೆಳೆದರು.
ಉಚಿತವಾಗಿ ಜಿಲ್ಲೆಯಾದ್ಯಂತ ಕಾರ್ಯಾಗಾರ ಏರ್ಪಡಿಸಲು ಸಹಯೋಗಕ್ಕಾಗಿ 9980952630 ಗೆ ಕರೆ ಮಾಡಲು ಕೋರಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಉಮೇಶ್ ಭದ್ರಾಪುರ ಅವರು ಉಪನ್ಯಾಸ ನೀಡಿದರು. ನಿಲಯ ಪಾಲಕರಾದ ಉಮೇಶ್ ಮಂಡಗಳಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಖಜಾಂಚಿ ರವೀಂದ್ರ ಕಾರ್ಯಕ್ರಮ ನಿರ್ವಹಿಸಿದರು.ನಿಲಯದ ಸಿಬ್ಬಂದಿ ಸಹ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
