ಮಿಲಿಟರಿ ಪೊಲೀಸ್ ದಳದಲ್ಲಿ ತರಬೇತಿ ಮುಗಿಸಿದ 100 ಮಹಿಳೆಯರ ಮೊದಲ ತಂಡ

ಸೇನೆಗೆ ಮತ್ತಷ್ಟು ಮಹಿಳೆಯರು:ಮಿಲಿಟರಿ ಪೊಲೀಸರ ದಳ(ಸಿಎಂಪಿ)ಯ 100 ಮಹಿಳೆಯರ ಮೊದಲ ತಂಡದ ತರಬೇತಿ ಸರಿಸುಮಾರು ಮುಗಿದಿದ್ದು ತೀವ್ರ ತರಬೇತಿ ನಂತರ ಮೇ 8ರಂದು ಲ್ಯಾನ್ಸ್ ನಾಯಕ್ಸ್ ಆಗಿ ಪದವಿ ಪಡೆಯಲಿದ್ದಾರೆ.

The first batch of women cadets in the Corps of Military Police (CMP) take part  in a combat training session at the CMP Centre in Bengaluru

ಬೆಂಗಳೂರು: ಮಿಲಿಟರಿ ಪೊಲೀಸರ ದಳ(ಸಿಎಂಪಿ)ಯ 100 ಮಹಿಳೆಯರ ಮೊದಲ ತಂಡದ ತರಬೇತಿ ಸರಿಸುಮಾರು ಮುಗಿದಿದ್ದು ತೀವ್ರ ತರಬೇತಿ ನಂತರ ಮೇ 8ರಂದು ಲ್ಯಾನ್ಸ್ ನಾಯಕ್ಸ್ ಆಗಿ ಪದವಿ ಪಡೆಯಲಿದ್ದಾರೆ.

ಇದೇ ಮೊದಲ ಬಾರಿಗೆ ಮಿಲಿಟರಿ ಪೊಲೀಸ್ ದಳ ಲ್ಯಾನ್ಸ್ ನಾಯಕ್ಸ್ ಹುದ್ದೆಗೆ ಮಹಿಳೆಯರನ್ನು ನೇಮಕಾತಿ ಮಾಡಲಾಗಿದೆ ಎಂದು ಕಾರ್ಪ್ಸ್ ಆರ್ಮಿ ಏರ್ ಡಿಫೆನ್ಸ್ ನ ಲೆಫ್ಟಿನೆಂಟ್ ಕರ್ನಲ್ ಜುಲೀ ಸಿಂಗ್ ತಿಳಿಸಿದ್ದಾರೆ. ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಯಲ್ಲಿ ಸೇರಿಸಿ ಇನ್ನಷ್ಟು ಪಡೆಯನ್ನು ಬಲಿಷ್ಠಗೊಳಿಸುವುದು ಉದ್ದೇಶವಾಗಿದೆ. 

https://imasdk.googleapis.com/js/core/bridge3.448.1_en.html#goog_362681005

ಅವರು ಪದವೀಧರರಾದ ನಂತರ, ಸಿಪಾಯಿಗಳು – ತರಬೇತಿ ಲ್ಯಾನ್ಸ್ ನಾಯ್ಕ್ಸ್ ಎಂದು ಕರೆಯಲ್ಪಡುವಂತೆ – ದೇಶಾದ್ಯಂತ 11 ಸ್ಥಳಗಳಲ್ಲಿ ವಿವಿಧ ಹುದ್ದೆಗಳನ್ನು ಅವರಿಗೆ ನಿಯೋಜಿಸಲಾಗುತ್ತದೆ. ಮಿಲಿಟರಿ ಕಾರ್ಯಾಚರಣೆಗಳು, ಚೆಕ್ ಪೋಸ್ಟ್‌ಗಳಲ್ಲಿ ಮತ್ತು ಶೋಧ ಕಾರ್ಯಾಚರಣೆಯ ಸಮಯದಲ್ಲಿ ಮಹಿಳೆಯರಿಗೆ ಹೊಡೆಯುವುದು, ಲೈಂಗಿಕ ದೌರ್ಜನ್ಯಗಳಾದ ಅತ್ಯಾಚಾರ, ಕಿರುಕುಳ ಮತ್ತು ಕುಟುಂಬ ಕಿರುಕುಳಗಳಲ್ಲಿ ಲೈಂಗಿಕ ಕಿರುಕುಳದ ತನಿಖೆಯನ್ನು ಲ್ಯಾನ್ಸ್ ನಾಯಕ್ಸ್ ಮಾಡಲಿದ್ದಾರೆ.

ನೇಮಕಾತಿಗೊಂಡವರಲ್ಲಿ 8 ಮಂದಿ ಕರ್ನಾಟಕದವರಾಗಿದ್ದು, 26 ಮಂದಿ ಹರ್ಯಾಣ, 27 ಮಂದಿ ಉತ್ತರ ಪ್ರದೇಶ, ಇಬ್ಬರು ಹಿಮಾಚಲ ಪ್ರದೇಶ, 6 ಮಂದಿ ಕೇರಳಿಗರು, ತಲಾ ಒಬ್ಬರು ದೆಹಲಿ, ಪಂಜಾಬ್ ಮತ್ತು ರಾಜಸ್ತಾನ, ಇಬ್ಬರು ಈಶಾನ್ಯ ಭಾರತದಿಂದ ಹಾಗೂ ಒಂದಿಬ್ಬರು ಬೇರೆ ರಾಜ್ಯದವರಾಗಿದ್ದಾರೆ.

ಹೆಚ್ಚಿನ ಸಿಪಾಯಿಗಳು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್‌ಸಿಸಿ)ನ ಹಿನ್ನೆಲೆ ಹೊಂದಿದ್ದು, 19ರಿಂದ 21 ವರ್ಷದ ನಡುವಿನವರಾಗಿದ್ದಾರೆ. ಎಂಭತ್ತು ಮಹಿಳೆಯರು ಇನ್ನೂ ಪದವಿಪೂರ್ವ ಶಿಕ್ಷಣ ವಿದ್ಯಾರ್ಥಿಗಳಾಗಿದ್ದು, ಅವರು ಸಿಎಂಪಿ ಕೇಂದ್ರ ಮತ್ತು ಶಾಲೆಯಿಂದ ಪದವಿ ಪಡೆದ ನಂತರ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಅವರಿಗೆ ಅನುಮತಿ ನೀಡಲಾಗುತ್ತದೆ.

ನನ್ನ ತಂದೆ 130 ವಾಯು ರಕ್ಷಣಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು. ಅದು ನನ್ನನ್ನು ಸೈನ್ಯಕ್ಕೆ ಸೇರಲು ಪ್ರೇರೇಪಿಸಿತು ಎಂದು ದ್ವಿತೀಯ ವರ್ಷದ ಬಿಎಸ್ಸಿ ಪದವಿ ಓದುತ್ತಿರುವ ಜ್ಯೋತಿ ಎಂ ಹಂಚಿನಮನಿ ಹೇಳಿದ್ದಾರೆ. ಇವರು ಬೈಲಹೊಂಗಲದವರಾಗಿದ್ದಾರೆ. ಸೇನೆಯಲ್ಲಿ ನನ್ನ ತಲೆಕೂದಲು ಕತ್ತರಿಸಬೇಕಾಗಿರುವುದರಿಂದ ಊರಿಗೆ ಹೋದಾಗ ಹಲವರು ನನ್ನನ್ನು ಗುರುತು ಹಿಡಿಯುವುದಿಲ್ಲ ಎನ್ನುತ್ತಾರೆ ಜ್ಯೋತಿ.

ಬೆಳಗಾವಿಯ ಕಾಗವಾಡದ ಅರಿತಿ ತಲ್ವರ್ ಕೂಡ ಬಹಳ ಬೇಗನೆ ತರಬೇತಿಗೆ ಸೇರಿದ್ದಾರೆ. ಎನ್ ಸಿಸಿ ತರಬೇತಿಯಿಂದಾಗಿ ನನಗೆ ಶಾರೀರಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸುಲಭವಾಯಿತು ಎನ್ನುತ್ತಾರೆ ಅವರು. ಅಪರಾಧ ತನಿಖಾ ತರಬೇತಿ ತನಗೆ ಇಷ್ಟವಾಯಿತು ಎನ್ನುತ್ತಾರೆ ಅವರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *