

ಯಡಿಯೂರಪ್ಪ ನವರ ವಿರುದ್ಧ ಈಶ್ವರಪ್ಪ ಸಮರ ಸಾರಿದಂತಿದೆ… ನೋ.. ಯುದ್ಧ, ಸಮರ ಏನಿಲ್ಲ ಇದೆಲ್ಲ ಮಾಮೂಲು ಯಾವ ಕಾಲದಲ್ಲಿ ಆಗಿಲ್ಲ ಹೇಳಿ ದೊಡ್ಡ ಸಾಯಬರ (ಬಂಗಾರಪ್ಪ) ಹೆಸರು ಗೋಪಾಲಗೌಡ ಹೇಳಿದಾಗ ಬೇರೆಯವರು ವಿರೋಧ ಮಾಡಿಲ್ಲವೆ. ಆಯಾ ಕಾಲದಲ್ಲಿ ಆಯಾ ಕಾಲದನಾಯಕರಿಗೆ ವಿರೋಧ,ಭಿನ್ನಮತ, ಬಂಡಾಯ ಎಲ್ಲವೂ ಮಾಮೂಲೇ.

ನೀವು..ಮಂತ್ರಿಯಾಗಲಿಲ್ಲ ಸೊರಬಾಕ್ಕೆ ಸೀಮಿತ ಆಗಿಬಿಟ್ಟಿರಾ… ಇಲ್ಲ ಸಚಿವನಾಗುವುದು,ಕೆಲಸಮಾಡುವುದು,ಅಧಿಕಾರ ಇವೆಲ್ಲಾ ಒಂದಕ್ಕೊಂದು ಪೂರಕ ಮತ್ತು ಪೂರಕ ಅಲ್ಲ ಕೂಡಾ…. ಮುಖ್ಯಮಂತ್ರಿಗಳೇ ನಮ್ಮ ಜಿಲ್ಲೆಯವರು, ಹಿರಿಯರು ಸಚಿವ ಈಶ್ವರಪ್ಪ ಇದ್ದಾರೆ. ಎಲ್ಲರ ಸಹಕಾರದಿಂದ ಕೆಲಸ ಮಾಡ್ತಾ ಇದ್ದೇನೆ. ಸೊರಬಾಕ್ಕೆ ಸೀಮಿತ ಅಂತಲ್ಲ,ಸೊರಬಾದಲ್ಲೂ ಕೆಲಸ ಮಾಡಲು ಅವಕಾಶ, ಸ್ಕೋಪ್, ಸ್ಫೇಸ್ ಎಲ್ಲಾ ಇದೆ. ನಾನಂತೂ ಸುರಕ್ಷಿತವಾಗಿದ್ದೇನೆ.
ಇದು ಮಾಜಿ ನಟ, ಮಾಜಿ ಸಚಿವ ಶಾಸಕ ಕುಮಾರ ಬಂಗಾರಪ್ಪ ಮಾತು. ಕೊಂಡ್ಲಿ ಜಾತ್ರೆ ನಿಮಿತ್ತ ಸಿದ್ಧಾಪುರಕ್ಕೆ ಬಂದಿದ್ದ ಸೊರಬದ ಸರದಾರ ಕುಮಾರ ಬಂಗಾರಪ್ಪ ರಾಜ್ಯ ಬಿ.ಜೆ.ಪಿ. ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕರ ಮನೆಯಲ್ಲಿ ಮಾತಿಗೆ ಸಿಕ್ಕಿದ್ದರು. ಒಂದರ್ಧಗಂಟೆ ಕಾಲ ನಮ್ಮೊಂದಿಗೆ ಮಾತನಾಡಿದ ಕುಮಾರ ಬಂಗಾರಪ್ಪಸೊರಬಾದಿಂದ ಪ್ರಾರಂಭವಾಗಿ ರಾಜ್ಯ, ದೇಶದ ವಿದ್ಯಮಾನಗಳ ಬಗ್ಗೆ ಹರಟಿದರು. ಅವರ ಜೊತೆಗಿನ ಮಾಮೂಲಿ ಮಾತುಕತೆಯನ್ನು ಸಮಾಜಮುಖಿ ಗೃಹಿಸಿದ್ದು ಹೀಗೆ.
ಕ- ಶಿರಸಿ, ಶಿಕಾರಿಪುರ ಪ್ರತ್ಯೇಕ ಜಿಲ್ಲೆಗಳ ಬಗ್ಗೆ ನಿಮ್ಮ ಅಭಿಪ್ರಾಯ? ಕು.ಬಂ.- ಅಗತ್ಯ ಏನಿಲ್ಲ. ಶಿಕಾರಿಪುರ ಜಿಲ್ಲೆಯ ಪ್ರಸ್ಥಾಪ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿಗಳೇ ಸ್ಫಷ್ಟ ಪಡಿಸಿದ್ದಾರೆ. ಅಖಂಡ ಶಿವಮೊಗ್ಗ ಜಿಲ್ಲೆ ಹಾಗೇ ಉಳಿಯಲಿದೆ. ಶಿರಸಿ ಕೂಡಾ ಜಿಲ್ಲೆಯಾಗಬೇಕೆಂದೇನಿಲ್ಲ. ದೂರ ಎಂದು ರಾಷ್ಟ್ರಕ್ಕೆ ಇನ್ನೊಂದು ರಾಜಧಾನಿ ಮಾಡಲು ಸಾಧ್ಯವೆ? ಬೀದರ್, ಗುಲಬರ್ಗಾ ಬೆಂಗಳೂರಿಗೆ ಬಹಳ ದೂರದಲ್ಲಿವೆ ಅದೇ ಕಾರಣದ ಮೇಲೆ ರಾಜ್ಯ, ದೇಶದ ರಾಜಧಾನಿಗಳನ್ನು ಪ್ರತ್ಯೇಕಿಸಬೇಕಿಲ್ಲ. ಆಡಳಿತಾತ್ಮಕ ಅನುಕೂಲಕ್ಕೆ ಬೇರೆ ಸಾಧ್ಯತೆಗಳಿವೆ. ಜನರ ಭಾವನೆಗೆ ನನ್ನ ಗೌರವವಿದೆ. ಆದರೆ ವಾಸ್ತವ, ಆದ್ಯತೆ ಎಲ್ಲವೂ ಬೇರೆ, ಬೇರೆ. ಕರಾವಳಿ ದೂರ ಎಂದು ಶಿರಸಿ ಪ್ರತ್ಯೇಕ ಜಿಲ್ಲೆ ಬೇಡಿಕೆ ಇದೆ. ಇದು ಬಹಳ ಹಳೆಯ ಬೇಡಿಕೆ.
ಕ-ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಬಗ್ಗೆ… ಕು.ಬಂ.- ಕರ್ನಾಟಕ ಸಾರಿಗೆ ವ್ಯವಸ್ಥೆ ಸೇವೆಯಂತಿದೆ. ಇದು ಸೇವಾಸಂಸ್ಥೆ, ಸೇವಾ ಉದ್ದೇಶದಿಂದಲೇ ಇರಬೇಕು. ಇದನ್ನು ಖಾಸಗೀಕರಣ ಮಾಡಿದರೆ ಅಲ್ಲಿ ಸೇವಾ ಮನೋಭಾವ ಹುಡಕಬೇಕಷ್ಟೇ. ಸಾರಿಗೆ ಸಂಸ್ಥೆ ನೌಕರರ ಬೇಡಿಕೆ ಕೂಡಾ ತಪ್ಪಲ್ಲ. ಆದರೆ ಇದು ಸಮಯವಲ್ಲ. ರಾಜ್ಯ ಕೋವಿಡ್ ನಿಂದ ತತ್ತರಿಸಿದೆ. ಸರ್ಕಾರದ ಬಳಿ ಹಣವಿಲ್ಲ,ಶಾಸಕರ ಅನುದಾನ ಬಿಡುಗಡೆಯಾಗಿಲ್ಲ ಪರಿಸ್ಥಿತಿ ಅರ್ಥಮಾಡಿಕೊಂಡು ನಾವು ಸ್ಪಂದಿಸಬೇಕು.ರಾಜ್ಯ,ಸರ್ಕಾರ, ಜನತೆ ಎಲ್ಲವೂ, ಎಲ್ಲರೂ ಸಂಕಷ್ಟದಲ್ಲಿದ್ದೇವೆ ವ್ಯವಸ್ಥೆ ಸುಧಾರಿಸಬಹುದು.
ಕ.- ದೇಶ, ರಾಜ್ಯಾದ್ಯಂತ ಎಲ್ಲೆಡೆ ಮುಷ್ಕರ, ಪ್ರತಿಭಟನೆ ವಿರೋಧ ವ್ಯಕ್ತವಾಗುತ್ತಿದೆಯಲ್ಲ.. ಕು.ಬಂ.-ಸರಿ ಪ್ರತಿಭಟನೆ ಜನರ ಹಕ್ಕು,ಜನರ ಧ್ವನಿ-ಬೇಡಿಕೆ ಕೇಳಬೇಕು ಆದರೆ ಇವೆಲ್ಲಕ್ಕೂ ಈಗ ಸಮಯವಲ್ಲ
ಕ- ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ.ಅದು ನಿಮಗೆ ಹೇಗೆ ಮಾರಕ-ಪೂರಕ ಆಗಬಹುದು ಕು.ಬಂ- ಇನ್ನೂ ಸಮಯವಿದೆ ಚುನಾವಣೆ ಬರುತ್ತಲೇ ಇಲ್ಲಿದ್ದವರು, ಅಲ್ಲಿಗೆ ಅಲ್ಲಿದ್ದವರು ಇಲ್ಲಿಗೆ ಬರಬಹುದು ನೋಡೋಣ. ಈ ಪಕ್ಷಾಂತರ ನಿಷೇಧ ಮಾಡಲೇ ಒಂದು ದೇಶ, ಒಂದು ಚುನಾವಣೆ ವಿಚಾರ ಚರ್ಚೆಯಾಗುತ್ತಿದೆ. ಚುನಾವಣಾ ವ್ಯವಸ್ಥೆ ಬದಲಾಗುವುದು, ಎರಡು ಪಕ್ಷಗಳ ಚುನಾವಣೆ ವ್ಯವಸ್ಥೆ ಜಾರಿಯಾಗುವುದು ಇವೆಲ್ಲಾ ಸಾಧ್ಯತೆಗಳು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
