ಎಲ್ಲವೂ ಮಾ..ಮೂ..ಲು…. ಇದು ಮಾಜಿ ಸಚಿವ, ನಾಯಕ ನಟನ ಹೊಸ ಹಾಡು!

ಯಡಿಯೂರಪ್ಪ ನವರ ವಿರುದ್ಧ ಈಶ್ವರಪ್ಪ ಸಮರ ಸಾರಿದಂತಿದೆ… ನೋ.. ಯುದ್ಧ, ಸಮರ ಏನಿಲ್ಲ ಇದೆಲ್ಲ ಮಾಮೂಲು ಯಾವ ಕಾಲದಲ್ಲಿ ಆಗಿಲ್ಲ ಹೇಳಿ ದೊಡ್ಡ ಸಾಯಬರ (ಬಂಗಾರಪ್ಪ) ಹೆಸರು ಗೋಪಾಲಗೌಡ ಹೇಳಿದಾಗ ಬೇರೆಯವರು ವಿರೋಧ ಮಾಡಿಲ್ಲವೆ. ಆಯಾ ಕಾಲದಲ್ಲಿ ಆಯಾ ಕಾಲದನಾಯಕರಿಗೆ ವಿರೋಧ,ಭಿನ್ನಮತ, ಬಂಡಾಯ ಎಲ್ಲವೂ ಮಾಮೂಲೇ.

ನೀವು..ಮಂತ್ರಿಯಾಗಲಿಲ್ಲ ಸೊರಬಾಕ್ಕೆ ಸೀಮಿತ ಆಗಿಬಿಟ್ಟಿರಾ… ಇಲ್ಲ ಸಚಿವನಾಗುವುದು,ಕೆಲಸಮಾಡುವುದು,ಅಧಿಕಾರ ಇವೆಲ್ಲಾ ಒಂದಕ್ಕೊಂದು ಪೂರಕ ಮತ್ತು ಪೂರಕ ಅಲ್ಲ ಕೂಡಾ…. ಮುಖ್ಯಮಂತ್ರಿಗಳೇ ನಮ್ಮ ಜಿಲ್ಲೆಯವರು, ಹಿರಿಯರು ಸಚಿವ ಈಶ್ವರಪ್ಪ ಇದ್ದಾರೆ. ಎಲ್ಲರ ಸಹಕಾರದಿಂದ ಕೆಲಸ ಮಾಡ್ತಾ ಇದ್ದೇನೆ. ಸೊರಬಾಕ್ಕೆ ಸೀಮಿತ ಅಂತಲ್ಲ,ಸೊರಬಾದಲ್ಲೂ ಕೆಲಸ ಮಾಡಲು ಅವಕಾಶ, ಸ್ಕೋಪ್, ಸ್ಫೇಸ್ ಎಲ್ಲಾ ಇದೆ. ನಾನಂತೂ ಸುರಕ್ಷಿತವಾಗಿದ್ದೇನೆ.

ಇದು ಮಾಜಿ ನಟ, ಮಾಜಿ ಸಚಿವ ಶಾಸಕ ಕುಮಾರ ಬಂಗಾರಪ್ಪ ಮಾತು. ಕೊಂಡ್ಲಿ ಜಾತ್ರೆ ನಿಮಿತ್ತ ಸಿದ್ಧಾಪುರಕ್ಕೆ ಬಂದಿದ್ದ ಸೊರಬದ ಸರದಾರ ಕುಮಾರ ಬಂಗಾರಪ್ಪ ರಾಜ್ಯ ಬಿ.ಜೆ.ಪಿ. ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕರ ಮನೆಯಲ್ಲಿ ಮಾತಿಗೆ ಸಿಕ್ಕಿದ್ದರು. ಒಂದರ್ಧಗಂಟೆ ಕಾಲ ನಮ್ಮೊಂದಿಗೆ ಮಾತನಾಡಿದ ಕುಮಾರ ಬಂಗಾರಪ್ಪಸೊರಬಾದಿಂದ ಪ್ರಾರಂಭವಾಗಿ ರಾಜ್ಯ, ದೇಶದ ವಿದ್ಯಮಾನಗಳ ಬಗ್ಗೆ ಹರಟಿದರು. ಅವರ ಜೊತೆಗಿನ ಮಾಮೂಲಿ ಮಾತುಕತೆಯನ್ನು ಸಮಾಜಮುಖಿ ಗೃಹಿಸಿದ್ದು ಹೀಗೆ.

ಕ- ಶಿರಸಿ, ಶಿಕಾರಿಪುರ ಪ್ರತ್ಯೇಕ ಜಿಲ್ಲೆಗಳ ಬಗ್ಗೆ ನಿಮ್ಮ ಅಭಿಪ್ರಾಯ? ಕು.ಬಂ.- ಅಗತ್ಯ ಏನಿಲ್ಲ. ಶಿಕಾರಿಪುರ ಜಿಲ್ಲೆಯ ಪ್ರಸ್ಥಾಪ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿಗಳೇ ಸ್ಫಷ್ಟ ಪಡಿಸಿದ್ದಾರೆ. ಅಖಂಡ ಶಿವಮೊಗ್ಗ ಜಿಲ್ಲೆ ಹಾಗೇ ಉಳಿಯಲಿದೆ. ಶಿರಸಿ ಕೂಡಾ ಜಿಲ್ಲೆಯಾಗಬೇಕೆಂದೇನಿಲ್ಲ. ದೂರ ಎಂದು ರಾಷ್ಟ್ರಕ್ಕೆ ಇನ್ನೊಂದು ರಾಜಧಾನಿ ಮಾಡಲು ಸಾಧ್ಯವೆ? ಬೀದರ್, ಗುಲಬರ್ಗಾ ಬೆಂಗಳೂರಿಗೆ ಬಹಳ ದೂರದಲ್ಲಿವೆ ಅದೇ ಕಾರಣದ ಮೇಲೆ ರಾಜ್ಯ, ದೇಶದ ರಾಜಧಾನಿಗಳನ್ನು ಪ್ರತ್ಯೇಕಿಸಬೇಕಿಲ್ಲ. ಆಡಳಿತಾತ್ಮಕ ಅನುಕೂಲಕ್ಕೆ ಬೇರೆ ಸಾಧ್ಯತೆಗಳಿವೆ. ಜನರ ಭಾವನೆಗೆ ನನ್ನ ಗೌರವವಿದೆ. ಆದರೆ ವಾಸ್ತವ, ಆದ್ಯತೆ ಎಲ್ಲವೂ ಬೇರೆ, ಬೇರೆ. ಕರಾವಳಿ ದೂರ ಎಂದು ಶಿರಸಿ ಪ್ರತ್ಯೇಕ ಜಿಲ್ಲೆ ಬೇಡಿಕೆ ಇದೆ. ಇದು ಬಹಳ ಹಳೆಯ ಬೇಡಿಕೆ.

ಕ-ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಬಗ್ಗೆ… ಕು.ಬಂ.- ಕರ್ನಾಟಕ ಸಾರಿಗೆ ವ್ಯವಸ್ಥೆ ಸೇವೆಯಂತಿದೆ. ಇದು ಸೇವಾಸಂಸ್ಥೆ, ಸೇವಾ ಉದ್ದೇಶದಿಂದಲೇ ಇರಬೇಕು. ಇದನ್ನು ಖಾಸಗೀಕರಣ ಮಾಡಿದರೆ ಅಲ್ಲಿ ಸೇವಾ ಮನೋಭಾವ ಹುಡಕಬೇಕಷ್ಟೇ. ಸಾರಿಗೆ ಸಂಸ್ಥೆ ನೌಕರರ ಬೇಡಿಕೆ ಕೂಡಾ ತಪ್ಪಲ್ಲ. ಆದರೆ ಇದು ಸಮಯವಲ್ಲ. ರಾಜ್ಯ ಕೋವಿಡ್ ನಿಂದ ತತ್ತರಿಸಿದೆ. ಸರ್ಕಾರದ ಬಳಿ ಹಣವಿಲ್ಲ,ಶಾಸಕರ ಅನುದಾನ ಬಿಡುಗಡೆಯಾಗಿಲ್ಲ ಪರಿಸ್ಥಿತಿ ಅರ್ಥಮಾಡಿಕೊಂಡು ನಾವು ಸ್ಪಂದಿಸಬೇಕು.ರಾಜ್ಯ,ಸರ್ಕಾರ, ಜನತೆ ಎಲ್ಲವೂ, ಎಲ್ಲರೂ ಸಂಕಷ್ಟದಲ್ಲಿದ್ದೇವೆ ವ್ಯವಸ್ಥೆ ಸುಧಾರಿಸಬಹುದು.

ಕ.- ದೇಶ, ರಾಜ್ಯಾದ್ಯಂತ ಎಲ್ಲೆಡೆ ಮುಷ್ಕರ, ಪ್ರತಿಭಟನೆ ವಿರೋಧ ವ್ಯಕ್ತವಾಗುತ್ತಿದೆಯಲ್ಲ.. ಕು.ಬಂ.-ಸರಿ ಪ್ರತಿಭಟನೆ ಜನರ ಹಕ್ಕು,ಜನರ ಧ್ವನಿ-ಬೇಡಿಕೆ ಕೇಳಬೇಕು ಆದರೆ ಇವೆಲ್ಲಕ್ಕೂ ಈಗ ಸಮಯವಲ್ಲ

ಕ- ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ.ಅದು ನಿಮಗೆ ಹೇಗೆ ಮಾರಕ-ಪೂರಕ ಆಗಬಹುದು ಕು.ಬಂ- ಇನ್ನೂ ಸಮಯವಿದೆ ಚುನಾವಣೆ ಬರುತ್ತಲೇ ಇಲ್ಲಿದ್ದವರು, ಅಲ್ಲಿಗೆ ಅಲ್ಲಿದ್ದವರು ಇಲ್ಲಿಗೆ ಬರಬಹುದು ನೋಡೋಣ. ಈ ಪಕ್ಷಾಂತರ ನಿಷೇಧ ಮಾಡಲೇ ಒಂದು ದೇಶ, ಒಂದು ಚುನಾವಣೆ ವಿಚಾರ ಚರ್ಚೆಯಾಗುತ್ತಿದೆ. ಚುನಾವಣಾ ವ್ಯವಸ್ಥೆ ಬದಲಾಗುವುದು, ಎರಡು ಪಕ್ಷಗಳ ಚುನಾವಣೆ ವ್ಯವಸ್ಥೆ ಜಾರಿಯಾಗುವುದು ಇವೆಲ್ಲಾ ಸಾಧ್ಯತೆಗಳು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *