ಕೊಂಡ್ಲಿ ಜಾತ್ರೆ ಯಶಸ್ವಿ, ಹುಚ್ಚೆದ್ದು ಕುಣಿದ ಹುಡುಗರು…

ಕಳೆದ ಮಾರ್ಚ್ 30 ರಿಂದ ಪ್ರಾರಂಭವಾಗಿ ಇಂದು ವಿದ್ಯುಕ್ತವಾಗಿ ಮುಗಿದ ಕೊಂಡ್ಲಿ ಶ್ರೀ ಮಾರಿಕಾಂಬಾ ಜಾತ್ರೆ ನಡೆಯುತ್ತೋ, ಇಲ್ಲವೋ ಎನ್ನುವ ಅನುಮಾನವಿತ್ತು. ಮೊದಮೊದಲು ಕೊಂಡ್ಲಿ ಶ್ರೀಮಾರಿಕಾಂಬಾ ಜಾತ್ರೆಯ ತಯಾರಿ ನಡೆದಿದ್ದಾಗ ಕೋವಿಡ್ ರಗಳೆ, ರಾಜಕೀಯಗಳ ಕಾರ್ಮೋಡದ ಅನುಮಾನವಿರಲಿಲ್ಲ. ಆಕಸ್ಮಿಕವಾಗಿ ಕೋವಿಡ್ ರಗಳೆ ಪ್ರಾರಂಭವಾಗಿ ರಾಜ್ಯಸರ್ಕಾರದ ಮಾರ್ಗಸೂಚಿ ಅನ್ವಯ ಜಾತ್ರೆ ನಡೆಸುವುದು ಕಷ್ಟವಿತ್ತು. ಮೊದಮೊದಲು ಬೆಂಬಲಿಸಿದ್ದ ಸಂಘ ರಾಜಕೀಯ ಕೊಂಡ್ಲಿ ಮಾರಿಕಾಂಬಾ ಜಾತ್ರಾ ಸಮೀತಿಯ ಅಧ್ಯಕ್ಷರ ಜೊತೆಗಿನ ಮುನಿಸಿನಿಂದ ಮತ್ತಷ್ಟು ಕೆರಳಿತ್ತು. ಈ ಕಾರಣಕ್ಕಾಗಿ ಮಾರಿಕಾಂಬಾ ಜಾತ್ರೆ ನಡೆಯುವುದೇ ಅನುಮಾನ ಎಂದಿದ್ದಾಗ ಜಾತ್ರಾ ಸಮೀತಿ ಮತ್ತು ದೇವಸ್ಥಾನ ಆಡಳಿತ ಸಮೀತಿ ಅಧ್ಯಕ್ಷ ಕೆ.ಜಿ.ನಾಯ್ಕ ಸಿಡಿದೆದ್ದರು. ಅಧಿಕಾರಿಗಳು ತುಸು ಹೊಂದಾಣಿಕೆಗೆ ಮುಂದಾಗದಿದ್ದರೆ ಕಷ್ಟ ಎನ್ನುವ ವಾತಾವರಣ ನಿರ್ಮಾಣವಾಯಿತು. ಅಂತೂ ಪುರ್ವನಿಗದಿಯಂತೆ ಜಾತ್ರೆ ಪ್ರಾರಂಭವಾಗೇ ಬಿಟ್ಟಿತು. ಅಧಿಕಾರಿಗಳೂ ಲಿಬರಲ್ ಆದರು. ಜಾತ್ರೆಗೆ ನಿರೀಕ್ಷಿಸಿದ ಜನ, ಆದಾಯಕ್ಕೆ ಕೋವಿಡ್ ನಿಯಮಾವಳಿ ಅಡ್ಡವಾಗಿದ್ದು ಬಿಟ್ಟರೆ ಮತ್ಯಾವ ತೊಂದರೆಯೂ ಆಗಲಿಲ್ಲ.

ಮೃತ ಯೋಧನನ್ನು ನೋಡದ ಸ್ಥಳಿಯ ಜನಪ್ರತಿನಿಧಿಗಳು ಜಾತ್ರೆಗೆ ಬಂದು ಅಮ್ಮನ ಆಶೀರ್ವಾದ ಪಡೆದರು. ಕುಮಾರ ಬಂಗಾರಪ್ಪ, ಎನ್.ಡಬ್ಲೂ ಕೆ.ಎಸ್. ಆರ್.ಟಿ.ಸಿ. ಅಧ್ಯಕ್ಷ ವಿ.ಎಸ್. ಪಾಟೀಲ್, ಕಾರವಾರ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಪೂಜೆ ನೆರವೇರಿಸಿದರು. ಕೊಂಡ್ಲಿ ಜಾತ್ರೆಯ ವ್ಯಾಪ್ತಿಯ ಒಂದು ಡಜನ್ ಗೂ ಹೆಚ್ಚಿನ ಹಳ್ಳಿಗಳ ಜನರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಸೇರಿ ನಾನಾ ಹಣಕಾಸು ಸಂಸ್ಥೆಗಳಲ್ಲಿ 15 ಕೋಟಿರೂಪಾಯಿಗಳಿಗಿಂತ ಹೆಚ್ಚಿನ ಸಾಲದ ಹಣದಲ್ಲಿ ಕೊಂಡ್ಲಿಯ ಶ್ರೀ ಮಾರಿಕಾಂಬಾ ಜಾತ್ರೆ ಮಾಡಿರುವ ಮಾಹಿತಿ ಇದೆ.

ಇದರ ನಡುವೆ ಗಾಳಿಸುದ್ದಿ, ಭಯಗಳಿಂದ ಜಾತ್ರೆಯ ನೈಜ ಖುಷಿ ಅನುಭವಿಸದೆ ಕಾದಿದ್ದಂತಿದ್ದವರು ಮಾರಿಕಾಂಬಾ ದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ಸ್ಟೆಪ್ ಹಾಕಿ ಸಂಬ್ರಮಿಸಿದರು. ಬುಧವಾರ ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭವಾಗಿ ಮಧ್ಯಾಹ್ನ 11-30 ರ ವರೆಗೆ ನಡೆದ ದೇವಿಯ ವಿಸರ್ಜನಾ ಮೆರವಣಿಗೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ತಂಡಗಳಿದ್ದವು. ಈ ತಂಡಗಳ ತಾಳ-ರಾಗ, ಸಂಗೀತಕ್ಕೆ ತಕ್ಕಂತೆ ಕುಣಿದ ಸ್ಥಳಿಯ ಯುವಕರು ಇಡೀ ಜಾತ್ರೆಯ ಸೊಗಸನ್ನು ಒಂದೇ ದಿನ ಅನುಭವಿಸಿದವರಂತೆ ಕುಣಿದು ಸಂಬ್ರಮಿಸಿದರು.

ಈ ಮಾರಿ ವಿಸರ್ಜನೆಯ ಕುಣಿತ, ಮೋಜು ಮಸ್ತಿಯ ವಿಡಿಯೋ ತುಣುಕುಗಳು kanneshwarnaik,ಸಮಾಜಮುಖಿ ಕನ್ನೇಶ್ ಫೇಸ್ ಬುಕ್ ಪುಟಗಳಲ್ಲಿ ಹಾಗೂ samaajamukhi ಯೂ ಟೂಬ್ ಚಾನೆಲ್, samajamukhi.net ನ್ಯೂಸ್ ಪೋರ್ಟಲ್ ಹಾಗೂ samaajamukhi.net ಫೇಸ್ ಬುಕ್ ಪೇಜ್ ಗಳಲ್ಲಿ ಲಭ್ಯವಿವೆ. ಇದೆಲ್ಲವನ್ನೂ ನೋಡಿ, ಓದಿ ಆನಂದಿಸಿ samaajamukhi.net ಫೇಸ್ ಬುಕ್ ಪೇಜ್ ಮತ್ತು samajamukhi.net ಹಾಗೂ samaajamukhi ಯುಟ್ಯೂಬ್ ಚಾನೆಲ್ ಗಳಿಗೆ subscribe ಆಗಿ ಸಹಕರಿಸುವುದನ್ನು ಮರೆಯಬೇಡಿ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *