ಸರ್ಕಾರಿ ಕಡತಗಳೇ ನಾಪತ್ತೆ! ಯಾರು ಹೊಣೆ?

ಸಿದ್ಧಾಪುರ ತಾಲೂಕಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಾಲಿಕೊಪ್ಪ ಗ್ರಾಮದ ರವೀಂದ್ರನಗರದ ಸಿ.ಆರ್.ಹಾಲ್ ಅಥವಾ ಸಮಾಜಮಂದಿರ ಜಾಗದ ಪ್ರಕರಣ ಈ ಗ ವಿಭಿನ್ನ ತಿರುವುಗಳನ್ನು ಪಡೆದುಕೊಂಡಿದೆ. ಮೊದಮೊದಲು ತಾಲೂಕಾ ಬ್ಲಾಕ್ ಕಾಂಗ್ರೆಸ್ ಘಟಕ ಸಮಾಜಮಂದಿರದ ಜಾಗವನ್ನು ಬಿ.ಜೆ.ಪಿ. ಅಧಿಕಾರ ಬಳಸಿ ಕಬಳಿಸಿದೆ ಎನ್ನುವ ಆರೋಪಗಳಿದ್ದವು. ನಂತರ ಕಾಂಗ್ರೆಸ್ ಬಿ.ಜೆ.ಪಿ.ಜನಪ್ರತಿನಿಧಿಗಳು ತಮ್ಮ ಅಧಿಕಾರ ಬಳಸಿ ಕಾಂಗ್ರೆಸ್ ಜಾಗ ವಶಪಡಿಸಿಕೊಂಡಿದ್ದಾರೆ ಎಂದು ದೂರಿತ್ತು. ಈ ಜಾಗದ ವಿಚಾರದಲ್ಲಿ ಹಿಂದೆ ಪರಸ್ಪರ ಕೆಸರು ಎರಚಿಕೊಂಡಿರುವ ಈ ಕಾಂಗ್ರೆಸ್ ಮತ್ತು ಬಿ.ಜೆ.ಪಿ.ಯ ಬಣಗಳು ಅಧಿಕಾರಸ್ಥರು ಈ ಜಾಗವನ್ನು ಕಾನೂನು ಬಾಹೀರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದ್ದರು. ಈಗ ಈ ಸ್ಥಳದ ಯಜಮಾನಿಕೆ ಪಟ್ಟಣ ಪಂಚಾಯತ್ ಗೆ ಸೇರಿದೆ ಎಂದು ಈ ಜಾಗದ ಹಕ್ಕನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಬಾರದು ಎಂದು ಪಟ್ಟಣ ಪಂಚಾಯತ್ ಆಡಳಿತ ತಡೆಯಾಜ್ಞೆ ತಂದಿದೆ. ಹೀಗೆ ಸಿ.ಆರ್. ಹಾಲ್ ಜಾಗದ ಮಾಲಿಕತ್ವ ಯಾರದು ಎನ್ನುವ ಸ್ಫಷ್ಟತೆ ಸಿಗುವ ಮೊದಲು ಇದೇ ವಿಚಾರದಲ್ಲಿ ಹೊಸದೊಂದು ಬಿಕ್ಕಟ್ಟು ಪ್ರಾರಂಭವಾಗಿದೆ. ಅದೇನೆಂದರೆ.. ಈ ಪ್ರದೇಶದ ದಾಖಲೆಗಳ ಮಹತ್ವದ ಕಡತಗಳೇ ನಾಪತ್ತೆ ಆಗಿರುವುದು. ಹೌದು ಸಿದ್ಧಾಪುರ ಪಟ್ಟಣ ಪಂಚಾಯತ್ ಸಮೂದಾಯ ಭವನದ ಜಾಗದ ಕುರಿತ ಮಹತ್ವದ ದಾಖಲೆಗಳೇ ನಾಪತ್ತೆಯಾಗಿವೆ!.

ಈ ವಿಷಯವನ್ನು ಬಹಿರಂಗಪಡಿಸಿದ ಪಟ್ಟಣ ಪಂಚಾಯತ್ ಆಡಳಿತ ಈ ಬಗ್ಗೆ ಸೂಕ್ತ ತನಿಖೆಯಾಗಿ ಶೀಘ್ರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ. ಇಂದು ಪ.ಪಂ. ಸಭಾಂಗಣದಲ್ಲೇ ಮಾಧ್ಯಮಗೋಷ್ಠಿ ನಡೆಸಿದ ಪಟ್ಟಣ ಪಂಚಾಯತ್ ಸದಸ್ಯರು ಸಿ.ಆರ್. ಹಾಲ್ ಇರುವ ಜಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿರುವ ಆದೇಶ ಅಸಿಂಧು ಮತ್ತು ಆ ಜಾಗ ಪಟ್ಟಣ ಪಂಚಾಯತ್ ಆಸ್ತಿ ಇರುವುದರಿಂದ ಅಲ್ಲಿ ಸ್ವಾತಂತ್ರ್ಯ ಸ್ಮಾರಕ ಭವನ ಕಟ್ಟಲು ಅವಕಾಶವಿಲ್ಲ ಎಂದು ಹೈಕೋರ್ಟ್ ನೀಡಿರುವ ತಡೆಯಾಜ್ಞೆಯ ಬಗ್ಗೆ ಮಾಧ್ಯಮದವರಿಗೆ ತಿಳಿಸಿದರು.

ಈ ಸಿ.ಆರ್. ಹಾಲ್ ಪ್ರದೇಶದ ಮಾಲಿಕತ್ವ, ನಿರ್ವಹಣೆ, ಅಭಿವೃದ್ಧಿ ಇತ್ಯಾದಿ ವಿಚಾರಗಳಲ್ಲಿ ಮೊದಲು ಬ್ಲಾಕ್ ಕಾಂಗ್ರೆಸ್ ಸಮೀತಿ ಈ ಜಾಗ ಕಾಂಗ್ರೆಸ್ ಆಸ್ತಿ ಇರುವುದರಿಂದ ಇದನ್ನು ಪಟ್ಟಣ ಪಂಚಾಯತ್ ಗೆ ಹಿಂದಿರುಗಿಸಬಾರದು ಎಂದು ನ್ಯಾಯಾಲಯದ ಮೊರೆ ಹೋಗಿತ್ತು. ಈ ವಿವಾದ ಬಗೆಹರಿಯುವ ಮೊದಲು ಪಟ್ಟಣ ಪಂಚಾಯತ್ ಸಮೂದಾಯ ಭವನದ ಜಾಗ ಪ.ಪಂ. ಆಸ್ತಿ ಹಾಗಾಗಿ ಅದನ್ನು ಕಾಂಗ್ರೆಸ್ ಅಥವಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ತಡೆಯಾಜ್ಞೆ ತಂದಿದೆ. ಹೀಗೆ ಪಟ್ಟಣ ಪಂಚಾಯತ್ ,ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಪ್ರೇರಿತ ಕೆಲವರು ತಮ್ಮ ಹಕ್ಕು ಪ್ರತಿಪಾದನೆ ಮಾಡತ್ತಿರುವಾಗಲೇ ಇದಕ್ಕೆ ಸಂಬಂಧಿಸಿದ ಮಾಹಿತಿ ಕೇಳಿದರೆ ಇದಕ್ಕೆ ಸಂಬಂಧಿಸಿದ ಮಾಹಿತಿಗಳು ಲಭ್ಯವಿಲ್ಲ ಎಂದು ಅಧಿಕಾರಿಗಳು ಉತ್ತರ ನೀಡಿದ್ದಾರೆ.

ರವೀಂದ್ರನಗರದಲ್ಲಿ ಪಟ್ಟಣ ಪಂಚಾಯತ್ ನಿರ್ವಹಣೆಯ ಸಮೂದಾಯ ಭವನ ಅದಕ್ಕೆ ತಾಕಿಕೊಂಡಿರುವ ಪ್ರದೇಶ ಇರುವುದು ಸತ್ಯ. ಇದೇ ಜಾಗದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ನಡುವೆ ವಿವಾದ, ನ್ಯಾಯಾಲಯದ ಪ್ರಕರಣಗಳಿರುವುದೂ ಸತ್ಯ. ಈಗ ಬಿ.ಜೆ.ಪಿ.ಯ ಕೆ.ಬಣ ತಮ್ಮ ಶಾಸಕರ ಹಿತಾಸಕ್ತಿಯ ಸ್ವಾತಂತ್ರ್ಯ ಸ್ಮಾರಕ ಭವನದ ವಿಚಾರದಲ್ಲಿ ಪಟ್ಟಣ ಪಂಚಾಯತ್ ಮತ್ತು ಅದರ ಆಡಳಿತದಿಂದ ವಿರೋಧ ಮಾಡಿಸುತ್ತಿರುವುದೂ ಸತ್ಯ. ಇಂಥ ಮೇಲಾಟದ ನಡುವೆ ಸಿ.ಆರ್. ಹಾಲ್ ನ ಜಾಗದ ಮಾಲಿಕತ್ವ, ಯಜಮಾನಿಕೆಗೆ ಸಂಬಂಧಿಸಿದ ದಾಖಲೆಗಳ ಪೈಲ್ ಕಾಣೆಯಾಗಿರುವುದು ಯಾರ ಹಿತಾಸಕ್ತಿಗಾಗಿ? ಈ ಫೈಲ್ ಕಣ್ಮರೆ ಹಿಂದೆ ಇರುವ ಕಾಣದ ಕೈ ಯಾರು? ಅಧಿಕಾರಿಗಳು ಈ ಸರ್ಕಾರಿ ಜಾಗದ ವಿಚಾರದಲ್ಲಿ ರಾಜಕೀಯ ಹಿತಾಸಕ್ತಿಯ ಪರ ವಾಲಿ ಕಡತಗಳನ್ನೇ ನಾಪತ್ತೆ ಮಾಡಿದರೆ ಎನ್ನುವ ವಿಚಾರ ಈಗ ಮಹತ್ವ ಮತ್ತು ವಿವಾದಾತ್ಮಕ ವಿಚಾರವಾಗಿದೆ. ಸರ್ಕಾರಿ ಆಸ್ತಿಯ ದಾಖಲೆಗಳ ಕಡತವನ್ನೇ ನಾಪತ್ತೆಮಾಡುವ ಅಧಿಕಾರಿ ವರ್ಗ ಸಾರ್ವಜನಿಕ, ವ್ಯಕ್ತಿಯ, ಪ್ರಜೆಗಳ ಖಾಸಗಿ ಹಕ್ಕು,ಬಾಧ್ಯತೆಗಳ ಹಿತ ಕಾಪಾಡುವರೆ….? ಅಷ್ಟಕ್ಕೂ ಈ ಪ್ರಕರಣದಲ್ಲಿ ತಹಸಿಲ್ಧಾರ್, ಉಪವಿಭಾಗೀಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕೈವಾಡ ಇರುವುದರಿಂದ ಈ ಪ್ರಕರಣ ಎಷ್ಟು ಜನ ಕೆಳಹಂತದ ನೌಕರರ ತಲೆಗೆ ತೂಗುಗತ್ತಿಯಾಗಬಹುದು ಎನ್ನುವುದೂ ಕುತೂಹಲದ ವಿಷಯವಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *