
ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ದೊರೆಯುತ್ತಿದೆ. ಶಿರಸಿ ಘಟನೆ ಮರುಕಳಿಸಬಾರದು, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ದೊರೆಯದೆ ತೊಂ ದರೆಗೆ ಒಳಗಾಗುವ ಸ್ಥಿತಿ ಇಲ್ಲ. ಖಾಸಗಿ ಆಸ್ಫತ್ರೆಗಳಲ್ಲಿ ದೊರೆಯುವ ಸೌಲಭ್ಯಕ್ಕಿಂತ ಹೆಚ್ಚಿನ ವ್ಯವಸ್ಥೆ, ಅನುಕೂಲ ಸರ್ಕಾರಿ ಆಸ್ಫತ್ರೆಗಳಲ್ಲಿವೆ.-ಶಿವರಾಮ್ ಹೆಬ್ಬಾರ್

ಇಂದು ಏ.30 ರಂದು ಸಿದ್ಧಾಪುರದಲ್ಲಿ ಪತ್ತೆಯಾದ ಒಟ್ಟೂ 39 ಪ್ರಕರಣಗಳಲ್ಲಿ ನಿಡಗೋಡಿನ ನಾಲ್ಕು ಪ್ರಕರಣಗಳು ಸೇರಿವೆ.
ಶಿರಸಿ (ಉತ್ತರ ಕನ್ನಡ ) ಅಮ್ಮಿನಲ್ಲಿ ಮಂಜ ಮಡಿವಾಳ ಶವದ ರಕ್ತ ಸ್ರಾವದ ಬಗ್ಗೆ ಜಿಲ್ಲಾಡಳಿತ ಶಿರಸಿ ತಾಲೂಕ ಆಸ್ಪತ್ರೆಯ ವಿವರಣೆ ಕೇಳಿದೆ. ಬುಧವಾರ ಕೋವಿಡ್ ಚಿಕೆತ್ಸೆಗೆ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಮಂಜ ಮಡಿವಾಳ ಕೆಲವೇ ಗಂಟೆಗಳಲ್ಲಿ ಮೃತರಾಗಿದ್ದರು. ಈ ಶವದ ರಕ್ತಶ್ರಾವದ ವಿಡಿಯೋ ವೈರಲ್ ಆಗಿತ್ತು. ಇಂದು ಈ ಬಗ್ಗೆ ವಿಚಾರಿಸಿದ ಸಮಾಜಮುಖಿ ಪ್ರತಿನಿಧಿ ಗೆ ಮಾಹಿತಿ ನೀಡಿದ ಜಿಲ್ಲಾಡಳಿತದ ಮೂಲಗಳು. ಬುಧವಾರ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಸೇರಿದ್ದ ರೋಗಿ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಕೋವಿಡ್ ರೋಗಿಯಾಗಿದ್ದರಿಂದ ಇವರಿಗೆ ರಕ್ತ ಹೆಪ್ಪುಗಟ್ಟದ ಔಷಧಿ ನೀಡಲಾಗಿತ್ತು. ಹಾಗಾಗಿ ಅವರ ಶವದಿಂದ ರಕ್ತಶ್ರಾವವಾಗಿತ್ತು. ಈ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಆಸ್ಪತ್ರೆ ಆಡಳಿತ ಮೃತರ ವಾರಸುದಾರರಿಗೆ ಸರಿಯಾದ ಮಾಹಿತಿ ನೀಡಬೇಕಾಗಿತ್ತು. ಈ ಬಗ್ಗೆ ಸಂಬಂಧಿಸಿದವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಕೊರೋನಾ ಆಸ್ಪತ್ರೆ ಅವ್ಯವಸ್ಥೆ ಹಿನ್ನೆಲೆ ಗಳಲ್ಲಿ ಸುದ್ದಿ ಯಾಗಿದ್ದ ಈ ಪ್ರಕರಣದ ಗುಟ್ಟು ರಟ್ಟಾದಂತಾಗಿದೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
