ಹುಷಾರ್……. ಮದುವೆ, ಕಾರ್ಯಕ್ರಮಗಳಿಂದ ಕೋವಿಡ್ ವಿಸ್ತರಣೆ, ಇದು ಕರೋನಾ ಸಲಹೆ-ಮದುವೆ ಮನೆಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ಬಿದ್ದ ಕೇಸ್ ಗಳು

ದೇಶವನ್ನು ತಲ್ಲಣಗೊಳಿಸಿರುವ ಕೋವಿಡ್19ಅನೇಕರನ್ನು ಬಲಿ ಪಡೆದಿದೆ. ರಾಜ್ಯದಾದ್ಯಂತ ವ್ಯಾಪಕವಾಗಿ ವಿಸ್ತ ರಿಸುತ್ತಿರುವ ಕರೋನಾ ಅನೇಕರನ್ನು ಬಲಿ ಪಡೆದಿದೆ. ಮಾರಣಾಂತಿಕವಾಗಿ ವ್ಯಾಪಿಸುತ್ತಿರುವ ಕರೋನಾ ವಿಸ್ತರಣೆ ಹಿಂದೆ ಮದುವೆ, ಹಬ್ಬ, ಕಾರ್ಯಕ್ರಮಗಳ ಪಾತ್ರ ಪ್ರಮುಖವಾಗಿದೆ. ಮಡಿಕೇರಿಯಿಂದ ಕಾರವಾರದವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕರೋನಾ ವಿಸ್ತರಿಸು ತ್ತಿರುವ ಹಿಂದೆ ಚುನಾವಣೆ,ಮದುವೆ, ಮುಂಜಿ ಸೇರಿದ ಪಾರ್ಯಕ್ರಮಗಳೇ ಪ್ರಮುಖ ಪಾತ್ರ ಎನ್ನುವುದನ್ನು ಸಮೀಕ್ಷೆಗಳು ಸಾಬೀತುಮಾಡಿವೆ.

ಶಿರಸಿ ಬನವಾಸಿ ಭಾಗದ ಕೆಲವು ಮದುವೆಗಳಲ್ಲಿ ಪಾಲ್ಗೊಂಡವರಲ್ಲಿ ಬಹುತೇಕ ಜನರಲ್ಲಿ ಕೋವಿಡ್ ಪತ್ತೆಯಾಗಿರುವುದಕ್ಕೆ ನಿದರ್ಶನಗಳಿವೆ. ಶಿರಸಿ-ಸಿದ್ಧಾಪುರ ಸಾಗರ ಸೇರಿದ ಮಲೆನಾಡು ಭಾಗಗಳಲ್ಲಿ, ಕರಾವಳಿ, ಬಯಲುಸೀಮೆಗಳಲ್ಲೂ ಜನ ಸೇರುವ ಕಾರ್ಯಕ್ರಮಗಳಿಂದಲೇ ಕರೋನಾ ವಿಸ್ತರಿಸುತ್ತಿರುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಕಳೆದ ವರ್ಷದ ಕರೋನಾ ಮೊದಲ ಅವಧಿಯಲ್ಲಿ ಜನರಲ್ಲಿ ಭಯ, ಆತಂಕಗಳಿದ್ದವು. ಸರ್ಕಾರಗಳೂ ಕೂಡಾ ವಿಳಂಬವಾಗಿಯಾದರೂ ಸಂಪೂರ್ಣ ಲಾಕ್ ಡೌನ್ ಮಾಡಿದ್ದುದು ಕರೋನಾ ಹಿಮ್ಮೆಟ್ಟಿಸಲು ಸಹಕಾರಿಯಾಗಿತ್ತು. ಈ ವರ್ಷ ಕರೋನಾ ರುದ್ರ ನರ್ತನ, ಸಾವು- ನೋವುಗಳ ಮಧ್ಯೆ ಜನರ ನಿರ್ಲಕ್ಷ-ಉಪೇಕ್ಷೆ ಎದ್ದು ಕಾಣುತ್ತಿದೆ. ಮದುವೆ, ಹಬ್ಬ-ಜಾತ್ರೆಗಳಲ್ಲಿ ಪಾಲ್ಗೊಂಡವರು ಕರೋನಾ ಸೋಂಕಿತರಾಗುತ್ತಿರುವುದು ಈಗಿನ ವಿದ್ಯಮಾನಕ್ಕೆ ಉದಾಹರಣೆ.

ಅನಾವಶ್ಯಕ ಭಯ- ಕರೋನಾ ಬರದಂತೆ ಜಾಗೃತಿ ವಹಿಸುವುದು, ಮುನ್ನೆಚ್ಚರಿಕೆ ವಹಿಸುವುದು ಅಪೇಕ್ಷಣೀಯ ಆದರೆ ಕರೋನಾ ಬಾಧಿತರನ್ನು ಅಸ್ಪೃಶ್ಯರಂತೆ ನೋಡುವುದು ಸಮಾಜದ ಸಾಮಾಜಿಕ ಕ್ಷೋಭೆಯಾಗಿ ಕಾಣುತ್ತಿದೆ. ಆಸ್ಫತ್ರೆಗಳಲ್ಲಿ ಕರೋನಾ ಬಾಧಿತರಿಗೆ ಸೇವೆ ಮಾಡಲು ಹಿಂಜರಿಯುವುದು, ಮೃತ ಕರೋನಾ ಸೋಂಕಿತರನ್ನು ಅಂತ್ಯಸಂಸ್ಕಾರ ಮಾಡಲು ಸಂಬಂಧಿಗಳೇ ಹಿಂದೇಟು ಹಾಕುವುದು ಸೇರಿದಂತೆ ಅನೇಕ ರಗಳೆ, ಅಸಹ್ಯಗಳಿಗೆ ಈಗಿನ ಕರೋನಾ ಭಯ ಕಾರಣವಾಗುತ್ತಿದೆ. ಆದರೆ ಅನುಭವಿಗಳು, ಶುಸ್ರುಕಿಯರು, ಕರೋನಾ ಬಾಧಿತರ ಚಿಕಿತ್ಸೆ ಮಾಡುತ್ತಿರುವ ಜನರು, ವೈದ್ಯರು, ಸ್ವಯಂ ಸೇವಕರು ಕರೋನಾ ಬಾಧಿತರಿಗೆ ನೆರವು ನೀಡುತಿದ್ದು ಮುನ್ನೆಚ್ಚರಿಕೆ, ಮುಂಜಾಗೃತೆ, ಕರೋನಾ ನೀತಿ-ನಿಯಮ, ಶಿಸ್ತು ಪಾಲನೆ ಗಳಿಂದ ಕರೋನಾ ಬಾಧಿತರ ಜೊತೆಗಿದ್ದೂ ಕರೋನಾ ಬರದಂತೆ ಸುರಕ್ಷಿಯವಾಗಿರಬಹುದೆಂಬುದನ್ನೂ ಲಕ್ಷಾಂತರ ಜನರು ನಿರೂಪಿಸಿದ್ದಾರೆ.

ಮದುವೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಹಾಸ್ಯನಟಿ ಸುಗಂಧ ಮಿಶ್ರಾ, ಇತರರ ವಿರುದ್ಧ ಕೇಸ್ ದಾಖಲು

ಹಾಸ್ಯನಟಿ ಸುಗಂಧ ಮಿಶ್ರಾ ಅವರು ಕಳೆದ ವಾರ ಇಲ್ಲಿನ ರೆಸಾರ್ಟ್‌ ವೊಂದರಲ್ಲಿ ಹಾಸ್ಯನಟ ಸಂಕೇತ್ ಭೋಸಲೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ….

sugandh

ಫಗ್ವಾರಾ: ಹಾಸ್ಯನಟಿ ಸುಗಂಧ ಮಿಶ್ರಾ ಅವರು ಕಳೆದ ವಾರ ಇಲ್ಲಿನ ರೆಸಾರ್ಟ್‌ ವೊಂದರಲ್ಲಿ ಹಾಸ್ಯನಟ ಸಂಕೇತ್ ಭೋಸಲೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ನಟಿ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಹೆಚ್ಚಿನ ಜನರು ಭಾಗವಹಿಸಿದ ವಿಡಿಯೋ ವೈರಲ್ ಆದ ನಂತರ ಸುಗಂಧ ಮಿಶ್ರಾ ಹಾಗೂ ವರನ ಕಡೆಯವರು, ರೆಸಾರ್ಟ್‌ ಮಾಲೀಕರು ಮತ್ತು ಮದುವೆಯಲ್ಲಿ ಭಾಗವಹಿಸಿದವರ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪರಮ್‌ಜಿತ್ ಸಿಂಗ್ ಹೇಳಿದ್ದಾರೆ.

https://imasdk.googleapis.com/js/core/bridge3.453.0_en.html#goog_181582685

ಏಪ್ರಿಲ್ 26 ರಂದು ಈ ಮದುವೆ ಸಮಾರಂಭ ನಡೆದಿತ್ತು.

ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 188 ಅಡಿಯಲ್ಲಿ ಕೇಸ್ ದಾಖಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಜಲಂಧರ್ ಮೂಲದ ಮಿಶ್ರಾ ಹಾಗೂ ಮಹಾರಾಷ್ಟ್ರ ಮೂಲದ ಭೋಸಲೆ ಇಬ್ಬರೂ ‘ದಿ ಕಪಿಲ್ ಶರ್ಮಾ ಶೋ’ ಮೂಲಕ ಖ್ಯಾತಿ ಗಳಿಸಿದ್ದರು. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *