ವಿಠ್ಠಲ್ ಭಂಡಾರಿ ನೆನೆದು….ಸರ್ಜಾಶಂಕರರ ಮಾದರಿ ಬದುಕಿನ ಸ್ಮರಣೆ

ಅದೆಷ್ಟೋ ಜನರು ಕರೆಮಾಡಿ ಪಕ್ಕಾ ಮಾಡಿಕೊಂಡರು. ಹೌದು ಅವರೆಲ್ಲರ ಅನುಮಾನದಂತೆ ವಿಠ್ಠಲ್ ರಿಗೆ ಸಾವಿಲ್ಲ, ಅವರ ದೇಹ ಮಾತ್ರ ನಿನ್ನೆ ಮಣ್ಣು ಸೇರಿತು ಕಾಂಮ್ರೇಡ್ ವಿಠ್ಠಲ್ ಅಮರ್ ರಹೇ ಎನ್ನುವ ಘೋಷಣೆಯೊಂದಿಗೆ… ಇಂದು ನಿನ್ನೆ, ಮೊನ್ನೆಗಳಿಂದ ಯಮುನಾ ರ ಕರೆ ಸೇರಿ ಕನಿಷ್ಟ ನೂರಾರು ಜನ ಕಂ ಬನಿಯಾದರು ವಿಠ್ಠಲ್ ಗಳಿಸಿದ್ದ ಸ್ವತ್ತದು.

ಡಾ. ಆರ್. ವಿ. ಭಂಡಾರಿಯಂಥ ಕಟ್ಟರ್ ಜಾತ್ಯಾತೀತರು, ಪ್ರಗತಿಪರರು, ಬಂಡಾಯಸಾಹಿತಿಯ ಮಗನಾಗಿದ್ದ ವಿಠ್ಠಲ್ ರನ್ನು ಆರ್.ವಿ.ಯವರ ನೆರಳಲ್ಲಿ ಕಂಡಂಥ ನನ್ನಂಥ ಅದೆಷ್ಟೋ ಜನರಿದ್ದಾರು. ಆದರೆ ವಿಠ್ಠಲ್ ನಿಜ ಕಮ್ಯುನಿಷ್ಟ್ ಆಗಿದ್ದರು. ಅಡುಗೆ ಮನೆಯಲ್ಲಿ ಬಾಣಸಿಗನಾಗಿ, ಸಂಗಾತಿ ಯಮುನಾರಿಗೆ ಸಂಸಾರ, ಹೋರಾಟ, ಓಡಾಟಕ್ಕೆ ಹೆಗಲುಕೊಟ್ಟವರಾಗಿ ಮಹಿಳಾ ಸಮಾನತೆ, ಜಾತಿಸಮಾನತೆ, ಧರ್ಮಸಮನ್ವಯತೆ ಎಲ್ಲದರಲ್ಲೂ ವಿಠ್ಠಲ್ ರಿಗೆ ಅವರೇ ಸಾಟಿ. ಕಾಲಿಗೆ ಗೆಜ್ಜೆಕಟ್ಟಿಕೊಂಡಂತೆ ತಿರುಗುತ್ತಾ, ಓದುತ್ತಾ, ಅಲೆಯುತ್ತಾ ವಿಠ್ಠಲ್ ಕ್ರೀಯಾಶೀಲತೆಗೆ ಇನ್ನೊಂದು ಹೆಸರಾಗಿದ್ದವರು.

ಹೋರಾಟದ ಸಂಗಾತಿಗಳೊಂದಿಗೆ ಸಲುಗೆ, ಪ್ರೀತಿಯ ಬಿಗುಹಿಡಿತದಿಂದಲೇ ಮಾತನಾಡುತಿದ್ದ ವಿಠ್ಠಲ್ ಮನಸ್ಸು ಹೃದಯ ಮಗುವಿನಂತಿತ್ತು.

ಡಾ. ಸರ್ಜಾಶಂಕರ್ ಹರಳೀಮಠ ನಮ್ಮ ಹಿರಿಯ ಅಣ್ಣನಂಥ ಸ್ನೇಹಿತರು ಬಹಳ ದಿನಗಳ ನಂತರ ಕರೆಮಾಡಿ ಮಾತನಾಡಿದವರು ವಿಠ್ಠಲ್ ಭಂಡಾರಿಯವರ ಬಗ್ಗೆ ಕೇಳಿಸಿಕೊಂಡರು. ಶಿವಮೊಗ್ಗದ ಸರ್ಜಾಶಂಕರ್ ಹರಳೀಮಠ ಸಿದ್ಧಾಂತ,ಬದುಕು, ಆಚರಣೆ, ಸಹಜತೆಗಳಲ್ಲಿ ಎತ್ತರದಲ್ಲಿದ್ದವರು. ಅಂತರ್ಜಾತಿ ವಿವಾಹವಾದ ಅವರ ಕುಟುಂಬದಲ್ಲಿ ನೆಲೆಸಿರುವ ಶಾಂತಿಯ ಹಿಂದೆ ಅವರ ಆತ್ಮನಿರ್ಭರತೆ ಇದೆ. ಪರಸ್ಪರ ಕುಟುಂಬದ ಸದಸ್ಯರ ನಡುವಿನ ಪ್ರೀತಿ-ಸಹಜತೆ,ಸ್ವಾತಂತ್ರ್ಯ,ನಿರಾಡಂಬರತೆ ಗಳಿಗೆ ಅವರ ವ್ಯಕ್ತಿತ್ವ, ಕುಟುಂಬಗಳೇ ದೃಷ್ಟಾಂತ. ಸರ್ಜಾಶಂಕರರ ಸಹಜತೆ, ಜಾತ್ಯಾತೀತತೆ,ಸಾಮಾಜಿ ಕಾಳಜಿ,ಬದ್ಧತೆಗಳಿಗೆ ಸರಿಗಟ್ಟುವ ವಾತಾವರಣ ನಿರ್ಮಿಸಿಕೊಂಡು ಬದುಕುತಿದ್ದವರು ಯಮುನಾ ವಿಠ್ಠಲ್ ಸಂಗಾತಿಗಳು. ಬಹುವರ್ಷಗಳ ಯಮುನಾ ವಿಠ್ಠಲರ ಸ್ನೇಹ, ಕೆಲವು ವರ್ಷಗಳ ಸರ್ಜಾಶಂಕರರ ದೋಸ್ತಿ ನಮ್ಮಂಥವರಿಗೆ ಆಪ್ತವಾಗಿ ಮಾದರಿಯಾಗಿದ್ದರೆ ಅದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಮತ್ತವರ ಸಹಜ ಬದ್ಧತೆಯ ಬದುಕಿನ ರೀತಿ. ಅಣ್ಣನಂಥ ಗುರು, ಗುರುವಿನಂಥ ವಿಠ್ಠಲ್ ಅಣ್ಣನ ಬಗ್ಗೆ ಕೇಳುತಿದ್ದರೆ ಮಾತು ಬತ್ತಿಹೋದಂತಿತ್ತು. ಪ್ರಜಾವಾಣಿಗೆ ರವೀಂದ್ರ ಬಳಗುಳಿ ಅನಿಸಿಕೆ ಕೇಳಿದಾಗಲೂ. ಇದ್ದಾಗ ಮರೆಯಾದಾಗ ಕೂಡಾ ನಮ್ಮ ಎದೆಯಲ್ಲುಳಿಯುವ ಇಂಥವರ ಭಾವ ನಮ್ಮದಾಗಬೇಕಷ್ಟೇ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು...

ನಿನ್ನೆ ಇಂದು ನಾಳೆ….. ನದಿ ತಿರುವು ಪಾದಯಾತ್ರೆ & ಹೋರಾಟ

ನದಿತಿರುವು ಯೋಜನೆ ಸೇರಿದಂತೆ ಉತ್ತರಕನ್ನಡಕ್ಕೆ ಯಾವುದೇ ಬೃಹತ್‌ ನೀರಾವರಿ ಯೋಜನೆ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ...

ಗುರುವಿನ ಗುಲಾಮಳಾದವಳು ಸ್ವತ: ಭಾವನನ್ನೇ ಮುಗಿಸಿಬಿಟ್ಟಳು…!

ಫೆ.೦೨ ರ ರಾತ್ರಿ ಸಮಯ ಇನ್ನೇನು ತನ್ನ & ತಮ್ಮನ ಮಕ್ಕಳ ಜೊತೆ ಊಟ ಮಾಡಬೇಕು ಅಷ್ಟೊತ್ತಿಗೆ ಹೊರಗಿನಿಂದ ಬಂದ ಆಗಂತುಕರು ವಸಂತ ನಾಯ್ಕ...

ಭುವನಗಿರಿ ತೇರು & ಕೋಲಶಿರಸಿಯಲ್ಲಿ ಜೋರು!

ಸಿದ್ಧಾಪುರ, ಇಲ್ಲಿಯ ಪ್ರಸಿದ್ಧ ಕ್ಷೇತ್ರ ಭುವನಗಿರಿಯ ಮಹಾ ರಥೋತ್ಸವ ಫೆ.೨ಮತ್ತು ಮೂರರಂದು ನಾನಾ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಕೋಲಶಿರ್ಸಿಯಲ್ಲಿ— ಇಲ್ಲಿಯ ಕೋಲಶಿರ್ಸಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ...

ಸುಳಿಮುರಕಿ ದುರಂತ…ಹಣ-ಹಣ, ಜಣಜಣಹಣಕ್ಕಾಗಿ ಹೋಯ್ತು ಎರಡು ಜೀವ..!! 

ಬಂಗಾರದ ಹಲ್ಲಿನ ಬಾಂಬೆಸ್ಟೋರಿಯ ಅಪ್ಪನ ಮಗ ಕುಖ್ಯಾತ! ಆತ ಮಾಡದ ಅಡ್ಡ ಕಸುಬುಗಳಿಲ್ಲ,, ಸಾರಾಯಿ, ಗಾಂಜಾ, ಕಳ್ಳನಾಟಾ ಒಂದೆ-ಎರಡೆ…!  ದುಡ್ಡಿನ  ಮೋದದಪಮ್ಯಾ ಮೂವತ್ತು ದಾಟುವ...

Latest Posts

ಮತ್ತೆ ಶುರುವಾದ ಮಂಗನ ಜ್ವರ… ಮಲೆನಾಡಿಗೆ ಆತಂಕ ತಂದ ಕಾಯಿಲೆ

ಪ್ರತಿ ಬೇಸಿಗೆಗೆ  ಪ್ರಾರಂಭವಾಗುವ ಮಂಗನ ಖಾಯಿಲೆ ಈ ವರ್ಷ ತನ್ನ ಪಯಣ ಪ್ರಾರಂಭಿಸಿದೆ. ಈ ವರೆಗೆ ರಾಜ್ಯದಲ್ಲಿ ಒಟ್ಟೂ ೫೭ ಮಂಗನ ಜ್ವರದ ಪ್ರಕರಣಗಳು ದಾಖಲಾಗಿದ್ದು ಬೇಸಿಗೆಯ ಬಿಸಿಗೆ ತತ್ತರಿಸುತ್ತಿರುವ ಮಲೆನಾಡಿಗರಿಗೆ ಈ ಕಾಯಿಲೆ ತಲೆ ಬಿಸಿ ಹೆಚ್ಚಿಸಿದೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾದ ಕ್ಯಾಸನೂರು ಮಂಗನ ರೋಗ ಈ ವರ್ಷ ಕೂಡಾ ಶಿವಮೊಗ್ಗ ಜಿಲ್ಲೆಯಲ್ಲೇಅರ್ಧಶತಕ...

Recommended For You

About the Author: Kanneshwar Naik

Leave a Reply

Your email address will not be published. Required fields are marked *