ವಿಠ್ಠಲ್ ಭಂಡಾರಿ ನೆನೆದು….ಸರ್ಜಾಶಂಕರರ ಮಾದರಿ ಬದುಕಿನ ಸ್ಮರಣೆ

ಅದೆಷ್ಟೋ ಜನರು ಕರೆಮಾಡಿ ಪಕ್ಕಾ ಮಾಡಿಕೊಂಡರು. ಹೌದು ಅವರೆಲ್ಲರ ಅನುಮಾನದಂತೆ ವಿಠ್ಠಲ್ ರಿಗೆ ಸಾವಿಲ್ಲ, ಅವರ ದೇಹ ಮಾತ್ರ ನಿನ್ನೆ ಮಣ್ಣು ಸೇರಿತು ಕಾಂಮ್ರೇಡ್ ವಿಠ್ಠಲ್ ಅಮರ್ ರಹೇ ಎನ್ನುವ ಘೋಷಣೆಯೊಂದಿಗೆ… ಇಂದು ನಿನ್ನೆ, ಮೊನ್ನೆಗಳಿಂದ ಯಮುನಾ ರ ಕರೆ ಸೇರಿ ಕನಿಷ್ಟ ನೂರಾರು ಜನ ಕಂ ಬನಿಯಾದರು ವಿಠ್ಠಲ್ ಗಳಿಸಿದ್ದ ಸ್ವತ್ತದು.

ಡಾ. ಆರ್. ವಿ. ಭಂಡಾರಿಯಂಥ ಕಟ್ಟರ್ ಜಾತ್ಯಾತೀತರು, ಪ್ರಗತಿಪರರು, ಬಂಡಾಯಸಾಹಿತಿಯ ಮಗನಾಗಿದ್ದ ವಿಠ್ಠಲ್ ರನ್ನು ಆರ್.ವಿ.ಯವರ ನೆರಳಲ್ಲಿ ಕಂಡಂಥ ನನ್ನಂಥ ಅದೆಷ್ಟೋ ಜನರಿದ್ದಾರು. ಆದರೆ ವಿಠ್ಠಲ್ ನಿಜ ಕಮ್ಯುನಿಷ್ಟ್ ಆಗಿದ್ದರು. ಅಡುಗೆ ಮನೆಯಲ್ಲಿ ಬಾಣಸಿಗನಾಗಿ, ಸಂಗಾತಿ ಯಮುನಾರಿಗೆ ಸಂಸಾರ, ಹೋರಾಟ, ಓಡಾಟಕ್ಕೆ ಹೆಗಲುಕೊಟ್ಟವರಾಗಿ ಮಹಿಳಾ ಸಮಾನತೆ, ಜಾತಿಸಮಾನತೆ, ಧರ್ಮಸಮನ್ವಯತೆ ಎಲ್ಲದರಲ್ಲೂ ವಿಠ್ಠಲ್ ರಿಗೆ ಅವರೇ ಸಾಟಿ. ಕಾಲಿಗೆ ಗೆಜ್ಜೆಕಟ್ಟಿಕೊಂಡಂತೆ ತಿರುಗುತ್ತಾ, ಓದುತ್ತಾ, ಅಲೆಯುತ್ತಾ ವಿಠ್ಠಲ್ ಕ್ರೀಯಾಶೀಲತೆಗೆ ಇನ್ನೊಂದು ಹೆಸರಾಗಿದ್ದವರು.

ಹೋರಾಟದ ಸಂಗಾತಿಗಳೊಂದಿಗೆ ಸಲುಗೆ, ಪ್ರೀತಿಯ ಬಿಗುಹಿಡಿತದಿಂದಲೇ ಮಾತನಾಡುತಿದ್ದ ವಿಠ್ಠಲ್ ಮನಸ್ಸು ಹೃದಯ ಮಗುವಿನಂತಿತ್ತು.

ಡಾ. ಸರ್ಜಾಶಂಕರ್ ಹರಳೀಮಠ ನಮ್ಮ ಹಿರಿಯ ಅಣ್ಣನಂಥ ಸ್ನೇಹಿತರು ಬಹಳ ದಿನಗಳ ನಂತರ ಕರೆಮಾಡಿ ಮಾತನಾಡಿದವರು ವಿಠ್ಠಲ್ ಭಂಡಾರಿಯವರ ಬಗ್ಗೆ ಕೇಳಿಸಿಕೊಂಡರು. ಶಿವಮೊಗ್ಗದ ಸರ್ಜಾಶಂಕರ್ ಹರಳೀಮಠ ಸಿದ್ಧಾಂತ,ಬದುಕು, ಆಚರಣೆ, ಸಹಜತೆಗಳಲ್ಲಿ ಎತ್ತರದಲ್ಲಿದ್ದವರು. ಅಂತರ್ಜಾತಿ ವಿವಾಹವಾದ ಅವರ ಕುಟುಂಬದಲ್ಲಿ ನೆಲೆಸಿರುವ ಶಾಂತಿಯ ಹಿಂದೆ ಅವರ ಆತ್ಮನಿರ್ಭರತೆ ಇದೆ. ಪರಸ್ಪರ ಕುಟುಂಬದ ಸದಸ್ಯರ ನಡುವಿನ ಪ್ರೀತಿ-ಸಹಜತೆ,ಸ್ವಾತಂತ್ರ್ಯ,ನಿರಾಡಂಬರತೆ ಗಳಿಗೆ ಅವರ ವ್ಯಕ್ತಿತ್ವ, ಕುಟುಂಬಗಳೇ ದೃಷ್ಟಾಂತ. ಸರ್ಜಾಶಂಕರರ ಸಹಜತೆ, ಜಾತ್ಯಾತೀತತೆ,ಸಾಮಾಜಿ ಕಾಳಜಿ,ಬದ್ಧತೆಗಳಿಗೆ ಸರಿಗಟ್ಟುವ ವಾತಾವರಣ ನಿರ್ಮಿಸಿಕೊಂಡು ಬದುಕುತಿದ್ದವರು ಯಮುನಾ ವಿಠ್ಠಲ್ ಸಂಗಾತಿಗಳು. ಬಹುವರ್ಷಗಳ ಯಮುನಾ ವಿಠ್ಠಲರ ಸ್ನೇಹ, ಕೆಲವು ವರ್ಷಗಳ ಸರ್ಜಾಶಂಕರರ ದೋಸ್ತಿ ನಮ್ಮಂಥವರಿಗೆ ಆಪ್ತವಾಗಿ ಮಾದರಿಯಾಗಿದ್ದರೆ ಅದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಮತ್ತವರ ಸಹಜ ಬದ್ಧತೆಯ ಬದುಕಿನ ರೀತಿ. ಅಣ್ಣನಂಥ ಗುರು, ಗುರುವಿನಂಥ ವಿಠ್ಠಲ್ ಅಣ್ಣನ ಬಗ್ಗೆ ಕೇಳುತಿದ್ದರೆ ಮಾತು ಬತ್ತಿಹೋದಂತಿತ್ತು. ಪ್ರಜಾವಾಣಿಗೆ ರವೀಂದ್ರ ಬಳಗುಳಿ ಅನಿಸಿಕೆ ಕೇಳಿದಾಗಲೂ. ಇದ್ದಾಗ ಮರೆಯಾದಾಗ ಕೂಡಾ ನಮ್ಮ ಎದೆಯಲ್ಲುಳಿಯುವ ಇಂಥವರ ಭಾವ ನಮ್ಮದಾಗಬೇಕಷ್ಟೇ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *