ವಿಠ್ಠಲ್ ಭಂಡಾರಿ ನೆನೆದು….ಸರ್ಜಾಶಂಕರರ ಮಾದರಿ ಬದುಕಿನ ಸ್ಮರಣೆ

ಅದೆಷ್ಟೋ ಜನರು ಕರೆಮಾಡಿ ಪಕ್ಕಾ ಮಾಡಿಕೊಂಡರು. ಹೌದು ಅವರೆಲ್ಲರ ಅನುಮಾನದಂತೆ ವಿಠ್ಠಲ್ ರಿಗೆ ಸಾವಿಲ್ಲ, ಅವರ ದೇಹ ಮಾತ್ರ ನಿನ್ನೆ ಮಣ್ಣು ಸೇರಿತು ಕಾಂಮ್ರೇಡ್ ವಿಠ್ಠಲ್ ಅಮರ್ ರಹೇ ಎನ್ನುವ ಘೋಷಣೆಯೊಂದಿಗೆ… ಇಂದು ನಿನ್ನೆ, ಮೊನ್ನೆಗಳಿಂದ ಯಮುನಾ ರ ಕರೆ ಸೇರಿ ಕನಿಷ್ಟ ನೂರಾರು ಜನ ಕಂ ಬನಿಯಾದರು ವಿಠ್ಠಲ್ ಗಳಿಸಿದ್ದ ಸ್ವತ್ತದು.

ಡಾ. ಆರ್. ವಿ. ಭಂಡಾರಿಯಂಥ ಕಟ್ಟರ್ ಜಾತ್ಯಾತೀತರು, ಪ್ರಗತಿಪರರು, ಬಂಡಾಯಸಾಹಿತಿಯ ಮಗನಾಗಿದ್ದ ವಿಠ್ಠಲ್ ರನ್ನು ಆರ್.ವಿ.ಯವರ ನೆರಳಲ್ಲಿ ಕಂಡಂಥ ನನ್ನಂಥ ಅದೆಷ್ಟೋ ಜನರಿದ್ದಾರು. ಆದರೆ ವಿಠ್ಠಲ್ ನಿಜ ಕಮ್ಯುನಿಷ್ಟ್ ಆಗಿದ್ದರು. ಅಡುಗೆ ಮನೆಯಲ್ಲಿ ಬಾಣಸಿಗನಾಗಿ, ಸಂಗಾತಿ ಯಮುನಾರಿಗೆ ಸಂಸಾರ, ಹೋರಾಟ, ಓಡಾಟಕ್ಕೆ ಹೆಗಲುಕೊಟ್ಟವರಾಗಿ ಮಹಿಳಾ ಸಮಾನತೆ, ಜಾತಿಸಮಾನತೆ, ಧರ್ಮಸಮನ್ವಯತೆ ಎಲ್ಲದರಲ್ಲೂ ವಿಠ್ಠಲ್ ರಿಗೆ ಅವರೇ ಸಾಟಿ. ಕಾಲಿಗೆ ಗೆಜ್ಜೆಕಟ್ಟಿಕೊಂಡಂತೆ ತಿರುಗುತ್ತಾ, ಓದುತ್ತಾ, ಅಲೆಯುತ್ತಾ ವಿಠ್ಠಲ್ ಕ್ರೀಯಾಶೀಲತೆಗೆ ಇನ್ನೊಂದು ಹೆಸರಾಗಿದ್ದವರು.

ಹೋರಾಟದ ಸಂಗಾತಿಗಳೊಂದಿಗೆ ಸಲುಗೆ, ಪ್ರೀತಿಯ ಬಿಗುಹಿಡಿತದಿಂದಲೇ ಮಾತನಾಡುತಿದ್ದ ವಿಠ್ಠಲ್ ಮನಸ್ಸು ಹೃದಯ ಮಗುವಿನಂತಿತ್ತು.

ಡಾ. ಸರ್ಜಾಶಂಕರ್ ಹರಳೀಮಠ ನಮ್ಮ ಹಿರಿಯ ಅಣ್ಣನಂಥ ಸ್ನೇಹಿತರು ಬಹಳ ದಿನಗಳ ನಂತರ ಕರೆಮಾಡಿ ಮಾತನಾಡಿದವರು ವಿಠ್ಠಲ್ ಭಂಡಾರಿಯವರ ಬಗ್ಗೆ ಕೇಳಿಸಿಕೊಂಡರು. ಶಿವಮೊಗ್ಗದ ಸರ್ಜಾಶಂಕರ್ ಹರಳೀಮಠ ಸಿದ್ಧಾಂತ,ಬದುಕು, ಆಚರಣೆ, ಸಹಜತೆಗಳಲ್ಲಿ ಎತ್ತರದಲ್ಲಿದ್ದವರು. ಅಂತರ್ಜಾತಿ ವಿವಾಹವಾದ ಅವರ ಕುಟುಂಬದಲ್ಲಿ ನೆಲೆಸಿರುವ ಶಾಂತಿಯ ಹಿಂದೆ ಅವರ ಆತ್ಮನಿರ್ಭರತೆ ಇದೆ. ಪರಸ್ಪರ ಕುಟುಂಬದ ಸದಸ್ಯರ ನಡುವಿನ ಪ್ರೀತಿ-ಸಹಜತೆ,ಸ್ವಾತಂತ್ರ್ಯ,ನಿರಾಡಂಬರತೆ ಗಳಿಗೆ ಅವರ ವ್ಯಕ್ತಿತ್ವ, ಕುಟುಂಬಗಳೇ ದೃಷ್ಟಾಂತ. ಸರ್ಜಾಶಂಕರರ ಸಹಜತೆ, ಜಾತ್ಯಾತೀತತೆ,ಸಾಮಾಜಿ ಕಾಳಜಿ,ಬದ್ಧತೆಗಳಿಗೆ ಸರಿಗಟ್ಟುವ ವಾತಾವರಣ ನಿರ್ಮಿಸಿಕೊಂಡು ಬದುಕುತಿದ್ದವರು ಯಮುನಾ ವಿಠ್ಠಲ್ ಸಂಗಾತಿಗಳು. ಬಹುವರ್ಷಗಳ ಯಮುನಾ ವಿಠ್ಠಲರ ಸ್ನೇಹ, ಕೆಲವು ವರ್ಷಗಳ ಸರ್ಜಾಶಂಕರರ ದೋಸ್ತಿ ನಮ್ಮಂಥವರಿಗೆ ಆಪ್ತವಾಗಿ ಮಾದರಿಯಾಗಿದ್ದರೆ ಅದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಮತ್ತವರ ಸಹಜ ಬದ್ಧತೆಯ ಬದುಕಿನ ರೀತಿ. ಅಣ್ಣನಂಥ ಗುರು, ಗುರುವಿನಂಥ ವಿಠ್ಠಲ್ ಅಣ್ಣನ ಬಗ್ಗೆ ಕೇಳುತಿದ್ದರೆ ಮಾತು ಬತ್ತಿಹೋದಂತಿತ್ತು. ಪ್ರಜಾವಾಣಿಗೆ ರವೀಂದ್ರ ಬಳಗುಳಿ ಅನಿಸಿಕೆ ಕೇಳಿದಾಗಲೂ. ಇದ್ದಾಗ ಮರೆಯಾದಾಗ ಕೂಡಾ ನಮ್ಮ ಎದೆಯಲ್ಲುಳಿಯುವ ಇಂಥವರ ಭಾವ ನಮ್ಮದಾಗಬೇಕಷ್ಟೇ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *