![](https://i0.wp.com/samajamukhi.net/wp-content/uploads/2021/05/FB_IMG_1622123223575.jpg?resize=540%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![](https://i0.wp.com/samajamukhi.net/wp-content/uploads/2021/05/IMG-20210527-WA0027.jpg?resize=760%2C702&ssl=1)
![](https://i0.wp.com/samajamukhi.net/wp-content/uploads/2021/05/FB_IMG_1622130073889.jpg?resize=720%2C321&ssl=1)
ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳ ಕೊರತೆಯೇ ಉತ್ತರ ಕನ್ನಡದ ಕರೋನಾ ರಗಳೆಗೆ ಕಾರಣ ಎಂದಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಾಲೂಕಾ ಆಸ್ಫತ್ರೆಗಳಲ್ಲೂ ನಾವು ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತಿದ್ದೇವೆ ಆದರೆ ಈವರೆಗೆ ಜಿಲ್ಲೆಯಲ್ಲಿ ಎಲ್ಲೂ ಯಾವುದೇ ರೋಗಿಗೂ ಯಾವ ತೊಂದರೆಯೂ ಆಗಿಲ್ಲ. ಒಬ್ಬ ಸೋಂಕಿತ, ವ್ಯಕ್ತಿಗೂ ತೊಂದರೆ ಆಗದಂತೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆ ರೂಪಿಸಿದೆ. ಈ ಸಂರಚನೆ ಜೊತೆಗೆ ದೊಡ್ಡ ಸವಾಲನ್ನು ಎದುರಿಸುವ ಅನಿವಾರ್ಯತೆ ಉಂಟಾಗಿರುವುದರಿಂದ ಎಲ್ಲರ ಸಹಕಾರದಿಂದ ಕೋವಿಡ್ ಜಯಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿದ್ಧಾಪುರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಜನರ ಅನಿವಾರ್ಯತೆ ಅರಿತು ಸೋಮುವಾರದಿಂದ ಗುರುವಾರದ ವರೆಗೆ ಮುಂಜಾನೆ 8 ರಿಂದ 12 ರ ವರೆಗೆ ಲಾಕ್ ಡೌನ್ ಸಡಿಲಿಕೆ ಮಾಡಿದ್ದೇವೆ. ಇದರ ದುರುಪಯೋಗಕ್ಕೆ ಅವಕಾಶವಿಲ್ಲ ಎಂದರು. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಅದಕ್ಕೆ ಅವಶ್ಯ ಕೆಲಸ,ಅನುಕೂಲ ನೀಡಲು ಜಿಲ್ಲಾಡಳಿತ ಸಜ್ಜಾಗಿದೆ ಎಂದ ಅವರು. ಕರೋನಾ ಜೊತೆಗೆ ಮಳೆಗಾಲದ ಸಿದ್ಧತೆಗಾಗಿ ಜಿಲ್ಲೆಯಾದ್ಯಂತ ಪ್ರವಾಸ ಮಾಡುತಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಜಿಲ್ಲಾಡಳಿತ ಪರಿಸ್ಥಿತಿ ನಿಭಾಯಿಸಲಿದೆ ಎಂದರು.
![](https://i0.wp.com/samajamukhi.net/wp-content/uploads/2021/05/FB_IMG_1622123223575.jpg?resize=404%2C433&ssl=1)
![](https://i0.wp.com/samajamukhi.net/wp-content/uploads/2021/05/sp-karwar.jpg?resize=553%2C783&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)