Big news of the day -ನಿಸರ್ಗ ನಿಯಮ ಮೀರುತ್ತಿರುವ ಮಾನವ..!

5G ವಿಕಿರಣ ಅಪಾಯ ಪ್ರಶ್ನಿಸಿ ಕೊರ್ಟ ಮೆಟ್ಟಿಲೇರಿದ್ದ ಚಿತ್ರ ನಟಿ ಜೂಹೀ ಚಾವ್ಲಾ ಅವರಿಗೆ ನ್ಯಾಯಾಲಯ 20 ಲಕ್ಷ ರೂಪಾಯಿ ದಂಡ ವಿಧಿಸಿ ಅರ್ಜಿ ವಜಾ ಗೊಳಿಸಿದೆ ಮತ್ತು “ಪ್ರಚಾರದ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಮತ್ತು ನ್ಯಾಯಾಂಗ ಪ್ರಕ್ರೀಯೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದೆ” ದಶಕಗಳಕಾಲ ಒಬ್ಬ ಸ್ಟಾರ್ ನಟಿಯಾಗಿ ಮಿಂಚಿದ ಒಬ್ಬ ನಟಿ ಒಂದು ಪೆಟಿಶನ್ ಮೂಲಕ ಪ್ರಚಾರ ಪಡೆದುಕೊಳ್ಳುವ ಅಗತ್ಯ ಇದೆಯೇ? ಅಷ್ಟಕ್ಕೂ ಒಂದೇ ಒಂದು ವೈಜ್ಞಾನಿಕ ತನಿಖೆಗೆ ಆದೇಶ ನಿಡಿದ್ದಿದ್ದ್ರೆ ಸತ್ಯ ಜನಗಳ ಎದುರು ಬರ್ತಾ ಇತ್ತು ನಂತರದಲ್ಲಿ ಯಾವ ತೀರ್ಮಾನ ಬೇಕಿದ್ದ್ರೂ ನೀಡುವ ಅಧಿಕಾರ ನ್ಯಾಯಲಯಕ್ಕೆ ಇದ್ದೆ ಇತ್ತು,ಆದರೆ ನ್ಯಾಯಾಲಯಕ್ಕೆ ಈ ಪೆಟಿಶನ್ ಕೈಗೆತ್ತಿಕೊಳ್ಳುವ ಆಸಕ್ತಿ ಇರಲೇ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಪರಿಣಾಮ ಆದಷ್ಟು ಬೇಗ 5G ತಂತ್ರಜ್ಞಾನ ಆರಂಭ.

#ವಿಷಯ_2

ಈ ಮೊಬೈಲ್ ಟಾವರ್ ಗಳು,ರೇಡಿಯೇಶನ್ ಗಳಿಂದ ಆಗುವ ಅನಾಹುತಗಳ ಬಗ್ಗೆ ಒಂದಿಷ್ಟು ಜನಗಳಿಗೆ ತಿಳುವಳಿಕೆ ಇದೆ,ಅಲ್ಲಲ್ಲಿ ಆಗಾಗ ಚರ್ಚೆಗಳು ಮಾಡುವುದನ್ನು ಕಾಣಬಹುದು ಗುಬ್ಬಚ್ಚಿಗಳು ಚಿಕ್ಕ ಪುಟ್ಟ ಪಕ್ಷಿಗಳು ಮೋಬೈಲ್ ಟಾವರ್ ಗಳ ತರಂಗಗಳ ಹೊಡೆತಕ್ಕೆ ಸತ್ತು ಹೋಗುವುದು,ಮನುಷ್ಯನ ಮೆದುಳು ಹಾನಿಗೆ ಒಳಗಾಗುವುದು ಇತ್ಯಾದಿ ವಿಷಯಗಳನ್ನು ಪತ್ರಿಕೆಗಳಲ್ಲಿ ಮ್ಯಾಗಜಿನ್ ಗಳಲ್ಲಿ ಎಲ್ಲೋ ಒಂದ್ಕಡೆ ಓದಿರ್ತೆವೆ. ಆದರೆ ಇದರಷ್ಟೇ ಭಯಾನಕವಾದ ಮತ್ತು ಮನುಷ್ಯ ಪಕ್ಷಿ ಸಂಕುಲಗಳಿಗೆ ಹಾನಿ ಉಂಟು ಮಾಡುವ ಇನ್ನೊಂದು ಉದ್ಯಮ ಇದೆ.ಅದೇ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನ್ ಗಳು ,ಅವುಗಳಿಂದ ಹೊರಡುವ ಸೂಕ್ಷ್ಮ ತರಂಗಗಳು ಕೂಡ ಗುಬ್ಬಚ್ಚಿಗಳು ಮತ್ತು ಚಿಕ್ಕ ಪುಟ್ಟ ಹಕ್ಕಿಗಳ ಬ್ರೈನ್ ಗೆ ಆಘಾತವನ್ನು ಉಂಟು ಮಾಡಿ ಸಾಯಿಸ್ತವೆ,ಮೇಲ್ಗಡೆ ಇರೋ ಫ್ಯಾನ್ ಗಳು ಒಂದು ಸುತ್ತು ಹಾಕುವಷ್ಟರಲ್ಲಿ ಕೆಳಭಾಗದಲ್ಲಿ ಸೆಟ್ ಮಾಡಲಾದ ಡೈನಮೊಗಳು 300ಕ್ಕೂ ಹೆಚ್ಚಿನ ಸುತ್ತು ಹಾಕ್ತವೆ ಅಂದ್ರೆ ಆ ತರಂಗಗಳು ಪಕ್ಷಿ ಸಂಕುಲಕ್ಕೆ ಎಷ್ಟು ಹಾರ್ಮ‌ ಫುಲ್ ಅಂತ ಯೋಚಿಸಿ.ಈ ವಿಂಡ್ ಟರ್ಬೈನ್ ಗಳ ತರಂಗಗಳು ಎಷ್ಟು ಅಪಾಯಕಾರಿ ಎಂದರೆ ಅವುಗಳ ಸುತ್ತ ಇರುವ ಗ್ರಾಮ,ಹಟ್ಟಿಗಳಲ್ಲಿನ ಗರ್ಭಿಣಿ ಸ್ತ್ರೀಯರಿಗೆ ಗರ್ಭಪಾತ ನಿಶ್ಚಿತ.ಅವುಗಳನ್ನು ಆದಷ್ಟು ಜನ ನಿಬಿಡ ಪ್ರದೇಶಗಳಿಂದ ದೂರ ಗುಡ್ಡಗಾಡು ಪ್ರದೇಶಗಳಲ್ಲಿ ಸ್ಥಾಪಿಸಬೇಕು ಎಂಬ ನಿಯಮವಿದೆ,ಆದಾಗ್ಯೂ ಅವುಗಳ ಗುತ್ತಿಗೆ ದಾರರು (ಬಹುತೇಕ ದೊಡ್ಡ ರಾಜಕೀಯ ಕುಳಗಳೇ)ಈ ನಿಯಮಗಳನ್ನು ಅನುಸರಿಸುತ್ತಿಲ್ಲ.ರೈತರಿಗೆ ಹೆಚ್ಚಿನ ಬೆಲೆ ನೀಡುವುದಾಗಿ ಮರಳು ಮಾಡಿ ಅವರ ಭೂಮಿಗಳನ್ನು ಕೊಂಡುಕೊಂಡು ಗ್ರಾಮಗಳ ಸುತ್ತಲೂ ವಿಂಡ್ ಟರ್ಬೈನ್ ಗಳನ್ನು ಸ್ಥಾಪಿಸುತ್ತಿದ್ದಾರೆ.ಅದರಲ್ಲಿ ರಾಜಕಾರಣಿಗಳ ಪಾಲುದಾರಿಕೆಯೂ ಸಹ ಇರೊದ್ರಿಂದ ಪ್ರತಿ ಗ್ರಾಮಗಳ ಸುತ್ತ ಮುತ್ತ ಹತ್ತಾರು ಫ್ಯಾನ್ ಗಳು ತಡೆ ರಹಿತವಾಗಿ ಸ್ಥಾಪಿತವಾಗುತ್ತಲೇ ಇವೆ.ಒಂದು ಪವನ ವಿದ್ಯುತ್ ಸ್ಥಾವರದ ಸ್ಥಾಪನೆಗೆ ತಗುಲುವ ವೆಚ್ಚ ಅಂದಾಜು 12-16 ಕೋಟಿ.ಇದಕ್ಕೆ ವಿಶ್ವದ ದೊಡ್ಡ ದೊಡ್ಡ ಬ್ಯಾಂಕ್ ಗಳಿಂದ ಲೋನ್ ಸೌಲಭ್ಯ ಇದೆ.ಒಂದು ಫ್ಯಾನ್ ಪ್ರತಿನಿತ್ಯ ಉತ್ಪಾದಿಸುವ ವಿದ್ಯುತ್ ನ ಮೌಲ್ಯ ಸರಿ ಸುಮಾರು ಎರಡು ಲಕ್ಷ ರೂಪಾಯಿಗಳು,ಒಂದು ಫ್ಯಾನ್ ನ ಬಾಳಿಕೆ 18-20 ವರ್ಷಗಳು ಒಂದು ದಿನಕ್ಕೆ ಎರಡು ಲಕ್ಷದಂತೆ ಲೆಕ್ಕಕ್ಕೆ ತಗೊಂಡಲ್ಲಿ ಎರಡು ಎರಡೂವರೇ ವರ್ಷಗಳಲ್ಲಿ ಉದ್ಯಮಿ ಹಾಕಿದ ಬಂಡವಾಳ ವಾಪಸ್, ಮುಂದಿನ ಹತ್ತು ಹದಿನೈದು ವರ್ಷಗಳು ನಿರಂತರ ಲಾಭ .ಇದರ ಬಗ್ಗೆ ಜನಗಳಲ್ಲಿ ಅದರಲ್ಲೂ ಹಳ್ಳಿಗಾಡಿನ ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕುವ ಪ್ರಯತ್ನ ಮಾಡಿದ್ವಿ.ಆದರೆ ಇವುಗಳಿಗೆ ಸಂಬಂಧಪಟ್ಟ “ಕರ್ನಾಟಕ ರಾಜ್ಯ ಪುನರ್ ನವೀಕರಿಸಬಹುದಾದ ಇಂಧನಗಳ ಇಲಾಖೆ” ಯವರು ನಮ್ಮ ಯಾವ ಮನವಿಗಳಿಗೂ RTI ಗಳಿಗೂ ಸೂಕ್ತ ಉತ್ತರ ಕೊಡದೆ ನುಣಿಚಿಕೊಂಡರು..ಇನ್ನೊಂದಿಷ್ಟು ದಾಖಲೆ ಸಿಕ್ಕಿದ್ದಲ್ಲಿ ಕಾನೂನು ಹೋರಾಟಕ್ಕೆ ನಾವೂ ಸಹಿತ ಜೂಹೀ ಚಾವ್ಲಾ ಅವರಂತೆ ಸಜ್ಜಾಗಿದ್ದೆವು ಆದರೆ ಇಲಾಖೆಯ ಬೇಜವಾಬ್ದಾರಿ ತನದಿಂದ ನಮ್ಮ ಪ್ರಯತ್ನಕ್ಕೆ ತಾತ್ಕಾಲಿಕ ಹಿನ್ನಡೆಯಾಯಿತು.

ವಿಷಯ_3

ಬಿಜಾಪುರದ ಕೂಡಿಗೆ ಅಣುಸ್ಥಾವರ ಸ್ಥಾಪನೆ ಅಲ್ಲೂ ಕೂಡ ಬಡ ರೈತರ ಜಮಿನುಗಳನ್ನು ಎರಡು ಮೂರು ಪಟ್ಟು ಹೆಚ್ಚಿನ ಬೆಲೆಗೆ ಕೊಂಡು ಕೊಳ್ಳಲಾಯಿತು.ಅಣು ಸ್ಥಾವರ ಸ್ಥಾಪನೆ ಗೆ “ಪಾಟೀಲ್”(ಹೆಸರು ನೆನಪಿಲ್ಲ) ಎನ್ನುವ ಪರಿಸರ ಪ್ರೇಮಿ ಒಬ್ಬರು ವೀರೋಧ ಮಾಡಿ ಲಕ್ಷಾಂತರ ತಮ್ಮ ಸ್ವಂತ ಹಣ ಖರ್ಚು ಮಾಡಿ ಪ್ರೊಜೆಕ್ಟರ್ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು,ನ್ಯಾಯಾಲಯದ ಮೊರೆ ಕೂಡ ಹೋದರು ಆದರೆ ಯಾವ ಪ್ರಯೋಜನವೂ ಆಗಲಿಲ್ಲ ದುಡ್ಡಿನಾಸೆಗೆ ಬಿದ್ದ ರೈತರು ಜಮಿನುಗಳನ್ನು ಮಾರಿ ಬಾರು ಬಿಯರು ಅಂತ ಬುಲ್ಲೆಟ್,ಸ್ಕಾರ್ಪಿಯೋ ಗಳಲ್ಲಿ ತಿರುಗಾಡೊ ಶೋಕಿಗೆ ಬಿದ್ದು ಶೇಕಡಾ 75% ಜನ ಒಂದೆರಡು ವರ್ಷಗಳಲ್ಲಿ ಕುಡಿದು,ಅಪಘಾತ ಗಳಲ್ಲಿ ಸತ್ತು ಹೋದರು.ಅಣು ಸ್ಥಾವರ ನಿರಾತಂಕವಾಗಿ ಆರಂಭ ಆಯಿತು! ಒಂದು ಮಾಹಿತಿಯ ಪ್ರಕಾರ ಬಿಜಾಪುರದ ಕೂಡಿಗೆ ಅಣುಸ್ಥಾವರ ದಿಂದ ಹೊರ ಸೂಸುವ ಬೂದಿ ಸುತ್ತ ಮುತ್ತ ಸುಮಾರು 40km radius ನಲ್ಲಿ ಹಾರಿ ಹರಡುತ್ತದೆ.ಕುಡಿಯುವ ನೀರಿನಲ್ಲಿ ಗಾಳಿಯಲ್ಲಿ ಬೆರೆತು. ಜನಗಳು ಉಸಿರಾಟದ ತೊಂದರೆ,ಅಸ್ಥಮಾ,ಕ್ಯಾನ್ಸರ್ ನಂತಹ ಮಾರಕ ರೋಗಗಳಿಂದ ಬಳಲಿದರೆ ಹುಟ್ಟುವ ಮಕ್ಕಳು ವಿಕಲಾಂಗ ರಾಗಿ ಹುಟ್ಟುತ್ತವೆ.ಇಷ್ಟೆಲ್ಲ ಮಾಹಿತಿ ಸರ್ಕಾರಕ್ಕೆ Environment Department ಗೆ ಇದ್ದರೂ ಸಹ ಜನಗಳ ಜೀವಕ್ಕಿಂತ ಅವರುಗಳಿಗೆ ಉದ್ದಿಮೆ,ಲಾಭ ,ಅಭಿವೃದ್ದಿ!? ಮುಖ್ಯ.

ವಿಷಯ_4

ಬಳ್ಳಾರಿ ಗಣಿ ಮಾಫಿಯಾನೇ ತಗೊಳ್ಳಿ ಪ್ರತಿ ನಿತ್ಯ ಲಕ್ಷಾಂತರ ಟನ್ ಭೂಮಿ ತಾಯಿ ಒಡಲು ಬಗೆದು ಹೊರತೆಗೆದ ಮಣ್ಣು ವಿದೇಶಗಳ ಪಾಲಾಯಿತು, ಒಂದು ಟನ್ ಮಣ್ಣಿಗೆ ಸರ್ಕಾರಕ್ಕೆ ಹೋಗತ್ತಿದ್ದ Royalty 150-200.ಅದೇ ಈ ಗಣಿ ಮಾಲಿಕರು ವಿದೇಶಗಳಲ್ಲಿ ಈ ಮಣ್ಣು ಮಾರ್ತ ಇದ್ದಿದ್ದು 2000 ರೂಪಾಯಿಗೆ ಟನ್.ಸ್ವತಃ ಸರ್ಕಾರಗಳೇ ತನ್ನ ಸಂಪತ್ತನ್ನು ಹಾಳು ಗೆಡವಲು ಪಣ ತೊಟ್ಟಂತೆ ನಿಂತು ಬಿಟ್ಟಿತು.ಪರಿಣಾಮ ಬಳ್ಳಾರಿ ಬೆಂಗಾಡಾಗಿ ಹೋಯ್ತು ಅಲ್ಲಿನ ಚಿಕ್ಕ ಪುಟ್ಟ ಪ್ರಾಣಿ ಪಕ್ಷಿಗಳ ಸಂಕುಲ ನಾಶವಾಗಿ ಹೋಯಿತು.ಕುಡಿಯುವ ನೀರಿನ‌ ಸಮಸ್ಯೆ,ರೋಗ ರುಜಿನಗಳ ಉಲ್ಬಣದಿಂದ ಜನಸಾಮಾನ್ಯರ ಜೀವನ ನರಕ ಆಗಿ ಹೋಯ್ತು.ಇಷ್ಟೆಲ್ಲ ಆದ್ರೂ ನಮ್ಮ ಜನಗಳಿಗೆ ಅದು ಆಘಾತಕಾರಿ ವಿಷಯ ಅಲ್ವೇ ಅಲ್ಲ.ಅದು ಸರ್ಕಾರಿ ಆಸ್ತಿ ಏನಾದ್ರೂ ಆಗಲಿ ನಮಗ್ಯಾಕೆ ಎನ್ನುವ ಮನೋಭಾವ, ಜನಗಳಲ್ಲಿನ ಪರಿಸರ ಪ್ರೇಮ ಯಾಕೆ ಸಾಯತ್ತಿದೆ ? ನಿಸರ್ಗ ಅಳಿದರೆ ಮನುಷ್ಯ ಕುಲ ಸರ್ವನಾಶ ಆಗದೆ ಇರಲು ಸಾಧ್ಯವೆ ? ಎನ್ನುವ ಕನಿಷ್ಟ ಪ್ರಜ್ಞೆ ಕೂಡ ಯಾಕೆ ಮನುಷ್ಯನಲ್ಲಿಲ್ಲ ? ಮನುಷ್ಯ ಯಾವಾಗ ಪ್ರಕೃತಿಯ ನಿಯಮಗಳನ್ನು ಮೀರುತ್ತಾನೋ ಆವಾಗ ಖಂಡಿತ ಏಟು ತಿಂದೆ ತಿಂತಾನೆ.ಆದರೆ ಅದರ ಅರಿವು ಆತನಿಗಿಲ್ಲ , ತಂತ್ರಜ್ಞಾನ,ಡೆವಲಪ್ಮೆಂಟ್,ಅಧುನಿಕತೆ,ಯ ಹೆಸರಲ್ಲಿ ನಾವು ನಿಸರ್ಗವನ್ನು ಎದುರು ಹಾಕಿ ಕೊಳ್ಳುತ್ತಿದ್ದೆವೆ.ಇದರ ಪರಿಣಾಮ ಇನ್ನು ಕೆಲವೇ ವರ್ಷಗಳಲ್ಲಿ ಅನುಭವಿಸಲಿದ್ದೇವೆ,ಕೊನೆಯ ಮಾತು ನೆನಪಿಡಿ ಈ ಭೂಮಿ ಮೇಲೆ ಜೇನು ನೊಣಗಳ ಸಂಕುಲ ಬದುಕಿರುವ ವರೆಗೆ ಮಾತ್ರ ಮಾನವನ ಬದುಕು ಅವುಗಳು ನಾಶಗೊಂಡ ವರ್ಷವೇ ಮನುಷ್ಯನ ಸರ್ವನಾಶ ಆರಂಭ.ಇನ್ನಾದರೂ ಎಚ್ಚರಗೊಳ್ಳಿ ಪರಿಸರ ಸಂರಕ್ಷಿಸಿ ಬದುಕಿಕೊಳ್ಳಿ ಇಲ್ಲವೇ ಆತ್ಮ ಹತ್ಯೆಗೆ ಸಿದ್ದರಾಗಿ.

-ರವೀಂದ್ರ ಎನ್ ಎಸ್ .

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *