

ಸಿದ್ಧಾಪುರ ತಾಲೂಕಿನ ಮುಗದೂರಿನ ಪ್ರಚಲಿತ ಆಶ್ರಯಧಾಮಕ್ಕೆ ಭೇಟಿ ನೀಡಿದ ಸಾಫ್ಟ್ ವೇರ್ ಇಂಜಿನಿಯರ್ ಪ್ರಥ್ವಿರಾಜ್ ಪಾಟೀಲ್ ವಡಗೇರಿ ಆಶ್ರಮದ ಕೆಲಸಗಳನ್ನು ಪ್ರಶಂಸಿದರು. ಅಸಹಾಯಕರು, ಅನಾಥರಿಗೆ ಸೇವೆ ಮಾಡುತ್ತಿರುವ ನಾಗರಾಜ್ ನಾಯ್ಕ ಕುಟುಂಬವನ್ನು ಶ್ಲಾಘಿಸಿದ ಪಾಟೀಲ್ ತಮ್ಮ ಆರ್ಥಿಕ ನೆರವನ್ನು ಒದಗಿಸಿದರು.

ಪ್ರಚಲಿತ ಆಶ್ರಯಧಾಮ ಅನೇಕ ಏಳುಬೀಳುಗಳ ನಡುವೆ ಸಾಗುತ್ತಿದೆ. ಸಮಾಜಮುಖಿ ಸಮೂಹ ಕೂಡಾ ನಮ್ಮ ಸೇವೆಗೆ ತಮ್ಮ ನೈತಿಕ ಧೈರ್ಯ ನೀಡುತ್ತಿದೆ. ವ್ಯಕ್ತಿಗಳು, ಮಾಧ್ಯಮಗಳ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನೇಶ್ ಆಶ್ರಮದ ಪರವಾಗಿ ಸಹಕಾರ ನೀಡುತಿದ್ದಾರೆ. ಪ್ರಥ್ವಿರಾಜ್ ಪಾಟೀಲ್ ರಂಥ ಅನೇಕ ಸಹೃದಯರೇ ನಮ್ಮ ಸೇವೆಯ ಹಿಂದಿನ ಸ್ಪೂರ್ತಿ. ಹೀಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಸೇವೆಗೆ ಬೆಂಬಲಿಸುವ ಜನರು ನಮ್ಮ ಶ್ರಮ, ಸೇವೆಯ ಹಿಂದಿನ ನಿಜವಾದ ಶಕ್ತಿ ಎಂದು ಕೃತಜ್ಞತೆ ಸಲ್ಲಿಸಿದ ಪ್ರಚಲಿತ ಆಶ್ರಮದ ಮುಖ್ಯಸ್ಥ ನಾಗರಾಜ್ ನಾಯ್ಕ ಮಾನವೀಯ ಸೇವೆಗೆ ಮಿಡಿದ ಪ್ರಥ್ವಿರಾಜ್ ಪಾಟೀಲ್ ಮತ್ತು ಸಮಾಜಮುಖಿ.ನೆಟ್ ನ್ಯೂಸ್ ಗೆ ಧನ್ಯವಾದ ಅರ್ಪಿಸಿದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
