

ನಿವೃತ್ತ ಶಿಕ್ಷಕ,ಪ್ರಶಾಂತಿ ಶಾಲೆಯ ಆಡಳಿತ ಸಮೀತಿ ಸದಸ್ಯ ರಂತಿದ್ದ ಎಂ.ಜಿ.ಭಟ್ ಇಂದು ನಿಧನರಾದರು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿಯಾಗಿಯೂ ಆಗಿ ಕೆಲಸ ಮಾಡಿದ್ದ ಕ್ರೀಯಾಶೀಲ ವ್ಯಕ್ತಿತ್ವದ ಎಂ.ಜಿ.ಭಟ್ ಸಾವಿಗೆ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರೊಂದಿಗೆ ಅಧ್ಯಕ್ಷ ಸಿ.ಎಸ್. ಗೌಡರ್, ಪ್ರಶಾಂತಿ ಶಾಲೆಯ ಆಡಳಿತ ಸಮೀತಿ ಸದಸ್ಯರು ಸಂತಾಪ ಸೂಚಿಸಿದ್ದಾರೆ.

ಉಪನ್ಯಾಸಕ ರತ್ನಾಕರ ನಾಯ್ಕ ನರಮುಂಡಿಗೆಯವರ ನುಡಿ ನಮನ- ಎಂ. ಜಿ. ಭಟ್ಟ ಎಂದೇ ಆತ್ಮೀಯ ವಲಯದಲ್ಲಿ, ವಿದ್ಯಾರ್ಥಿ ವೃಂದದಲ್ಲಿ ಗುರುತಿಸಿಕೊಂಡಿದ್ದ ಶ್ರೀ ಮಹಾಬಲೇಶ್ವರ ಗಣಪತಿ ಭಟ್ಟ ದಿನಾಂಕ 02-97-2021 ರಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಇವರು ಬೆಳಖಂಡದ ಗಣಪತಿ ಭಟ್ಟ ಮತ್ತು ಬಂಗಾರಿ ಗಣಪತಿ ಭಟ್ಟ ರ ದ್ವಿತೀಯ ಪುತ್ರರು.
ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಲ್ಲಿಯೇ, 14-08-1974 ರಲ್ಲಿ ದೈಹಿಕ ಶಿಕ್ಷಕರಾಗಿ ಎಂ.ಜಿ.ಸಿ.ಎಂ. ಪ್ರೌಢಶಾಲೆ ಬಿದ್ರಕಾನ ದಲ್ಲಿ ವೃತ್ತಿ ಜೀವನ ಆರಂಭಿಸಿದರು. 39 ವರ್ಷಗಳ ಸುದೀರ್ಘ ವೃತ್ತಿ ಜೀವನದಿಂದ 2013 ರಲ್ಲಿ ನಿವೃತ್ತಿ ಹೊಂದಿದ್ದರೂ, ಇಂದಿನವರೆಗೂ ಆ ಕ್ಷೇತ್ರದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ನಮ್ಮ ಪ್ರೌಢಶಾಲೆಗೆ ಮತ್ತು ಬಿದ್ರಕಾನ ಊರಿನೊಂದಿಗೆ ಅವರಿಗೆ ಅವಿನಾಭಾವ ಸಂಬಂಧ. ಈ ಭಾಗದ ಪ್ರತಿಯೊಬ್ಬರಿಗೂ ಅವರು ಚಿರಪರಿಚಿತರು. ಶಾಲೆಯ ಪ್ರತಿಯೊಂದು ಬೆಳವಣಿಗೆಯಲ್ಲಿ, ಅಭಿವೃದ್ಧಿಯಲ್ಲಿ ಅವರ ಶ್ರಮ ನಾವೆಂದಿಗೂ ನೆನಪಿನಲ್ಲಿಡುವಂತಹದ್ದು. ಶಾಲೆಯ ತೆಂಗಿನತೋಟದ ಪ್ರತಿ ಮರದಲ್ಲಿಯೂ ಅವರ ನೆನಪಿದೆ.
ದೈಹಿಕ ಶಿಕ್ಷಕರಾಗಿ ಅವರ ಸೇವೆ ಅನುಪಮವಾದದ್ದು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ತರಬೇತಿ ನೀಡಿ, ಅವರು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದು ಎಂ. ಜಿ. ಭಟ್ಟರ ಕ್ರಿಯಾಶೀಲತೆಗೆ ಸಾಕ್ಷಿ.
ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ, ಜಿಲ್ಲಾಮಟ್ಟದ ಅತ್ಯತುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಇಲಾಖೆ ಗೌರವಿಸಿದೆ.
ನಿವೃತ್ತಿಯ ನಂತರವೂ ಸೇವಾದಳ, ಸ್ವರ್ಣವಲ್ಲಿ ಮಠದ ಕೃಷಿ ಚಟುವಟಿಕೆಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾ, ದೈಹಿಕ ಶಿಕ್ಷಕರಿಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು.
ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ಅವರದ್ದು ಕ್ರಿಯಾಶೀಲ ವ್ಯಕ್ತಿತ್ವ. ನಿವೃತ್ತ ನೌಕರರ ಸಂಘ ಹಾಗೂ ಅನೇಕ ಸಾಮಾಜಿಕ ಸಂಘಗಳ ಸಕ್ರಿಯ ಸದಸ್ಯರಾಗಿ ಅವರ ಸೇವೆ ಅನುಪಮ.
ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಹಿರಿ-ಕಿರಿಯ ಶಿಕ್ಷಕರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಚೇತನವಿಂದು ನಮ್ಮನ್ನು ಅಗಲಿದೆ.
ಸದಾ ಲವಲವಿಕೆಯಿಂದ ಇರುತ್ತಿದ್ದ ನಮ್ಮೆಲ್ಲರ ಪ್ರೀತಿಯ ಎಂ.ಜಿ. ಭಟ್ಟ ಸರ್ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳುವುದೇ ಕಷ್ಟವಾಗಿದೆ.
ಸಾವು ಯಾರನ್ನೂ ಬಿಡದು. ಹುಟ್ಟಿದವರಿಗೆ ಸಾವು ಖಚಿತ. ನಮ್ಮೊಂದಿಗೆ ಯಾರನ್ನೂ ಶಾಶ್ವತವಾಗಿ ಇಟ್ಟುಕೊಳ್ಳಲು ಆ ಜವರಾಯ ಬಿಡಲಾರ. ಸಾವು ವ್ಯಕ್ತಿಗೆ ಹೊರತು ವ್ಯಕ್ತಿತ್ವಕ್ಕಲ್ಲ. ಎಂದಿಗೂ ನೆನಪಿನಲ್ಲಿ ಉಳಿಯುವ ವ್ಯಕ್ತಿತ್ವದವರಾಗಿ ಬಾಳಿದ ಶ್ರೀಯುತರ ಜೀವನ ನಮಗೆ ಆದರ್ಶ.
ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ದೇವ ನೀಡಲಿ. ಶ್ರೀಯುತರ ಆತ್ಮಕ್ಕೆ ಸದ್ಗತಿ ದೊರೆಯಲಿ 🙏🙏🙏

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________

ಕ್ರಿಯಾಶೀಲ ವ್ಯಕ್ತಿತ್ವದ ಎಮ್, ಜಿ ಭಟ್ಟ ಸರ್ ಗೆ ನಾವು ಯಾವಾಗಲೂ ಎಂಗ್ ಎಂಡ್ ಎನರ್ಜಿಕ್ ರಿಟೈರ್ಡ ಟೀಚರ್ ಅಂತಾ ತಮಾಷೆ ಸದಾ ನೆನಪಿದೆ.
ಅವರ ಆತ್ಮಕ್ಕೆ ಶಾಂತಿ ನೀಡಲಿ.