

ವಾರಾಂತ್ಯದ ಕರ್ಫ್ಯೂ ನಡುವೆ ಸಿದ್ಧಾಪುರ ಹುಸೂರು ಜಲಪಾತಕ್ಕೆ ಪ್ರವಾಸಕ್ಕೆ ಬಂದ ಜನರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಗೂಸಾ ತಿಂದ ಘಟನೆ ಇಂದು ಅಪರಾಹ್ನ ಹಲಗೇರಿ ಪಂಚಾಯತ್ ಹುಸೂರು ಫಾಲ್ಸ್ ಬಳಿ ನಡೆದಿದೆ.

ಶನಿವಾರ-ರವಿವಾರಗಳ ವಾರಾಂತ್ಯದ ನಿಶೇಧಾಜ್ಞೆ ಇದ್ದರೂ ಹುಸೂರು ಜಲಪಾತ ವೀಕ್ಷಣೆಗೆ ಹೆಚ್ಚಿನ ಜನಸಂದಣಿ ಸೇರಿತ್ತು ಈ ಮಾಹಿತಿ ತಿಳಿದ ಸಿದ್ಧಾಪುರ ಪೊಲೀಸರು ಅಪರಾಹ್ನ 4 ಗಂಟೆಯ ಸಮಯಕ್ಕೆ ಹುಸೂರು ಜಲಪಾತದ ಬಳಿ ಬಂದಾಗ ನೂರಾರು ಜನ ಸೇರಿ ಜಲಪಾತ ವೀಕ್ಷಿಸುತ್ತಾ ಮೋಜು-ಮಜಾ ನಡೆಸಿದ್ದರು. ಈ ಬಗ್ಗೆ ಪೊಲೀಸರು ಎಚ್ಚರಿಸಲು ಹೋದಾಗ ಪೊಲೀಸರೊಂದಿಗೆ ಖ್ಯಾತೆ ತೆಗೆದ ಪ್ರವಾಸಿಗರು ಜಗಳಕ್ಕಿಳಿದರು. ಅಷ್ಟರಲ್ಲಿ ಖಚಿತ ಮಾಹಿತಿ ಮೇರೆಗೆ ಜಲಪಾತದ ಬಳಿ ಬಂದ 112 ವಾಹನದಿಂದಿಳಿದ ಪೊಲೀಸರು ಪ್ರವಾಸಿಗರಿಗೆ ಬೆತ್ತದ ರುಚಿ ತೋರಿಸಿದರು. ಈ ಸಮಯದಲ್ಲಿ ಪೊಲೀಸರು, ಪ್ರವಾಸಿಗರೊಂದಿಗೆ ಜಗಳವಾಗಿ ಪೊಲೀಸರು ಕೆಲವರನ್ನು ಬಂಧಿಸಿದರು.
ಒಬ್ಬರೇ ಪೊಲೀಸ್ ಪೇದೆ ಇದ್ದಾಗ ಸಂಘ ಟಿತರಾಗಿ ಜಗಳಕ್ಕೆ ನಿಂತ ಪ್ರವಾಸಿಗರು ಪೊಲೀಸ್ ತುರ್ತು ವಾಹನ ಬರುತ್ತಲೇ ಕಾಲು ಕಿತ್ತರು.ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕೆಲವರನ್ನು ಬಂಧಿಸಿದ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು. ಸ್ಥಳಿಯ ಪೊಲೀಸರೊಂದಿಗೆ ತಗಾದೆ ತೆಗೆದು ಜಗಳಕ್ಕಿಳಿದ ಪ್ರವಾಸಿಗರ ವಿರುದ್ಧ ಪೊಲೀಸರಿಗೆ ಸಹಕರಿಸಿದ ಸ್ಥಳಿಯರು ಸಂಭವನೀಯ ಅವಗಢ ತಪ್ಪಿಸಿದರು.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






