

ಈಗಿನ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಆರೋಪಿಸಿರುವ ಕೆ.ಪಿ.ಸಿ.ಸಿ. ಶಿಸ್ತುಪಾಲನಾ ಸಮೀತಿ ಸಂಚಾಲಕ ನಿವೇದಿತ್ ಆಳ್ವ ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಹಾಗಾಗಿ ಅಭಿವೃದ್ಧಿ ಕನಸಾಗಿದೆ. ಸರ್ಕಾರ ಮುತುವರ್ಜಿಯಿಂದ ಕೆಲಸ ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಭೇಟಿ ವೇಳೆ ಮಾಧ್ಯಮ ಪ್ರತಿನಿಧಿಗಳೊಂ ದಿಗೆ ಮಾತನಾಡಿದ ಅವರು ನಾವು ಕೊಟ್ಟ ಕೆಲಸ ಮಾಡುತಿದ್ದೇವೆ. ಹುದ್ದೆ-ಅಧಿಕಾರ, ಅವಕಾಶಗಳೆಲ್ಲಾ ಸಿಕ್ಕರೆ ಆ ಜವಾಬ್ಧಾರಿ ನಿರ್ವಹಿಸುತ್ತೇವೆ.ಸಿಕ್ಕ ಅವಕಾಶದಲ್ಲಿ ಕೆಲಸಮಾಡುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟ ತೃಪ್ತಿ ತಮಗಿದೆ ಎಂದರು.
ಶಿರಸಿ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಕೇಳುತಿದ್ದೀರಾ?
ನಿವೇದಿತ್- ಕಾಂಗ್ರೆಸ್ ಪಕ್ಷ ದೊಡ್ಡ ಇತಿಹಾಸ ಇರುವ ಪಕ್ಷ ಈ ಪಕ್ಷದಲ್ಲಿ ಒಂದು ಹುದ್ದೆ, ಅವಕಾಶಕ್ಕಾಗಿ ಹಲವಾರು ಆಕಾಂಕ್ಷಿಗಳಿರುತ್ತಾರೆ. ಪಕ್ಷ ಎಲ್ಲವನ್ನೂ ಪರಿಗಣಿಸಿ ಅವಕಾಶ ನೀಡುತ್ತದೆ. ನಾವು ಯಾವ ಹುದ್ದೆ, ಅವಕಾಶ, ಅನುಕೂಲ ಅಪೇಕ್ಷಿಸಿ ಕೆಲಸಮಾಡುವವರಲ್ಲ ನಮ್ಮ ಕೆಲಸ, ಅನುಭವ ಗಳನ್ನು ಪರಿಗಣಿಸಿ ನಮಗೂ ಪಕ್ಷ ಅವಕಾಶ ನೀಡಿದೆ. ಪಕ್ಷ ಕೊಟ್ಟ ಹುದ್ದೆ, ಅವಕಾಶ, ಜವಾಬ್ಧಾರಿ ನಿರ್ವಹಿಸಲು ನಾವು ಹಿಂದೇಟು ಹಾಕುವುದಿಲ್ಲ.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
