ಮಳಲವಳ್ಳಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಸ್ಥಳಿಯರ ಶರತ್ತುಬದ್ಧ ಅನುಮತಿ

ಸಿದ್ಧಾಪುರ ತಾಲೂಕಿನ ಮನ್ಮನೆ ಮಳಲವಳ್ಳಿಯಲ್ಲಿ ಸ್ಥಾಪನೆಯಾಗಲಿರುವ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ, ಉದ್ಯಮ ಸ್ಥಾಪನೆ ಸೇರಿದಂತೆ ಎಲ್ಲಾ ಅನುಕೂಲಗಳಿಗೆ ಪ್ರತಿಶತ 50 ಕ್ಕಿಂತ ಹೆಚ್ಚು ಸ್ಥಳಿಯರಿಗೆ ಆದ್ಯತೆ ನೀಡಲು ಮಳಲವಳ್ಳಿ ಗ್ರಾಮ ಸಮೀತಿ ಆಗ್ರಹಿಸಿದೆ.

ಸೋಮುವಾರ ಇಲ್ಲಿಯ ಈಶ್ವರ ದೇವಸ್ಥಾನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಗ್ರಾಮ ಸಮೀತಿ ಅಧ್ಯಕ್ಷ ಗೋಪಾಲ ನಾಯ್ಕ, ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ, ಧರ್ಮಪ್ಪ ನಾಯ್ಕ, ಸ್ವಾಮಿ ನಾಯ್ಕ ಮತ್ತು ಗೋಪಾಲ ನಾಯ್ಕ ಸೇರಿದ ಪ್ರಮುಖರು ಮಳಲವಳ್ಳಿಯಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಗ್ರಾಮಸ್ಥರ ವಿರೋಧವಿತ್ತು ಆದರೆ ಸರ್ಕಾರದ ಸದುದ್ದೇಶದ ಯೋಜನೆಗೆ ವಿರೋಧ ಮಾಡುವುದಕ್ಕಿಂತ ನಮ್ಮ ಬೇಡಿಕೆ ಈಡೇರಿಸಲು ಬೇಡಿಕೆ ಇಡುವುದೇ ಸರಿಯಾದ ಕ್ರಮ. ಮಳಲವಳ್ಲಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣವಾದರೆ ಇಲ್ಲಿಯ ಕೈಗಾರಿಕಾ ಘಟಕ ಸ್ಥಾಪನೆ, ಉದ್ಯೋಗ, ಕೈಗಾರಿಕಾ ಘಟಕಗಳ ಪ್ರದೇಶ ನಿಗದಿ ಯಾವುದೇ ಅವ ಕಾಶ, ಅನುಕೂಲಕ್ಕೆ ಪ್ರತಿಶತ 50 ಕ್ಕಿಂತ ಹೆಚ್ಚು ಸ್ಥಳಿಯರಿಗೆ ಅವಕಾಶವಿರಬೇಕು. ಸ್ಥಳಿಯ ಪರಿಸರ, ಈ ಪ್ರದೇಶದ ಹಿತಾಸಕ್ತಿ, ಜನರ ಅನುಕೂಲಕ್ಕೆ ವಿರುದ್ಧ ವಾಗಿ ಏನೂ ನಡೆಯಬಾರದು. ಗ್ರಾಮಸ್ಥರು ಸಂರಕ್ಷಿಸಿರುವ ಯೋಜಿತ ಕೈಗಾರಿಕ ಪ್ರದೇಶದ 25% ಭೂಮಿಯನ್ನು ಸ್ಥಳಿಯರಿಗೆ ಸಾರ್ವಜನಿಕ ಅಗತ್ಯಗಳಿಗೆ ಬಿಟ್ಟುಕೊಡಬೇಕು, ಉದ್ಯಾನವನ, ಕ್ರೀಂಡಾಂಗಣ ಸೇರಿದ ಗ್ರಾಮದ ಅವಶ್ಯಕತೆಗಳನ್ನು ಪೂರೈಸಿ ನಂತರ ಕೈಗಾರಿಕಾ ವಸಾಹತು ಸ್ಥಾಪನೆ ಉದ್ದೇಶದ ನಿಗದಿತ ಕೆಲಸ ಮಾಡಬೇಕು ಎಂದು ಗ್ರಾಮದ ನಿರ್ಧಾರವನ್ನು ವಿವರಿಸಿದರು.

ಈ ಸಂರ್ಭದಲ್ಲಿ ಸ್ಥಳಿಯರಿಗೆ ಕೈಗಾರಿಕಾ ಪ್ರದೇಶದ ಉದ್ದೇಶ, ಅನುಕೂಲಗಳ ಬಗ್ಗೆ ಸಮಾಜಮುಖಿ ಸಮೂಹದ ಮುಖ್ಯಸ್ಥ ಕೋಲಶಿರ್ಸಿ ಕನ್ನೇಶ್ ಮತ್ತು ಪತ್ರಕರ್ತ ಸುರೇಶ ಕಡಕೇರಿ ಮಾಹಿತಿ ನೀಡಿದರು. ತಾಲೂಕಿನ ಕೈಗಾರಿಕಾ ಪ್ರದೇಶದ ನಿರ್ಮಾಣ. ಸ್ಥಾಪನೆ ಬಗ್ಗೆ ವಿರೋಧ ಬೇಡ ಆದರೆ ಗ್ರಾಮ ಮತ್ತು ಗ್ರಾಮದ ಹಿತಾಸಕ್ತಿಗೆ ಪೂರಕವಾಗಿ ಆಗಬೇಕಾದ ಕೆಲಸ, ಅಭಿವೃದ್ಧಿಯ ವಿಚಾರದಲ್ಲಿ ನಿರ್ಬಂ ಧ ಹೇರುವುದು ನಿಮ್ಮ ಹಕ್ಕು ಜೊತೆಗೆ ಸ್ಥಳಿಯರೂ ಕೂಡಾ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಕನ್ನೇಶ್ ವಿನಂತಿಸಿದರು.

ಕೈಗಾರಿಕಾ ಪ್ರದೇಶ ನಿರ್ಮಾಣದಿಂದ ಮಳಲವಳ್ಳಿ, ಮನ್ಮನೆ ಗ್ರಾಮ ಪಂಚಾಯತ್ ಗಳಿಗೆ ಅನುಕೂಲವಿದೆ ಆದರೆ ಸ್ಥಳಿಯರು ಸಂಘಟಿತರಾಗಿ ತಮ್ಮ ಬೇಡಿಕೆ ಕೇಳಿ ಪಡೆಯಬೇಕು ಎಂದು ಸುರೇಶ್ ಕಡಕೇರಿ ಮಾಹಿತಿ ನೀಡಿದರು. ಗ್ರಾಮ ಸಮೀತಿ ಅಧ್ಯಕ್ಷ ಗೋಪಾಲ ನಾಯ್ಕರ ಅಧ್ಯಕ್ಷತೆಯಲ್ಲಿ ಸೇರಿದ ಗ್ರಾಮದ ಹಿರಿಯರು, ಪ್ರಮುಖರು ಕೈಗಾರಿಕಾ ಪ್ರದೇಶ ಸ್ಥಾಪನೆಗೆ ವಿರೋಧ ಮಾಡುತಿದ್ದ ನಾವು ಗಣ್ಯರ ಸಮಾಜಾಯಿಸಿಯಿಂದ ಹಿಂದೆ ಸರಿದಿದ್ದೇವೆ. ಸರ್ಕಾರ, ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮ ನಮ್ಮ ಹಿತಾಸಕ್ತಿ ಕಾಯದಿದ್ದರೆ ನಮ್ಮ ಸಹಕಾರ ಸಿಗುವುದಿಲ್ಲ ಎಂದು ಎಚ್ಚರಿಸಿದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *