

ಸಿದ್ಧಾಪುರದ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಅವಶ್ಯವಿರುವ ಬಸ್ ಡಿಪೋ ನಿರ್ಮಾಣ ಪ್ರಕ್ರೀಯೆ ಅಂತಿಮಹಂತದಲ್ಲಿದ್ದು ಸ್ಥಳ ನಿರ್ಧಾರವಾಗುತ್ತಲೇ ಬಸ್ ಡಿಪೋಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತೇವೆ ಎಂದು ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ್ ಹೇಳಿದರು. ನಗರದ ನೂತನ ಬಸ್ ನಿಲ್ಧಾಣದ ಸಾಂಕೇತಿಕ ಉದ್ಘಾಟನೆ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಹಾನಿಯಲ್ಲಿವೆ. ಗ್ರಾಮೀಣ ಸೇವೆಯ ಹಾನಿಯಿಂದಾಗಿ ಸಾರಿಗೆ ಸಂಸ್ಥೆಗಳಿಗೆ ಚೇತರಿಸಿಕೊಳ್ಳುವುದು ಕಷ್ಟವಾಗುತ್ತಿದೆ. ಈ ತೊಂದರೆಗಳ ಮಧ್ಯೆ ಸಂಸ್ಥೆ ಸುಧಾರಣಾ ಕ್ರಮಗಳನ್ನು ಜರುಗಿಸುತಿದ್ದು ಶಿರಸಿ ಬಸ್ ನಿಲ್ಧಾಣ, ಸಿದ್ಧಾಪುರ ಡಿಪೋ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದರು.

ಬಸ್ ಚಾಲನೆಗೆ ಹಸಿರು ನಿಶಾನೆ ತೋರಿಸುವ ಮೂಲಕ ನೂತನ ಬಸ್ ನಿಲ್ಧಾಣ ಉದ್ಘಾಟಿಸಿದ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿವೃದ್ಧಿಹೊಂದುತ್ತಿರುವ ಸಿದ್ಧಾಪುರ ತಾಲೂಕಿನ ನಂಜುಡಪ್ಪ ವರದಿ ಆಧಾರದ ಹಿಂದುಳಿದ ತಾಲೂಕಿನ ಅನುದಾನದ ಸಿದ್ಧಾಪುರ ನೂತನ ಬಸ್ ನಿಲ್ಧಾಣ ಸುವ್ಯವಸ್ಥಿತ, ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಸ್ವಚ್ಚತೆ ಸವಾಲಾಗಿದ್ದು ಸುಂದರ, ಸ್ವಚ್ಛ ಬಸ್ ನಿಲ್ಧಾಣವನ್ನಾಗಿ ಕಾಪಾಡಿಕೊಳ್ಳುವ ಹೊಣೆಗಾರಿಕೆ ಸ್ಥಳಿಯರದ್ದಾಗಿದೆ. ಸಿದ್ಧಾಪುರಕ್ಕೆ ಅವಶ್ಯವಿರುವ ಬಸ್ ಡಿಪೊ ನಿರ್ಮಾಣಕ್ಕೆ ತಾಲೂಕು ಕೇಂದ್ರದಿಂದ 6 ಕಿ.ಮೀ. ಅಂತರದಲ್ಲಿ ಜಾಗ ನಿಗದಿಯಾಗಲಿದೆ. ಈ ಸ್ಥಳ ನಿಗದಿ ಮುಗಿಸಿ ಇಷ್ಟರಲ್ಲೇ ಬಸ್ ಡಿಪೋ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ ಎಂದರು.










_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
