ಮಳೆಗೆ ಉತ್ತರ ಕನ್ನಡ ತತ್ತರ… ಮರಬಿದ್ದು ಮನೆಗೆ ಹಾನಿ, ರಸ್ತೆ ಬಂದ್, ಸುರಕ್ಷಿತ ಸ್ಥಳಗಳಿಗೆ ಹೋಗಲು ಸೂಚನೆ

ಲಕ್ಷಾಂತರ ಹಾನಿ-

ಸಿದ್ಧಾಪುರ ತಾಲೂಕಿನಲ್ಲಿ ಇಂದು ಮರಬಿದ್ದು ನಾಲ್ಕೈದು ಮನೆಗಳು ಹಾನಿಗೊಳಗಾಗಿವೆ. ಸೊರಬ-ಕುಮಟಾ ರಸ್ತೆ, ಸಾಗರ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ, ಯಲ್ಲಾಪುರಶಿರಸಿ-ಸಾಗರ ರಸ್ತೆಗಳಲ್ಲಿ ಕೂಡಾ ಬಿದಿರಿನ ಹಿಂಡು,ಮರಗಳು ಬಿದ್ದು ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಹೆಸ್ಕಾಂ ಮತ್ತು ಸ್ಥಳಿಯ ಗ್ರಾಮ ಪಂಚಾಯತ್ ಆಡಳಿತಗಳು ರಸ್ತೆ ತೆರವು ಮಾಡಿ ವಿದ್ಯುತ್ ವ್ಯತ್ಯಯ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರಯತ್ನಿ ಸುತಿದ್ದಾರೆ.

  • ಹಕ್ಕಲಮನೆ (ಕವಲಕೊಪ್ಪ ಗ್ರಾಮ) ದಿವಾಕರ ವೆಂಕಟ್ರಮಣ ಹೆಗಡೆಯವರ ಅಡಿಕೆ ತೋಟದ ಮೇಲೆ ಬಿದ್ದ ತಾರಿ ಮರದಿಂದಾಗಿ 12 ಅಡಿಕೆ ಮರಗಳಿಗೆ ಹಾನಿ (15 ಸಾವಿರ)
  • ಸಿದ್ಧಾಪುರ, ಹೆಗ್ಗರಣಿ ವಾಜಗಾರ್ ನ ಹನುಮ ತಿಮ್ಮ ಮುಕ್ರಿಯವರ ವಾಸದ ಮನೆಮೇಲೆ ಉಪ್ಪಾಗೆ ಮರಬಿದ್ದು ಮನೆ ನೆಲಸಮ ಅಂದಾಜು ಹಾನಿ 1ಲಕ್ಷ ಮೂವತ್ತು ಸಾವಿರ.
  • ಸಿದ್ಧಾಪುರ ಹಸರಗೋಡು ಗ್ರಾಮದ ಅಡ್ಡಸರ ನಾಗಮ್ಮ ಮುಕ್ರಿ ಮನೆ ಮೇಲೆ ಮರಬಿದ್ದು 25 ಸಾವಿರ ಹಾನಿ.
  • ಸಿದ್ಧಾಪುರ ಅಪ್ಪಿನಬೈಲ್ ಬಳಿ ಮರ, ಬಿಳಗಿ ಮಾರಿಕಾಂಬಾ ದೇವಸ್ಥಾನದ ಎದುರು ಬಿದಿರು ಹಿಂಡು ಬಿದ್ದು ಹಾನಿ

ಉತ್ತರ ಕನ್ನಡ ಜಿಲ್ಲೆ ಈಗ ಮಳೆಯ ರುದ್ರನರ್ತನಕ್ಕೆ ಸಿಕ್ಕಿದೆ. ಈ ವರ್ಷದ ಈವರೆಗಿನ ಮಳೆಪ್ರಮಾಣ 2 ಸಾವಿರ ಮಿ.ಮೀ ಸಮೀಪಿಸಿದೆ. ಇದು ಜುಲೈ ತಿಂಗಳ ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಈ ವಾರದ ವರ್ಷಧಾರೆಗೆ ಸಿಲುಕಿದ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಕಾಳಿ, ಶರಾವತಿ,ಗಂಗಾವಳಿ, ಅಘನಾಶಿನಿ ನದಿಗಳು ಹಾಗೂ ಉಪನದಿಗಳೆಲ್ಲಾ ಅಪಾಯದ ಹಂತ ಮೀರಿ ಹರಿಯುತ್ತಿವೆ.


ಜಿಲ್ಲೆಯ ಕರಾವಳಿಯಲ್ಲಿ ಪ್ರವಾಹದ ಅನಾಹುತ ಹೆಚ್ಚಿದೆ.ಹಾಗೆಂದು ಮಲೆನಾಡಿನಲ್ಲಿ ಅಪಾಯ ಇಲ್ಲ ಎನ್ನುವಂತಿಲ್ಲ. ಘಟ್ಟದ ಮೇಲಿನ ಯಲ್ಲಾಪುರ,ಸಿದ್ಧಾಪುರ, ಶಿರಸಿಗಳಲ್ಲಿ ಮಳೆಯ ನೀರು ವಾಸದ ಮನೆಗಳಿಗೂ ನುಗ್ಗಿದೆ. , ದಿನವೀಡಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕರಾವಳಿಯಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲು ಸಿದ್ಧತೆ ನಡೆಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ಶಿರಸಿ-ಸಿದ್ಧಾಪುರದ ಪ್ರವಾಹ ಪೀಡಿತ ಪ್ರದೇಶಗಳಾದ ಸಿದ್ಧಾಪುರದ ಹೆಮ್ಮನಬೈಲು, ಕಲ್ಯಾಣಪುರಗಳಲ್ಲಿ ಹಾಗೂ ಶಿರಸಿ ಮೊಗವಳ್ಳಿಯಲ್ಲಿ ನೆಗಸಿನ ಮುನ್ನೆಚ್ಚರಿಕೆ ನೀಡಿದೆ.


ಇದೇ ವಾರ ಉತ್ತರ ಕನ್ನಡ ಜಿಲ್ಲೆಯ ರಭಸದ ಮಳೆಗೆ ನೆಲಕ್ಕುರುಳಿದ ಮರಗಳು ಬೆಳೆ, ರಸ್ತೆ, ಮನೆಗಳಿಗೆ ಹಾನಿಮಾಡಿವೆ. ಸಿದ್ಧಾಪುರ ತಾಲೂಕಿನಲ್ಲಿ ಇಂದು ಮರಬಿದ್ದು ನಾಲ್ಕೈದು ಮನೆಗಳು ಹಾನಿಗೊಳಗಾಗಿವೆ. ಸೊರಬ-ಕುಮಟಾ ರಸ್ತೆ, ಸಾಗರ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ, ಯಲ್ಲಾಪುರಶಿರಸಿ-ಸಾಗರ ರಸ್ತೆಗಳಲ್ಲಿ ಕೂಡಾ ಬಿದಿರಿನ ಹಿಂಡು,ಮರಗಳು ಬಿದ್ದು ವಾಹನ ಸಂಚಾರಕ್ಕೂ ಅಡಚಣೆಯಾಗಿದೆ. ಹೆಸ್ಕಾಂ ಮತ್ತು ಸ್ಥಳಿಯ ಗ್ರಾಮ ಪಂಚಾಯತ್ ಆಡಳಿತಗಳು ರಸ್ತೆ ತೆರವು ಮಾಡಿ ವಿದ್ಯುತ್ ವ್ಯತ್ಯಯ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರಯತ್ನಿ ಸುತಿದ್ದಾರೆ. ಪ್ರವಾಹದಿಂದ ತೊಂದರೆಗೆ ಒಳಗಾಗಬಹುದಾದ ನದಿಪಾತ್ರದ ಜನರಿಗೆ ಸುರಕ್ಷಿತವಾಗಿರಲು,ಪೂರ್ವಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.

ಈ ವಾರದ  ಬುಧವಾರ-ಗುರುವಾರದ ಮಳೆ ಪ್ರಮಾಣ   ಇನ್ನೆರಡು ದಿನ ಮುಂದುವರಿದರೂ ನೂರಾರು ಕುಟುಂಬಗಳು ನಿರಾಶ್ರಿತರಾಗುವ ಅಪಾಯ ಎದುರಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರು ಕೂಡಾ ಈ ತಿಂಗಳಲ್ಲಿ ಜಿಲ್ಲೆಗೆ ಬಂದರೆ ಮಳೆ-ಪ್ರವಾಹದ ತೊಂದರೆಗೆ ಒಳಗಾಗುವುದು ನಿಶ್ಚಿತ ಎನ್ನಲಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *