ಸಣ್-ಪುಟ್ ಸುದ್ದಿ-ಚಿನ್ನದ ಮೂರ್ತಿ ಕೆತ್ತಿದ ಕಾಶಿನಾಥ್

ಇತಿಹಾಸದ ಗರ್ಭದಲ್ಲಿ ಸರಪಟ್ಟ ಪರಂಪರೆಗಳೆಷ್ಟಿವೆಯೋ?

ಹೆಸರು ಬದಲಾಯಿಸಲೇ ಬೇಕೆಂದಿದ್ದರೆ 1928ರಲ್ಲಿ ಮೊದಲ ಒಲಂಪಿಕ್ಸ್ ಚಿನ್ನ ಗೆದ್ದ ಹಾಕಿ ತಂಡದ ನಾಯಕ ‘ಜೈಪಾಲ್ ಸಿಂಗ್ ಮುಂಡಾ ಖೇಲ್ ರತ್ನ ಪ್ರಶಸ್ತಿ’ ಎಂದು ಪುನರ್ ನಾಮಕರಣ ಮಾಡಬಹುದಿತ್ತು. ‘ಹಾಕಿ ಜಾದೂಗಾರ’ ಧ್ಯಾನ್ ಚಂದ್ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ, ಅದು ಅವರ ಸಾಧನೆಗೆ ಸಂದಿರುವ ಗೌರವವೂ ಹೌದು. ಆದರೆ ಗುಡ್ಡಗಾಡು ಜನಾಂಗದಲ್ಲಿ ಹುಟ್ಟಿದ ಜೈಪಾಲ್ ಸಿಂಗ್ ಮುಂಡಾ ಬಗ್ಗೆ ತಿಳಿದಿರುವವರೇ ಕಡಿಮೆ. ಜೈಪಾಲ್ ಸಿಂಗ್ ಮುಂಡಾ ಹೆಸರಿನಿಂದ ಅವರಿಗಷ್ಟೇ ಅಲ್ಲ, ಹಾಕಿ ತಂಡಕ್ಕೆ ಪ್ರತಿಭಾವಂತ ಆಟಗಾರರನ್ನು ನೀಡಿದ್ದ ಗುಡ್ಡಗಾಡು ಪ್ರದೇಶಕ್ಕೂ ಗೌರವ ಸಂದಾಯವಾಗುತ್ತಿತ್ತು.

ಜೈಪಾಲ್ ಸಿಂಗ್ ಮುಂಡಾ ಎಂಬ ಈ ಗುಡ್ಡಗಾಡು ಜನಾಂಗದ ಬಾಲಕ ಬ್ರಿಟಿಷ್ ಮಿಷನರ್ ಗಳ ಕಣ್ಣಿಗೆ ಬಿದ್ದು ಅವರ ಪಾಲನೆ-ಪೋಷಣೆಯಲ್ಲಿಯೇ ಬ್ರಿಟನ್ ನಲ್ಲಿ ಉನ್ನತ ವ್ಯಾಸಂಗ ಮಾಡಿ ಅಲ್ಲಿಯೇ ಹಾಕಿ ದೀಕ್ಷೆ ಪಡೆದು 1928ರ ಒಲಂಪಿಕ್ಸ್ ನಲ್ಲಿ ಹಾಕಿ ತಂಡದ ನಾಯಕತ್ವ ವಹಿಸಿದವರು. ಅಲ್ಲಿನ ಬ್ರಿಟಿಷ್ ಕ್ರೀಡಾಧಿಕಾರಿಗಳೊಂದಿಗಿನ ಸಂಘರ್ಷದಿಂದ ಭಾರತಕ್ಕೆ ಹಿಂದಿರುಗಿ ಗುಡ್ಡಗಾಡು ಜನಾಂಗದ ಪರವಾಗಿ ರಾಜಕೀಯ ಹೋರಾಟ ಪ್ರಾರಂಭಿಸಿದವರು. ಸಂವಿಧಾನ ರಚನಾ ಸಭೆಯ ಸದಸ್ಯರೂ ಆಗಿದ್ದ ಜೈಪಾಲ್ ಸಿಂಗ್, ಗುಡ್ಡಗಾಡು ಜನರಿಗಾಗಿ ಪ್ರತ್ಯೇಕ ರಾಜ್ಯದ ಮೊದಲ ಕೂಗು ಹಾಕಿದವರು. ಇದಕ್ಕಾಗಿಯೇ ಜಾರ್ಖಂಡ್ ಪಕ್ಷ ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿದವರು. ಇಂದಿನ ಜಾರ್ಖಂಡ್ ರಾಜ್ಯ ಅವರು ಪ್ರಾರಂಭಿಸಿದ್ದ ಹೋರಾಟದ ಫಲ.

ಜೈಪಾಲ್ ಸಿಂಗ್ ಮುಂಡಾ ಹೆಸರಿನಿಂದ ರಾಜಕೀಯವಾಗಿಯೂ ಬಿಜೆಪಿಗೆ ಲಾಭವಾಗುತ್ತಿತ್ತು , ಹೀಗಿದ್ದರೂ ಪ್ರಧಾನಿನರೇಂದ್ರ ಮೋದಿಯವರಿಗೆ ಯಾಕೆ ನೆನಪಾಗಲಿಲ್ಲ ಎಂದು ಕೆದಕುತ್ತಾ ಹೋದಾಗ ಸತ್ಯ ಗೊತ್ತಾಯಿತು. ಕೊನೆಗಾಲದಲ್ಲಿ ಜೈಪಾಲ್ ಸಿಂಗ್ ಮುಂಡಾ ತಮ್ಮ ಜಾರ್ಖಂಡ್ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಿದ್ದರು.ಜೈಪಾಲ್ ಸಿಂಗ್ ಮುಂಡಾ ಅವರಿಗೆ ಎಣ್ಣೆಪ್ರಿಯರು ಮತ್ತು ಉಳಿದವರು ಋಣಿಗಳಾಗಿರಬೇಕು. ಗಾಂಧಿ ಅಭಿಮಾನಿಗಳು ತುಂಬಿದ್ದ ಸಂವಿಧಾನ ರಚನಾ ಸಭೆಯಲ್ಲಿ ಮದ್ಯಪಾನ ನಿಷೇಧವನ್ನು ಹಟ ಹಿಡಿದು ವಿರೋಧಿಸಿದವರು ಜೈಪಾಲ್ ಸಿಂಗ್ ಅವರಂತೆ. ಗುಡ್ಡಗಾಡು ಜನರಿಗೆ ಮದ್ಯ ಆಹಾರ ಇದ್ದಂತೆ ಎಂದು ಅವರು ವಾದಿಸಿ ವಿರೋಧಿಗಳ ಬಾಯಿ ಮುಚ್ಚಿಸಿದ್ದರು. ಸಂವಿಧಾನದಲ್ಲಿ ಮದ್ಯಪಾನವನ್ನು ನಿಷೇಧಿಸಿದ್ದರೆ ಏನಾಗುತ್ತಿತ್ತು ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ ಸುಮ್ಮನೆ ನಮ್ಮ ರಾಜ್ಯದ ಬಜೆಟ್ ಒಳಗೆ ಇಣುಕಿ ಬಿಡಿ. ವಾರ್ಷಿಕ 20,000 ಕೋಟಿ ಆದಾಯ ಬರುವುದೇ ಎಣ್ಣೆಪ್ರಿಯರಿಂದ. ಇದೊಂದು ಆದಾಯ ಇಲ್ಲದೆ ಇದ್ದರೆ ಈಗಾಗಲೇ ನಮ್ಮ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿತ್ತು. -ದಿನೇಶ್ ಅಮ್ಮಿನಮಟ್ಟು

ಚಿನ್ನದ ಮೂರ್ತಿ ಕೆತ್ತಿದ ಕಾಶಿನಾಥ್- ಎರಡು ತಿಂಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್ ಗೆ ಆಯ್ಕೆಯಾದ ಜಾವಲಿನ್ ಎಸೆತಗಾರರ ಬಗ್ಗೆ ಮಾಹಿತಿ ಕೇಳಲು ಪುಣಿಯಲ್ಲಿ ಆರ್ಮಿಯಲ್ಲಿರುವ ಜಾವಲಿನ್ ಗುರು ಕಾಶಿನಾಥ್ ನಾಯ್ಕ್ ಅವರೊಂದಿಗೆ ಮಾತನಾಡುತ್ತಿದ್ದೆ. “ಸರ್ ಈ ಬಾರಿ ಜಾವಲಿನ್ ನಲ್ಲಿ ಒಂದು ಪದಕ ಇದೆ ….ಅದು ಚಿನ್ನವಾದರೂ ಅಚ್ಚರಿಯಲ್ಲ….ಅದು ನೀರಜ್ ಅವರಿಂದ ಮಾತ್ರ ಸಾಧ್ಯ” ಎಂದಿದ್ದರು.

ಒಬ್ಬ ಗುರುವಿಗೆ ಮಾತ್ರ ತನ್ನ ಶಿಷ್ಯರ ಬಗ್ಗೆ ನಿಖರವಾಗಿ ಹೇಳಲು ಸಾಧ್ಯ. ನೀರಜ್ ಚೋಪ್ರಾ ಜೂನಿಯರ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ವಿಶ್ವದಾಖಲೆ ಬರೆಯುವಲ್ಲಿ ಕಾಶಿನಾಥ್ ಅವರ ಪಾತ್ರ ಪ್ರಮುಖವಾಗಿತ್ತು. ಸುಮಾರು ಎರಡೂವರೆ ವರ್ಷಗಳ ಕಾಲ ತರಬೇತಿ ನೀಡಿ ನೀರಜ್ ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಜ್ಜುಗೊಳಿಸುವಲ್ಲಿ ಕಾಶಿನಾಥ್ ಅವರ ಪಾತ್ರ ಪ್ರಮುಖವಾಗಿತ್ತು. ದನ ಮೇಯಿಸುವಾಗ ಉದ್ದನೆಯ ಕೋಲನ್ನು ಗದ್ದೆಯಲ್ಲಿ ಎಸೆಯುತ್ತ ನಂತರ ತಾಲೂಕು ಮಟ್ಟದ ಜಾವೆಲಿನ್ ಎಸೆತಗಳಲ್ಲಿ ಪಾಲ್ಗೊಂಡು…ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು….ಸೇನೆ ಸೇರಿ ಅಲ್ಲಿಯೂ ಜಾಗತಿಕ ಮಟ್ಟದಲ್ಲಿ ಪದಕ ಗೆದ್ದ ಕರ್ನಾಟಕದ ಈ ಜಾವೆಲಿನ್ ತರಬೇತುದಾರ ಕಾಶಿನಾಥ್ ಅವರನ್ನು ಇಂಥ ಐತಿಹಾಸಿಕ ದಿನದಂದು ನಾವು ಅಭಿನಂದಿಸಲೇಬೇಕು. ನೀರಜ್ ಗೆದ್ದಿರುವ ಚಿನ್ನದ ಪದಕ ಅದೆಷ್ಟೋ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿ. ನೀರಜ್ ಚೋಪ್ರಾ ಹಾಗೂ ಕಾಶಿನಾಥ್ ಅವರಿಗೆ ಅಭಿನಂದನೆಗಳು. Neeraj Chopra #kashinathnaik ನಿಮ್ಮ ಸಾಧನೆಯ ಕಾಲದಲ್ಲಿ ನಾವು ಬದುಕಿದ್ದೇವೆ….ನಿಮ್ಮ ಬಗ್ಗೆ ಎರಡಕ್ಷರ ಬರೆಯುವ ಅವಕಾಶ ಸಿಕ್ಕಿತ್ತು ಎಂಬುದೇ ಧನ್ಯತಾ ಭಾವ. -ಬರಹ Somashekar Padukare

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *