ನೀರಿಂಗಿಸಿ ಮಾದರಿಯಾದ ತೆಂಗಿನಮನೆ ಡಿ.ಕೆ. ನಾಯ್ಕ

ಪ್ರಗತಿಪರ ರೈತ, ಕಾಳುಮೆಣಸು,ಮಿಶ್ರಬೇಸಾಯದ ಮೂಲಕ ಮಾದರಿ ಕೃಷಿಕನಾದ ಡಿ.ಕೆ. ನಾಯ್ಕ ತೆಂಗಿನಮನೆಯವರಿಗೆ ಈ ವರೆಗೆ ಯಾರೂ ಸನ್ಮಾನಿಸಿ, ಗೌರವಿಸಿ, ಅಭಿನಂದಿಸದಿರುವುದು ಸೋಜಿಗದ ಸಂಗತಿ. ಶ್ರಮಿಕರಲ್ಲದ ಅನೇಕರು ದಾಖಲೆ ಒದಗಿಸಿ ಪ್ರಗತಿಪರ ರೈತರು, ಕೃಷಿ ಪ್ರಶಸ್ತಿ ಪುರಸ್ಕೃತರು. ಕೃಷಿ-ತೋಟಗಾರಿಕೆ ಪಂಡಿತರಾಗಿರುವಾಗ ಸರ್ಕಾರ, ಜನಪ್ರತಿನಿಧಿಗಳ ಕಣ್ಣಿಗೆ ಬೀಳದ ಡಿ.ಕೆ. ನಾಯ್ಕ ಅರ್ಹತೆ, ಯೋಗ್ಯತೆ ಇದ್ದೂ ಪ್ರಶಸ್ತಿ,ಅಭಿನಂದನೆಯ ಗೌರವಾದರಗಳಿಂದ ವಂಚಿತರಾಗಿರುವುದು ಉತ್ತರ ಕನ್ನಡ ಜಿಲ್ಲೆಯ ಉಳ್ಳವರ ಅಟ್ಟಹಾಸ, ರಾಜಕಾರಣಕ್ಕೊಂದು ತಾಜಾ ನಿದರ್ಶನ.

ಮಳೆ,ಪ್ರವಾಹದ ನೋವು ಉಂಡ ಮಲೆನಾಡಿನಲ್ಲಿ ನೀರೆಂದರೆ ಭಯ, ಆತಂಕದ ಸ್ಥಿತಿ ಈಗಿದೆ. ಆದರೆ ಬೇಸಿಗೆಯಲ್ಲಿ ಮಲೆನಾಡಿನಲ್ಲಿ ಕೂಡಾ ನೀರಿಗಾಗಿ ಹಾಹಾಕಾರ ಸಾಮಾನ್ಯ. ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುತಿದ್ದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ರೈತರೊಬ್ಬರು ಬೇಸಿಗೆಯ ನೀರಿನ ಕೊರತೆ ನೀಗಿಸಿಕೊಂಡ ಪ್ರಯೋಗಶೀಲತೆ ಈ ಸ್ಟೋರಿಯ ಕತೆ.


ಪಕ್ಕಾ ಮಲೆನಾಡಿನ ಸಿದ್ಧಾಪುರದ ತೆಂಗಿನಮನೆಯ ರೈತ  ಡಿ.ಕೆ.ನಾಯ್ಕ ಕೆಲವು ವರ್ಷ ತಮ್ಮ ಅಡಿಕೆ ತೋಟಕ್ಕೆ ಬೇಸಿಗೆ ಕಾಲದಲ್ಲಿ ನೀರಿನ ತೊಂದರೆಯಿಂದ ಬೆಳೆ ನಾಶದ ಹಾನಿ ಅನುಭವಿಸಿದರು. ನಂತರ ಅವರು ತಮ್ಮ ಬೆಟ್ಟದಲ್ಲಿ ಒಂದಾದಮೇಲೆ ಒಂದರಂತೆ ಕಳೆದ ದಶಕದಲ್ಲಿ ನಾಲ್ಕು ಚಿಕ್ಕ ಕೆರೆಗಳನ್ನು ನಿರ್ಮಿಸಿದರು.
ತೋಟದಲ್ಲಿದ್ದ ಮೊದಲ ಕೆರೆ ಮಳೆಗಾಲದಲ್ಲಿ ಉಕ್ಕಿ ಹರಿದು ಬೆಳೆಗಳಿಗೆ ಹಾನಿ ಮಾಡಿದರೆ ಬೇಸಿಗೆಯಲ್ಲಿ ನೀರಿಲ್ಲದೆ ಬರಿದಾಗುತಿತ್ತು. ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಹೋದ ನಾಯ್ಕರಿಗೆ ಬೆಟ್ಟದಿಂದ ಇಳಿದು ಬರುವ ಮಳೆ ನೀರನ್ನು ಹಂತ ಹಂತವಾಗಿ ನಿಲ್ಲಿಸಿದರೆ ಆ ಮಳೆನೀರು ಭೂಮಿಗೆ ಇಂಗಿ ಬೇಸಿಗೆಯಲ್ಲಿ ಬೆಳೆಗಳಿಗೆ ಜೀವಜಲವಾಗುವ ಯೋಚನೆಯಂತೆ. ತಮ್ಮ ಬೆಟ್ಟದಲ್ಲಿ ಮೂರು ಕೆರೆಗಳನ್ನು ನಿರ್ಮಿಸಿ ಪ್ರಯೋಗ ಮಾಡಿದರು.

ಹೀಗೆ ಎರಡ್ಮೂರು ಚಿಕ್ಕ ಕೆರೆ ನಿರ್ಮಿಸಿದ ಪರಿಣಾಮ  ಒಂದೆರಡು ವರ್ಷಗಳಲ್ಲೇ ಫಲನೀಡತೊಡಗಿತು. ಮಳೆಗಾಲದಲ್ಲಿ ಮಳೆ ನೀರಿನ ತೊಂದರೆ ತಪ್ಪಿದರೆ ಬೇಸಿಗೆಯಲ್ಲಿ ನೀರಿನ ತುಟಾಗ್ರತೆಯ ರಗಳೆ ಕಡಿಮೆಯಾಯಿತು.
ಬೇಸಿಗೆಯಲ್ಲಿ ನೀರಿನ ಕೊರತೆ ಅನುಭವಿಸುತ್ತಿದ್ದ ಡಿ.ಕೆ.ನಾಯ್ಕರ ತೋಟ, ತೋಟದ ಕೆರೆಗಳು ಮೈತುಂಬಿಕೊಳ್ಳತೊಡಗಿದವು. ಮೂರು ಎಕರೆಗೆ ನೀರು ಪೂರೈಕೆ ಮಾಡಲಾಗದೆ ಗೋಳಾಡುತಿದ್ದ ನಾಯ್ಕರ ತೋಟ ಈಗ  ಐದಾರು ಎಕರೆಗೆ ವಿಸ್ತರಿಸಿದೆ. ಆದರೆ ಮಳೆಕೊಯ್ಲು ಮಾಡಿದ ಸಾಹಸದಿಂದಾಗಿ ಈಗ ನಾಯ್ಕರ ತೋಟಕ್ಕೆ ಇಡೀವರ್ಷ, ಎಲ್ಲಾ ಋತುಗಳಲ್ಲಿ ಜಲಭಾಗ್ಯ ಸಿಕ್ಕಂತಾಗಿದೆ.
ಮಲೆನಾಡಿನಲ್ಲಿ ಹೀಗೆ ಮಳೆಕೊಯ್ಲು, ನೀರಿಂಗಿಸುವ ವಿಧಾನದಿಂದ ಲಾಭ ಪಡೆಯಲು ಸರ್ಕಾರದಲ್ಲೂ ಯೋಜನೆಗಳಿವೆ. ಆದರೆ ಆಸಕ್ತಿ, ಪ್ರಯತ್ನದಿಂದ ತಮಗೆ ಪರಿಸರಕ್ಕೆ ಅನುಕೂಲ ಮಾಡಿಕೊಂಡವರ ಪ್ರಮಾಣ ಕಡಿಮೆ. ಈ  ಕೊರತೆಯ ನಡುವೆ ಡಿ.ಕೆ. ನಾಯ್ಕ ತೆಂಗಿನಮನೆ ಮಲೆನಾಡಿನ ಪ್ರಯೋಗಶೀಲ ರೈತನಾಗಿ ಯಶ ಸ್ಸು ಕಂಡಿದ್ದಾರೆ. ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಸೇರಿದ ಮಿಶ್ರ ಬೇಸಾಯಕ್ಕೆ ಈ ಮಳೆಕೊಯ್ಲಿನ ಕೆರೆಗಳು ನೆರವಾಗಿವೆ ಎನ್ನುವುದು ಡಿ.ಕೆ. ನಾಯ್ಕರ ಸಮಾಧಾನದ ಮಾತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *