

ರಾಷ್ರೀಯ ಹಣಕಾಸು ನೀತಿ ಕೈಬಿಡುವಂತೆ ಆಗ್ರಹಿಸಲು ಮತ್ತು ಮಹಿಳಾ ದೌರ್ಜನ್ಯ ನಿಯಂತ್ರಣಕ್ಕೆ ಒತ್ತಾಯಿಸಿ ಇಂದು ಸಿದ್ಧಾಪುರದಲ್ಲಿ ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಗಳಿಂದ ಪ್ರತಿಭಟನಾ ಮೆರವಣಿಗೆ ನಡೆದು ಮನವಿ ನೀಡಲಾಯಿತು.

ಖಾಸಗೀಕರಣ ಉತ್ತೇಜಿಸುವ ರಾಷ್ಟ್ರೀಯ ಹಣಕಾಸು ನೀತಿಯಿಂದ ಶ್ರೀಮಂತರು, ಬಂಡವಾಳ ಶಾಹಿಗಳಿಗೆ ಲಾಭವಾಗುತ್ತದೆ. ಇದರ ಜಾರಿಯಿಂದ ಶ್ರೀಮಂತರು, ಬಿ.ಜೆ.ಪಿ.ಗೆ ಲಾಭವಿದೆ ಆದರೆ ಇದರಿಂದ ದೇಶಕ್ಕೆ ಅಪಾಯವಿದೆ. ಇಂಥ ಲಾಭದ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಬಿ.ಜೆ.ಪಿ. ಮತ್ತು ನರೇಂದ್ರಮೋದಿ ಭಾರತದ ಜನಸಾಮಾನ್ಯರ ಸ್ವಾತಂತ್ರ್ಯವನ್ನು ಕಸಿದು ಉದ್ಯಮಿಗಳಿಗೆ ನೀಡುತಿದ್ದಾರೆ. ಇದು ಅಪಾಯದ ಸಂಕೇತ ಎಂದು ವಸಂತನಾಯ್ಕ ಈ ಪ್ರತಿಭಟನೆಯ ವೇಳೆ ಎಚ್ಚರಿಸಿದರು.
ತಹಸಿಲ್ಧಾರರ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸುವ ವೇಳೆ ಮಾತನಾಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ ಬಿ.ಜೆ.ಪಿ. ಮತ್ತು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮಹಿಳೆಯರ ಮೇಲೆ ಗೌರವ, ಕಾಳಜಿ ಇಲ್ಲ ಇದರ ವಿರುದ್ಧ ಮಹಿಳೆಯರು ಸಂಘಟಿತವಾಗಿ ಹೋರಾಡುವುದೊಂದೇ ದಾರಿ ಎಂದರು.
ಯುವ ಕಾಂಗ್ರೆಸ್ ನ ಕುಮಾರ ಜೋಶಿ ಮತ್ತು ಪ್ರಶಾಂತ್ ನಾಯ್ಕ ಮಾತನಾಡಿ ಯುವಕರು, ಮಹಿಳೆಯರು, ಜನಸಾಮಾನ್ಯರ ವಿರೋಧಿಯಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಬಿ.ಜೆ.ಪಿ. ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ಮಾಡುತ್ತಿದೆ. ಜನ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಜನಾಂದೋಲನದ ಮೂಲಕ ಬಿ.ಜೆ.ಪಿ.ಯನ್ನು ಹಿಮ್ಮೆಟ್ಟಿಸುವ ಅನಿವಾರ್ಯತೆ ಉಂಟಾಗಲಿದೆ ಎಂದರು.




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
