ಗೀಜಗದ ಗೂಡು & ಇತರ ಪದ್ಯಗಳು

ಗೂಡು ಕಟ್ಟಿಸಿ ಮೊಟ್ಟೆ ಕಾವಿಟ್ಟುಗುಟುಕು ತುತ್ತುಣಿಸುವಜೀವ

ಜಗತ್ತಿನ ಬಂಧದಬಗ್ಗೆ ಬರೆವಾಗ ಇರುವ ಉತ್ಸಾಹಖಾಲಿ ಗೂಡಿನ ಆತ್ಮಕಥೆಕೇಳುವಾಗ ರೆಕ್ಕೆಗಳ ಬಗ್ಗೆ ಪಿಚ್ಚೆನಿಸಿಬದುಕಿನ ಅನಿಶ್ಚಿತತೆ ಕಾಡುತ್ತದೆ*********

****ತನ್ನ ನೇಯ್ದ ತಾಯಿ ಹಕ್ಕಿರೆಕ್ಕೆ ಬಲಿತ ಮರಿಗಳುನೆಗೆದು ಹಾರಿದ ನಂತರಮೌನವಾಗಿ ಬಿಕ್ಕಿದ್ದನ್ನುಕಂಡು ಗೂಡು ಮೌನವಾಯ್ತು*

************ಬಿಡಿಯನ್ನ ಇಡೀ ಆಗಿಸಿಬದುಕು ಕಟ್ಟುವ ಬಗ್ಗೆನಾ ಪಾಠ ಮಾಡುವಾಗಆಕೆ ಕಿಟಕಿಯಿಂದ ಜಗದ ಮೊದಲ ನೇಕಾರನ ನೆಯ್ಗೆಯ ನೋಡಿ ಪುಳಕಗೊಳ್ಳುತ್ತಿದ್ದಳು**************

ಈ ಪ್ರಾಣಿ ಪಕ್ಷಿಗಳುಪ್ರೇಮ ಕಾಮದ ಸುಖ ತಾಯ್ತನದ ಧನ್ಯತೆ ಎಲ್ಲಾಅನುಭವಿಸಿಯೂ ಸ್ವತಂತ್ರವಾಗುವುದರಲ್ಲಿಮನುಷ್ಯನಿಗೆ ಪಾಠವಿದೆಯೇ..?

-ಜಿ. ಟಿ ಸತ್ಯನಾರಾಯಣ ಕರೂರು.15-09-2021. ಬೆಳಿಗ್ಗೆ: 9:30 (ಕೃಪೆ: ಅದ್ಬುತ ಫೋಟೋ ಕ್ಲಿಕ್ಕಿಸಿದ ಲಕ್ಷ್ಮಿ ನಾರಾಯಣ ಸರ್ ಗೆ ಋಣಿ)

ರಾಕೆಟ್, ಉಪಗ್ರಹ, ಕ್ಷಿಪಣಿವಿಜ್ಞಾನ

ತಂತ್ರಜ್ಞಾನದ ಶೋಧಚಂದ್ರನ ದಾಟಿ ಮಂಗಳಕ್ಕೇರುವಾಗ

ಅಂಗಳದ ಕೊಳೆ ಅಡಿಕೆಬೋರ್ವೆಲ್ ನ ಚೀರುವ ಮಗು

ಏಕಕಾಲದಲ್ಲಿ ನೆಲದಟೀಕೆ ಟಿಪ್ಪಣಿ ಬರೆಯುತ್ತವೆ***********

ನೆಲದ ಅಂಟು ನಂಟಿಲ್ಲದೆಒಡ್ಡು ಬಿದ್ದ ಕಣ್ಣೀರ ಕೋಡಿಯ

ತೆವೆಗಣ್ಣಲೂ ನೋಡದೇಕ್ರೌರ್ಯ ಶೋಷಣೆಗೆ ಬೆನ್ನು ತಿರುವಿ

ಬರೀ ಬಿರಿದ ಹೂವಿನ ಬಗ್ಗೆಯೇಕವನ ಗೀಚುವ ಕವಿ

ಕೆಟ್ಟ ರಾಜಕಾರಣಿಗಿಂತಹೆಚ್ಚು ಅಪಾಯಕಾರಿ. ನಿಜವಲ್ಲವೇ..?

************ಕವಿಗಳನ್ನು ಹೊರಗಟ್ಟಿಆದರ್ಶ ರಾಜ್ಯ ಕಟ್ಟುವೆಎಂದಿದ್ದ ಪ್ರಾಚೀನ ಗ್ರೀಕ್ ಚಿಂತಕ

ರಕ್ತದ ಶ್ರೇಷ್ಠತೆಯಲ್ಲಿ ಮುಕ್ತ ಕಾಮವನ್ನ ಎತ್ತಿಹಿಡಿದ.ಗುಮಾನಿ

ಇಷ್ಟೇನಮ್ಮ ಘೋಷಿತ ಪರಮ ಶ್ರೇಷ್ಠರನ್ನಪ್ಲೇಟೋ ಪ್ರಭಾವಿಸಿರಬಹುದೇ..?

*ನಿನ್ನೊಳಗಿನ ನಿನ್ನನೀ ಹುಡುಕುತ್ತಿರುವೆಯೆಂದರೆ

ನನ್ನ ಕವಿತೆ ಕಾಲು ದಾರಿ ತೋರುವುದುಕಿಚ್ಚು ಹತ್ತಿಸಿಕೊಂಡರೂನೀ ಸುಡು ಬೆಂಕಿಯಾಗಲಾರೆ

ಖಚಿತಹಣತೆ ಹಿಡಿದು ನೆಲದ ಜತೆಗೆ ನಡೆವೆಇಷ್ಟೇ.. ಈ ಕ್ಷಣದ ಪ್ರಣಾಳಿಕೆ

-ಸತ್ಯನಾರಾಯಣ ಜಿ. ಟಿ ಕರೂರು(14-09-2021. ಬೆಳಿಗ್ಗೆ: 7 ಗಂಟೆ)

ಇಳಿ ಸಂಜೆ ಮತ್ತೆನಿನ್ನ ನೆನಪಾಯಿತು

ಸ್ವಲ್ಪ ಹೊತ್ತು ಹೂ ಅಂಗಡಿ ಬಳಿಯೇ ನಿಂತು

ತೋಪು ದಾಟಿ ಮನೆ ಬಂದುಅಬ್ಬಲಿಗೆ ಗಿಡಕೆ ಮಣ್ಣು ಹಾಕಿ

ದುಂಡು ಮಲ್ಲಿಗೆ ಕೊಯ್ದುಹೂವಂತ ಸೊಸೆ ಬೇಕೆಂದಅವ್ವನ ಕೈಗಿಟ್ಟೆ….

ಒಂಟಿ ರಾತ್ರಿಗಳಲ್ಲಿಉದಾಸ ಸಂಜೆಗಳಲಿಸುಡುಕೆಂಡದ ವಿರಹಮತ್ತು

ನೋವಿನ ಆಲಾಪನೆಯಲಿಪ್ರೀತಿ ಹುಡುಕಿ ಅಲೆವ ದಾರಿಯಲ್ಲಿ

ಗೋಕುಲದ ಅವಳುಪದೇ ಪದೇ ಎದುರಾಗುವಳು

ಕಂಗಳ ತುಂಟ ಭಾಷೆಮೌನದ ನಿಘಂಟು ಮುನಿಸಿನ

ವ್ಯಾಖರಣಜಗಳದ ವ್ಯಾಖ್ಯಾನ ನಗುವಿನ ಛಂದಸ್ಸಿನೆದುರುಪದವಿ ವಿದ್ವತ್ತುಗಳು ಸೋಲುತ್ತವೆಂಬ

ಪ್ರೇಮ ಪಂಡಿತರ ಅಭಿಪ್ರಾಯದಲ್ಲಿನಿಜವಿರಬಹುದೇ…?

– ಸತ್ಯನಾರಾಯಣ ಜಿ. ಟಿ ಕರೂರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *