![](https://i0.wp.com/samajamukhi.net/wp-content/uploads/2021/09/20210917_143351-scaled.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![](https://i0.wp.com/samajamukhi.net/wp-content/uploads/2021/08/IMG-20210817-WA0036-1.jpg?resize=455%2C644&ssl=1)
ಪ್ರಧಾನ ಮಂತ್ರಿ ಮೋದಿಯವರ ಹುಟ್ಟುಹಬ್ಬವನ್ನು ಬಿ.ಜೆ.ಪಿ. ಆಚರಿಸಿದರೆ ಕಾಂಗ್ರೆಸ್ ಇದಕ್ಕೆ ಪರ್ಯಾಯವಾಗಿ ಮೋದಿ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಪ್ರತಿಭಟನೆ ನಡೆಸಿದೆ. ರಾಷ್ಟ್ರದಾದ್ಯಂತ ಕಾಂಗ್ರೆಸ್ ಕರೆಕೊಟ್ಟ ಪ್ರತಿಭಟನೆ ಅಂಗವಾಗಿ ರಾಜ್ಯ, ಜಿಲ್ಲೆ. ತಾಲೂಕಾ ಮಟ್ಟದಲ್ಲಿ ಪ್ರತಿಭಟಿಸಿದ ಯುವಕಾಂಗ್ರೆಸ್ ಕಾರ್ಯಕರ್ತರು ಕಪ್ಪುಪಟ್ಟಿಧರಿಸಿ ಪ್ರತಿರೋಧ ವ್ಯಕ್ತಪಡಿಸಿದರು. ಶಿರಸಿ-ಸಿದ್ಧಾಪುರಗಳಲ್ಲೂ ಕಾಂಗ್ರೆಸ್ ಯುವ ಘಟಕ ರಾಷ್ಟ್ರೀಯ ನಿರುದ್ಯೋಗ ದಿನದ ಅಂಗವಾಗಿ ಪ್ರತಿಭಟನೆ ದಾಖಲಿಸಿದವು.
ಸಿದ್ಧಾಪುರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಳಲವಳ್ಳಿ ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ವ್ಯವಸ್ಥೆ ಸೃಷ್ಟಿಯಾಗಲು ಪ್ರಧಾನಿ ಮತ್ತು ಅಮಿತ್ ಶಾ ಪಾತ್ರ ದೊಡ್ಡದು, ಆರೆಸ್ಸೆಸ್ ಕೊಬ್ಬಿಸುತ್ತಾ ಸುಳ್ಳು, ವಂಚನೆಗಳ ಮೂಲಕ ಜನಾಭಿಪ್ರಾಯ ಸಂಗ್ರಹದ ಪ್ರಯತ್ನ ನಡೆಯುತ್ತಿದೆ. ಚುನಾವಣೆ ಸಮಯದಲ್ಲಿ ವಿಧ್ವಂಸಕ ಕೆಲಸ ಮಾಡಿಸಿ ಅದನ್ನು ಮುಸ್ಲಿಂರು, ಪಾಕಿಸ್ಥಾನ್, ಚೀನಾಗಳ ಮೇಲೆ ಹೇರಿ ಜನರನ್ನು ದಿಕ್ಕುತಪ್ಪಿಸಿ ಮಾಡುತ್ತಿರುವ ಅಧಿಕಾರ ಜನತೆಯ ಒಳಿತಿಗೆ ಬಳಕೆಯಾಗುತ್ತಿಲ್ಲ. ನಿರುದ್ಯೋಗ. ಕೃಷಿಕರು, ದೇಶದ ಸಮಸ್ಯೆಗಳ ಬಗ್ಗೆ ಮಾತನಾಡದ ಮೋದಿ ಹಿಂದುತ್ವ,ಸುಳ್ಳುಗಳ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಚಾರವಾಗಿದ್ದಾರೆ. ಯಾವ ದೇಶದ ಪ್ರಧಾನಿಯ ಹುಟ್ಟುಹಬ್ಬವೂ ಈ ರೀತಿ ರಾಷ್ಟ್ರೀಯ ನಿರುದ್ಯೋಗ ದಿನ ಎಂದು ಆಚರಿಸಿದ ದಾಖಲೆ ಇಲ್ಲ ಎಂದರು. ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಸೂರಜ್ ನಾಯ್ಕ, ಅರುಣ್ ನಾಯ್ಕ, ಬಾಲಕೃಷ್ಣ ನಾಯ್ಕ ಕತ್ತಿ ಸೇರಿದಂತೆ ಹಲವರಿದ್ದರು.
![](https://i0.wp.com/samajamukhi.net/wp-content/uploads/2021/09/20210917_142618.jpg?resize=441%2C247&ssl=1)
![](https://i0.wp.com/samajamukhi.net/wp-content/uploads/2021/09/20210917_143351.jpg?resize=459%2C257&ssl=1)
![](https://i0.wp.com/samajamukhi.net/wp-content/uploads/2021/08/IMG-20210813-WA0053.jpg?resize=452%2C640&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)