Tarjaan – ರಿಯಲ್ ಲೈಫ್ ಟಾರ್ಜಾನ್ & ನಕಲಿ ನೋನಿ ಜಾಲ

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆಯಾಗಿದೆ. ನಗರದ ಮಾರ್ನಮಿ ಬೈಯಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಿದ ಪೊಲೀಸರು 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆದಿದ್ದಾರೆ.

Ho van Lang,
“ರಿಯಲ್ ಲೈಫ್ ಟಾರ್ಜಾನ್” ಎಂದು ದಂತಕತೆಯಾಗಿರುವ ಈತನ ಬದುಕು ನಮಗೆ ಕುತೂಹಲಕಾರಿ, ರೋಮಾಂಚಕ ಅನಿಸಿದರೂ ನಿಜಕ್ಕೂ ಅದೊಂದು ಕರುಣಾಜನಕ ಕತೆ.
ವಿಯೆಟ್ನಾಂ‌ನ ಆಂತರಿಕ ಯುದ್ದ(1959–1975)ದ ಸಮಯದಲ್ಲಿ1972 ರಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಈ ಬಾಲಕ ಟಾರ್ಜಾನನು ತಾಯಿ ಮತ್ತು ಇಬ್ಬರು ಸೋದರಿಯರನ್ನು ಕಳೆದುಕೊಂಡು ದಿಗ್ಭ್ರಾಂತನಾಗಿ ಮನುಷ್ಯರೆಂದರೆ ಅನುಮಾನ, ಅಂಜಿಕೆಯ ತೀವ್ರ ಭಯ (Profound phobia)ಕ್ಕೊಳಗಾಗುತ್ತಾನೆ. ಆಗ ತನ್ನ ತಂದೆ ಹೊ ವಾನ್ ತಾಂಗ್ ನೊಟ್ಟಿಗೆ ವಿಯೆಟ್ನಾಂ‌ನ ದಟ್ಟ ಅಡವಿಗೆ ಪಲಾಯನ ಮಾಡುತ್ತಾನೆ;ನಾಗರಿಕ ಜಗತ್ತಿನಿಂದ ಅಕ್ಷರಶಃ ಕಣ್ಮರೆಯಾಗುತ್ತಾನೆ.ಮನುಷ್ಯನ ಸುಳಿವು ಕಂಡರೆ ಹೆದರಿಕೆಯಿಂದ ತಪ್ಪಿಸಿಕೊಳ್ಳತೊಡಗಿ ಶುದ್ಧ “ಕಾಡು ಮನುಷ್ಯ” ನಾಗಿ ಅಲ್ಲಿನ ಪ್ರಕೃತಿ, ಪ್ರಾಣಿ,ಪಕ್ಷಿಗಳೊಂದಿಗಿನ ಬದುಕಿನಲ್ಲಿ ಲೀನವಾಗಿಬಿಡುತ್ತಾನೆ.ನಾಗರಿಕ ಬದುಕಿನಿಂದ, ಸಹಜ ಮನುಷ್ಯ ಭಾವನೆಗಳಿಂದ ಅದೆಷ್ಟು ದೂರವಾಗುತ್ತಾನೆಂದರೆ,ಮನುಷ್ಯರಲ್ಲಿ ಹೆಣ್ಣೆಂಬ ಜಾತಿ ಇದೆ ಗಂಡು ಹೆಣ್ಣಿನ ಗೆಳೆತನ ಸಹಜ,ಅನಿವಾರ್ಯ, ಅಗತ್ಯ ಎಂಬುದು ಕೂಡ ಅವನ ಜೀವಿತದಲ್ಲಿ ಅರಿವಿಗೇ ಬರುವುದಿಲ್ಲ‌.ಹೀಗೆಯೇ ನಾಲ್ಕು ದಶಕಗಳ ಕಾಲ ಅಜ್ಞಾತವಾಗಿಯೇ ಉಳಿದುಹೋಗುತ್ತಾನೆ.ತನ್ನ ಐವತ್ತೆರಡನೇ ವಯಸ್ಸಿನಲ್ಲಿ ಲಿವರ್ ಕ್ಯಾನ್ಸರಿನಿಂದ ತೀರಿಕೊಳ್ಳುತ್ತಾನೆ.
ಯುದ್ಧ ಮಾನ,ಪ್ರಾಣ,ಆರ್ಥಿಕತೆಯ….. ವಿನಾಶಕಾರಿ ಮಾತ್ರವಲ್ಲ;ಮನುಷ್ಯನನ್ನೇ ಪ್ರಾಣಿಯಾಗಿಸಬಲ್ಲ ವಿಕೃತ ಕ್ರೂರಿ. -deepak kalkere

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆ

ಶಿವಮೊಗ್ಗದಲ್ಲಿ ನಕಲಿ ಅಮೃತ್ ನೋನಿ ಮಾರಾಟ ಜಾಲ ಪತ್ತೆಯಾಗಿದೆ. ನಗರದ ಮಾರ್ನಮಿ ಬೈಯಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಿದ ಪೊಲೀಸರು 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆದಿದ್ದಾರೆ.

ಶಿವಮೊಗ್ಗ: ಅಮೃತ್ ನೋನಿಯನ್ನೇ ಹೋಲುವ ನಕಲಿ ಪ್ಯಾಕಿಂಗ್ ಮಾಡಿ ಜ್ಯೂಸ್ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಇಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅಮೃತ್ ನೋನಿಯನ್ನು ಮಾರಾಟ ಮಾಡುತ್ತಿರುವ ವ್ಯಾಲ್ಯೂ ಪ್ರಾಡೆಕ್ಟ್ ಕಂಪನಿ ನೀಡಿದ ದೂರಿನ ಮೇರೆಗೆ ಶಿವಮೊಗ್ಗದ ಮಾರ್ನಮಿ ಬೈಯಲಿನಲ್ಲಿರುವ ಫಾರ್ಮಾ ಸಂಸ್ಥೆ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅಮೃತ್ ನೋನಿಯನ್ನೇ ಹೋಲುವ ನಕಲಿ ಪ್ಯಾಕಿಂಗ್ ಮಾಡಿರುವ 31 ಬಾಕ್ಸ್ ನಕಲಿ ಅಮೃತ್ ನೋನಿಯನ್ನು ವಶಕ್ಕೆ ಪಡೆಯಲಾಗಿದೆ.

ನಾವು ಆಯುಷ್ ಇಲಾಖೆಯಿಂದ ಲೈಸೆನ್ಸ್ ಪಡೆದು ಔಷಧಿ ಎಂದು ಮಾರಾಟ ಮಾಡುತ್ತಿದ್ದೇವೆ. ಆದ್ರೆ ಕೆಲವರು ಇದನ್ನು ನಕಲು ಮಾಡಿ, ಮಾರುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದೇವೆ. ಪೊಲೀಸರು ದಾಳಿ ನಡೆಸಿ ನಕಲಿ ಅಮೃತ್ ನೋನಿ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆಯ ಕಾನೂನು ವಿಭಾಗದ ಶಶಿಕಾಂತ್ ನಾಡಿಗ್ ತಿಳಿಸಿದ್ದಾರೆ. (etbk)

ಜೂಸ್ ಎಂದು ತಿಳಿದು ಅಕಸ್ಮಿಕವಾಗಿ ಆಲ್ಕೊಹಾಲ್ ಸೇವಿಸಿದ 5 ವರ್ಷದ ಬಾಲಕ ದುರ್ಮರಣ

ತಾತ ಚಿನ್ನಸ್ವಾಮಿ (62) ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. 

ವೆಲ್ಲೂರ್: ಹಣ್ಣಿನ ಜೂಸ್ ಎಂದು ತಪ್ಪಾಗಿ ತಿಳಿದು ಆಲ್ಕೊಹಾಲ್ ಸೇವಿಸಿದ್ದ 5 ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಅಣ್ಣಾನಗರ್ ನಲ್ಲಿ ನಡೆದಿದೆ. 

ರಾಕೇಶ್ ಎನ್ನುವ ಬಾಲಕ ಮೃತಪಟ್ಟ ದುರ್ದೈವಿ. ಆತನ ತಾತ ಚಿನ್ನಸ್ವಾಮಿ (62) ಅವರಿಗೆ ಕುಡಿತದ ಚಟವಿತ್ತು. ಹೀಗಾಗಿ ಮನೆಯಲ್ಲಿಯೇ ಬ್ರಾಂಡಿ ಬಾಟಲಿಯನ್ನು ತಂದು ಇಟ್ಟುಕೊಂಡಿದ್ದರು. 

ತಾತನ ರೂಮಿನಲ್ಲಿ ಬ್ರಾಂಡಿ ಬಾಟಲಿಯನ್ನು ಜೂಸ್ ಎಂದು ತಪ್ಪು ತಿಳಿದ ರಾಕೇಶ್ ಅದರಲ್ಲಿದ್ದುದನ್ನು ಕುಡಿದಿದ್ದಾನೆ. ಆತ ಕುಡಿದ ಸಂಗತಿ ಯಾರಿಗೂ ತಿಳಿದಿರಲಿಲ್ಲ. ನಂತರ ರಾಕೇಶ್ ಏಕಾಏಕಿ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಅದನ್ನು ಕಂಡು ರಾಕೇಶ್ ತಾತ ಚಿನ್ನಸ್ವಾಮಿ ಕೂಡಾ ಅನಾರೋಗ್ಯಕ್ಕೀಡಾದರು. 

ಇಬ್ಬರನ್ನೂ ಮನೆಯವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *