Exclusive -ಹಸಿರು ಪರಿಸರದ ನೀಲಿ ಚಮತ್ಕಾರ! ಗೋಳಗೋಡ್ ಗದ್ದೆ ಬೈಲಿಗೆ ಬಂದ ಜಾಗತಿಕ ಮಹತ್ವ

ಸಿದ್ಧಾಪುರ ತಾಲೂಕಿನ ಸಾಗರ ರಸ್ತೆಯ ಗೋಳಗೋಡು ಗ್ರಾಮದ ಗದ್ದೆ ಬಯಲೀಗ ಅನೇಕರ ಆಸಕ್ತಿಯ ಕೇಂದ್ರವಾಗಿದೆ. ದೃಷ್ಟಿಹರಿದಷ್ಟೂ ದೂರ ಹಚ್ಚ ಹಸಿರು ಕಾಣುವ ಮಲೆನಾಡಿನ ಈ ಭತ್ತದ ಗದ್ದೆ ಬಯಲಿಗೆ ಈ ಆಕರ್ಷಣೆ ಹೇಗೆ ಬಂತು ಎಂದರೆ ಈ ಕೌತುಕಕ್ಕೆ ಉತ್ತರ ದೊರೆಯುತ್ತದೆ. ಈ ಭಾಗದ ಜನರ ಲಕ್ಷ್ಯ ತನ್ನತ್ತ ಕೇಂದ್ರೀಕರಿಸುವಂತೆ ಮಾಡಿದ ಹಣಜಿಬೈಲಿನ ದ್ಯಾವಾ ಎಂ. ನಾಯ್ಕರ ಸಾಹಸಗಾಥೆಯೇ ಈ ಕೌತುಕದ ಹಿಂದಿನ ಸಾಧನೆ.

ಹಣಜಿಬೈಲಿನ ದ್ಯಾವಾ ನಾಯ್ಕರಿಗೆ ಕಳೆದ ನಾಲ್ಕೈದು ವರ್ಷದ ಹಿಂದೆ ರಸ್ತೆಯ ಪಕ್ಕ ಬಣ್ಣದ ಭತ್ತದ ಗಿಡವೊಂದು ಕಾಣಿಸಿದ್ದೇ ಪ್ರಾರಂಭ. ಹೂವಿನ ಗಿಡವೇನೋ ಎಂದು ಅನುಮಾನದಿಂದಲೇ ಕೊಂಡೊಯ್ದು ಸಾಕಿ ಬೆಳಸಿದ ನಾಯ್ಕರಿಗೆ ಅದು ಭತ್ತದ ಗಿಡ ಎಂದು ತಿಳಿಯಲು ಸಮಯ ಹಿಡಿಯಲಿಲ್ಲ. ಈ ನೀಲಿ ಸಸ್ಯವನ್ನು ನಾಟಿ ಮಾಡಿದ ಭತ್ತದ ಸಸಿಯಿಂದ ನಾಲ್ಕೈದು ತೆನೆ ಭತ್ತ ದೊರೆತಖುಷಿಯಲ್ಲಿದ್ದ ದ್ಯಾವಾ ನಾಯ್ಕರಿಗೆ ಈ ಭತ್ತದ ಕದರನ್ನು ನವಿಲುಗಳು ಕತ್ತರಿಸಿದಾಗಬೇಸರವಾದರೂ ನೆಲಕ್ಕೆ ಬಿದ್ದ ಭತ್ತದಿಂದ ಮಾರನೇ ವರ್ಷ ಕೆಲವು ಸಸಿಗಳನ್ನು ಮಾಡಿ 4ರಿಂದ 5 ವರ್ಷಗಳಲ್ಲಿ ಈಗ ಹತ್ತುಗುಂಟೆಗೂ ಹೆಚ್ಚುಭಾಗದಲ್ಲಿ ಈ ನೀಲಿಭತ್ತವನ್ನು ಬೆಳೆದಿದ್ದಾರೆ.

ಹಚ್ಚಹಸಿರಿನ ಭತ್ತದ ಗದ್ದೆಯ ನಡುವೆ ನೀಲಿಬಣ್ಣದಿಂದ ಸ್ಥಳೀಯರ ಗಮನ ಸೆಳೆಯುತ್ತಿರುವ ಈ ಕೃಷ್ಣ ನೀಲ ಭತ್ತ ಈಗ ಸಾರ್ವಜನಿಕರ ಕೌತುಕ ಮತ್ತು ಆಕರ್ಷಣೆಯ ಕೇಂದ್ರವಾಗಿದೆ.ಇದು ಕೃಷ್ಣ ನೀಲ ಎನ್ನುವ ಭತ್ತದ ತಳಿ ಎನ್ನುವ ದ್ಯಾವಾ ನಾಯ್ಕರಿಗೆ ಈ ಭತ್ತದ ವೈಶಿಷ್ಟ್ಯ, ಪ್ರಾಮುಖ್ಯತೆಗಳ ಬಗ್ಗೆ ತಿಳಿದಿಲ್ಲ. ಈ ಭತ್ತದ ಗದ್ದೆ ನೋಡಿದ ಜನರು ಇದು ಉತ್ತಮ ತಳಿ ಇದರಲ್ಲಿ ಔಷಧೀಯ ಗುಣಗಳಿಗೆ ಎಂದು ಹೇಳುತ್ತಾರಾದರೂ ಈ ಬಗ್ಗೆ ಸ್ಫಷ್ಟ ದಾಖಲೆ, ಮಾಹಿತಿ ಇವರ ಬಳಿ ಇಲ್ಲ.

ಈ ಬಗ್ಗೆ ಸ್ಥಳೀಯ ಕೃಷಿ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ ಅದು ವಿಶಿಷ್ಟ ತಳಿಯ ಭತ್ತ ಇದನ್ನು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಯೋಗಿಕವಾಗಿ ಬೆಳೆದಿರುವ ಸಾಧ್ಯತೆ ಇದೆ. ಆದರೆ ಅನಿರೀಕ್ಷಿತವಾಗಿ ದೊರೆತ ಈ ಭತ್ತದ ಗಿಡದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೃಷ್ಣನೀಲಿ ಭತ್ತ ಬೆಳೆದ ರೈತರ ಸಾಧನೆ ದೊಡ್ಡದು ಎನ್ನುತ್ತಾರೆ. (ಚಿತ್ರಗಳು,ಮಾಹಿತಿ-ವಿಜಯಕುಮಾರ್ & ಲೋಹಿತ್ ಕುಮಾರ್ ಹಣಜೀಬೈಲ್)


ಕಳ್ಳಭಟ್ಟಿ ಸಂಗ್ರಹಿಸಿದ್ದಕ್ಕೆ 21ಸಾವಿರ ರೂ ದಂಡ-

ದಿನಾಂಕ:೨೬೦೧೨೦೧೭ ರಂದು ಕೃಷ್ಣ ದ್ಯಾವಾ ನಾಯ್ಕ ವಾಸ:_ಐಗಳಕೊಪ್ಪ, ತಾಲ್ಲೂಕು:ಸಿದ್ದಾಪುರ ಎಂಬ ಆರೋಪಿಯು ತನ್ನ ಮನೆಯಲ್ಲಿ ಕಳ್ಳ ಭಟ್ಟಿ ಸರಾಯಿಯನ್ನು ದಾಸ್ತಾನಿಸಿದ್ದನ್ನು ಪತ್ತೆ ಹಚ್ಚಿ,ಸಿ.ಸಿ. ನಂ.೪೬೧/೨೦೧೭ ರಲ್ಲಿ ಆರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಶ್ರೀ ಸಿದ್ದರಾಮ ಎಸ್. ಮಾನ್ಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶರು ಆರೋಪಿಗೆ, ಕ‌.ಅ. ಕಾಯ್ದೆ ಕಲಮ್- ೩೨ ರಲ್ಲಿ ೧ ವರ್ಷ ಸಾಧಾ ಸಜೆ ಮತ್ತು ರೂ. ೧೦,೦೦೦/ಗಳ ದಂಡ,ಕಲಮ್- ೩೪ ರಲ್ಲಿ ೧ ವರ್ಷ ಸಾಧಾ ಸಜೆ ಮತ್ತು ರೂ. ೧೦,೦೦೦/ಗಳ ದಂಡ ಹಾಗೂ ಐ.ಪಿ.ಸಿ.ಕಲಮ್- ೨೭೩ ರಲ್ಲಿ ೬ ತಿಂಗಳ ಸಾಧಾ ಸಜೆ ಮತ್ತು ರೂ. ೧,೦೦೦/ಗಳ ದಂಡ, ಈ ರೀತಿ ಒಟ್ಟು ಎರಡುವರೆ ವರ್ಷಗಳ ಸಾಧಾ ಸಜೆ ಮತ್ತು ರೂ.೨೧೦೦೦/-ಗಳು ದಂಡವನ್ನು ವಿಧಿಸಿರುತ್ತಾರೆ.ಈ ಪ್ರಕರಣದಲ್ಲಿ ಚಂದ್ರಶೇಖರ ಎಚ್. ಎಸ್.ಸಹಾಯಕ ಸರ್ಕಾರಿ ಅಭಿಯೋಜಕರು ಸರ್ಕಾರದ‌ ಪರವಾಗಿ ವಾದಿಸಿದ್ದರು. ಮಹೇಂದ್ರ ಎಸ್. ನಾಯ್ಕ ಅಬಕಾರಿ ಉಪ-ಅಧೀಕ್ಷಕರು (ಪ್ರಭಾರ)ಉಪ_ವಿಭಾಗ ಶಿರಸಿ ಇವರು ಮೊಕದ್ದಮೆ ದಾಖಲಿಸಿದ್ದು, ಶ್ರೀಮತಿ ಜ್ಯೋತಿಶ್ರೀ ಜಿ. ನಾಯ್ಕ ಅಬಕಾರಿ ನಿರೀಕ್ಷಕರು ಶಿರಸಿ ವಲಯ ನ್ಯಾಯಾಲಯದಲ್ಲಿ ಆರೋಪಣಾ ಪಟ್ಟಿ ಸಲ್ಲಿಸಿದ್ದರು..

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *