ಕ್ಷುಲ್ಲಕ ಕಾರಣಕ್ಕೆ ತಾಯಿ-ತಂಗಿಯ ಹತ್ಯೆ ಮಾಡಿದ ಮಂಜುನಾಥ ಪೊಲೀಸ್ ವಶಕ್ಕೆ

ಹಣ,ದುರಾಸೆ ಚಟಗಳಿಗೆ ದಾಸನಾದ ವ್ಯಕ್ತಿ ಮನುಷ್ಯತ್ವ ಕಳೆದುಕೊಳ್ಳಬಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಸಿದ್ಧಾಪುರದ ಕುಡೇಗೋಡು ಹಸ್ಲರ್ ಸಮೂದಾಯದ ಮನೆಗಳಿರುವ ಚಿಕ್ಕ ಗ್ರಾಮ. ಈ ಗ್ರಾಮಕ್ಕೆ ಸಾರಾಯಿ, ಬೇಟೆ, ಕೂಲಿ ನಿತ್ಯ ಅವಶ್ಯಕತೆಗಳು. ಎಲ್ಲರ ಮನೆಯಂತೇ ಸಮೀಪದ ಜಮೀನ್ಧಾರರ ಮನೆಯ ಕೂಲಿ,ನರೇಗಾ ಕೆಲಸ ಅವಲಂಬಿಸಿದ್ದ ನಾರಾಯಣ ಹಸ್ಲರ್ ಕುಟುಂಬದಲ್ಲಿ ಪಾರ್ವತಿ, ನಾರಾಯಣ ದಂಪತಿಗಳಿಗೆ ಹುಟ್ಟಿದ ಮೊದಲ ಮಗ ಮಂಜುನಾಥ ಅಲಿಯಾಸ್ ಜಯವಂತ, ಈತನಿಗೆ ಇಬ್ಬರು ತಂಗಿಯಂದಿರು. ಮೊದಲ ಸಹೋದರಿ ಪದವಿ ಓದುತ್ತಿರುವ ಹೆಣ್ಣುಮಗಳಾದರೆ ಇನ್ನಬ್ಬಳು ಒಂಬತ್ತನೇ ತರಗತಿಯವಿದ್ಯಾರ್ಥಿನಿ.

ಅಣ್ಣ ಜಯವಂತ ಊರಿನಲ್ಲಿ ಮಂಗ ಗಳನ್ನು ಓಡಿಸುತ್ತಾ ತನ್ನ ಕರ್ಚಿಗೂ ತಾಯಿಯ ಬಳಿ ಕೈ ಒಡ್ಡುತಿದ್ದ. 24 ರ ಹರೆಯದ ಮಗನ ಮಂಗಾಟಗಳಿಗೆ ಸೊಪ್ಪುಹಾಕದ 42 ರ ತಾಯಿ ಪಾರ್ವತಿ ಕಲಿಕೆಯ ಅಗತ್ಯಕ್ಕಾಗಿ ಹಿರಿಯ ಮಗಳು ರಮ್ಯಾಳಿಗೆ ಮೊಬೈಲ್ ಕೊಡಿಸಲು ಸ್ವಸಹಾಯ ಸಂಘದಲ್ಲಿ ಸಾಲ ಮಾಡಿದ್ದಾಳೆ.

ತನಗೆ ಹಣ ನೀಡದ ತಾಯಿ ತಂಗಿ ರಮ್ಯಾಳಿಗೆ ಮೊಬೈಲ್ ಕೊಡಿಸಲು ಸಾಲ ಮಾಡಿದ್ದಾಳೆ ಎಂದು ಜಗಳ ತೆಗೆದಿದ್ದಾನೆ. ಊರಿನ ಮಂಗ ಕಾಯಲು ಕೊಟ್ಟಿದ್ದ ನಾಡ ಬಂದೂಕೊಂದು ಈ ಮಂಜುನಾಥನ ಕೈಯಲ್ಲಿತ್ತು.

ಅದು ಅಕ್ಟೋಬರ್ 13 ರ ಬುಧವಾರದ ಮಧ್ಯಾಹ್ನ ಮನೆಯಲ್ಲಿ ತಾಯಿಯೊಂದಿಗೆ ಸಹೋದರಿಯರು ಹಬ್ಬದ ತಯಾರಿಯಲ್ಲಿದ್ದಾರೆ. ವಾರದ ಬಿಡುವಿನ ಬುಧವಾರ ಮಹಾನವಮಿ ಹಬ್ಬದ ಕರಿ ಕೆಲಸಬೇರೆ. ಗಂಡಸರು ಮನೆಯಲ್ಲಿಲ್ಲ ಎಂದು ಅಡುಗೆಯನ್ನೂ ಮಾಡದೆ ಕೆಲಸದಲ್ಲಿ ಮಗ್ನರಾಗಿದ್ದಾರೆ. ಮಂಗಗಳನ್ನು ಓಡಿಸುತ್ತಾ ಚಿಕ್ಕ ಪುಟ್ಟ ಶಿಕಾರಿ ಮಾಡುತಿದ್ದ ಮಗರಾಯ ಮಧ್ಯಾಹ್ನ ಮನೆಗೆ ಬಂದಾಗ ಊಟ ಸಿದ್ಧವಾಗಿರಲಿಲ್ಲ ಸಿಟ್ಟು-ಅಸಮಾ ಧಾನದ ಕೈಗೆ ಕೋವಿ ಕೊಟ್ಟು ಟ್ರಿಗರ್ ನೂಕಿದ್ದಾನೆ. ಬಂದೂಕಿಗೇನು ಗೊತ್ತು ಈ ಹುಡುಗ ಗುರಿ ಮಾಡಿದ್ದು ತನ್ನ ತಾಯಿ-ಮತ್ತು ತಂಗಿಯೆಂದು ಒಂದೇ ಏಟಿಗೆ ಎರಡು ಜನರ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಹೀಗೆ ಕುಡುಕ, ಬೇಜವಾಬ್ಧಾರಿ ಮಗನ ಎಡವಟ್ಟಿಗೆ ಹೆಣಗಳಾದ ತಾಯಿ-ಮಗಳು ಮಧ್ಯಾಹ್ನದ ಮೂರರ ಸುಮಾರಿಗೆ ಹತ್ಯೆಯಾಗಿದ್ದಾರೆ. ಈ ವಿಷಯ ಹೊರಗೆ ಬರುವುದರೊಳಗಾಗಿ ಊರಿನಲ್ಲೇ ಮಾತುಕತೆಯಾಗಿ ಅಂತ್ಯಸಂಸ್ಕಾರ ಮಾಡುವ ತೀರ್ಮಾನವಾದ ಸಮಯಕ್ಕೆ ಸಿದ್ಧಾಪುರ ಪೊಲೀಸರ ಆಗಮನವಾಗಿದೆ.

ಪಕ್ಕಾ ಮಾಹಿತಿ ತಿಳಿದು ಪೊಲೀಸರು ಕುಡೇಗೋಡಿಗೆ ಬರುವ ಸಮಯಕ್ಕೆ ಕತ್ತಲಾಗಿದೆ. ತಾಯಿ ಅಕ್ಕನನ್ನು ಕಳೆದುಕೊಂಡ 15 ವರ್ಷಗಳ ಸಹೋದರಿ, ಕೊಲೆಗಾರನ ತಂದೆ ನಾರಾಯಣ ಹಸ್ಲರ್ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ದುರಂತದ ಬಗ್ಗೆ ಪೊಲೀಸ್ ದೂರು ದಾಖಲಾಗಿ ಹೆಣಗಳನ್ನು ಪೊಸ್ಟ್ ಮಾರ್ಟಮ್, ಪ್ಲೊರೆನ್ಸಿಕ ವದಿಗಾಗಿ ದೂರದ ಜಿಲ್ಲಾ ಕೇಂದ್ರ ಕಾರವಾರಕ್ಕೆ ರವಾನಿಸಲಾಗಿದೆ. ತುಂಬುಕುಟುಂಬದ ತಾಯಿ-ಮಗಳು ಹತ್ಯೆಯಾಗಿ ಹೆಣವಾದರೆ ಮಗ ಜೈಲುಪಾಲಾಗಿದ್ದಾನೆ. ಈಗ ತಂದೆಯೊಂದಿಗೆ ಅಪ್ರಾಪ್ತ ಬಾಲಕಿ ದಿಕ್ಕುತೋಚದೆ ಕಂಗಾಲಾಗಿದ್ದಾಳೆ.

ಎಸ್ಪಿ ಭೇಟಿ- ದೊಡ್ಮನೆ ಗ್ರಾ.ಪಂ. ಕುಡೇಗೋಡಿಗೆ ಇಂದು ಕಾರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಕೊಲೆಗಾರನಿಗೆ ನಿಶ್ಚಿತ ಉದ್ದೇಶಗಳೇನೂ ಇರಲಿಲ್ಲ. ತಾಯಿ, ತಂಗಿಯನ್ನು ಹತ್ಯೆ ಮಾಡಿದ ಆರೋಪಿ ಮಂಜುನಾಥ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಸೂಕ್ತ ವಿಚಾರಣೆ,ತನಿಖೆ ನಂತರ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿ. ಅಕ್ರಮ, ಅವ್ಯವಹಾರಗಳ ತಡೆಯಲು ಸಾರ್ವಜನಿಕರ ಸಹಕಾರ ಬೇಕು.ಸ್ಥಳಿಯರ ನೆರವು, ಸಹಕಾರದಿಂದ ಇಂಥ ಅಪರಾಧಗಳನ್ನೂ ತಡೆಯಬಹುದು ಎಂದರು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಶಿರಸಿ – ಹಣಕಾಸಿನ ವಿಚಾರ ಒಂದು ಸಾವು, ಮಹಿಳೆಯ ಬಂಧನ!

ಶಿರಸಿ ಪೊಲೀಸ್ರಿಂದ ಕಾರ್ಯಚರಣೆ. ಎಟಿಎಂ ನಿಂದ ಹಣ ತೆಗೆಯಲು ಮುಗ್ದ ಹೆಣ್ಣು ಮಕ್ಕಳಿಗೆ ನೆರವಾಗುವ ನಾಟಕಮಾಡಿ ಅವರ ಎಟಿಎಂ ನಿಂದಲೇ ಹಣ ತೆಗೆದು ಪರಾರಿಯಾಗುತ್ತಿದ್ದ...

ನಾನು ಗ್ಯಾರಂಟಿ ವಿರೋಧಿಯಲ್ಲ…- ಆರ್.ವಿ. ದೇಶಪಾಂಡೆ

ಐದು ಗ್ಯಾರಂಟಿಗಳಿಗೆ ೫೮ ಸಾವಿರ ಕೋಟಿ ವ್ಯಯವಾಗುತಿದ್ದು ಇದು ಸರ್ಕಾರಕ್ಕೆ ಹೊರೆಯಾಗುತ್ತಿರುವುದರಿಂದ ಅಭಿವೃದ್ಧಿಗೂ ತೊಡಕಾಗುತ್ತಿದೆ. ಅರ್ಹರಿಗೆ ಮಾತ್ರ ಈ ಯೋಜನೆಗಳ ಲಾಭ ತಲುಪುವಂತೆ ಮಾಡಿ...

ಕಾನಗೋಡು ಬಳಿ ಅಪಘಾತ, ಒಂದು ಸಾವು

ಶಿರಸಿ ತಾಲೂಕಿನ ಕಾನಗೋಡು ಬಳಿ ಇಂದು ಮಧ್ಯಾಹ್ನ ನಡೆದ ಭೀಕರ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಇನ್ನೊಬ್ಬರಿಗೆ ತೀವೃತರಹದ ಗಾಯಗಳಾದ ಬಗ್ಗೆ ವರದಿಯಾಗಿದೆ. ಕಾರು...

ತಾ.ಜಿ. ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆ……

ಬ್ಲಾಕ್, ಜಿಲ್ಲಾಧ್ಯಕ್ಷರ ಬದಲಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸುಳಿವು ಸಂಘಟನಾತ್ಮಕ ಬದಲಾವಣೆ ಹಾಗೂ ಸಮಾಜಕ್ಕೆ ತಲುಪುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗುತ್ತದೆ ಎಂದು...

ಹುಲಕುತ್ರಿಯ ಶಿಕ್ಷಕ ದರ್ಶನ ಹರಿಕಾಂತ್‌ ಅಭಿನಂದಿಸುತ್ತಾ……

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶೈಕ್ಷಣಿಕ ಜಿಲ್ಲೆಯ ಕುಗ್ರಾಮ ಹುಲಕುತ್ರಿ. ಈ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಾಥಮಿಕ ಶಾಲೆಯನ್ನು ವಿಶ್ವಕ್ಕೆ ಪರಿಚಯಿಸಿದವರು ದರ್ಶನ ಹರಿಕಾಂತ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *