ಮಾದ್ಲಮನೆ ಸಾಯಿ ದೇವಾಲಯಕ್ಕೆ ಬಡಿದ ಸಿಡಿಲು,ಹಾನಿ

ಸಿದ್ಧಾಪುರ ಕಲಕೈ ಗ್ರಾಮದ ಮಾದ್ಲ ಮನೆ ಮಜರೆಯ ಶ್ರೀ ಸಾಯಿಮಂದಿರ ದೇವಸ್ಥಾನಕ್ಕೆ ಸಿಡಿಲು ಬಡಿದು, ದೇವಸ್ಥಾನದ ಮೈಕ್ ಸೆಟ್, ದೇವಸ್ಥಾನದ ವಿದ್ಯುತ್ ಸಂಪರ್ಕ& ಪಾತ್ರೆಗಳು ಹಾಳಾಗಿವೆ. ದೇವಸ್ಥಾನದ ಗೋಡೆ ಬಿರುಕು ಬಿಟ್ಟಿದ್ದು . ಇದರಿಂದ ಅಂದಾಜು ಹಾನಿ 1,50,000 ರೂ ಆಗಿದೆ. ಈ ಘಟನೆಯಿಂದ ಯಾವುದೇ ಜೀವ ಹಾನಿ ಸಂಭವಿಸಿರುವುದಿಲ್ಲ. ಈ ಘಟನೆ 21/10/2021ರಂದು(ಗುರುವಾರ) ಸಂಜೆ 4-45ರ ಹೊತ್ತಿಗೆ ಸಂಭವಿಸಿದೆ.

ದೇಶದಲ್ಲಿ ದೊಡ್ಡದಾದ ಹೊಸ ಕೋವಿಡ್ ಅಲೆ ಬರುವ ಸಾಧ್ಯತೆಯಿಲ್ಲ- ತಜ್ಞರ ಹೇಳಿಕೆ

ಕೋವಿಡ್-2ನೇ ಅಲೆಯಂತಹ ವಿನಾಶಕಾರಿ ಅಲೆ ದೇಶದಲ್ಲಿ ಬರುವ ಸಾಧ್ಯತೆಯಿಲ್ಲ, ಆದರೆ,  ಪ್ರಕರಣಗಳ ಸಂಖ್ಯೆ ಕಡಿಮೆಯಾದ ಮಾತ್ರಕ್ಕೆ ಸಾಂಕ್ರಾಮಿಕ ಈಗ ಅಂತ್ಯವಾಯಿತು ಅಂತಾ ಭಾವಿಸುವುದಕ್ಕೆ ಅರ್ಥವಿಲ್ಲ ಎಂದು ಅನೇಕ ತಜ್ಞರು ಶುಕ್ರವಾರ ಹೇಳಿದ್ದಾರೆ.

Covid-19_Casual_Images1

ನವದೆಹಲಿ: ಕೋವಿಡ್-2ನೇ ಅಲೆಯಂತಹ ವಿನಾಶಕಾರಿ ಅಲೆ ದೇಶದಲ್ಲಿ ಬರುವ ಸಾಧ್ಯತೆಯಿಲ್ಲ, ಆದರೆ,  ಪ್ರಕರಣಗಳ ಸಂಖ್ಯೆ ಕಡಿಮೆಯಾದ ಮಾತ್ರಕ್ಕೆ ಸಾಂಕ್ರಾಮಿಕ ಈಗ ಅಂತ್ಯವಾಯಿತು ಅಂತಾ ಭಾವಿಸುವುದಕ್ಕೆ ಅರ್ಥವಿಲ್ಲ ಎಂದು ಅನೇಕ ತಜ್ಞರು ಶುಕ್ರವಾರ ಹೇಳಿದ್ದಾರೆ.

ದೀಪಾವಳಿ ಹಬ್ಬ ಮುಂದಿರುವಂತೆ ಪ್ರಕರಣಗಳ ಸಂಖ್ಯೆ ಹೆಚ್ಚಳದ ಮುನ್ನೆಚ್ಚರಿಕೆಯೊಂದಿಗೆ ಭರವಸೆ ನೀಡಿರುವ ತಜ್ಞರು, ಕೋವಿಡ್ ಗ್ರಾಫ್ ಇಳಿಕೆ ಕೇವಲ ಚಿತ್ರದ ಭಾಗವಾಗಿದೆ. ಮರಣ ಪ್ರಮಾಣದಂತಹ ಅಂಶಗಳನ್ನು ನೋಡಿದರೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡುವಿಕೆಯ ಅಗತ್ಯವಿದೆ. ಉದಾಹರಣೆಗೆ ಇಂಗ್ಲೆಂಡ್ ನಂತರ ರಾಷ್ಟ್ರಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


 

ದೇಶದಲ್ಲಿ 100 ಕೋಟಿ ಗೂ ಅಧಿಕ ಡೋಸ್  ಕೋವಿಡ್ ಲಸಿಕೆ ನೀಡಿಕೆ ಸಾಧನೆ ನಂತರ ಹೇಳಿಕೆ ನೀಡಿರುವ ವೈರಾಣು ಶಾಸ್ತ್ರಜ್ಞ ಶಾಹೀದ್ ಜಮೀಲ್, ಲಸಿಕೆ ಪ್ರಮಾಣದಲ್ಲಿ ಗಮನಾರ್ಹ ರೀತಿಯಲ್ಲಿ ಪ್ರಗತಿಯಾಗಿದೆ ಆದರೆ, ಇದು ಮತ್ತಷ್ಟು ಹೆಚ್ಚಾಗಬೇಕಾದ ಅಗತ್ಯಿವಿದೆ ಎಂದಿದ್ದಾರೆ.

ಇನ್ನೂ ಸಾಂಕ್ರಾಮಿಕ ಅಂತ್ಯಗೊಂಡ ಹಂತದಲ್ಲಿರುವುದಾಗಿ ನಾನು ಖಚಿತಪಡಿಸುವುದಿಲ್ಲ, 100 ಕೋಟಿ ಡೋಸ್ ಲಸಿಕೆ ನೀಡಿಕೆಯಲ್ಲಿ ಸಾಧನೆಗಾಗಿ ಸಂಭ್ರಮಿಸುತ್ತಿದ್ದು,ಇನ್ನೂ ಕೆಲವು ದೂರ ತಲುಪಬೇಕಾಗಿದೆ. ಸಾಂಕ್ರಾಮಿಕ ಅಂತ್ಯದತ್ತ ಸಾಗುತ್ತಿದ್ದೇವೆ. ಆದರೆ, ಇನ್ನೂ ನಿಯಂತ್ರಣವಾಗಿಲ್ಲ ಎಂದು ಹರಿಯಾಣದ ಅಶೋಕ ವಿಶ್ವವಿದ್ಯಾನಿಲಯದ ಅತಿಥಿ ಪ್ರೊಫೆಸರ್ ಜಮೀಲ್ ಹೇಳಿದ್ದಾರೆ.

ದೇಶದ ಕೆಲವು ಭಾಗಗಳಲ್ಲಿ ಸಾಂಕ್ರಾಮಿಕ ಅಂತ್ಯದ ಸನ್ನಿಹದಲ್ಲಿರುವ  ಸಾಧ್ಯತೆಯಿದೆ, ಆದರೆ ಇದನ್ನು ದೃಢೀಕರಿಸಲು ಅಗತ್ಯವಾದ ದತ್ತಾಂಶಗಳು ಸುಲಭವಾಗಿ ಲಭ್ಯವಿಲ್ಲ ಎಂದು ಭಾರತದ ಕೋವಿಡ್ ಗ್ರಾಫ್ ಅನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯುಕೆಯ  ಮಿಡ್ಲ್‌ಸೆಕ್ಸ್ ವಿಶ್ವವಿದ್ಯಾಲಯದ ಗಣಿತದ ಹಿರಿಯ ಉಪನ್ಯಾಸಕ ಮುರಾದ್ ಬಣಜಿ ಹೇಳುತ್ತಾರೆ.  

ಉದಾಹರಣೆಗೆ ಲಸಿಕೆ ಪಡೆದ ಎಷ್ಟು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ ಅಥವಾ ಅದಕ್ಕೂ ಮುಂಚಿನ ಸೋಂಕು  ಸೇರಿದಂತೆ ಹಲವಾರು ಅಂಶಗಳು ತಮಗೆ ತಿಳಿದಿಲ್ಲ, ಕೋವಿಡ್ -19 ಯಾವಾಗ ನಿರ್ಮೂಲನೆಯಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಇನ್ನೂ ಅದು ಹರಡದಂತೆ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದು ಬಜಣಿ ತಿಳಿಸಿದ್ದಾರೆ. 

“ಕೋವಿಡ್ -19 ದೇಶಕ್ಕೆ ಭವಿಷ್ಯದಲ್ಲಿ ಮಹತ್ವದ ಬೆದರಿಕೆಯನ್ನುಂಟುಮಾಡುತ್ತದೆಯೇ? ಎಂಬುದನ್ನು ನಿರ್ಧರಿಸಲು ನಾವು ಇನ್ನೂ ಎರಡು ತಿಂಗಳು ಕಾಯಬೇಕು ಎಂದು ನಾನು ನಂಬುತ್ತೇನೆ  ಎಂದು ವಾಷಿಂಗ್ಟನ್‌ನ ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್  ಅಂಡ್ ಪಾಲಿಸಿಯ ನಿರ್ದೇಶಕ ಲಕ್ಷ್ಮಿನಾರಾಯಣ ಅವರು ಪಿಟಿಐ ಸುದ್ದಿಸಂಸ್ಥೆಗೆ ಇಮೇಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *