punch- ಜೊತೆಗೆ ಸ್ಥಳಿಯ ಸುದ್ದಿಗಳು…

ಟಾಟಾ ‘ಪಂಚ್‌’ ಸಣ್ಣ ಎಸ್‌ಯುವಿ ಬುಕಿಂಗ್‌ ಆರಂಭ, ಕಾರಿನ ವಿಶೇಷತೆಗಳ ಮಾಹಿತಿ ಇಲ್ಲಿದೆ

ಎಸ್‌ಯುವಿ ವಲಯದಲ್ಲಿ ಹಲವು ವಿನೂತನ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಟಾಟಾ ಮೋಟಾರ್ಸ್‌ ಈಗ, ಟಾಟಾ ಪಂಚ್‌ ಎಂಬ ಸಣ್ಣ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. 

All-new Tata PUNCH launched

ಬೆಂಗಳೂರು: ಎಸ್‌ಯುವಿ ವಲಯದಲ್ಲಿ ಹಲವು ವಿನೂತನ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಟಾಟಾ ಮೋಟಾರ್ಸ್‌ ಈಗ, ಟಾಟಾ ಪಂಚ್‌ ಎಂಬ ಸಣ್ಣ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. 

ಇದು ಭಾರತದ ಮೊದಲ ಸಬ್‌-ಕಾಂಪಾಕ್ಟ್‌ ಅಂದರೆ ಸಣ್ಣ ಎಸ್‌ಯುವಿಯಾಗಿದೆ. ಇದರ ಬುಕಿಂಗ್‌ ಈಗಾಗಲೇ ಆರಂಭಗೊಂಡಿದ್ದು, ಜನರು 21 ಸಾವಿರ ರೂ. ಪಾವತಿಸಿ, ಆನ್‌ಲೈನ್‌ ಮೂಲಕ ಕಾಯ್ದಿರಿಸಬಹುದಾಗಿದೆ. ಕಡಿಮೆ ಬಜೆಟ್‌ನಲ್ಲಿ ಎಸ್‌ಯುವಿ ಮಾದರಿಯ ಕಾರನ್ನು ಇಷ್ಟಪಡುವ ಜನರಿಗೆ ಇದು ಉತ್ತಮ ಆಯ್ಕೆಯಾಗಲಿದೆ. ಇದನ್ನು ತಯಾರಿಸಲು ಭಾರತ, ಬ್ರಿಟನ್‌ ಹಾಗೂ ಇಟಲಿಯ ಟಾಟಾ ಮೋಟಾರ್ಸ್‌ ಡಿಸೈನ್‌ ಸ್ಟುಡಿಯೋಗಳು ಒಟ್ಟಾಗಿ ಕೆಲಸ ಮಾಡಿವೆಯಂತೆ. ಗಾತ್ರದಲ್ಲಿ ಸಣ್ಣದಾದರೂ, ಒಂದು ಸ್ಪೇಷಿಯಸ್‌ ಎಸ್‌ಯುವಿಯನ್ನು ನೀಡುವ ಗುರಿಯನ್ನು ಟಾಟಾ ಹೊಂದಿದೆ ಎನ್ನಲಾಗಿದೆ.

ಅಲ್ಫಾ ಆರ್ಕಿಟೆಕ್ಚರ್‌ ತಂತ್ರಜ್ಞಾನದಿಂದ ತಯಾರಾಗಿರುವ ಟಾಟಾ ಪಂಚ್, 3,827 ಮಿಲಿಮೀಟರ್‌ ಉದ್ದ, 1,945ಎಂಎಂ ಅಗಲ, 1,615ಎಂಎಂ ಉದ್ದ, 2,445ಎಂಎಂ ವೀಲ್ ಬೇಸ್, 366 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.  ಅಂತೆಯೇ 1.2 ಲೀಟರ್‌ ಪೆಟ್ರೋಲ್‌ ಇಂಜಿನ್ ಒಳಗೊಂಡಿದ್ದು, ಇದು ಎಸ್‌ಯುವಿಯ ಲುಕ್‌ ಹೊಂದಿದೆ ಹಾಗೂ ಹ್ಯಾಚ್ ಬ್ಯಾಕ್‌ನ ಗಾತ್ರ ಹೊಂದಿದೆ. ಆದರೆ, ಇದರ 187 ಮಿಮಿ ಗ್ರೌಂಡ್‌ ಕ್ಲಿಯರೆನ್ಸ್‌ ಇದನ್ನು ಎಸ್‌ಯುವಿ ವಿಭಾಗಕ್ಕೆ ಸೇರಿಸುತ್ತದೆ. ಗ್ರೈನೈಡ್‌ ಗ್ರೇ ಡಾಷ್‌ಬೋರ್ಡ್‌ ಇದೆ… ಸೀಟಿನ ತುಂಬೆಲ್ಲಾ ಟಾಟಾದ ಸಿಗ್ನೇಚರ್‌ ಟ್ರೈ ಆ್ಯರೋ ಪಾಟ್ರನ್‌ ಇದೆ.

ಟಾಟಾ ಪಂಚ್‌ ಅನ್ನು ಪುಣೆಯಲ್ಲಿ ಲೇಜರ್‌ ಬ್ರೇಜಿಂಗ್‌ನಂತಹ ತಂತ್ರಜ್ಞಾನ ಬಳಸಲಾಗಿದೆ. ಇದು ಪ್ಯೂರ್‌, ಅಡ್ವೆಂಚರ್‌ , ಅಕಂಪ್ಲಿಸ್ಡ್‌, ಕ್ರಿಯೇಟಿವ್ ಎಂಬ ನಾಲ್ಕು ಪರ್ಸೋನಾಗಳಲ್ಲಿ ಲಭ್ಯವಿರಲಿದೆ. ಇದು ಬಿಳಿ, ಕೇಸರಿ, ಕೆಂಪು ನೀಲಿ,ಗ್ರೇ, ಬ್ರಾನ್ಸ್‌, ಟ್ರಾಪಿಕಲ್‌ ಮಿಸ್ಟ್‌ ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಕೆಲವು ಎಸ್‌ಯುವಿಗಳಲ್ಲಿ ಕಪ್ಪು-ಬಿಳಿ ಬಣ್ಣಗಳ ಡ್ಯುಯಲ್‌ ಟೋನ್‌ ಸನ್‌ರೂಫ್‌ ಆಯ್ಕೆಗಳು ಕೂಡ ಇರಲಿವೆ.

ಸನ್ಮಾನ ಸಮಾರಂಭ
ಸಿದ್ದಾಪುರ, ಕಾನಸೂರು
ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಡಿ.ವಿ.ಹೆಗಡೆ ಹೊರಾಲೆ ಹಾಗೂ ನಿವೃತ್ತ ಮುಖ್ಯಾಧ್ಯಾಪಕಿ ಶ್ರೀಮತಿ ಶಾಂತಾ ಪ್ರಾತಃಕಾಲ ರಿಗೆ ಸಭಾಧ್ಯಕ್ಷ ಶ ಎಸ್. ಎಂ. ಹೆಗಡೆ ಕಾನ್ಸೂರು ಸನ್ಮಾನಿಸಿದರು. ಇಬ್ಬರು ಸನ್ಮಾನಿತರು ಮಾತನಾಡಿ ತಮ್ಮ ಅವಧಿಯಲ್ಲಿ ಸಹಕರಿಸಿದ ಎಲ್ಲರನ್ನೂ ಹೆಸರಿಸಿ ಧನ್ಯವಾದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶ್ರೀ ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ರೇಷ್ಮಾ ಗಣೇಶ ಹೆಗಡೆ ಹಾಗೂ ಎಸ್.ಎನ್.ಸುನಯ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಇವರನ್ನು ಸಂಸ್ಥೆಯ ಅಧ್ಯಕ್ಷ ಶ್ರೀ ಎಸ್. ಎಂ. ಹೆಗಡೆ ಕಾನಸೂರು ಸನ್ಮಾನಿಸಿದರು.
ಸನ್ಮಾನಿತ ವಿದ್ಯಾರ್ಥಿಗಳು ಮಾತನಾಡಿ ತಮ್ಮ ಈ ಸಾಧನೆಗೆ ಉತ್ತಮ ಶಿಕ್ಷಕ ವೃಂದ ಹಾಗೂ ಪಾಲಕರ ಪ್ರೋತ್ಸಾಹವೇ ಕಾರಣ ಎಂದರು. ವಿದ್ಯಾರ್ಥಿಗಳು ದಾಸರಾಗದೆ ಕಠಿಣ ಪರಿಶ್ರಮ ಆತ್ಮವಿಶ್ವಾಸ ಹಾಗೂ ಶ್ರದ್ಧೆಯಿಂದ ಅಭ್ಯಾಸಮಾಡಿ ಜೀವನದಲ್ಲಿ ನಿಶ್ಚಿತ ಗುರಿಯನ್ನು ತಲುಪಬಹುದೆಂದು ತಮ್ಮ ಬಾಲ್ಯವನ್ನು ನೆನೆಯುತ್ತ ಹಾಗೂ ಅಮೆರಿಕಾದ ಅನುಭವಗಳನ್ನು ಸೇರಿಸಿ ಡಾಕ್ಟರ್ ಕೆ.ಡಿ.ಭಟ್ ಯು.ಎಸ್.ಎ. ಮುಖ್ಯ ಅತಿಥಿಯಾಗಿ ನುಡಿದರು.
ಹಾಗೂ ಮಕ್ಕಳು ವಿನಯಶೀಲತೆ ಬೆಳೆಸಿಕೊಳ್ಳಬೇಕೆಂದರು.
ಆಡಳಿತ ಮಂಡಳಿಯ ಸದಸ್ಯರಾದ ಶಂಕರ ಭಾಗವತ್, ನಾಗೇಂದ್ರ ಮುತ್ಮುರ್ಡು, ಎಂ.ಡಿ. ಭಟ್ ಸನ್ಮಾನಿತರ ಗುಣಗಾನ ಮಾಡಿದರು. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಅಧ್ಯಾಪಕ ಜಿ.ಐ.ಹೆಗಡೆ ಸನ್ಮಾನಕ್ಕೆ ಪ್ರತಿಕ್ರಿಯಿಸಿದರು.
ಕಾರ್ಯದರ್ಶಿ ಕೆ.ಆರ್. ಹೆಗಡೆ ಸ್ವಾಗತಿಸಿದರು. ಮುಖ್ಯಾಧ್ಯಾಪಕಿ ಮೀನಾ ಬೋರ್ಕರ್ ವಂದಿಸಿದರು. ರಮೇಶ್ ಹೆಗಡೆ ಹಾಗೂ ಮಾರುತಿ ಕಾಕನೂರು ಕಾರ್ಯಕ್ರಮ ನಿರ್ವಹಿಸಿದರು.
ತರಬೇತಿ- ಮನುವಿಕಾಸ ಸಂಸ್ಥೆ, ಇಡಲ್ ಗೀವ್ ಮತ್ತು ದಲ್ಯಾನ್ ಫೌಂಡೇಶನ್ ಸಹಯೋಗದಲ್ಲಿ ಇಂದು ಲಯನ್ಸ್ ಕ್ಲಬ್ ಸಿದ್ದಾಪುರ ಬಾಲಭವನ ದಲ್ಲಿ ಸ್ವ ಸಹಾಯ ಸಂಘಗಳ ಪರಿಕಲ್ಪನೆ ತರಬೇತಿಯನ್ನ ಹಮ್ಮಿಕೊಂಡಿದ್ದು ಪ್ರಾಸ್ತಾವಿಕವಾಗಿ MG ಹೆಗಡೆ ಯವರು ಮನುವಿಕಾಸ ಸಂಸ್ಥೆಯ ಬಗ್ಗೆ ಮಾತನಾಡಿದರು. ಉದ್ಘಾಟಕರಾಗಿ ಮಹಿಳಾ ಸಾಂತ್ವನ ವೇದಿಕೆಯ ಅಧ್ಯಕ್ಷೆ ಶ್ರೀಮತಿ ವತ್ಸಲಾ ಹೆಗಡೆ ಹಾಗೂ KDCC ಬ್ಯಾಂಕಿನ ಶ್ರೀಮತಿ ಸುಮಿತ್ರಾ ಹಾಗೂ ಮನು ವಿಕಾಸ ಸಂಸ್ಥೆಯ MG ಹೆಗಡೆ, ಪ್ರಗತಿ ಮಿತ್ರ ಕೋ ಆಪರೇಟಿವ್ ನ ವಿನಯ್ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿದರು.
ಮಹಿಳಾ ಸಾಂತ್ವನ ವೇದಿಕೆಯ ಶ್ರೀಮತಿ ವತ್ಸಲ ಹೆಗಡೆ ಮಾತನಾಡಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಗಳಬಗ್ಗೆ ಹಾಗೂ ಅದರಿಂದ ಹೂರಬರಲು ಇರುವ ಕಾನೂನಿನ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಮಹಿಳಾ ಸಹಾಯ ವಾಣಿ ಸಂಖ್ಯೆ ಯನ್ನು ನೀಡಿದರು , ಮಹಿಳೆಯರು ಆರ್ಥಿಕವಾಗಿ ಸಾಮಾಜಿಕ ವಾಗಿ ಮುಂದೆಬರಲು ಸ್ವ ಸಹಾಯ ಸಂಘ ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ತಿಳಿಸಿದರು . ಹಾಗೆಯೇ KDCC ಬ್ಯಾಂಕಿನ ಸುಮಿತ್ರಾ ಮೇಡಂ ಮಾತನಾಡಿ ಬ್ಯಾಂಕಿ ನಿಂದ ಮಹಿಯೆಯರಿಗೆ ಸಿಗುವ ಸಾಲ ಸೌಲಭ್ಯ ದ ಕುರಿತು ಸಮಗ್ರ ಮಾಹಿತಿ ನೀಡಿದರು .
ಮಹಿಳಾ ಸ್ವ ಸಹಾಯ ಸಂಘ ದವರಿಗೆ ಬ್ಯಾಗ್ ನ್ನು ವಿತರಿಸಲಾಯಿತು. ಸಂಸ್ಥೆಯ MG ಹೆಗಡೆ ಸ್ವ ಸಹಾಯ ಮಹಿಳಾ ಸದಸ್ಯರಿಗೆ ಮನುವಿಕಾಸ ಸಂಸ್ಥೆ ಯಿಂದ ಸಿಗುವ , ಕೆರೆ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಸ್ವ ಉದ್ಯೋಗ ತರಬೇತಿ,ಹಾಗೂ ಸಂಘ ಗಳ ನಿರ್ವಹಣೆಯ ಕುರಿತು ಸಮಗ್ರವಾಗಿ ಮಾಹಿತಿಯನ್ನು ನೀಡಿದರು . ಸಂಸ್ಥೆಯ ಪುನೀತ್ ಸ್ವಾಗತಿಸಿದರು , ರವಿ ಸರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಇದರ 90 ಡಿಗ್ರಿ ಓಪನ್‌ ಆಗುವ ಡೋರ್‌ಗಳು, ಹಾಗೂ ಸ್ಪೇಷಿಯಸ್‌ ಲೆಗ್‌ ರೂಂ ಎಲ್ಲಾ ವಯಸ್ಸಿನ ಜನರಿಗೆ ಆರಾಮದಾಯಕ ಪ್ರಯಾಣ ಒದಗಿಸುತ್ತದೆ. 7 ಇಂಚಿನ ಹಿಂದಿನ ಸೀಟಿನಲ್ಲಿ 3 ಪ್ರಯಾಣಿಕರು ಅರಾಮಾಗಿ ಕುಳಿತುಕೊಳ್ಳಬಹುದಾಗಿದೆ.

ಇದಲ್ಲದೆ, ಎಲ್‌ಇಡಿ ಟೈಲ್‌ಲ್ಯಾಂಪ್‌, ಟಚ್‌ ಸ್ಕ್ರೀನ್ ಇನ್ಫೊಟೈನ್‌ಮೆಂಟ್‌, ನ್ಯಾಚುರಲ್‌ ವಾಯ್ಸ್‌ ರೆಕನ್ಷಿಷನ್‌ ಟೆಕ್ನಾಲಜಿ, ಅಡ್ವಾನ್ಸ್‌ ಅಡ್ರೆಸಿಂಗ್‌ ಸಿಸ್ಟಮ್‌ ಹಾಗೂ ಎರಡು ಏರ್‌ಬ್ಯಾಗ್‌, ಎಬಿಎಸ್‌, ಬ್ರೇಕ್‌ ಸ್ವೇ ಕಂಟ್ರೋಲ್, ಪ್ಯಾರಾಮೆಟ್ರಿಕ್‌ ಅಲಾರ್ಮ್ ಸಿಸ್ಟಮ್‌, ಸೀಟ್‌ ಬೆಲ್ಟ್‌ ಅಲಾರ್ಮ್‌ಗಳು ಇದನ್ನು ಐಷಾರಾಮಿ ಹಾಗೂ ಸುರಕ್ಷಾ ವಾಹನವನ್ನಾಗಿಸುತ್ತದೆ.

ಇದರಲ್ಲಿ ಒಂದು ಸ್ಪೇರ್‌ ಚಕ್ರದ ಜೊತೆಗೆ, ಟೈರ್‌ ಪಂಕ್ಚರ್‌ ಸರಿಪಡಿಸುವ ಉಪಕರಣಗಳನ್ನು ಕೂಡ ನೀಡಲಾಗುತ್ತದೆ. ಟಾಟಾಮೊಟಾರ್ಸ್‌ ಪ್ರಕಾರ, ಅಕ್ಟೋಬರ್‌ ತಿಂಗಳಲ್ಲಿ ಈ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದರ ನಿರ್ದಿಷ್ಟ ದರ ಕೂಡ ಮುಂದಿನ ದಿನಗಳಲ್ಲಿ ಬಹಿರಂಗಗೊಳ್ಳಲಿದೆ. ಈಗ 5ರಿಂದ 6 ಲಕ್ಷ ರೂ. ಶೋರೂಂ ದರ ಎಂದು ಹೇಳಲಾಗುತ್ತಿದೆ. (kpc)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *