ಸಿದ್ಧಾಪುರದಲ್ಲಿ 25 ಸಾ. ಮೌಲ್ಯದ ಗಾಂಜಾದೊಂದಿಗೆ ಆರೋಪಿ ವಶ

ಗಾಂಜಾ ದಾಸ್ತಾನಿನ ಇನ್ನೊಂದು ಪ್ರಕರಣ ಸಿದ್ಧಾಪುರದಲ್ಲಿ ಪತ್ತೆಯಾಗಿದೆ. ವಿವರ ಹೀಗಿದೆ. ಕೆರೆಗದ್ದೆ ಮೇಲಿನ ಸರಕುಳಿಯ ಕಟ್ಯಾ ಮಾಚಾ ಗೌಡ ಬೀಜ ಮತ್ತು

ಹೂವುಗಳ ಒಣ ಗಾಂಜಾ ಸಂಗ್ರಹಿಸಿಟ್ಟಿ ದ್ದು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಶಿರಸಿಯ ಅಬಕಾರಿ ಇಲಾಖೆ ಅಧಿಕಾರಿಗಳು ಮಾಲು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿವರ ಹೀಗಿದೆ.

ದಿನಾಂಕ:02_11_2021ರಂದು ರಾತ್ರಿ 9__45 ಗಂಟೆಗೆ ಸಿದ್ದಾಪುರ ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರೆಗದ್ದೆ, ಮೇಲಿನ ಸರಕುಳಿ ಗ್ರಾಮದ ನಿವಾಸಿಯಾದ ಕಟ್ಯಾ ಮಾಚ ಗೌಡ ಮನೆಯಲ್ಲಿ ದಾಳಿ ನಡೆಸಲಾಗಿ, ಸದರಿ ಆರೋಪಿಯು ತನ್ನ ಮನೆಯ ಒಳಗಡೆ ಇಡಲಾಗಿರುವ ಟೆಲಿವಿಷನ್‌ ಸೆಟ್ ನ ಹಿಂಭಾಗದಲ್ಲಿ ಎರಡು ಚೀಲಗಳಲ್ಲಿ ಬೀಜ ಮತ್ತು ಹೂವುಗಳನ್ನು ಒಳಗೊಂಡ ಒಣ ಗಾಂಜಾವನ್ನು ಹೊಂದಿರುವುದು ಕಂಡು ಬಂದಿರುತ್ತದೆ.. ಚೀಲಗಳಲ್ಲಿ ಇದ್ದ ಮಾದಕ ವಸ್ತುಗಳನ್ನು ಡಿಜಿಟಲ್ ತೂಗು ಯಂತ್ರದಲ್ಲಿ ತೂಗಲಾಗಿ, ಒಂದನೆಯ ಚೀಲದಲ್ಲಿ 483 ಗ್ರಾಮ್ ಹಾಗೂ ಇನ್ನೊಂದು ಚೀಲದಲ್ಲಿ 360 ಗ್ರಾಮ್ ಈ ರೀತಿಯಲ್ಲಿ ಒಟ್ಟು 843 ಗ್ರಾಮ್ ಮಾದಕ ವಸ್ತುವನ್ನು ಮಾರಾಟಕ್ಕಾಗಿ ಹೊಂದಿರುವುದನ್ನು ಪತ್ತೆಹಚ್ಚಿ ಅವುಗಳನ್ನು ಜಪ್ತುಪಡಿಸಿ, ಆರೋಪಿಯನ್ನು ದಸ್ತಗೀರ್ ಮಾಡಿ, ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ..

ದಾವಣಗೆರೆ: 67 ಕೆಜಿ ಪಂಗೋಲಿನ್ ಚಿಪ್ಪು ವಶ, 18 ಮಂದಿ ಬಂಧನ

ಶಿವಮೊಗ್ಗ ರಸ್ತೆಯ ಹರಿಹರದ ಬಳಿಯ ಡಾಬಾದಿಂದ ಸುಮಾರು 67 ಕೆಜಿ ಪಂಗೋಲಿನ್ ಚಿಪ್ಪುಗಳನ್ನು ಸಾಗಿಸುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

Davangere DCRB police team with the seized pangolin scales

ದಾವಣಗೆರೆ: ಶಿವಮೊಗ್ಗ ರಸ್ತೆಯ ಹರಿಹರದ ಬಳಿಯ ಡಾಬಾದಿಂದ ಸುಮಾರು 67 ಕೆಜಿ ಪಂಗೋಲಿನ್ ಚಿಪ್ಪುಗಳನ್ನು ಸಾಗಿಸುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮದ ಬಗ್ಗೆ ಮಾಹಿತಿ ಪಡೆದ ಡಿಸಿಆರ್‌ಬಿ ಡಿಎಸ್‌ಪಿ ಬಿ.ಎಸ್.ಬಸವರಾಜು ಮತ್ತು ತಂಡ ಶಿವಬಸವ ಡಾಬಾ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಎರಡು ವ್ಯಾನ್‌ಗಳಲ್ಲಿ ಪ್ಯಾಂಗೋಲಿನ್ ಸ್ಕೇಲ್ ಸಾಗಿಸುತ್ತಿರುವುದು ಪತ್ತೆಯಾಗಿದೆ.  ಇದರೊಂದಿಗೆ 18 ಮಂದಿಯನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚೀನಾ ಔಷಧಿಗೆ ಮುಳ್ಳುಹಂದಿ ಚಿಪ್ಪು ಬಳಕೆ ಮಾಡುವುದರಿಂದ ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಈ ದಂಧೆ ನಡೆಯುತ್ತಿದ್ದು, ಹೀಗಾಗಿ ಅಳಿವಿನಂಚಿನಲ್ಲಿರುವ ಈ ಸಸ್ತನಿಯನ್ನು ರಕ್ಷಿಸಬೇಕಾಗಿದೆ. (ಕ.ಪ್ರ.ಡಾ.)

ಶ್ರೀಮತಿ ಶೈಲಜಾ ಕೋಟೆ, ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮಂಗಳೂರು ವಿಭಾಗ ರವರ ನಿರ್ದೇಶನದಂತೆ, ವನಜಾಕ್ಷಿ ಎಮ್. ಅಬಕಾರಿ ಉಪ ಆಯುಕ್ತರು ಉ.ಕ. ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಲ್ಲಿ, ಮಹೇಂದ್ರ ಎಸ್. ನಾಯ್ಕ ಅಬಕಾರಿ ಉಪ_ ಅಧೀಕ್ಷಕರು(ಪ್ರಭಾರ)ಉಪ -ವಿಭಾಗ ಶಿರಸಿ ಇವರ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಜ್ಯೋತಿಶ್ರೀ ಜಿ. ನಾಯ್ಕ ಅಬಕಾರಿ ನಿರೀಕ್ಷಕರು ಶಿರಸಿ ವಲಯ ಇವರು ಪ್ರಕರಣ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿಕೊಂಡಿದ್ದು, ದಾಳಿಯಲ್ಲಿ ಡಿ. ಎನ್. ಶಿರಸಿಕರ ಅಬಕಾರಿ ಉಪ-ನಿರೀಕ್ಷಕರು ಶಿರಸಿ ವಲಯ, ಸಿಬ್ಬಂದಿಗಳಾದ ನಿರ್ಮಲಾ ಎಮ್. ನಾಯ್ಕ ಪ್ರಸನ್ನ ಯು. ನೇತ್ರಕರ್, ಬಸವರಾಜ ಒಂಟಿ, ಗಂಗಾಧರ vi ಕಲ್ಲೇದ್,ಕುಮಾರೇಶ್ವರ ಅಂಗಡಿ,ಸವಿತಾ ಎಸ್. ಲಂಕೇರ ಹಾಗೂ ವಾಹನ ಚಾಲಕರಾದ ಎನ್. ಕೆ. ವೈದ್ಯ ಮತ್ತು ಬಿ. ಎಮ್. ಗಾಯಕವಾಡ ಇವರುಗಳು ಪಾಲ್ಗೊಂಡಿದ್ದರು… ಜಪ್ತು ಪಡಿಸಿದ ಗಾಂಜಾ ದ ಅಂದಾಜು ಮೌಲ್ಯ 25000ರೂಪಾಯಿಗಳು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *