ಸ್ಫೀಕರ್‌ ಕಾಗೇರಿ ಕ್ಷೇತ್ರದಲ್ಲಿ ಪೊಲೀಸ್‌ ದಬ್ಬಾಳಿಕೆ? ಬಿ.ಜೆ.ಪಿ.,ಕಾಂಗ್ರೆಸ್‌ ಜೊತೆಯಾಗಿ ಪ್ರತಿಭಟನೆ!

ಶಿರಸಿ ಕ್ಷೇತ್ರದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮತೀಯವಾದಿ ದಬ್ಬಾಳಿಕೆ ವಿರುದ್ಧ ಒಂದಾಗಿರುವ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಪ್ರಮುಖರು ಇಲ್ಲಿಯ ಅಧಿಕಾರಶಾಹಿ ಹಿಂಸೆಯ ವಿರುದ್ಧ ಇತರ ಪಕ್ಷಗಳನ್ನೂ ಸೇರಿಸಿಕೊಂಡು ಪಕ್ಷಾತೀತವಾಗಿ ಸಾರ್ವಜನಿಕ ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಮಾಹಿತಿ ದೊರೆತಿದೆ.

ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಪ್ರತಿನಿಧಿಸುವ ಶಿರಸಿ ಕ್ಷೇತ್ರದಲ್ಲಿ ಪೊಲೀಸ್‌ ದಬ್ಬಾಳಿಕೆ ಪ್ರಾರಂಭವಾಗಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ತಮಗೆ ಬೇಕಾದ ಅಧಿಕಾರಿಗಳನ್ನು ಕ್ಷೇತ್ರಕ್ಕೆ ಕರೆತರುವ ಶಾಸಕರು ಮೇಲ್ನೋಟಕ್ಕೆ ಅಧಿಕಾರಿಗಳಿಗೆ ತೊಂದರೆ ಕೊಡದೆ ಸಭ್ಯರಂತೆ ವರ್ತಿಸಿ ಹಿಂದಿನಿಂದ ಪೊಲೀಸ್‌ ರಾಜ್‌, ವಸೂಲಿ ರಾಜ್‌ ವ್ಯವಸ್ಥೆ ಪೋಶಿಸುತಿದ್ದಾರೆ ಎಂದು ಶಿರಸಿ-ಸಿದ್ಧಾಪುರದ ಜನ ಚರ್ಚಿಸುವಂತಾಗಿದೆ. ನಾಲ್ಕೈದು ವರ್ಷದ ಹಿಂದೆ ಕಾಗೇರಿಯ ಆಪ್ತ ಪೊಲೀಸ್‌ ಇನ್ಸಪೆಕ್ಟರ್‌ ಒಬ್ಬರು ಅಮಾಯಕ ಹವ್ಯಕರ ಕೊಲೆ ಕೇಸಿನಲ್ಲಿ ನಾಟಕ ಆಡಿದ್ದರು. ಈ ಅಧಿಕಾರಿಯ ಹಿಂದೆ ಬಿದ್ದ ವಕೀಲರೊಬ್ಬರು ಪೊಲೀಸ್‌ ಇನ್ಸಫೆಕ್ಟರ್‌ ರನ್ನು ಅಮಾನತು ಮಾಡಿಸಿ ಶಾಸಕರ ವಸೂಲಿ ದಂಧೆಗೆ ಬಿಸಿ ಮುಟ್ಟಿಸಿದ್ದರು. ಇದಾದ ನಂತರ ಶಿರಸಿ ಕ್ಷೇತ್ರದಲ್ಲಿ ಅಧಿಕಾರಿಗಳು ವಸೂಲಿಗೆ,ಅಧಿಕಾರ ದುರುಪಯೋಗಕ್ಕೆ ಹೆದರುವಂತಾಗಿತ್ತು. ಆದರೆ ಈಗ ಶಿರಸಿ-ಸಿದ್ಧಾಪುರಗಳಲ್ಲಿ ಅಧಿಕಾರಿಗಳ ಅಂಧಾದರ್ಬಾರ್‌ ನಿಂದಾಗಿ ಜನಸಾಮಾನ್ಯರು ಗೋಳಾಡುವಂತಾಗಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

ಇದೇ ತಿಂಗಳ ಪ್ರಾರಂಭದಲ್ಲಿ ಸಿದ್ಧಾಪುರ ಬಿಳಗಿಯಲ್ಲಿ ನಡೆದ ದನದ ವ್ಯಾಪಾರಿಯೊಬ್ಬರ ಹಲ್ಲೆಯ ವಿಚಾರದಲ್ಲಿ ಪೊಲೀಸರು ಆಡಳಿತ ಪಕ್ಷ ಮತ್ತು ಶಾಸಕರ ಪರವಾಗಿ ಕೆಲಸ ಮಾಡಿ ಗೋವಿಂದ ಗೌಡರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಲಾಗಿತ್ತು. ಈ ಪ್ರಕರಣದ ಆರೋಪಿಗಳ ರಕ್ಷಣೆ ಮಾಡುತ್ತಿರುವ ಸ್ಥಳೀಯ ಪೊಲೀಸರ ಅನ್ಯಾಯ ನಿಯಂತ್ರಿಸಬೇಕೆಂದು ಸಮಾಜವಾದಿ ಪಕ್ಷ ರಾಜ್ಯಪಾಲರಿಗೆ ದೂರು ನೀಡಿತ್ತು.

ಈ ಪ್ರಕರಣದಲ್ಲಿ ಪೊಲೀಸರ ಎದುರೇ ಗೂಂಡಾಗಿರಿ ಪ್ರದರ್ಶಿಸಿದ ವಿಧಾನಸಭಾ ಅಧ್ಯಕ್ಷ ಕಾಗೇರಿಯವರ ಆಪ್ತರ ಮೇಲೆ ನಾಮಕಾವಸ್ಥೆ ದೂರು ದಾಖಲಿಸಿ ಕೋಮುವಾದಿಗಳನ್ನು ರಕ್ಷಣೆ ಮಾಡಿರುವ ಬಗ್ಗೆ ಸಿದ್ಧಾಪುರ ಪೊಲೀಸರ ವಿರುದ್ಧ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇದಾಗಿ ಸರಿಯಾಗಿ ಎರಡು ವಾರ ಕಳೆದಿಲ್ಲ. ಸಾಮಾನ್ಯ ಅಪಘಾತದ ಪ್ರಕರಣವನ್ನು ಜಾತಿ ನಿಂದನೆ ಎಂದು ದೂರು ದಾಖಲಿಸಿ ಶಾಸಕರ ವಿರೋಧಿಸಿಗಳನ್ನು ಬಂಧಿಸಿರುವ ಬಗ್ಗೆ ಉಗ್ರರಾಗಿರುವ ಸ್ಥಳೀಯ ನಾಯಕರು ಪೊಲೀಸರ ವರ್ತನೆ ಖಂಡಿಸಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ್ದರು. ಹೀಗೆ ಶಾಸಕರು, ಸಂಸದರಿಗೆ ಬೇಕಾದವರಿಗೆ ಒಂದು ನ್ಯಾಯ, ಅನ್ಯರಿಗೇ ಒಂದು ನ್ಯಾಯ ಮಾಡುತ್ತಿರುವ ಬಗ್ಗೆ ಸಾರ್ವಜನಿಕರ ವಿರೋಧ ವ್ಯಕ್ತವಾಗಿದೆ.

ಶಿರಸಿ-ಸಿದ್ಧಾಪುರದ ರಾಜಕೀಯ ಬೆಳವಣಿಗೆಯಿಂದ ಕಂಗೆಟ್ಟು ಹತಾಶರಾಗಿರುವ ಸ್ಫೀಕರ್‌ ಕಾಗೇರಿ ಅಧಿಕಾರಿಗಳ ಮೂಲಕ ಬಹುಸಂಖ್ಯಾತರು, ಜನಸಾಮಾನ್ಯರನ್ನು ಹಿಂಸಿಸುತಿದ್ದಾರೆ. ಈ ರಾಜಕೀಯ ದ್ವೇಶಕ್ಕೆ ಅಧಿಕಾರಿಗಳು ದಾಳವಾಗುತಿದ್ದಾರೆ ಎನ್ನುವ ಅರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *