![](https://i0.wp.com/samajamukhi.net/wp-content/uploads/2021/11/vasare-sharana.jpg?resize=820%2C500&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
![Thumbnail image](https://www.etvbharat.com/_next/image?url=https%3A%2F%2Fetvbharatimages.akamaized.net%2Fetvbharat%2Fprod-images%2F768-512-13697859-thumbnail-3x2-kannadasahityaparishatelection.jpg&w=3840&q=75)
ಉತ್ತರ ಕನ್ನಡ ಕಸಾಪ ಚುನಾವಣೆ : ಬಿ ಎನ್ ವಾಸರೆಗೆ ದಾಖಲೆಯ ಗೆಲುವು
ಉತ್ತರಕನ್ನಡ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ (Kannada Sahitya Parishat Election) ಪತ್ರಕರ್ತ, ಸಾಹಿತಿ ಬಿ ಎನ್ ವಾಸರೆ ಅವರು 1573 ಮತಗಳ ಭಾರಿ ಅಂತರದಿಂದ ಗೆಲುವು ದಾಖಲಿಸಿದ್ದಾರೆ..
ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ (Kannada Sahitya Parishat Election) ನಡೆದ ಚುನಾವಣೆಯಲ್ಲಿ ಪತ್ರಕರ್ತ, ಸಾಹಿತಿ ಬಿ ಎನ್ ವಾಸರೆ ಭರ್ಜರಿ ಗೆಲುವು ಸಾಧಿಸಿದ್ದಾರೆ.
![](https://i0.wp.com/samajamukhi.net/wp-content/uploads/2021/11/vasare-sharana.jpg?resize=760%2C752&ssl=1)
ಬಿ ಎನ್ ವಾಸರೆ ಒಟ್ಟು 1,897 ಮತಗಳನ್ನು ಪಡೆದು ಗೆಲುವು ಪಡೆದರು. ವೇಣುಗೋಪಾಲ ಮದ್ಗೂಣಿ ಅವರು 324 ಮತ ಪಡೆಯುವ ಮೂಲಕ ಸೋಲನುಭವಿಸಿದರು. ಜಿಲ್ಲೆಯಲ್ಲಿ ಒಟ್ಟು 4,747 ಮತಗಳಿದ್ದು, ಅದರಲ್ಲಿ 2810 ಮತಗಳು ಚಲಾವಣೆಗೊಂಡಿದ್ದವು.
ಕಳೆದ ಭಾರಿ ಅರವಿಂದ ಕರ್ಕಿಕೋಡಿ ವಿರುದ್ಧ ಕೇವಲ 7 ಮತಗಳ ಅಂತರದಿಂದ ಕಸಾಪ ಚುನಾವಣೆಯಲ್ಲಿ ಪರಾಭವಗೊಂಡಿದ್ದ ವಾಸರೆ ಅವರು, ಈ ಬಾರಿ ದಾಖಲೆಯ ಅಂತರದ ಗೆಲುವು ದಾಖಲಿಸಿದ್ದಾರೆ. (etbk)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)