ಸಿರಿವಂತೆಯ ಚಿತ್ರಸಿರಿ ಮತ್ತು ಕಣ್ತೆರೆಯುವ ಬುದ್ಧ

ಸಾಗರದಿಂದ ಜೋಗ್ ಗೆ ಹೋಗುವ ಬೆಂಗಳೂರು-ಹೊನ್ನಾವರ ರಸ್ತೆಯಲ್ಲಿ ಸಿರಿವಂತೆ ಎಂಬ ಪುಟ್ಟ ಊರಿದೆ. ಸಾಗರದಿಂದ ಕೇವಲ ಏಳು ಕೀ. ಮೀ. ಇಲ್ಲಿ ಸಾಗರದಿಂದ ಬರುವಾಗ ಎಡಕ್ಕೆ ನೋಟ ಹರಿಸಿದರೆ “ಚಿತ್ರ ಸಿರಿ” ನಾಮಫಲಕವಿರುವ ಪುಟ್ಟ ಕಟ್ಟಡ ಕಾಣಿಸುತ್ತದೆ. ಪಕ್ಕದಲ್ಲೇ ಮತ್ತೊಂದು ಕಟ್ಟಡದಲ್ಲಿ “ಕಣ್ತೆರೆಯುವ ಬುದ್ಧ” ನ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ….ಇದು ಸಿರಿವಂತೆಯ ಚಂದ್ರಶೇಖರ ಎನ್. ಇವರ ಪರಿಕಲ್ಪನೆಯಲ್ಲಿ ಅನಾವರಣಗೊಂಡಿರುವ ಒಂದು ಸುಂದರ ತಾಣ. ಕಳೆದ ಮೂರು ದಶಕಗಳಿಂದ ಹಸೆಕಲೆಯಲ್ಲಿ ನೈಪುಣ್ಯ ಸಾಧಿಸಿರುವ ಚಂದ್ರಶೇಖರ ಹಾಗೂ ಅವರ ಮಡದಿ ತಯಾರಿಸುವ ಹಲವು ಹಸೆಕಲೆಯ ಚಿತ್ರಗಳು, ವಿವಿಧ ರೀತಿಯ ಭತ್ತದ ತೋರಣಗಳು, ಸುಂದರ ಚಿತ್ತಾರವಿರುವ ಕರಕುಶಲ ವಸ್ತುಗಳು ಇಲ್ಲಿ ಪ್ರದರ್ಶನ ಮತ್ತು ಮಾರಾಟಗೊಳ್ಳುತ್ತಿವೆ. ಸಾಂಪ್ರದಾಯಿಕ ಜಾನಪದ ಕಲೆಯನ್ನು ಉಳಿಸುವ, ಬೆಳೆಸುವ ನೆಲೆಯಲ್ಲಿ ಚಂದ್ರಶೇಖರ ಅವರ ಈ ಕಾರ್ಯ ಅಭಿನಂದನೀಯ…

“ಕಣ್ತೆರೆಯುವ ಬುದ್ಧ” ಈಗ ಒಂದು ವರ್ಷದ ಹಿಂದೆ ಸ್ಥಾಪನೆಯಾಗಿದ್ದು, ಇದು ಚಂದ್ರಶೇಖರ ಅವರ ಒಂದು ವಿಭಿನ್ನ ಪರಿಕಲ್ಪನೆ. ಬುದ್ಧ ಕಣ್ತೆರೆಯುವುದನ್ನು ನೋಡುವ ಮೊದಲು, ಚಂದ್ರಶೇಖರ ಹತ್ತು ನಿಮಿಷಗಳ ಕಾಲ ಪುಟ್ಟ ಉಪನ್ಯಾಸ ನೀಡುತ್ತಾರೆ. ಇದು ಅನೇಕ ವೈಚಾರಿಕ, ಮಾಹಿತಿಪೂರ್ಣ ವಿವರಗಳನ್ನು ಹೊಂದಿರುವುದು ವಿಶೇಷ. ಈ ಸರಳ, ಸುಂದರ ಉಪನ್ಯಾಸ ಕೇಳಿದ ನಂತರ ಬುದ್ಧ ಒಂದು ನಿಮಿಷ ಕಣ್ತೆರೆದು ಮುಚ್ಚಿದುದನ್ನು ನೋಡಿದಾಗ ನಮ್ಮೊಳಗೇ ಒಂದು ವಿಶಿಷ್ಟ ಅನುಭೂತಿ ಉಂಟಾಗುತ್ತದೆ…ಈ ಸಾಗರ-ಹೊನ್ನಾವರ ರಸ್ತೆಯಲ್ಲಿ ಸಾಗುವಾಗ ಕೆಲಕಾಲ ಇಲ್ಲಿ ವ್ಯಯಿಸಿದರೆ ಒಂದು ಸುಂದರ ಅನುಭವ ನಮ್ಮದಾಗುವುದರಲ್ಲಿ ಸಂದೇಹವಿಲ್ಲ. ಸರಳ, ಸಜ್ಜನ ಚಂದ್ರಶೇಖರ ಅವರ ಪರಿಚಯ ಕೂಡ ಸಂತೋಷ ನೀಡುವ ಸಂಗತಿ…✍️ಗಜಾನನ ಮಹಾಲೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳಿಂದ ಸುಸ್ಥಿರ ಅಭಿವೃದ್ಧಿ… ಅರಶಿನಗೋಡು ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಸಂಪನ್ನ

ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶಿಕ್ಷಣ ಮತ್ತು ಉದ್ಯೋಗ ಗಳಿಗೆ ಹೆಚ್ಚಿನ ಮಹತ್ವ ನೀಡಿದರೆ ಹೊಸ ಪೀಳಿಗೆ ಮಹತ್ವದ್ದನ್ನು ಸಾಧಿಸಲು ಸಾಧ್ಯ ಎಂದಿರುವ ಶಾಸಕ ಭೀಮಣ್ಣ ನಾಯ್ಕ...

ಬಿ.ಜೆ.ಪಿ. & ಕಾಂಗ್ರೆಸ್‌ ಗಳಿಂದ ತುಷ್ಟೀಕರಣದ ಸ್ಫರ್ಧೆ… ಕಾಂಗ್ರೆಸ್‌ ಬಸ್ಮಾಸುರ,ಬಿ.ಜೆ.ಪಿ. ಬಕಾಸುರ….

ಮುಸ್ಲಿಂ ಅಲ್ಪಸಂಖ್ಯಾತರನ್ನು ಒಲೈಸುವಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್‌ ಗಳು ಸ್ಫರ್ಧೆ ನಡೆಸಿದ್ದು ಅಪಾಯಕಾರಿ ನಡೆಗಳಲ್ಲಿ ಎರಡೂ ಪಕ್ಷಗಳೂ ಒಂದೇ ನಾಣ್ಯದ ಎರಡು ಮುಖಗಳಿಂತಿವೆ ಎಂದು...

ಬಹಿರಂಗ ಶುದ್ಧಿ ಜೊತೆಗೆ ಅಂತರಂಗ ಶುದ್ಧಿ ಮಹತ್ವ

ಸಿದ್ದಾಪುರದಲ್ಲಿ ಪವಿತ್ರ ರಂಜಾನ್ ಸಂಭ್ರಮಾಚರಣೆಸಿದ್ದಾಪುರ :31ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಆಚರಿಸಿದ ಮುಸ್ಲಿಮ್ ಬಾಂಧವರು ಪವಿತ್ರ ರಂಜಾನ್ (ಈದ್ ಉಲ್ ಫಿತ್ರ )ಹಬ್ಬವನ್ನು...

samajamukhi.net exclusive- ಇಂದು ಕರ್ನಾಟಕ….ಪತ್ರಕರ್ತ ವಿಶ್ವಾಮಿತ್ರ ಹೆಗಡೆ ವಿಧಿವಶ,ಶಿರಸಿಗೆ ಬಾರದ ಗೃಹಸಚಿವ,ಹಳದೋಟದಲ್ಲಿ ನಡೆಯಿತು ಸೇನಾವಿಧಿ!

ಶಿರಸಿಯ ಹಿರಿಯ ಪತ್ರಕರ್ತ ವಿಶ್ವಾಮಿತ್ರ ಹೆಗಡೆ ಭತ್ತಗುತ್ತಿಗೆ ಇಂದು ವಿಧಿವಶರಾಗಿದ್ದಾರೆ. ಪ್ರತಿಷ್ಠಿತ ಭತ್ತಗುತ್ತಿಗೆ ಕುಟುಂಬದ ವಿಶ್ವಾಮಿತ್ರ ಹೆಗಡೆ ಕನ್ನಡಪ್ರಭ,ವಿಶ್ವವಾಣಿ ಸೇರಿದಂತೆ ಕೆಲವು ಪತ್ರಿಕೆಗಳಲ್ಲಿ ಕೆಲಸಮಾಡಿದ್ದರು....

ಸೈನಿಕ ಸುರೇಶ್‌ ನಾಯ್ಕ ಸಾವು

ಕೆಂದ್ರ ರಕ್ಷಣಾ ಪಡೆ ಸಿ.ಆರ್.ಪಿ.ಎಫ್.‌ ನಲ್ಲಿ ಸಹಾಯಕ ಸಬ್‌ ಇನ್ಫೆಕ್ಟರ್‌ ಆಗಿ ಸೇವೆಯಲ್ಲಿದ್ದ ಸುರೇಶ್‌ ಮೂಕಾ ನಾಯ್ಕ ಹಳದೋಟ ರವಿವಾರ ಬೆಂಗಳೂರಿನ ಆಸ್ಫತ್ರೆಯಲ್ಲಿ ನಿಧನರಾದರು....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *