

———————— ಬದುಕು ಬದಲಾಗಬೇಕು

ಕಾಲಕ್ಕೆ ತಕ್ಕಂತೆ ಬದಲಾದ ಬದುಕಲ್ಲಿ ಬಲವಾದ ಗುರಿ ಇರಬೇಕು
ಅದರೊಳಗೆ ಗರಿಬಿಚ್ಚಿ ಹಾರಾಡುವಂತಿರಬೇಕು
ಸುಳಿವ ಗಾಳಿಯಂತಿರಬೇಕು
ತಂಪು ಸೂಸಿ ಸೈ ಎನಿಸಿಕೊಳ್ಳುವಂತೆ ಬಳಸಿ ಅಲುಗಾಡಿದರೂ ಬೀಳದಂತಿರಬೇಕು
ಗಿಡದೆಲೆಯಂತೆ ಬದುಕು ಬದಲಾಗಬೇಕು ।।
ಚಿಗುರಿನಂತಿರಬೇಕು ಬೆಳೆದು ನೆರಳು ಸೂಸುವ ಮನಸ್ಸು ಹೊಂದಿರಬೇಕು
ಬದುಕು ಬದಲಾಗಬೇಕು ನಿರಾಳತೆ ಇರಬೇಕು
ಸರಳತೆಯ ಸಹವಾಸ ಸನಿಹದಲಿರುವಂತಿರಬೇಕು
ಬಳಲಿದ ಮನಗಳು ಹರಸುವಂತಿರಬೇಕು
ಬದುಕು ಬದಲಾಗಬೇಕು ।।
ಭರವಸೆ ಇರಬೇಕು ಬಯಕೆ ಪೂರೈಕೆಯಾಗಬೇಕು
ಕುರುಡ ನೋಡಿದಂತೆ ಕಿವುಡ ಕೇಳಿದಂತೆ ಕರುಣೆ ಬದುಕಾಗಬೇಕು
ನಡೆಯು ನುಡಿಯಾಗಬೇಕು ನುಡಿಯೇ ನಡೆಯಾಗಬೇಕು
ಜಡತೆಯ ನಡುವ ಮುರಿಯಬೇಕು
ಬದುಕು ಬದಲಾಗಬೇಕು ಬದುಕು ಬಾಳಾಗಬೇಕು ।।।।। —————
—————— ಪಟ್ಟರಾಜಗೌಡ ಗೇರುಕೊಪ್ಪ

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
