ಪುನೀತ್‌ ನೆನಪಿನ ಸಮರ್ಪಣೆಗೆ ಮೆಚ್ಚುಗೆಯ ಮಹಾಪೂರ

ಕರ್ನಾಟಕ ರತ್ನ, ಯುವರತ್ನ ಪುನೀತ್‌ ರಾಜ್‌ ಕುಮಾರ್‌ ಬದುಕಿದ್ದಾಗ ನಾಯಕನಟನಾಗಿ ಪ್ರಸಿದ್ಧರಾಗಿದ್ದರು. ಅವರ ಸಾವಿನ ನಂತರ ಅವರು ನಿಜಜೀವನದ ಹೀರೋ ಆಗಿದ್ದಕ್ಕೆ ಅನೇಕ ದೃಷ್ಟಾಂತಗಳಿವೆ. ಉತ್ತರ ಕನ್ನಡ ಜಿಲ್ಲೆ ಎಂದರೆ ಪಂಚಪ್ರಾಣವಾಗಿದ್ದ ಅಪ್ಪು ಇಲ್ಲಿಗೆ ಬಂದು ಮರಳಿದ ನಂತರವೇ ಇಲ್ಲಿ ಸುದ್ದಿಯಾಗುತಿತ್ತು. ಈಗ ಪುನೀತ್‌ ನೆನಪಿಗೆ ಅವರ ಸಮಾಜಮುಖಿ ಬದುಕಿಗೆ ಸಮರ್ಪಣೆ ಎನ್ನುವ ವಿನೂತನ ಕಾರ್ಯಕ್ರಮ ಒಂದು ಸಿದ್ಧಾಪುರದಲ್ಲಿ ನಡೆಯಿತು.
ಸಿದ್ಧಾಪುರದ ಶಂಕರಮಠದಲ್ಲಿ ಪರಿವರ್ತನೆ ಟೀಮ್‌ ಮತ್ತು ರಾಜ್ಯ ಬಿ.ಎಸ್.ಎನ್.  .ಡಿ.ಪಿ.‌ ಗಳು ಸ್ಥಳಿಯರ ಜೊತೆಗೂಡಿ ಅಪ್ಪು ಸಮರ್ಪಣೆ ಕಾರ್ಯಕ್ರಮ ಸಂಘಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್‌ ರಿಗೆ ನುಡಿ ನಮನ, ಗೀತ ನಮನಗಳು ನಡೆದವು.

ನೇತ್ರದಾನ,ರಕ್ತದಾನಗಳು ನಡೆದದ್ದು ಈ ಕಾರ್ಯಕ್ರಮದ ವೈಶಿಷ್ಟ್ಯ


ಮನುಷ್ಯ ಬದುಕಿ ಹೋಗುವುದು ಸಾಮಾನ್ಯ ಆದರೆ ಪುನೀತ್‌ ರಾಜ್‌ ಕುಮಾರರಂತೆ ಮಾನವೀಯವಾಗಿ ಬದುಕಿ ಬಾಳುವುದು ಸುಲಭವಲ್ಲ. ಈ ಸಂದೇಶದ ಹಿನ್ನೆಲೆಯಲ್ಲಿ ನಡೆದ ಸಮರ್ಪಣೆಯಲ್ಲಿ ಸೇರಿದ ಅಭಿಮಾನಿಗಳು ಪುನೀತ್‌ ರನ್ನು ನೆನಪಿಸಿ,ಅವರ ಸಾಧನೆ,ಸೇವೆಗಳನ್ನು ಕೊಂಡಾಡಿದರು.
ದೊಡ್ಡ ಕಟೌಟ್‌ ಗಳನ್ನು ಹಾಕಿ, ಅನ್ನಸಂತರ್ಪಣೆ ನಡೆಸಿದ ಈ ವಿನೂತನ ಕಾರ್ಯಕ್ರಮದಲ್ಲಿ ಪುನೀತ್‌ ಬದುಕು ಇತರರಿಗೆ ಮಾದರಿಯಾಗಬೇಕೆಂದು ಆಶಿಸಲಾಯಿತು.
ಈ ಕಾರ್ಯಕ್ರಮದ ಮೊದಲು ಸ್ಥಳೀಯ ಆಡಳಿತಕ್ಕೆ ಸಿದ್ಧಾಪುರದ ಮುಖ್ಯ ರಸ್ತೆಗೆ ಪುನೀತ್‌ ರಾಜ್‌ ಕುಮಾರ ರಸ್ತೆ ಎಂದು ನಾಮಕರಣ ಮಾಡಲು ಮನವಿ ನೀಡಿ ಒತ್ತಾಯಿಸಲಾಯಿತು.


ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕರು ಪುನೀತ್‌ ಸ್ಮರಿಸಿ,ಗೌರವ ಸೂಚಿಸಿದರು. ಬದುಕಿದ್ದಾಗ ಸುದ್ದಿ ಮಾಡದೆ ಬಂದು ತೆರಳುತಿದ್ದ ಪುನೀತ್‌ ಈಗ ಈ ಊರಿಗೆ ಬರದೆ ಸುದ್ದಿಮಾಡಿದ್ದು ವಿಶೇಶವೆನಿಸಿತು. ಪುನೀತ್‌ ರಾಜ್‌ ಕುಮಾರರ ಚಿತ್ರಪಟಗಳನ್ನು ಹಾಕಿ ಶ್ರದ್ಧಾಂಜಲಿ ಅರ್ಪಿಸಿದ್ದು ಮಲೆನಾಡ ಸಿದ್ಧಾಪುರದಲ್ಲಿ ಪುನೀತ್‌ ಬಗ್ಗೆ ಹೊಂದಿದ ಅಭಿಮಾನಕ್ಕೆ ಸಾಕ್ಷಿ ಒದಗಿಸಿದಂತಿತ್ತು.ಪುನೀತ್‌ ಸಾವಿನ ನಂತರ ಇಲ್ಲಿಯ ಪ್ರಚಲಿತ ಅನಾಥಾಶ್ರಮವನ್ನು ಪುನೀತ್‌ ರಾಜ್‌ ಕುಮಾರ್‌ ಅನಾಥಾಶ್ರಮ ಎಂದು ನಾಮಕರಣ ಮಾಡಿದ್ದು ಕೂಡಾ ಈ ಕಾರ್ಯಕ್ರಮದ ಒಂದು ಭಾಗ ಎನ್ನುವುದು ವಿಶೇಶ.

ಪುನೀತ್‌ ಬದುಕಿನಿಂದ ಪ್ರೇರಣೆ ಪಡೆದು ಸಮಾಜದ ಪರವಾಗಿ ಕೆಲಸಮಾಡಲು ಈ ಸಮರ್ಪಣೆ ಅರ್ಪಣೆ. ಪುನೀತ್‌ ರ ಬದುಕು, ಸೇವೆಯ ಬಗ್ಗೆ ತಿಳಿದಷ್ಟೂ ಅವರ ಮೇಲೆ ಹೆಚ್ಚಿನ ಅಭಿಮಾನ ಉಕ್ಕುತ್ತದೆ. ಬದುಕಿದರೆ ಇವರಂತೆ ಬದುಕಿ ಎನ್ನುವುದನ್ನು ಹೇಳುವುದೇ ಈ ಕಾರ್ಯಕ್ರಮದ ಹಿಂದಿನ ಉದ್ದೇಶ.-ಹಿತೇಂದ್ರ ನಾಯ್ಕ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *