![](https://i0.wp.com/samajamukhi.net/wp-content/uploads/2022/01/IMG-20220126-WA0096.jpg?resize=201%2C196&ssl=1)
![](https://i0.wp.com/samajamukhi.net/wp-content/uploads/2021/08/S-scaled.jpg?fit=2560%2C1810&ssl=1)
ಮಂಗಳವಾರ ರಾತ್ರಿ ಬೆಂಗಳೂರು ಬಸವನಗುಡಿ ವ್ಯಾಪ್ತಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಿದ್ಧಾಪುರ ತಾಲೂಕಿನ ಕೋಲಶಿರ್ಸಿಯ ಸುರೇಶ್ ಈರ ನಾಯ್ಕ ಸದೆಗುಡ್ಡೆ ಮೃತರಾಗಿದ್ದಾರೆ. ಬೆಂಗಳೂರಿನ ರಾತ್ರಿ ಕರ್ಫ್ಯೂ ನಡುವೆ ಬೈಕ್ ಚಲಾಯಿಸಿಕೊಂಡು ಹೋಗಿದ್ದ ಸುರೇಶ್ ನಾಯ್ಕ ವಾಹನಕ್ಕೆ ಕಾರೊಂದು ಹಿಂದಿನಿಂದ ಬಡಿಯಿತು. ಈ ಅಪಘಾತದಲ್ಲಿ ಸುರೇಶ್ ನಾಯ್ಕ ಸ್ಥಳದಲ್ಲೇ ಮೃತಪಟ್ಟರೆ ಅವರ ವಾಹನ ಸಂಪೂರ್ಣ ಜಖಂ ಆಗಿದೆ. ಈ ಬಗ್ಗೆ ದೂರು ದಾಖಲಾಗುತಿದ್ದಂತೆ ಇನ್ನೋವಾ ಕ್ರಿಸ್ಟಾ ವಾಹನದ ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ.
ಅವಿವಾಹಿತ ಸುರೇಶ್ ನಾಯ್ಕ ೩೬ ವರ್ಷದ ಯುವಕನಾಗಿದ್ದು ಅಣ್ಣ-ತಂಗಿ, ತಂದೆ-ತಾಯಿಯರೊಂದಿಗೆ ಅಪಾರ ಬಂಧು ಬಳಗವನ್ನು ಅಗಲಿದ್ದಾನೆ. ಮೃತದೇಹ ಇಂದು ಸಾಯಂಕಾಲದ ವರೆಗೆ ಹುಟ್ಟೂರಿಗೆ ಬರಲಿದೆ ಎನ್ನಲಾಗಿದೆ.
![](https://i0.wp.com/samajamukhi.net/wp-content/uploads/2021/12/IMG-20211217-WA0091.jpg?resize=406%2C574&ssl=1)
![](https://i0.wp.com/samajamukhi.net/wp-content/uploads/2022/01/IMG-20220126-WA0096.jpg?resize=201%2C196&ssl=1)
![](https://i0.wp.com/samajamukhi.net/wp-content/uploads/2022/01/IMG-20220103-WA0006.jpg?resize=428%2C350&ssl=1)
![](https://i0.wp.com/samajamukhi.net/wp-content/uploads/2021/08/1--scaled.jpg?fit=1810%2C2560&ssl=1)