exclusive report- ವಿಚಿತ್ರ ಆದರೂ ಸತ್ಯ- ಸದಾಕಾಲ ಹಲಸು ಕೋಟಿಗೊಂದು ದೃಷ್ಟಾಂತ!

ಪ್ರಕೃತಿಯ ವಿಸ್ಮಯಗಳಿಗೆ ಕೊನೆಇಲ್ಲ, ಸಕಾಲದಲ್ಲಿ ಎಲ್ಲವನ್ನೂ ಕರುಣಿಸುವ ಪರಿಸರ ಕೆಲವೊಮ್ಮೆ ಅಕಾಲದಲ್ಲಿ ಆಶ್ಚರ್ಯ ಹುಟ್ಟಿಸಿಬಿಡುತ್ತದೆ. ಇಂಥದ್ದೊಂದು ಸಕೇದಾಶ್ಚರ್ಯದ ಘಟನೆಯೊಂದು ಉತ್ತರ ಕನ್ನಡದಲ್ಲಿ ಕಂಡಿದೆ. ಉತ್ತರ ಕನ್ನಡ, ಶಿವಮೊಗ್ಗಗಳ ಮಲೆನಾಡ ಕಾಡಂಚುಗಳಲ್ಲಿ ಎಷ್ಟೊಂದು ವಿಸ್ಮಯಗಳಿವೆ. ಅಂಥ ವಿಶೇಶಗಳು ಎಲ್ಲರಿಗೂ ಕಾಣಲಾರವು. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದಲ್ಲಿ ತ್ಯಾರ್ಸಿ ಎನ್ನುವ ಗ್ರಾಮವೊಂ ದಿದೆ ಅದಕ್ಕೆ ತಾಕಿಕೊಂಡ ಹಳ್ಳಿಯೇ ಕಡಕೇರಿ, ಈ ತ್ಯಾರ್ಸಿ ಸಮೀಪದ ಕಡಕೇರಿ ಗ್ರಾಮದ ರಸ್ತೆಯ ಬಳಿ ೨೦ ವರ್ಷಗಳ ಹಲಸಿನ ಮರವೊಂದಿದೆ. ಇದು ಮಲೆನಾಡಿನ ಇತರ ಹಲಸಿನ ಮರಗಳಂತೆ ಎಂದುಕೊಂಡು ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ವಿಶ್ವದ ವಿರಳ ವಿಸ್ಮಯ ಹಲಸಿನ ಮರದ ಬಗ್ಗೆ ತಿಳಿಯುವುದಿಲ್ಲ.
ಒಂದೆರಡು ಬಾರಿ ಬೇರೆ ಬೇರೆ ಕಾಲಗಳಲ್ಲಿ ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ನೇತುಕೊಂಡಿರುವುದು ಕಾಣುತ್ತದೆ.

ಹೌದು ವಿಚಿತ್ರ-ವಿಸ್ಮಯವೆನಿಸಿದರೂ ಇದು ವಾಸ್ತವ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ಬಿಡುತ್ತದೆ. ಬೇಸಿಗೆ-ಮಳೆಗಾಲದ ಪ್ರಾರಂಭದ ದಿನಗಳನ್ನು ಹೊರತುಪಡಿಸಿ ವರ್ಷದ ಮೂರ್ನಾಲ್ಕು ತಿಂಗಳು ಹೆಚ್ಚೆಂದರೆ ಆರು ತಿಂಗಳ ವರೆಗೆ ಫಲ ನೀಡುವ ಹಲಸು ಇಲ್ಲಿ ವರ್ಷವಿಡೀ ಕಾಯಿ ಬಿಡುತ್ತದೆ ಎಂದರೆ ಆಶ್ಚರ್ಯದ ಜೊತೆಗೆ ಅನುಮಾನವೂ ಮೂಡುತ್ತದೆ.
ಆದರೆ ಇದು ಸತ್ಯ ನಮ್ಮ ಪ್ರತಿನಿಧಿ ಸೇರಿ ಹಲವು ಜನ ಗಮನಿಸಿರುವ ನಿತ್ಯ ಹಲಸಿನ ಕಾಯಿಯ ಮರ ಕಲ್ಪವೃಕ್ಷದಂತಿದೆ.

ಎಂಟುವರ್ಷದ ಗಿಡವಾಗಿದ್ದಾಗಿನಿಂದ ವರ್ಷಪೂರ್ತಿ ಫಲ ನೀಡುವ ಈ ಹಲಸಿನ ಮರದಲ್ಲಿ ಈಗಲೂ ಬಲಿತ ಹಲಸಿನ ಕಾಯಿಗಳಿವೆ ಮತ್ತೂ ಯಾವಾಗಳೂ ನೇತಾಡುತ್ತಿರುತ್ತವೆ. ಈ ಹಲಸಿನ ವೈಶಿಷ್ಟ್ಯತೆ,ಅನನ್ಯತೆಯ ಬಗ್ಗೆ ಸ್ಥಳಿಯರಿಗೆ ಅಷ್ಟಾಗಿ ತಿಳಿದಿಲ್ಲ. ಈ ಬಗ್ಗೆ ಅಧ್ಯಯನ ನಡೆಸುವ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ʼಇಂಥ ವಿರಳ ಸಸ್ಯಗಳಿವೆ. ಕೆಲವೊಮ್ಮೆ ವಾತಾವರಣ ಬದಲಾವಣೆಯಿಂದ ಅಕಾಲ, ಎಲ್ಲಾ ಕಾಲಗಳಲ್ಲಿ ಫಲ ನೀಡುತ್ತವೆ. ಆದರೆ ಪಶ್ಚಿಮಘಟ್ಟದ ಬಹುತೇಕ ಜೀವವೈವಿಧ್ಯಗಳ ಬಗ್ಗೆ ಅಧ್ಯಯನ ಮಾಡಿರುವ ನನಗೆ ನಿತ್ಯ ಫಲ ನೀಡುವ ಹಲಸು ಕಂಡಿದ್ದಿಲ್ಲ ಆದರೆ ಅತಿ ವಿರಳವಾಗಿ ಕೋಟಿಗೊಂದು, ಕೋಟಿಗೊಮ್ಮೆ ಎನ್ನುವಂತೆ ಇಂಥ ವಿಶೇಶಗಳಿರುತ್ತವೆ. ಈ ಬಗ್ಗೆ ಅಧ್ಯಯನಕ್ಕೆ ಹೊಸ ವಿಷಯ ಸಿಕ್ಕಂತಾಗಿದೆ ಎಂದಿದ್ದಾರೆ.
ರುಚಿ, ಆರೋಗ್ಯ ವರ್ಧಕವಾದ ಸಿದ್ದು ಹಲಸು ಸದ್ದು ಮಾಡಿದ ದಿನಗಳಲ್ಲೇ ವರ್ಷವಿಡೀ ಫಲ ನೀಡುವ ನಿತ್ಯಫಲದ ಹಲಸು ಸುದ್ದಿಯಾಗಿರುವುದು ವಿಶೇಶ ವಾಗಿದೆ.
(  -ಕನ್ನೇಶ್ವರ ನಾಯ್ಕ ಕೋಲಶಿರ್ಸಿ)

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *