exclusive report- ವಿಚಿತ್ರ ಆದರೂ ಸತ್ಯ- ಸದಾಕಾಲ ಹಲಸು ಕೋಟಿಗೊಂದು ದೃಷ್ಟಾಂತ!

ಪ್ರಕೃತಿಯ ವಿಸ್ಮಯಗಳಿಗೆ ಕೊನೆಇಲ್ಲ, ಸಕಾಲದಲ್ಲಿ ಎಲ್ಲವನ್ನೂ ಕರುಣಿಸುವ ಪರಿಸರ ಕೆಲವೊಮ್ಮೆ ಅಕಾಲದಲ್ಲಿ ಆಶ್ಚರ್ಯ ಹುಟ್ಟಿಸಿಬಿಡುತ್ತದೆ. ಇಂಥದ್ದೊಂದು ಸಕೇದಾಶ್ಚರ್ಯದ ಘಟನೆಯೊಂದು ಉತ್ತರ ಕನ್ನಡದಲ್ಲಿ ಕಂಡಿದೆ. ಉತ್ತರ ಕನ್ನಡ, ಶಿವಮೊಗ್ಗಗಳ ಮಲೆನಾಡ ಕಾಡಂಚುಗಳಲ್ಲಿ ಎಷ್ಟೊಂದು ವಿಸ್ಮಯಗಳಿವೆ. ಅಂಥ ವಿಶೇಶಗಳು ಎಲ್ಲರಿಗೂ ಕಾಣಲಾರವು. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದಲ್ಲಿ ತ್ಯಾರ್ಸಿ ಎನ್ನುವ ಗ್ರಾಮವೊಂ ದಿದೆ ಅದಕ್ಕೆ ತಾಕಿಕೊಂಡ ಹಳ್ಳಿಯೇ ಕಡಕೇರಿ, ಈ ತ್ಯಾರ್ಸಿ ಸಮೀಪದ ಕಡಕೇರಿ ಗ್ರಾಮದ ರಸ್ತೆಯ ಬಳಿ ೨೦ ವರ್ಷಗಳ ಹಲಸಿನ ಮರವೊಂದಿದೆ. ಇದು ಮಲೆನಾಡಿನ ಇತರ ಹಲಸಿನ ಮರಗಳಂತೆ ಎಂದುಕೊಂಡು ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ವಿಶ್ವದ ವಿರಳ ವಿಸ್ಮಯ ಹಲಸಿನ ಮರದ ಬಗ್ಗೆ ತಿಳಿಯುವುದಿಲ್ಲ.
ಒಂದೆರಡು ಬಾರಿ ಬೇರೆ ಬೇರೆ ಕಾಲಗಳಲ್ಲಿ ಈ ಮಾರ್ಗದಲ್ಲಿ ಸಾಗಿದರೆ ನಿಮಗೆ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ನೇತುಕೊಂಡಿರುವುದು ಕಾಣುತ್ತದೆ.

ಹೌದು ವಿಚಿತ್ರ-ವಿಸ್ಮಯವೆನಿಸಿದರೂ ಇದು ವಾಸ್ತವ ಈ ಹಲಸಿನ ಮರದಲ್ಲಿ ವರ್ಷವಿಡೀ ಹಲಸಿನ ಕಾಯಿ ಬಿಡುತ್ತದೆ. ಬೇಸಿಗೆ-ಮಳೆಗಾಲದ ಪ್ರಾರಂಭದ ದಿನಗಳನ್ನು ಹೊರತುಪಡಿಸಿ ವರ್ಷದ ಮೂರ್ನಾಲ್ಕು ತಿಂಗಳು ಹೆಚ್ಚೆಂದರೆ ಆರು ತಿಂಗಳ ವರೆಗೆ ಫಲ ನೀಡುವ ಹಲಸು ಇಲ್ಲಿ ವರ್ಷವಿಡೀ ಕಾಯಿ ಬಿಡುತ್ತದೆ ಎಂದರೆ ಆಶ್ಚರ್ಯದ ಜೊತೆಗೆ ಅನುಮಾನವೂ ಮೂಡುತ್ತದೆ.
ಆದರೆ ಇದು ಸತ್ಯ ನಮ್ಮ ಪ್ರತಿನಿಧಿ ಸೇರಿ ಹಲವು ಜನ ಗಮನಿಸಿರುವ ನಿತ್ಯ ಹಲಸಿನ ಕಾಯಿಯ ಮರ ಕಲ್ಪವೃಕ್ಷದಂತಿದೆ.

ಎಂಟುವರ್ಷದ ಗಿಡವಾಗಿದ್ದಾಗಿನಿಂದ ವರ್ಷಪೂರ್ತಿ ಫಲ ನೀಡುವ ಈ ಹಲಸಿನ ಮರದಲ್ಲಿ ಈಗಲೂ ಬಲಿತ ಹಲಸಿನ ಕಾಯಿಗಳಿವೆ ಮತ್ತೂ ಯಾವಾಗಳೂ ನೇತಾಡುತ್ತಿರುತ್ತವೆ. ಈ ಹಲಸಿನ ವೈಶಿಷ್ಟ್ಯತೆ,ಅನನ್ಯತೆಯ ಬಗ್ಗೆ ಸ್ಥಳಿಯರಿಗೆ ಅಷ್ಟಾಗಿ ತಿಳಿದಿಲ್ಲ. ಈ ಬಗ್ಗೆ ಅಧ್ಯಯನ ನಡೆಸುವ ಪರಿಸರ ತಜ್ಞ ಎಂ.ಬಿ.ನಾಯ್ಕ ಕಡಕೇರಿ ʼಇಂಥ ವಿರಳ ಸಸ್ಯಗಳಿವೆ. ಕೆಲವೊಮ್ಮೆ ವಾತಾವರಣ ಬದಲಾವಣೆಯಿಂದ ಅಕಾಲ, ಎಲ್ಲಾ ಕಾಲಗಳಲ್ಲಿ ಫಲ ನೀಡುತ್ತವೆ. ಆದರೆ ಪಶ್ಚಿಮಘಟ್ಟದ ಬಹುತೇಕ ಜೀವವೈವಿಧ್ಯಗಳ ಬಗ್ಗೆ ಅಧ್ಯಯನ ಮಾಡಿರುವ ನನಗೆ ನಿತ್ಯ ಫಲ ನೀಡುವ ಹಲಸು ಕಂಡಿದ್ದಿಲ್ಲ ಆದರೆ ಅತಿ ವಿರಳವಾಗಿ ಕೋಟಿಗೊಂದು, ಕೋಟಿಗೊಮ್ಮೆ ಎನ್ನುವಂತೆ ಇಂಥ ವಿಶೇಶಗಳಿರುತ್ತವೆ. ಈ ಬಗ್ಗೆ ಅಧ್ಯಯನಕ್ಕೆ ಹೊಸ ವಿಷಯ ಸಿಕ್ಕಂತಾಗಿದೆ ಎಂದಿದ್ದಾರೆ.
ರುಚಿ, ಆರೋಗ್ಯ ವರ್ಧಕವಾದ ಸಿದ್ದು ಹಲಸು ಸದ್ದು ಮಾಡಿದ ದಿನಗಳಲ್ಲೇ ವರ್ಷವಿಡೀ ಫಲ ನೀಡುವ ನಿತ್ಯಫಲದ ಹಲಸು ಸುದ್ದಿಯಾಗಿರುವುದು ವಿಶೇಶ ವಾಗಿದೆ.
(  -ಕನ್ನೇಶ್ವರ ನಾಯ್ಕ ಕೋಲಶಿರ್ಸಿ)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *