ವಸಂತ ಪ್ರಶ್ನೆ ನಂ೧- ಸಿದ್ಧಾಪುರದಲ್ಲಿ ಅಣಲೇಬೈಲ್‌ ಕ್ಷೇತ್ರಕ್ಕೇಕೆ ಸಿಂಹಪಾಲು?

ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿನಿಧಿಸುವ ಶಿರಸಿ-ಸಿದ್ಧಾಪುರ ಕ್ಷೇತ್ರದಾದ್ಯಂತ ಅಸಮತೋಲನ,ಅಸಮರ್ಪಕ ಅನುದಾನ ಹಂಚಿಕೆ ನಡೆಯುತ್ತಿದೆ ಎಂದು ತಕರಾರು ಎತ್ತಿರುವ ಸಿದ್ಧಾಪುರ ಬ್ಲಾಕ್‌ ಕಾಂಗ್ರೆಸ್‌ ಈ ಬಗ್ಗೆ ಜನಾಂದೋಲನಕ್ಕೆ ಸಿದ್ಧವಾಗುತ್ತಿದೆ. ದೇಶದ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರ ನಡೆಸುತ್ತಿರುವ ಬಿ.ಜೆ.ಪಿ. ಪಕ್ಷ ತಾನು ನಂಬುವ ಅಸಮಾನತೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಿ.ಜೆ.ಪಿ. ಆಡಳಿತದ ಸರ್ಕಾರಗಳ ವಿಫಲತೆ, ಸ್ವಜನಪಕ್ಷಪಾತ ಸೇರಿದ ಅಂಧಾ ದರ್ಬಾರಿಗೆ ನಮ್ಮ ಬಳಿ ನೂರಾರು ದಾಖಲೆ, ಪ್ರಶ್ನೆಗಳಿವೆ. ಅವುಗಳಲ್ಲಿ ಕೆಲವನ್ನಾದರೂ ನಾವು ಸಾರ್ವಜನಿಕ ಹಿತಾಸಕ್ತಿಯಿಂದ ಕೇಳಲೇಬೇಕಾಗುತ್ತದೆ. ರಾಜ್ಯ, ದೇಶದ ವಿದ್ಯಮಾನಗಳಿಗಿಂತ ಮುಂಚಿತವಾಗಿ ಸಿದ್ಧಾಪುರ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳತ್ತ ಬೆಳಕು ತೋರುತಿದ್ದದೇವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಪರವಾಗಿ ಕಾಂಗ್ರೆಸ್‌ ನಿಂದ ಶಾಸಕರಿಗೆ ಹತ್ತು ಪ್ರಶ್ನೆಗಳು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಸಂತ ನಾಯ್ಕ ಮಳಲವಳ್ಳಿ ತಕರಾರು ಎತ್ತಿದ್ದಾರೆ. ಅವರು ಹತ್ತು ಪ್ರಶ್ನೆಗಳು ಕೆಲವು ಕಂತುಗಳಲ್ಲಿ ಪ್ರಕಟವಾಗುತ್ತಿವೆ.

ಶಾಸಕರು, ಸಂಸದರು ತಮ್ಮ ಕ್ಷೇತ್ರವನ್ನು ಸಮಾನತೆಯ ಭಾವದಲ್ಲಿ ನೋಡಬೇಕು. ಈ ಸಾಮಾಜಿಕ, ಸಾರ್ವಜನಿಕ ಶಿಸ್ತು ಶಾಸಕ, ಸಂಸದರಿಗಿಂತ ಮುಖ್ಯಮಂತ್ರಿಗಳು,ವಿಧಾನಸಭಾ ಅಧ್ಯಕ್ಷರಿಗೆ ಅನ್ವಯಿಸುತ್ತದೆ. ರಾಜ್ಯ ವಿಧಾನಸಭಾ ಅಧ್ಯಕ್ಷರೂ, ಸ್ಥಳಿಯ ಶಾಸಕರೂ ಆದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರವಾಹ ಪರಿಹಾರ ಅನುದಾನದ ನಿಧಿಯ ೧೦ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಅಣಲೇಬೈಲ್‌ ಜಿ.ಪಂ. ಕ್ಷೇತ್ರಕ್ಕೆ ಮಾತ್ರ ಬಹುತೇಕ ಹಂಚಿರುವುದ್ಯಾಕೆ?

ತಾಲೂಕಿನಲ್ಲಿ ನೀರಾವರಿ ಇಲಾಖೆಯ ಕಾಮಗಾರಿಗಳಿಂದ ನೀರಾವರಿ,ಕೃಷಿ ಅನುಕೂಲದ ಕೆಲಸಗಳನ್ನು ಮಾಡಬೇಕು ಆದರೆ ಶಾಸಕರು ೨-೩ ಮನೆಗಳಿರುವ ಕಡೆ ಬಾಂದಾರಗಳನ್ನು ನಿರ್ಮಿಸಿ,ಅವಶ್ಯವಿರುವ ಕಡೆ ಪ್ರಜ್ಞಾಪೂರ್ವಕ ಕುರುಡು ಪ್ರದರ್ಶಿಸುವುದೇಕೆ ಎಂದು ಪ್ರಶ್ನಿಸಿ, ಮಳೆಅನಾಹುತಗಳಾಗಲಿ,ನೀರಿನ ಅವಶ್ಯಕತೆಗಳಿರಲಿ ಈ ತೊಂದರೆಗಳು ಅಣಲೇಬೈಲ್‌ ಕ್ಷೇತ್ರಕ್ಕಿಂತ ದೊಡ್ಮನೆ ಮತ್ತು ಹಲಗೇರಿ ಕ್ಷೇತ್ರಗಳಲ್ಲಿ ಹೆಚ್ಚಿವೆ. ಹೆಚ್ಚು ಅನಿವಾರ್ಯವಿರುವ, ಗರಿಷ್ಠ ಜನರಿಗೆ ಅನುಕೂಲವಾಗುವ ದೊಡ್ಮನೆ, ಹಲಗೇರಿ ಜಿ.ಪಂ. ಕ್ಷೇತ್ರಗಳನ್ನು ಕಡೆಗಣಿಸಿ ಅಣಲೇಬೈಲ್‌ ಕ್ಷೇತ್ರಕ್ಕೆ ಮಾತ್ರ ಸಿಂಹಪಾಲು ನೀಡುವ ನಿಮ್ಮ ಪಕ್ಷಪಾತದಿಂದ ತಾಲೂಕಿನ ಜನರಿಗೆ ಅನ್ಯಾಯವಾಗುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *