ಕೋವಿಡ್‌ ಮೂರನೇ ಅಲೆ ಆತಂಕ- ಸಿದ್ಧಾಪುರಕ್ಕೆ ಕಾಡಲಿದೆ ವೈದ್ಯರ ಬರ?!

ಚಿಕ್ಕ ತಾಲೂಕು ಸಿದ್ಧಾಪುರದಲ್ಲಿ ವೈದ್ಯಕೀಯ ಅನುಕೂಲಗಳು ಇಲ್ಲದ ಸಮಯದಿಂದ ಹಿಡಿದು ಈವರೆಗೆ ಸಿದ್ಧಾಪುರ ಸರ್ಕಾರಿ ಆಸ್ಫತ್ರೆ ತನ್ನ ವೈಶಿಷ್ಟ್ಯದ ಕಾರಣಕ್ಕೆ ಪ್ರಸಿದ್ಧವಾಗಿದೆ. ಸಿದ್ಧಾಪುರದಲ್ಲಿ ಸರ್ಕಾರಿ ವೈದ್ಯರಾಗಿ ಡಾ.ಬಾಲಚಂದ್ರ ಮೇಸ್ತ, ಡಾ. ಶ್ರೀಧರ ವೈದ್ಯ, ಡಾ. ನಾಗೇಂದ್ರಪ್ಪ ಸೇರಿದಂತೆ ಅನೇಕರು ಅತ್ಯುತ್ತಮ ಸೇವೆ ನೀಡಿ ತಾಲೂಕಾ ಆಸ್ಫತ್ರೆಯನ್ನು ಪ್ರಖ್ಯಾತ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳ ಕೆಲವೇ ಕೆಲವು ತಾಲೂಕು ಆಸ್ಫತ್ರೆಗಳಲ್ಲಿ ಸಿದ್ಧಾಪುರದ ತಾಲೂಕಾ ಆಸ್ಫತ್ರೆ ಜನಪರವಾಗಿರುವ ಹಿಂದೆ ತಾಲೂಕಿನ ಸಾರ್ವಜನಿಕರ ಸಹಕಾರವಿದ್ದರೆ ಇಲ್ಲಿ ಕೆಲಸ ಮಾಡಿದ ವೈದ್ಯರ ಸೇವೆಯ ಕೊಡುಗೆ ಹೆಚ್ಚಿನದಾಗಿತ್ತು.

ಈಗ ಡಾ. ಲೋಕೇಶ್‌ ನಾಯ್ಕ, ಡಾ.ಪುರಾಣಿಕ್‌, ಡಾ.ಲಕ್ಷ್ಮೀಕಾಂತ್‌ ನಾಯ್ಕ ಸೇರಿದಂತೆ ಅನೇಕ ವೈದ್ಯರು ಹೆಸರು ಮಾಡುವ ಜೊತೆಗೆ ತಾಲೂಕಿನ ಆರೋಗ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುತಿದ್ದಾರೆ. ಸಿದ್ಧಾಪುರದಲ್ಲಿ ವೈದ್ಯರಿಗೆ, ದಾದಿಯರಿಗೆ ವಸತಿ ಅನುಕೂಲಗಳಿಲ್ಲ, ರೈಲು, ವಿಮಾನ ಸೇರಿದ ಆಧುನಿಕ ಅನುಕೂಲತೆಗಳ ಅಲಭ್ಯತೆಗಳ ನಡುವೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಬಹುತೇಕ ವೈದ್ಯರು ತಮ್ಮ ಸೇವೆಯಿಂದಲೇ ಹೆಸರು ಮಾಡಿದ್ದಾರೆ. ಇಂಥ ಸ್ಥಿತಿಯಲ್ಲಿ ಡಾ. ಲೋಕೇಶ್‌ ನಾಯ್ಕ. ಡಾ.ಪುರಾಣಿಕ್‌ ಸೇರಿದಂತೆ ಕೆಲವರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿರುವ ವಿಷಯ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಶುಭ ಸುದ್ದಿಯಲ್ಲ.

ಸಿದ್ದಾಪುರ ಆಸ್ಫತ್ರೆ, ವೈದ್ಯರು ದೋಷಗಳಿಂದ ಸಂಪೂರ್ಣ ಮುಕ್ತರಲ್ಲ ಆದರೆ ಎಲ್ಲಾ ತೊಂದರೆ, ರಗಳೆಗಳ ಮಧ್ಯೆ ಡಾ. ನಾಗರಾಜ್‌ ನಾಯ್ಕ,ಪುರಾಣಿಕ, ಲೋಕೇಶ್‌ ನಾಯ್ಕ ಸೇರಿದಂತೆ ಅನೇಕರ ಪ್ರಾಮಾಣಿಕ ಸೇವೆಯಿಂದ ಸಿದ್ದಾಪುರದ ಜನತೆಗೆ ಅನುಕೂಲವಾಗಿತ್ತು. ಈಗ ಸಿದ್ಧಾಪುರದಲ್ಲಿ ವೈದ್ಯಕೀಯ ತೊಂದರೆಗಳಾಗುತ್ತಿರುವುದಕ್ಕೆ ಕೇವಲ ಸರ್ಕಾರಿ ಆಸ್ಫತ್ರೆಯ ವಿದ್ಯಮಾನ ಮಾತ್ರ ಕಾರಣವಲ್ಲ. ಖಾಸಗಿ ವೈದ್ಯರಲ್ಲಿ ಡಾ. ಎಸ್.‌ಆರ್. ಹೆಗಡೆ‌ ಯವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿಲ್ಲ. ಡಾ. ಶ್ರೀಧರ ವೈದ್ಯರಿಗೆ ಒಂದು ತಿಂಗಳ ವಿಶ್ರಾಂತಿ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಅವರ ಆಸ್ಫತ್ರೆ ಹಿಂದಿನಂತಿಲ್ಲ.

ಸ್ಥಳೀಯರ ನೆಚ್ಚಿನ ವೈದ್ಯರಾಗಿದ್ದ ಡಾ. ಶೆಟ್ಟಿ ಶಿರಸಿಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಹೀಗೆ ಸರ್ಕಾರಿ, ಖಾಸಗಿ ವೈದ್ಯರ ಅನುಪಸ್ಥಿತಿ ಸಿದ್ಧಾಪುರಕ್ಕೆ ಬರವಾಗಿ ಕಾಡುತ್ತಿದೆ.

ಕರೋನಾ ಮೂರನೇ ಅಲೆ, ಸಹಜ ಪ್ರಾಕೃತಿಕ ವ್ಯತ್ಯಾಸ, ರಾಜಕೀಯ ಹಿತಾಸಕ್ತಿ,ನಾಯಕತ್ವ, ನೇತೃತ್ವಗಳ ಕೊರತೆ ಈ ಎಲ್ಲಾ ಕಾರಣಗಳಿಂದ ಹಿಂದುಳಿದ ತಾಲೂಕು ಸಿದ್ಧಾಪುರ ಈಗ ಆರೋಗ್ಯ ಕ್ಷೇತ್ರದಲ್ಲಿ ಕೂಡಾ ಹಿಂದುಳಿದ ತಾಲೂಕಾಗಿದೆ. ಈ ಸಮಸ್ಯೆ, ರಗಳೆಗಳಿಂದ ಬಾಧಿತರಾಗುವವರು ಜನಸಾಮಾನ್ಯರು.

ಗರ್ಭಿಣಿಯರು, ಮಕ್ಕಳೆನ್ನದೆ ವಾರಾಂತ್ಯದ ದಿನಗಳಲ್ಲಿ ಬೇರೆ ಊರು ಜಿಲ್ಲೆಗಳಿಗೆ ತಾಲೂಕಿನ ಬಡವರನ್ನು ಸಾಗಹಾಕಿ ಬಡವರು, ಅಸಹಾಯಕರಿಗೆ ಯಮಸ್ವರೂಪಿಗಳಾದ ಕೆಲವು ವೈದ್ಯರನ್ನು ಬಿಟ್ಟು ಜನಪರ ವೈದ್ಯರು ಸ್ವಯಂ ನಿವೃತ್ತಿಯಾಗುತ್ತಿರುವುದು, ವಯೋಸಹಜ ಅನಾರೋಗ್ಯ, ತೊಂದರೆಗಳಿಂದ ಜನರಿಗೆ ಲಭ್ಯರಿರದಿರುವುದು ಸಿದ್ಧಾಪುರದ ಜನಸಾಮಾನ್ಯರಿಗೆ ಹೊರೆಯಾಗುವ ಮುನ್ಸೂಚನೆಯಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *