ಅಧಿಕಾರಿಗಳ ದರ್ಭಾರ್…ವೈದ್ಯರ ಕಾರ್ಬಾರ್! ಶಾಸಕರು, ಸಚಿವರ ವಿರಸದಿಂದ ಬಡವಾಗುತ್ತಿರುವ ಜನರು!

ಶಿರಸಿ ಎ.ಸಿ. ಶಿರಸಿಯಿಂದ ೧೫೦ ಕಿ.ಮೀ.ದೂರದ ಭಟ್ಕಳಕ್ಕೆ ಹೋಗಿ ವಾರದ ಮೂರು ದಿವಸ ಅಲ್ಲಿ ಕೆಲಸ ಮಾಡುತ್ತಾರೆ.

ಶಿರಸಿ ತಹಸಿಲ್ಧಾರರ ವರ್ಗಾವಣೆಯಾಗಿ ಮೂರು ತಿಂಗಳಾದರೂ ಹೊಸಬರು ಬಂದಿಲ್ಲ.

ಸಿದ್ಧಾಪುರದ ಪಿ.ಎಸ್. ಆಯ್.‌ ಕೆ.ಎ.ಟಿ. ಆದೇಶದ ಮೇಲೆ ಸಿದ್ಧಾಪುರದಲ್ಲಿ ಮುಂದುವರಿದಿದ್ದಾರೆ.

ಕೆಲಸ ಮಾಡದೆ ಬಿಲ್‌ ಮಾಡುತ್ತಾರೆ ಎನ್ನುವ ಆರೋಪವಿರುವ ಸಿದ್ಧಾಪುರ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಶಶಿ ಗೌಡ ವರ್ಗಾವಣೆಯಾದರೂ ಕೆ.ಎ.ಟಿ.ಯಿಂದ ತಡೆಯಾಜ್ಞೆ ತಂದಿದ್ದಾರೆ!.

ಹೀಗೆ ಮಂಕಾಳ್‌ ವೈದ್ಯರ ಉಸ್ತುವಾರಿ ಜವಾಬ್ಧಾರಿಯಡಿ ಶಿರಸಿ-ಸಿದ್ಧಾಪುರದ ಸ್ಥಿತಿ ಇದಾದರೆ… ಉಳಿದ ತಾಲೂಕುಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಶಿರಸಿ ಜಿಲ್ಲೆಯ ವಾಣಿಜ್ಯ ಕೇಂದ್ರ ಇಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ನಿರ್ವಹಿಸಿದರೆ ಸುತ್ತಮುತ್ತಲಿನ ತಾಲೂಕುಗಳ ಜನರಿಗೂ ಅನುಕೂಲ ಆದರೆ ವೈದ್ಯ, ಭೀಮಣ್ಣರ ಶೀಥಲ ಸಮರದಲ್ಲಿ ಜನಸಾಮಾನ್ಯರು ಬಡವರಾಗುತ್ತಿರುವುದಕ್ಕೆ ಯಾರನ್ನು ದೂರೋಣ?

ಕ್ರೀಯಾಶೀಲ, ಜನಸ್ಫಂದನೆಯ ಶಾಸಕ ಭೀಮಣ್ಣ ಹೆಚ್ಚಿನ ಅನುದಾನ ತರುತಿದ್ದಾರೆ, ಕ್ಷೇತ್ರದ ಜನರ ಬಳಿ ತೆರಳಿ ಜನರಿಗೆ ಸ್ಪಂ ದಿಸುತಿದ್ದಾರೆ ಆದರೆ, ಅವರ ವೇಗಕ್ಕೆ ಬ್ರೇಕ್‌ ಹಾಕುವಂತೆ ಜಿಲ್ಲಾ ಉಸ್ತುವಾರಿಗಳ ವರ್ತನೆ ಇದೆ ಎನ್ನಲಾಗುತ್ತಿದೆ.

ಈ ವಿದ್ಯಮಾನಗಳ ನಡುವೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿಲ್ಲೆಯ ಬಹುಸಂಖ್ಯಾತರ ವಿರುದ್ಧ ಕೆಲಸ ಮಾಡುತ್ತಾ ಬಿ.ಜೆ.ಪಿ.ಗರನ್ನು ಮೆಚ್ಚಿಸುವ ಕೆಲಸ ಮಾಡುತಿದ್ದಾರೆ ಎನ್ನುವ ಆರೋಪಗಳಿವೆ. ಪ್ರಗತಿಪರ, ಕ್ರೀಯಾಶೀಲ,ಜಾತ್ಯಾತೀತ ಎನ್ನುವ ವಿಶೇಶಣಗಳ ಪೊಲೀಸ್‌ ವರಿಷ್ಠರು ತಮಗೆ ಬೇಕಾದವರನ್ನು ಹೆಚ್ಚು ಬೆಂಬಲಿಸುತ್ತಾ ಇಲಾಖೆಯ ಕಿರಿಯ ಅಧಿಕಾರಿಗಳ ಕಿರಿ-ಕಿರಿಗೆ ಕಾರಣರಾಗುತಿದ್ದಾರೆ ಎನ್ನುವ ಸ್ಥಿತಿ ಉದ್ಭವಿಸಿದೆ.

ಸಿದ್ಧಾಪುರದ ಪೊಲೀಸ್‌ ಠಾಣೆಯಲ್ಲಿ ಲಾಗಾಯ್ತಿನಿಂದಲೂ ಹಿರಿ-ಮತ್ತು ಕಿರಿ ಅಧಿಕಾರಿಗಳ ತಂಡಗಳ ಘರ್ಷಣೆ ನಡೆಯುತ್ತಿರುವುದಕ್ಕೆ ಅನೇಕ ದೃಷ್ಟಾಂತಗಳು ಸಿಗುತ್ತವೆ. ಹಿರಿಯ ಅಧಿಕಾರಿಯ ಬದಲು ಕಿರಿಯ ಅಧಿಕಾರಿ ಪೊಲೀಸ್‌ ವರಿಷ್ಠರ ಅನುಕಂಪ ಗಿಟ್ಟಿಸಿದರೆ ಠಾಣೆಯ ವ್ಯವಸ್ಥೆ ಏನಾಗಬಹುದು ಎಂಬುದಕ್ಕೆ ಸಿದ್ಧಾಪುರ ಉತ್ತಮ ಉದಾಹರಣೆ. ಇಲ್ಲಿ ಸಾರಿಗೆ ನಿಯಮಗಳಿಲ್ಲ ಏಕಮುಖ ಮಾರ್ಗ, ಮುಖ್ಯರಸ್ತೆಗಳಲ್ಲಿ ವೇಗವಾಗಿ ಬರುವ ಜನರು ಸರಿಯಾದ ಮಾರ್ಗದಲ್ಲಿ ನಿಯಮಾನುಸಾರ ಸಾಗುವವರನ್ನೇ ಬೆದರಿಸುತ್ತಾರೆ!. ಪೊಲೀಸರ ಎದುರೇ ಸಾರಿಗೆ ನಿಯಮಗಳನ್ನು ಧಿಕ್ಕರಿಸುವವರನ್ನು ಕೇಳುವ ಸ್ಥಿತಿಯಲ್ಲಿ ಪೊಲೀಸರಿಲ್ಲ. ಈ ವಿದ್ಯಮಾನಗಳ ನಡುವೆ ಸಿದ್ಧಾಪುರದ ತೌಡತ್ತಿ ಆತ್ಮಹತ್ಯೆ ಪ್ರಕರಣದಲ್ಲಿ ರಾತ್ರಿ ಅಮಾನತ್ತಾದ ಪೊಲೀಸರು ಮುಂಜಾನೆ ಕೆಲಸಕ್ಕೆ ಹಾಜರ್‌!?

ಹೀಗೆ ಏಕಾಏಕಿ ನಿರ್ಧಾರಗಳು, ದಿನಕಳೆಯುವುದರೊಳಗಾಗಿ ಬದಲಾವಣೆ ಉತ್ತರ ಕನ್ನಡ ಪೊಲೀಸ್‌ ಎಂದರೆ… ತುಘಲಕ್‌ ದರ್ಭಾರ್‌ ಎನ್ನುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನಡುವಿನ ಅಭಿಪ್ರಾಯ ಭೇದ ಅಧಿಕಾರಿಗಳ ಅಂಧಾ ದರ್ಭಾರ್ ಗೆ ಕಾರಣವಾಗಿರುವುದು ಉತ್ತಮ ಬೆಳವಣಿಗೆಯಲ್ಲ ಎನ್ನುವ ಅಭಿಪ್ರಾಯವಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

1 Comment

Leave a Reply

Your email address will not be published. Required fields are marked *