ಎತ್ತರಕ್ಕೆ ಏರಿದವನ ಹೆಸರು ಸಚೇತ

Thumbnail image

ಚಿಕ್ಕ ವಯಸ್ಸಿನಲ್ಲೇ ಅಡಕೆ ಮರ ಏರುವ ಬಾಲಕ: ಸಾಹಸಿ ಕೆಲಸಕ್ಕೆ ಪಾಲಕರು ಸಾಥ್​

ಅಡಕೆ ತೋಟದಲ್ಲಿ ಕೊನೆ ಕೊಯ್ಯುವುದು ಅಂದ್ರೆ ಅದು ಸಾಹಸದ ಕೆಲಸ. ಹತ್ತಾರು ಅಡಿ ಎತ್ತರಕ್ಕೆ ಮರ ಹತ್ತಿ ಕೊನೆ ಇಳಿಸೋದು ಅಷ್ಟು ಸುಲಭದ ಮಾತಲ್ಲ. ಹೀಗಿರುವಾಗ 13 ವರ್ಷದ ಬಾಲಕನೋರ್ವ ಅಡಿಕೆ ಮರ ಏರಿ ಕೊನೆ ಕೊಯ್ಯುತ್ತಾನೆ.

ಕಾರವಾರ: ಆತ 13 ವರ್ಷದ ಪುಟ್ಟ ಬಾಲಕ.‌ ಕೈಯಲ್ಲಿ ಬ್ಯಾಟ್ ಬಾಲ್ ಹಿಡಿದು ಆಟ ಆಡಬೇಕಾದ ಪೋರ, ಇದೀಗ ಸಾಹಸಿ ಕೆಲಸವೊಂದರಲ್ಲಿ ತೊಡಗಿಕೊಳ್ಳುತ್ತಿದ್ದಾನೆ. ಶಾಲಾ ರಜಾ ಅವಧಿಗಳಲ್ಲಿ ಮನೆಯವರ ನೆರವಿಗೆ ನಿಲ್ಲುವ ಈ ಬಾಲಕ ಇದೀಗ ಎಲ್ಲರ ಗಮನ ಸೆಳೆದಿದ್ದಾನೆ.

ಒಂದು ಕೈಯಲ್ಲಿ ಕತ್ತಿ ಹಿಡಿದು ಮತ್ತೊಂದು ಕೈಯಲ್ಲಿ ಹಗ್ಗ ಹಿಡಿದು ತೋಟದಲ್ಲಿರುವ ಮೂವತ್ತು ಅಡಿಗೂ ಎತ್ತರದ ಅಡಕೆ ಮರ ಏರಿ ಕೊನೆ ಕೊಯ್ಯುತ್ತಾ ಒಂದು ಮರದಿಂದ ಮತ್ತೊಂದು ಮರಕ್ಕೆ ದಾಟುವ ಈ ಬಾಲಕನ ಹೆಸರು ಸಚೇತ ದಿವಸ್ಪತಿ ಹೆಗಡೆ. ಯಲ್ಲಾಪುರ ತಾಲೂಕಿನ ಉಮ್ಮಚಗಿಯ ನಿವಾಸಿಯಾಗಿರುವ ಈತ, ಸಣ್ಣ ವಯಸ್ಸಿನಲ್ಲಿಯೇ ಅಡಿಕೆ ಮರ ಏರಿ ಕೊನೆ ಕೊಯ್ಯುವುದನ್ನು ರೂಢಿ ಮಾಡಿಕೊಂಡಿದ್ದಾನೆ.

6ಕೊನೆ ಕೊಯ್ಯುವ ಕಾಯಕದಲ್ಲಿ 13 ವರ್ಷದ ಸಚೇತ ಹೆಗಡೆ

ಸದ್ಯ ಕೊರೊನಾ, ಲಾಕ್ ಡೌನ್ ಹೀಗೆ ಹತ್ತು ಹಲವು ಸಮಸ್ಯೆಗಳಿಂದಾಗಿ ಮಲೆನಾಡಿನಲ್ಲಿ ಅಡಕೆ ಕೊನೆ ಕೊಯ್ಯುವವರಿಲ್ಲದೇ ಅಡಕೆ ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಿರುವಾಗ ತಮ್ಮ ತೋಟದಲ್ಲಿ ಈ ಹಿಂದೆ ಕೊನೆಗೌಡರು ಮರ ಏರುವುದನ್ನು ನೋಡಿ ಅವರಿಂದ ಒಂದಿಷ್ಟು ತರಬೇತಿ ಪಡೆದಿದ್ದ ಸಚೇತ, ಇದೀಗ ತಾನೇ ಸ್ವತಃ ಅಡಿಕೆ ಮರ ಏರುತ್ತಿದ್ದಾನೆ.

ಇದಕ್ಕಾಗಿ ಕೊನೆ ಕೊಯ್ಲಿಗೆ ಉಪಯೋಗಿಸುವ ವಸ್ತುಗಳನ್ನು ಸಿದ್ಧಪಡಿಸಿಕೊಂಡಿರುವ ಬಾಲಕ, 20 ರಿಂದ 50 ಅಡಿ ಎತ್ತರದ ಮರ ಏರಿ ಕೊನೆ ಕೊಯ್ದು ನೇಣು ಬಿಡುತ್ತಾನೆ. ಇದಕ್ಕೆ ಮನೆಯವರು ಕೂಡ ಬೆಂಬಲವಾಗಿ ನಿಂತಿದ್ದು, ಇದೀಗ ಈತ ಕ್ವಿಂಟಾಲ್ ಗಟ್ಟಲೇ ಅಡಕೆ ಕೊಯ್ಯುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ಯಲ್ಲಾಪುರದ ಜಾಜಿ ಮನೆಯ ದಿವಸ್ಪತಿ ಹೆಗಡೆರವರಿಗೆ ಮೂರು ಎಕರೆ ಅಡಕೆ ತೋಟವಿದೆ. ಜನವರಿ ಕೊನೆಯ ತಿಂಗಳಲ್ಲಿ ಫಸಲು ಬಲಿತು ಕೊಯ್ಲಿಗೆ ಬಂದಿತ್ತಾದರೂ ಅಡಿಕೆ ಕೊಯ್ಯಲು ಜನರಿಲ್ಲದ ಪರಿಸ್ಥಿತಿ ಎದುರಾಗುತಿತ್ತು. ಅಲ್ಲದೆ ಒಬ್ಬ ವ್ಯಕ್ತಿ 3 ಸಾವಿರ ದಿನಕ್ಕೆ ಕೂಲಿ ತೆಗೆದುಕೊಳ್ಳುತ್ತಾರೆ.

ದುಬಾರಿ ಕೂಲಿ ಕೊಟ್ಟರೂ ಕೊನೆ ಕೊಯ್ಯಲು ಕೆಲಸದವರು ಸಿಗುವುದಿಲ್ಲ. ಹೀಗಾಗಿ ಪ್ರತಿ ವರ್ಷ ಕೆಲಸದವರಿಗಾಗಿ ಕಾದು ನಷ್ಟ ಅನುಭವಿಸಬೇಕಾದ ಸ್ಥಿತಿ ಇತ್ತು. ಹೀಗಿರುವಾಗ ಮಗ ಸಣ್ಣ ಪುಟ್ಟ ಗಿಡಗಳ ಕೊನೆ ಕೊಯ್ಯುವುದಾಗಿ ಕೊಯ್ಲು ಮಾಡಲು ಶುರು ಮಾಡಿದ್ದ. ಇದೀಗ ಒಂದಿಷ್ಟು ಕೊನೆ ಕೊಯ್ಯುತ್ತಿರುವುದು ಮನೆಯವರಿಗೂ ಸಹಕಾರಿಯಾಗಿದೆ. ಮಗನ ಕಾಯಕ ನಮಗೂ ಖುಷಿ ನೀಡುತ್ತಿದ್ದು, ಆತನ ಕೃಷಿ ಬಗೆಗಿನ ಒಲವು ಹೆಮ್ಮೆಯಾಗಿದೆ ಎನ್ನುತ್ತಾರೆ ಆತನ ತಾಯಿ ಶ್ವೇತಾ ಹೆಗಡೆ.

ಕೊನೆ ಕೊಯ್ಯುವ ಕಾಯಕದಲ್ಲಿ 13 ವರ್ಷದ ಸಚೇತ ಹೆಗಡೆ

ಕೊನೆ ಕೊಯ್ಯುವ ಕಾಯಕದಲ್ಲಿ 13 ವರ್ಷದ ಸಚೇತ ಹೆಗಡೆ

ಇಂದಿನ ತಲೆಮಾರಿನ ಜನ ಕೃಷಿಯಿಂದ ವಿಮುಖರಾಗುತ್ತಿರುವಾಗ ಈ ಪುಟ್ಟ ಬಾಲಕ ಕೃಷಿಯ ಬಗ್ಗೆ ಆಸಕ್ಕಿ ತೋರಿಸಿ ಕ್ಲಿಷ್ಟಕರವಾದ ಕೆಲಸ ಮಾಡುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಕೈ ಕೆಸರಾದರೇ ಬಾಯಿ ಮೊಸರು ಎನ್ನುವಂತೆ ಕಷ್ಟ ಪಟ್ಟರೇ ಎಂತದ್ದನ್ನು ಸಾಧಿಸಬಹುದು ಎನ್ನುವುದಕ್ಕೆ ಈ ಬಾಲಕ ಮಾದರಿಯಾಗಿದ್ದಾನೆ. (etbk)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *