ಈಗ ರಾಜ್ಯದ ಹಿಂದುಳಿದವರ ಚಾಂಪಿಯನ್‌ ಯಾರು?

ಭಾರತದಂಥ ಬಹುತ್ವದ ದೇಶದಲ್ಲಿ ಪ್ರತಿಯೊಂದು ವ್ಯಕ್ತಿ, ಜಾತಿ,ಧರ್ಮ ಗಳಿಗೆ ತಮ್ಮದೇ ಆದ ಮಹತ್ವ,ಪ್ರಾಮುಖ್ಯತೆಗಳಿವೆ. ಭವ್ಯ ಭಾರತದ ರಾಷ್ಟ್ರಪತಿ ಬ್ರಾಹ್ಮಣನೋ? ದಲಿತರೋ? ಮುಸ್ಲಿಂರೋ ಎನ್ನುವ ಅಂಶ ಕೂಡಾ ಮಹತ್ವದ್ದಾಗುತ್ತದೆ. ಭಾರತದ ಪ್ರಧಾನಿಯಾಗುವವರು ಬ್ರಾಹ್ಮಣರು,ಹಿಂದುಳಿದವರು,ದಲಿತರು, ಮುಸ್ಲಿಂ ಅಥವಾ ಇತರರೇ ಎನ್ನುವುದು ಕೂಡಾ ಚರ್ಚೆಯ ವಿಷಯ. ಭಾರತದ ಪ್ರಧಾನಿ ತನ್ನ ಜಾತಿಯನ್ನು ಬ್ರಾಹ್ಮಣ,ಓ.ಬಿ.ಸಿ. ಎಂದು ಬಿಂಬಿಸಿಕೊಳ್ಳುವುದಕ್ಕೆ ಹಾತೊ ರೆಯುವ ಪರಿಸ್ಥಿತಿ ಭಾರತದ ಜಾತಿ ಮೂಲದ ಮಹತ್ವಕ್ಕೆ ಸಾಕ್ಷಿ.

ಪ್ರಧಾನಿ ಮೋದಿ ಗುಜರಾತ್‌ ಮುಖ್ಯಮಂತ್ರಿಯಾಗುವಾಗ ಬ್ರಾಹ್ಮಣರಾಗಿದ್ದವರು ಪ್ರಧಾನಿಯಾಗುತ್ತಲೇ ಯಾಕೆ ಹಿಂದುಳಿದ ವರ್ಗದ ಮೂಲದವರಾಗುತ್ತಾರೆ ಎನ್ನುವ ಮಹತ್ವದ ಅಂಶ ಭಾರತದಲ್ಲಿ ಹಿಂದುಳಿದ ವರ್ಗಗಳಿಗೆ ಇರುವ ಶಕ್ತಿಯ ಧ್ಯೋತಕ. ಈ ಅಂಶಗಳ ಹಿನ್ನೆಲೆಯಲ್ಲಿ ಯೋಚಿಸಿದಾಗ ಭಾರತದ ಒಕ್ಕೂಟ ಸರ್ಕಾರದ ಅಧೀನದ ರಾಜ್ಯಗಳು,ಪ್ರಾಂತಗಳು ತಮ್ಮ ಅಸ್ಮಿತೆಯ ಹೋರಾಟದ ಜೊತೆಜೊತೆಗೆ ತಮ್ಮ ಪ್ರಾಂತ್ಯದ ಬಹುಸಂಖ್ಯಾತರ ಪ್ರಾಮುಖ್ಯತೆಯನ್ನು ಕೂಡಾ ಸ್ಪಷ್ಟಪಡಿಸಿವೆ.

https://www.youtube.com/watch?v=EX0SXOOriOM&t=129s

ರಾಜ್ಯದಲ್ಲಿ ಸ್ವಾತಂತ್ರ್ಯೋತ್ತರ ಎರಡು ದಶಕಗಳ ವರೆಗೆ ರಾಜ್ಯದ ಹಿಂದುಳಿದವರು,ದಲಿತರು ತಮ್ಮ ಅಸ್ಮಿತೆಯ ವಿವೇಕವನ್ನು ವ್ಯಕ್ತಪಡಿಸದ ಸಂದರ್ಭಗಳಲ್ಲಿ ಹಿಂದುಳಿದವರು,ದಲಿತರ ಮಹತ್ವವನ್ನು ಸಾರಿದವರು ಜನತಾ ಪರಿವಾರದ ನಾಯಕರು. ರಂಗನಾಥ್‌,ಖರ್ಗೆ, ಜಾಲಪ್ಪ, ಸಿದ್ಧರಾಮಯ್ಯ ಸೇರಿದ ಅನೇಕರು ನಾಯಕರಾಗಿ ಪ್ರಕಟವಾಗುತಿದ್ದಾಗ ಹಿಂದುಳಿದವರ ಚಾಂಪಿಯನ್‌ ಎಂದು ಪ್ರಸಿದ್ಧರಾಗಿದ್ದವರು ಎಸ್.‌ ಬಂಗಾರಪ್ಪ.

ಹೋರಾಟದಿಂದ ನಾಯಕರಾಗಿ ಬೆಳೆದಿದ್ದ ಎಸ್.‌ ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಸೇರಿದ ಅನೇಕರ ನಡುವೆ ತನ್ನ ತಾಕತ್ತು, ನಾಯಕತ್ವಗಳಿಂದ ಹಿಂದುಳಿದ ನಾಯಕರಾಗಿ ಪ್ರತಿಷ್ಠಾಪಿತರಾಗಿದ್ದ ಬಂಗಾರಪ್ಪ ತಮ್ಮ ಓರಿಗೆಯ ದೇವೇಗೌಡ, ಪಟೇಲ್‌,ಹೆಗಡೆ,ವಿಶ್ವನಾಥ್‌ ರಂತಹವರಿಗಿಂತ ತುಸು ಹೆಚ್ಚು ಪ್ರಸಿದ್ಧರಾಗಿ ಜನಮನ್ನಣೆ ಗಳಿಸಿದ್ದರು.

ಬಂಗಾರಪ್ಪ ಅವರ ನಂತರ ಸಿದ್ಧರಾಮಯ್ಯ ಹಿಂದುಳಿದ ನಾಯಕರಾಗಿ ವಿಜೃಂಬಿಸಿದ ನಂತರ ಈಗ ಹಿಂದುಳಿದವರ ನಾಯಕ ಯಾರು ಎನ್ನುವ ವಿಷಯ ಮುನ್ನೆಲೆಗೆ ಬಂದಿದೆ. ಅದಕ್ಕೆ ಕಾರಣ ರಾಜ್ಯದ ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅವರ ಕ್ರೀಯಾಶೀಲತೆ ಎಂದರೆ ಅತಿಶಯೋಕ್ತಿಯಲ್ಲ.

ಕಾಂಗ್ರೆಸ್‌ ರಾಷ್ಟ್ರನಾಯಕರಾಗಿ ಬೆಳೆಯುತಿದ್ದ ಹಿಂದುಳಿದ ವರ್ಗಗಳ ನಾಯಕ ಬಿ.ಕೆ.ಹರಿಪ್ರಸಾದ್‌ ಅನಿರೀಕ್ಷಿತವಾಗಿ ರಾಜ್ಯ ವಿಧಾನಪರಿಷತ್‌ ಪ್ರವೇಶಿಸಿದರು. ವಿಧಾನಪರಿಷತ್‌, ರಾಜ್ಯಸಭೆ ಸದನದ ಒಳಗೆ, ಹೊರಗೆ, ಸಾರ್ವಜನಿಕವಾಗಿ ಕಡಕ್‌ ಆಗಿ ಹೋರಾಡುವ ಯೋಗ್ಯತೆ, ಅರ್ಹತೆ, ಧೈರ್ಯ-ಸ್ಥೈರ್ಯಗಳನ್ನು ಪ್ರಕಟಪಡಿಸುವ ಬಿ.ಕೆ.ಹರಿಪ್ರಸಾದ್‌ ರಾಜ್ಯದ ಮುಖ್ಯಮಂತ್ರಿ, ಕೇಂದ್ರದ ನಾಯಕ, ಸಚಿವ, ಮುಖಂಡರಾಗುವ ಅರ್ಹತೆ ಹೊಂದಿದವರು. ಆದರೆ ಬಿ.ಕೆ. ಹರಿಪ್ರಸಾದ್‌ ಈ ಅಧಿಕಾರ ಹುದ್ದೆಗಳ ಹಿಂದೆ ಬೀಳದೆ ದೇಶದ ಹಿಂದುಳಿದ ವರ್ಗಗಳು, ದಲಿತರು, ದಮನಿತರ ಗಟ್ಟಿಧ್ವನಿಯಾಗಿ ಕೆಲಸ ಮಾಡುತ್ತಾ ಜನಸಾಮಾನ್ಯರ ಧ್ವನಿಯಾಗುತಿದ್ದಾರೆ.

ತನ್ನ ಗಟ್ಟಿತನ,ಜ್ಞಾನ,ಅನುಭವ,ತಾಳ್ಮೆ,ಸಂಯಮಗಳಿಂದ ದೇಶದ ಜನಮಾನಸ ಗೆದ್ದಿರುವ ಬಿ.ಕೆ. ಹರಿಪ್ರಸಾದ್‌ ಆಡಳಿತ ಪಕ್ಷ ಬಿ.ಜೆ.ಪಿ.ಯನ್ನು ಕಂಗೆಡಿಸಿರುವಂತೆ ಸ್ವತ: ಪಕ್ಷ ಕಾಂಗ್ರೆಸ್ ನ ಕೆಲವು ನಾಯಕರಿಗೆ ಇರಿಸು ಮುರಿಸು ಮಾಡಿರುವುದು ಅವರ ಕ್ರೀಯಾಶೀಲತೆ ಮತ್ತು ಗಾಂಧಿ ಕುಟುಂಬದೊಂದಿಗಿನ ಒಡನಾಟ. ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್‌ ಹೈಕಮಾಂಡ್‌ ನೆಚ್ಚಿನ ನಾಯಕರಾಗಿ ಹೊರಹೊಮ್ಮಿರುವ ಹರಿಪ್ರಸಾದ್‌ ರಿಗೆ ಹಿಂದುಳಿದ ವರ್ಗಗಳು ಮತ್ತು ಈಡಿಗರ ನಾಯಕತ್ವವೂ ಅನಾಯಾಸವಾಗಿ ದೊರೆಯುತ್ತಿದೆ. ಒಂದುಕಾಲದ ಕಾಂಗ್ರೆಸ್‌ ಪ್ರೀತಿಯ ನಾಯಕ ಬಂಗಾರಪ್ಪನವರ ನಂತರ ಬಹುಸಂಖ್ಯಾತ ಈಡಿಗರು ಮತ್ತು ಹಿಂದುಳಿದ ವರ್ಗಗಳು ಒಪ್ಪಿಕೊಳ್ಳುವ ಪ್ರಶ್ನಾತೀತ ನಾಯಕರಾಗಿ ಬೆಳೆಯುತ್ತಿರುವ ಹರಿಪ್ರಸಾದ್‌ ಕಾಂಗ್ರೆಸ್‌ ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಗಳಲ್ಲಿ ಪ್ರಮುಖ ಹೆಸರು ಎನ್ನಲಾಗುತ್ತಿದೆ. ತನ್ನ ಸಮೂದಾಯ, ಅಹಿಂದ್‌ ಸಮೂಹ, ಕಾಂಗ್ರೆಸ್‌, ಒಪ್ಪಿಕೊಳ್ಳುವ ಪ್ರಮುಖ ನಾಯಕರಾಗಿ ಬೆಳೆಯುತ್ತಿರುವ ಹರಿಪ್ರಸಾದ್‌ ಬಂಗಾರಪ್ಪ, ಸಿದ್ಧರಾಮಯ್ಯ ನಂತರ ಎಲ್ಲರೂ ಒಪ್ಪುವ ಜನನಾಯಕ ಎನ್ನುವುದನ್ನೂ ಸಾಬೀತು ಮಾಡುತಿದ್ದಾರೆ. ಹಾಗಾಗಿ ಕರ್ನಾಟಕದ ಈಗಿನ ಹಿಂದುಳಿದವರ ಚಾಂಪಿಯನ್‌ ಏಕೈಕ ನಾಯಕ ಹರಿಪ್ರಸಾದ ಎನ್ನುವ ಸತ್ಯ ಪ್ರಚಾರ ಪಡೆಯುತ್ತಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *