ಹಿಜಾಬ್‌ ಪರ ನಿಂತ ಬ್ರಹ್ಮಾನಂದ ಸ್ವಾಮೀಜಿ.. ಮತೀಯ ರಾಜಕಾರಣಕ್ಕೆ ವಿರೋಧ

Thumbnail image

ಬಟ್ಟೆಗಳೇ ಧರ್ಮವಲ್ಲ, ಧರ್ಮದ ಅಂತರಾಳಕ್ಕೆ ಇಳಿಯಬೇಕು: ಬ್ರಹ್ಮಾನಂದ ಸರಸ್ವತಿ ಶ್ರೀ

ಬಟ್ಟೆಗಳೇ ಧರ್ಮವಲ್ಲ. ಧರ್ಮದ ಅಂತರಾಳಕ್ಕೆ ಇಳಿಯಬೇಕು. ವೇದ, ಉಪನಿಷತ್, ಅನ್ಯಧರ್ಮದ ಖುರ್- ಆನ್, ಬೈಬಲ್‌ಗಳ ಅಂತರಾಳಕ್ಕೆ ಹೋದಾಗ ಸತ್ಯದರ್ಶನವಾಗುತ್ತದೆ ಎಂದು ಬ್ರಹ್ಮಾನಂದ ಸರಸ್ವತಿ ಶ್ರೀ ಹೇಳಿದರು.

ಕಾರವಾರ: ಬಟ್ಟೆಗಳನ್ನೇ ಧರ್ಮವೆಂದು ತಿಳಿದು ತಮಗೆ ಅನುಕೂಲವಾಗುವಂತಹ ಸಿದ್ಧಾಂತಗಳ ಮೇಲೆ ವಾದಗಳನ್ನು ಮಂಡಿಸಲಾಗುತ್ತಿದೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸದಿದ್ದರೆ ದೇಶಪ್ರೇಮ ಏನಾಗಲಿದೆ ಎಂಬ ಬಗ್ಗೆ ಭಯವಾಗುತ್ತಿದೆ ಎಂದು ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಹೊನ್ನಾವರದಲ್ಲಿ ಮಾತನಾಡಿದ ಅವರು, ಧರ್ಮದ ನಿಟ್ಟಿನಲ್ಲಿ ಶಾಲೆಯ ಮಕ್ಕಳು ಕೇಸರಿ ಶಾಲು, ಟೋಪಿ, ಹಿಜಾಬ್‌ಗಳನ್ನು ಹಾಕಿಕೊಂಡು ಬಂದು ವಿವಾದ ಸೃಷ್ಟಿಯಾಗಿದೆ. ಹಾಗಿದ್ದರೆ ಧರ್ಮವೆಂದರೇನು? ಟೋಪಿ, ಮುಖವಾಡ, ಕೇಸರಿ ಶಾಲು ಇವು ಧರ್ಮವಲ್ಲ. ಧರ್ಮವೆಂದರೆ ಬದುಕಿನ ನಿಯಮ. ಸನ್ಯಾಸವೆಂದರೆ ಕೇಸರಿ ಬಟ್ಟೆಯೊಂದೇ ಅಲ್ಲ. ನಮಗೆ ನಾವೇ ಹಾಕಿಕೊಳ್ಳುವ ಕಟ್ಟುಪಾಡು ಎಂದು ಹೇಳಿದರು. ಕೇಸರಿ ಹಾಕಿದ ಮೇಲೆ ಯಾರ ಮನೆಗೂ ಹೋಗುವಂತಿಲ್ಲ, ಮಾರ್ಗದಲ್ಲಿ ನಿಂತು ತಿನ್ನುವಂತಿಲ್ಲ. ಧರ್ಮಕ್ಕೆ ವಿರುದ್ಧವಾದ ವಿಚಾರಗಳನ್ನೂ ಮಾಡುವಂತಿಲ್ಲ ಇಂತಹ ನೈತಿಕತೆಯ ಮಟ್ಟ ಹೆಚ್ಚಿಸುವುದೇ ಧರ್ಮ ಎಂದು ಹೇಳಿದರು.

ಬಟ್ಟೆಗಳೇ ಧರ್ಮವಲ್ಲ. ಧರ್ಮದ ಅಂತರಾಳಕ್ಕೆ ಇಳಿಯಬೇಕು. ವೇದ, ಉಪನಿಷತ್, ಅನ್ಯಧರ್ಮದ ಖುರ್- ಆನ್, ಬೈಬಲ್‌ಗಳ ಅಂತರಾಳಕ್ಕೆ ಹೋದಾಗ ಸತ್ಯದರ್ಶನವಾಗುತ್ತದೆ ಎಂದರು.

ನಮ್ಮ ನಾಯಕರುಗಳಿಗೆ ದೇಶೀಯತೆ ಬೇಕಿದೆಯೇ?, ಬೇಕಿದ್ದರೆ ಇಂಥ ಸ್ಥಿತಿ ನಿರ್ಮಾಣವಾಗುತ್ತಿತ್ತಾ? ರಾಷ್ಟ್ರೀಯತೆ, ದೇಶೀಯತೆ, ರಾಷ್ಟ್ರ- ಸಹೋದರತೆ ಕಟ್ಟಬೇಕು ಎಂಬ ಮನಸ್ಥಿತಿ ನಮ್ಮ ರಾಜಕೀಯ ನಾಯಕರುಗಳಿಗೆ ಇಲ್ಲ. ಯಾವುದೇ ದೇಶದಲ್ಲಿ ಜನಾಂಗೀಯ ಸಂಘರ್ಷಗಳು ಉಂಟಾದರೆ ಆ ದೇಶ ಉಳಿಯುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮತೀಯ ಸಂಘರ್ಷಗಳು ಉಂಟಾದ ಯಾವ ದೇಶಗಳು ಉದ್ಧಾರವಾಗಿಲ್ಲ. ಉದ್ಧಾರವಾಗದಿದ್ದರೂ ಚಿಂತೆಯಿಲ್ಲ, ನನ್ನ ಪಕ್ಷ ಬರಬೇಕು ಎಂಬ ಮಾನಸಿಕತೆಯ ಜನರಿಂದಾಗಿ ಇಂತಹ ಘಟನೆ ಉಂಟಾಗುತ್ತಿರುವುದಾಗಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. (ಈಟಿ.ಬಿ.ಕೆ.)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *