ಸಿರವಂತೆ ಚಿತ್ರಸಿರಿ ಗೌರಮ್ಮ ಇನ್ನಿಲ್ಲ

ಸಾಗರದ ಸಿರವಂತೆಯ ಚಿತ್ತಾರ ಕುಟಿರದ ಅಮ್ಮ ಗೌರಮ್ಮ ಇಂದು ನಿಧನರಾಗಿದ್ದಾರೆ. ಸಿರವಂತೆಯಲ್ಲಿ ಚಿತ್ತಾರದ ಪ್ರದರ್ಶನ, ತರಬೇತಿ ನಡೆಸುತ್ತ ಗ್ರಾಮೀಣ ಕಲೆ ಪೋಶಿಸುತ್ತಿರುವ ಚಂದ್ರಶೇಖರ್‌ ಸಿರವಂತೆಯವರ ಧರ್ಮಪತ್ನಿ ಗೌರಿ ಚಂದ್ರಶೇಖರ್‌ ರಿಗೆ ಸಹಧರ್ಮಿಣಿ,ವೃತ್ತಿಧರ್ಮಿಣಿಯಾಗಿ ಚಂದ್ರಶೇಖರ್‌ ರ ಸಾಹಸ, ಹವ್ಯಾಸಗಳಿಗೆ ಸಾಥಿಯಾಗಿದ್ದರು. ಇದೇ ವಾರ ಚಿಕ್ಕ ಅಪಘಾತಕ್ಕೀಡಾಗಿ ಪ್ರಜ್ಞಾಹೀನರಾಗಿ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತಿದ್ದ ಇವರು ಇಂದು ನಿಧನರಾಗಿರುವುದು ತಿಳಿದುಬಂದಿದೆ.‌

ಜೋಗ,ಸಾಗರ ರಸ್ತೆಯ ತಮ್ಮ ಪುಟ್ಟ ಮನೆಯಲ್ಲಿ ಗಂಡನೊಂದಿಗೆ ಚಿತ್ತಾರ ಕುಟಿರ ಕಟ್ಟಿಕೊಂಡಿದ್ದ ಗೌರಿ ತಮ್ಮ ಮುಗ್ಧತೆ,ಆತಿಥ್ಯಗಳಿಂದ ಪರಿಚಿತರ ಆತ್ಮೀಯರಾಗಿದ್ದರು.ಮೃತರು ಗಂಡ ಚಂದ್ರಶೇಖರ್‌,ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಗೌರಮ್ಮನವರ ಸಾವಿಗೆ ದಿಗ್‌ ಭ್ರಾಂತರಾಗಿರುವ ಅನೇಕರಲ್ಲಿ ಡಾ. ಮಹೇಂದ್ರಕುಮಾರ್‌,ರಾಮಪ್ಪಡಿ,ಪರಿಸರತಜ್ಞ ಎಂ.ಬಿ.ನಾಯ್ಕ,ಹರ್ಷಕುಮಾರ ಕುಗ್ವೆ,ತೀ.ನಾ.ಶ್ರೀನಿವಾಸ್‌,ಶಿವರಾಮ ಪಡವಗೋಡು,ಹುಚ್ಚಪ್ಪ ಮಂಡಗಳಲೆ ಸೇರಿದಂತೆ ಕೆಲವರು ಸಂತಾಪ ಸೂಚಿಸಿದ್ದಾರೆ.

ಸಿರವಂತೆಯ ಅನಾಮಿಕ ಶಕ್ತಿ ಗೌರಮ್ಮ-

ಸಾಗರ ಜೋಗ ರಸ್ತೆಯ ಬಲಬದಿಗೆ ಸಿರವಂತೆಯಲ್ಲಿ ಇರುವ ಚಿತ್ರಸಿರಿ ಚಿತ್ತಾರ ಕುಟೀರದಲ್ಲಿ ಅನಾಮಿಕಳಂತೆ ಸದಾ ಚಟುವಟಿಕೆಯಿಂದ ಇರುತಿದ್ದ ಒಂದು ಜೀವದ ಹೆಸರು ಗೌರಿ,ಅಲ್ಲಿ ಬರುತಿದ್ದ ಅನೇಕರಿಗೆ ಚಂದ್ರಶೇಖರ್‌ ಸಿರವಂತೆ ಮಾತನಾಡಿಸುತ್ತಾರೆ,ಚರ್ಚಿಸುತ್ತಾರೆ,ಅವರದೇ ಕಲ್ಪನೆಯ ಕಣ್ಣು ತೆರೆಯುವ ಬುದ್ಧನ ಬಗ್ಗೆ ತಿಳಿಸಿ ಪ್ರವಾಸಿಗರ ಹೃದಯ ಅರಳಿಸುತ್ತಾರೆ. ಆದರೆ ಗೌರಿ ಅಕ್ಷರಶ: ಅನಾಮಿಕಳಂತೆ ಕೆಲಸ ಮಾಡುತ್ತಾ ಗಂಡನ ಸಂಜ್ಞೆ,ಸೂಚನೆ ಮೇರೆಗೆ ಆಯಾ ಸಮಯಕ್ಕೆ ತಕ್ಕಂತೆ ಟೀ,ಕಾಫಿ,ಕಷಾಯ ನೀಡಿ ಮುಗ್ಧತೆಯ ಮಾತಿನಿಂದ ಆತ್ಮೀಯರಾಗುತ್ತಾರೆ. ಈ ಸಂದರ್ಭಗಳಿಗೆ ಸಾಕ್ಷಿಯಾದ ನನ್ನಂತಹ ಅನೇಕರಿಗೆ ಚಿತ್ರಸಿರಿ,ಚಂದ್ರಣ್ಣ,ಗೌರಕ್ಕ ಅವರ ಕುಟುಂಬವೆಂದರೆ.. ಒಂಥರಾ ಆತ್ಮೀಯತೆ.

ಲೋಕದ ಕೊಂಕಿಗೆ ಕೂದಲನ್ನೂ ಕೊಂಕಿಸಿಕೊಳ್ಳದ ಈ ಜೋಡಿ ಸನ್ಮಾನಿಸಿದ ಸಾಧಕರೆಷ್ಟು,ನಾಡು, ದೇಶ-ವಿದೇಶಗಳಲ್ಲಿ ಪ್ರದರ್ಶನ ನೀಡಿ ಮಲೆನಾಡಿನ ಚಿತ್ತಾರ,ಭತ್ತದ ತೆನೆ ಸರ ಪರಿಚಯಿಸಿದ ಊರುಗಳೆಷ್ಟು ಲೆಕ್ಕವಿಟ್ಟವರ್ಯಾರು? ಈ ಸಾಧನೆಯ ಕೇಂದ್ರವ್ಯಕ್ತಿ ಚಂದ್ರಶೇಖರ್‌ ಆದರೆ ಚಂದ್ರಣ್ಣನವರಿಗೆ ಬೇಕಾದಾಗಲೆಲ್ಲಾ ಒದಗುವ ಎಡಗೈ, ಬಲಗೈ ಗೌರಮ್ಮ ಹೀಗಿರದಿದ್ದಿದ್ದರೆ ಚಂದ್ರಣ್ಣ ದೇಶ-ಕೋಶ ನುಗ್ಗುತ್ತಿರಲಿಲ್ಲ. ಸದಾ ಸಂಗಾತಿಯಾಗಿ ನೋವು-ನಲಿವಿನಲ್ಲಿ ಒಂದಾಗಿರುತಿದ್ದ ಗೌರಮ್ಮ ಇಲ್ಲದೆ ಚಂದ್ರಣ್ಣ ಅಪೂರ್ಣ. ನಾಡಿನ ಅನೇಕರ ಪ್ರೀತಿ ಪಾತ್ರ ಗೌರಮ್ಮ ಚಿಕ್ಕ ಅಪಘಾತಕ್ಕೊಳಗಾಗಿ ನಮ್ಮಿಂದ ದೂರವಾಗಿರುವುದು ನಮಗೆಲ್ಲರಿಗೆ ಬೇಸರ ನಾಡಿಗೆ ನಿಜಕ್ಕೂ ತುಂಬದ ಹಾನಿ. ಸಿರವಂತೆಯ ಚಿತ್ರಸಿರಿಯಲ್ಲಿ ಉಸಿರಾಗಿ,ಹೆಸರಾಗಿ ಹಿತವಾಗಿ ಮಿತವಾಗಿ ಬದುಕಿದ್ದ ಗೌರಮ್ಮನ ಸಾವು ನಮ್ಮೆಲ್ಲರ ಪಾಲಿಗೆ ನೋವು. -ಕನ್ನೇಶ್

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *