ನಶಿಸುತ್ತಿರುವ ಮಲೆನಾಡ ಆಲೆಮನೆ ಸೊಬಗು

ನಮ್ಮೂರ ಮಂದಾರ ಹೂವೆ… ಎನ್ನುವ ಹಾಡು ಕೇಳಿದಾಗಲೆಲ್ಲಾ ಆಲೆಮನೆ ಚಿತ್ರ ನೆನಪಾದರೆ ಮಲೆನಾಡಿಗರಿಗೆ ಆಲೇಮನೆಯ ದೃಶ್ಯಗಳೇ ಕಣ್ಮುಂದೆ ಬರುತ್ತವೆ.
ಒಂದಾನೊಂದು ಕಾಲದಲ್ಲಿ ಆತ್ಮನಿರ್ಭರದ ಅಂಗವಾಗಿ ರೈತರೆಲ್ಲಾ ಕಬ್ಬು ಬೆಳೆಯುತಿದ್ದರು. ಲಾಭ-ನಷ್ಟಗಳ ಲೆಕ್ಕಾಚಾರವಿಲ್ಲದೆ ಕಬ್ಬು ಬೆಳೆಯುವ ರೈತ ಆಲೆಮನೆಯ ಕಬ್ಬಿನ ಗಾಣಕ್ಕೆ ಎತ್ತು-ಕೋಣಗಳನ್ನು ಕಟ್ಟಿ ಅವುಗಳೊಂದಿಗೆ ಸಾಗುತ್ತಾ ನಲಿಯುತಿದ್ದ  ಕೃಷಿ ಸಂಸ್ಕೃತಿಯ ಒಂದು ಭಾಗವಾಗಿದ್ದ ಆಲೆಮನೆ ಈಗಿನ ಯಾಂತ್ರಿಕ, ತಾಂತ್ರಿಕ ಯುಗದಲ್ಲಿ ಆಗಿನಷ್ಟು ಅದ್ಭುತವಾಗಿಲ್ಲ ಆದರೆ ಈಗಲೂ ಆಲೇಮನೆ ಸೊಬಗು ಮುಂದುವರಿದಿರುವುದು ಮಲೆನಾಡಿನ ವಿಶೇಶ.

ಆಲೆಮನೆ, ಕೋಣಗಳು, ಆಲೆಮಾವ ಎನ್ನುವ ಚಿತ್ರಣ ಈಗ ತುಸು ಬದಲಾಗಿ ಗಾಣ,ಯಂತ್ರ,ವಿದ್ಯುತ್‌ ಬಳಕೆ ಗಳ ಹೊಸ ರೂಪದ ಆಲೆಮನೆಯಲ್ಲಿ ಅದೇ ಚಿಣ್ಣರಿದ್ದಾರೆ. ಆಲೆಮನೆಯ ಹಾಲು ಕಾಯಿಸುವ ಕೊಪ್ಪರಿಗೆ ಇದೆ. ಜೊತೆಗೆ ಬೆಂಕಿ- ಈ ದಿವ್ಯಾನುಭವದ ಆಲೆಮನೆ ಸೊಬಗನ್ನು ಒಂದಷ್ಟು ಭಾಗ ವ್ಯಾಪಾರೀಕರಣ,ಯಾಂತ್ರೀಕರಣ ಕಳೆದರೆ ಮಲೆನಾಡಿನಲ್ಲಿ ವಿಪರೀತವಾಗಿರುವ ಕಾಡು ಪ್ರಾಣಿಗಳ ಹಾವಳಿ ಕಬ್ಬು ಬೆಳೆಯುವ ರೈತರ ಆಸಕ್ತಿ ಕುಂದಿಸಿದೆ. ಎಲ್ಲಾ ಸವಾಲು, ತೊಂದರೆಗಳ ನಡುವೆ ಈಗಲೂ ಆಲೆಮನೆಯ ಸೊಬಗನ್ನು ಸವಿಯಲು ಖಾತರಾಗಿರುವ ಜನರಿಗೆ ಮಲೆನಾಡಿನ ಅಲ್ಲಲ್ಲಿ ಆಲೆಮನೆಯ ಸೊಬಗು ಉಣಿಸುವ ಉದಾರಿಗಳೂ ಇದ್ದಾರೆ. ಪ್ರತಿವರ್ಷ ನಡೆಯುವ ಹಬ್ಬದಂಥ ಆಲೆಮನೆಯಲ್ಲಿ ಕಬ್ಬಿನ ರಸ ಕುಡಿದು ಆತ್ಮೀಯರೊಂದಿಗೆ ಹರಟುವ ಮಲೆನಾಡಿನ ಆಲೇಮನೆ ಈಗಲೂ ವಿಶೇಶವೇ.


ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ತೆಂಗಿನಮನೆಯಲ್ಲಿ ನಡೆದ ಆಲೆಮನೆ ಇಂಥಹ ಸಬ್ರಮಕ್ಕೆ ಸಾಕ್ಷಿಯಾಯಿತು. ಕಬ್ಬಿನ ಸಿಹಿ,ರಸದ ಸ್ವಾದ ಸವಿದ ಅನೇಕರು ಆಲೆಮನೆ ಮಾಡಿ ಸ್ಥಳಿಯರನ್ನು ಖುಷಿಪಡಿಸುವ ಬಗ್ಗೆ ಸಂಬ್ರಮಿಸಿದರೆ ಸ್ವಯಂ ಆಲೆಮನೆ ನಡೆಸಿದ ರೈತರು ತಮ್ಮ ನೋವು-ನಲಿವು ಹೇಳಿಕೊಂಡರು. ಎಲ್ಲಾ ಸವಾಲುಗಳ ನಡುವೆ ಯಾಂತ್ರೀಕರಣದ ಆಲೆಮನೆ ಹಬ್ಬ ಜನರನ್ನು  ಖುಷಿ ಪಡಿಸಿದ್ದು ವಿಶೇಶ.

ಮೊದಲಿನ ಆಲೆಮನೆಯ ವಿಶೇಶವೇ ಬೇರೆ ಆದರೆ ಈಗಲೂ ನಾವು ಹಂಚಿ ತಿನ್ನುವ ಹಳೆ ಪದ್ಧತಿ ಉಳಿಸಿಕೊಂಡು ಊರುಕೇರಿಯ ಜನರಿಗೆ ಕಬ್ಬು-ಕಬ್ಬಿನ ಹಾಲು ಕೊಟ್ಟು ಖುಷಿ ಪಡುತಿದ್ದೇವೆ. ಕಾಡು ಪ್ರಾಣಿಗಳ ಹಾವಳಿ ರೈತನ ಆಸಕ್ತಿ-ಅಭಿರುಚಿ ಕುಂದಿಸಿದರೆ,ಯಾಂತ್ರೀಕರಣ ಮೊದಲಿನ ವ್ಯವಸ್ಥೆ ಬದಲಿಸಿದೆ ಆದರೂ ಆಲೆಮನೆ ವಿಶೇಶವೇ-ಡಿ.ಕೆ.ನಾಯ್ಕ, ತೆಂಗಿನಮನೆ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *