ದಂಡಕಾರಣ್ಯದಲ್ಲಿ ಬಲೆಗೆ ಬಿದ್ದ ಮೊಸಳೆಯ ರಕ್ಷಣೆ!

ದಂಡಕಾರಣ್ಯ ಇರುವ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಅಲ್ಲಿಯ ಪ್ರಕೃತಿ ಸೊಬಗಿಗೆ ಪ್ರಸಿದ್ಧ. ಪ್ರವಾಸಿಗರ ಸ್ವರ್ಗದಂತಿದ್ದ ದಾಂಡೇಲಿಯನ್ನು ಕುಪ್ರಸಿದ್ಧಮಾಡಿದ್ದು ಅಲ್ಲಿಯ ಪೇಪರ್‌ ಮಿಲ್‌ ಮತ್ತು ಮೊಸಳೆಗಳು. ಕಳೆದ ಒಂದು ವರ್ಷದೀಚೆಗೆ ದಾಂಡೇಲಿಯಲ್ಲಿ ಮೊಸಳೆಗಳಿಗೆ ಆಹುತಿಯಾದ ಮನುಷ್ಯ, ಪ್ರಾಣಿಗಳ ಸಂಖ್ಯೆ ಅರ್ಧಡಜನ್‌ ದಾಟಿದೆ. ಹೀಗೆ ದಿಢೀರನೇ ದಾಂಡೇಲಿಯನ್ನು ಪ್ರಸಿದ್ಧ ಮಾಡಿದ ಮೊಸಳೆಗಳ ಬಗ್ಗೆ ಸ್ಥಳಿಯರು,ಹೊರ ಊರಿನವರು ಹೆದರುವಂತಾಗಿರುವ ಹಿಂದೆ ಮೊಸಳೆಗಳ ಆಟಾಟೋಪದ ಕಾರಣಗಳಿವೆ.


ಈ ಭಯದ ನಡುವೆ ಇಂದು ಹಳೆ ದಾಂಡೇಲಿಯ ಕಾಳಿನದಿ ದಡದ ಮೇಲೆ ಬಂದ ಮೊಸಳೆ ಸ್ಥಳಿಯರ ಭಯಕ್ಕೆ ಕಾರಣವಾಯಿತು. ಕಾಳಿನದಿಗೆ ತಾಕಿಕೊಂಡಿರುವ ಗಟಾರದ ಮೂಲಕ ಮೇಲೆ ಬಂದ ಮೊಸಳೆ ಗಮನಿಸಿದ ಸ್ಥಳಿಯರು ಹೆದರಿದರು. ನೋಡನೋಡುತ್ತಲೇ ಅರಣ್ಯ ಇಲಾಖೆ, ಸ್ಥಳಿಯಾಡಳಿತಕ್ಕೆ ಮಾಹಿತಿ ರವಾನಿಸಿದ ಸ್ಥಳಿಯರು ಅಧಿಕಾರಿಗಳೊಂದಿಗೆ ತಾವೂ ಸೇರಿ ಮೊಸಳೆ ಹಿಡಿಯುವ ಕಾರ್ಯಾಚರಣೆಗೆ ಕೈ ಜೋಡಿಸಿದರು.
ಬೇಲಿ ಅಂಚಿನ ಮೆಸ್‌ ಬಳಿ ತಿಣಕಾಡಿದ ಮೊಸಳೆ ಕೊನೆಗೂ ಮಾನವನ ಸಾಹಸದೆದುರು ಸೋತು ಸೆರೆಯಾಯಿತು. ಮೊಸಳೆ ಎಂದರೆ ಬೆಚ್ಚಿಬೀಳುವ ಜನರ ನಡುವೆ ಬಂದು ಭಯ ಹುಟ್ಟಿಸಿದ ಮೊಸಳೆಯನ್ನು ಹಿಡಿದು ರವಾನಿಸಲಾಯಿತು. ಕಳೆದ ಹಲವು ವರ್ಷಗಳಿಂದ ತಮ್ಮ ವಾಸಸ್ಥಾನ ಮಾಡಿಕೊಂಡಿರುವ ದಾಂಡೇಲಿಯ ಕಾಳಿ ನದಿಯ ಮೊಸಳೆಗಳು ಇತ್ತೀಚಿನ ವರ್ಷಗಳ ವರೆಗೆ ಮನುಷ್ಯರಿಗೆ ಮಾರಣಾಂತಿಕವಾದ ದೃಷ್ಟಾಂತಗಳಿರಲಿಲ್ಲ. ಈಗ ಕೆಲವೇ ವರ್ಷಗಳ ಈಚೆ ಸ್ಥಳಿಯರು, ಪ್ರವಾಸಿಗರಿಗೆ ಹೆದರಿಸುತ್ತಿರುವ ಮೊಸಳೆಗಳ ಸಂರಕ್ಷಣೆ, ವಾಸಕ್ಕೆ ದಾಂಡೇಲಿಯಲ್ಲಿ ಕ್ರೊಕೊಡೈಲ್‌ ಪಾರ್ಕ್‌ ಕೂಡಾ ಮಾಡಲಾಗಿದೆ.

ಕ್ರೊಕೊ ಡೈಲ್‌ ಪಾರ್ಕ್‌ ಇರುವ ಹಳಿಯಾಳ ರಸ್ತೆಗೆ ವಿರುದ್ಧ ದಿಕ್ಕಿನ ಹಳೆದಾಂಡೇಲಿಯಲ್ಲಿ ಇಂದು ಕಂಡ ಮೊಸಳೆ ಅರಣ್ಯ ಇಲಾಖೆಯಿಂದ ಪಾರ್ಕ್‌ ಸೇರಿದೆ. ಈ ಪಾರ್ಕ್‌ ಪ್ರದೇಶದಿಂದ ಹೊರಗಡೆ ಮೊಸಳೆಗಳು ಸಂಚರಿಸದಂತೆ ಸೂಕ್ತ ವ್ಯವಸ್ಥೆ ಮಾಡಬೇಕೆಂಬುದು ಸ್ಥಳಿಯರ ಬೇಡಿಕೆಯಾಗಿದೆ.

ನದಿ ಬಿಟ್ಟು ದಾಂಡೇಲಿಯ ಜನವಸತಿ ಪ್ರದೇಶಕ್ಕೆ ಬಂತು ಬೃಹತ್ ಗಾತ್ರದ ಮೊಸಳೆ

ದಾಂಡೇಲಿಯ ಜನವಸತಿ ಪ್ರದೇಶದಲ್ಲಿ ಮತ್ತೆ ಮೊಸಳೆ ಕಂಡುಬಂದಿದ್ದು, ಜನರು ಆತಂಕಗೊಂಡಿದ್ದಾರೆ.

ಕಾರವಾರ: ಕಾಳಿ ನದಿಯಿಂದ ಇಲ್ಲಿನ ದೇಶಪಾಂಡೆ ನಗರದ ಕೆಎಸ್‌ಆರ್​ಟಿಸಿ ಡಿಪೋ ಬಳಿ ಬಂದಿದ್ದ ಮೊಸಳೆಯನ್ನು ರಕ್ಷಿಸಿ, ಮರಳಿ ನದಿಗೆ ಬಿಡಲಾಗಿದೆ. ಗುರುವಾರ ಬೆಳಂಬೆಳಗ್ಗೆ ಪಟ್ಟಣದ ಜನವಸತಿ ಪ್ರದೇಶದತ್ತ ಆಗಮಿಸಿದ್ದ ಬೃಹತ್ ಮೊಸಳೆಯನ್ನು ಕಂಡ ಸ್ಥಳೀಯರು ಆತಂಕಗೊಂಡಿದ್ದರು. ತಕ್ಷಣ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು.

ಬಳಿಕ ಸ್ಥಳೀಯ ಯುವಕರು ಸೇರಿ ಹಗ್ಗದ ಸಹಾಯದಿಂದ ಮೊಸಳೆಯ ಬಾಯಿ, ದೇಹವನ್ನು ಬಿಗಿದು ಕಟ್ಟಿ ಹಾಕಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ವಾಹನದ ಮೂಲಕ ಪುನಃ ಕಾಳಿ ನದಿಗೆ ಬಿಟ್ಟಿದ್ದಾರೆ.https://prod.suv.etvbharat.com/v2/smart_urls/6229ab2b71d60097bf97405f/embedplayer1?

ದಾಂಡೇಲಿಗೆ ಬಂದ ಬೃಹತ್ ಗಾತ್ರದ ಮೊಸಳೆ

ಕಳೆದ ಕೆಲ ದಿನಗಳಿಂದ ಆಗಾಗ್ಗೆ ಮೊಸಳೆಗಳು ನದಿಯಿಂದ ನಗರದೊಳಗೆ ಬರುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. (etbk)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *