

ಕರಪ್ಟ್ ಆಡಳಿತಪಕ್ಷ ಮತ್ತು ಕರಪ್ಟ್ ವಿರೋಧ ಪಕ್ಷಗಳಿಂದ ಉತ್ತಮ ಆಡಳಿತ ವ್ಯವಸ್ಥೆ, ಅಭಿವೃದ್ಧಿ ಸಾಧ್ಯವಿಲ್ಲ ಎಂದ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರೈತವಿರೋಧಿ ಕಾರ್ಪೋರೇಟ್ ಸರ್ಕಾರ ಮತ್ತು ಬ್ರಷ್ಟ ಆಡಳಿತದ ವಿರುದ್ಧ ಪರ್ಯಾಯ ಸರ್ಕಾರ ರಚನೆಗೆ ಒಲುವು ತೋರಿದ್ದಾರೆ. ಈ ವಿದ್ಯಮಾನ ರಾಜ್ಯದಲ್ಲಿ ಆಪ್, ತೃಣಮೂಲ ಕಾಂಗ್ರೆಸ್ ಗಳ ನೇತೃತ್ವದಲ್ಲಿ ಪರ್ಯಾಯ ರಂಗ ಸ್ಥಾಪನೆಯ ಸುಳಿವು ನೀಡಿದೆ.

ಭಾರತದಲ್ಲಿ ಈಗ ಕಾರ್ಪೋರೇಟ್ ಸರ್ಕಾರಗಳು ನಡೆಯುತಿದ್ದು ಪರ್ಯಾಯ ಸರ್ಕಾರ ರಚನೆ ಆಗದೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗಡಿಯ ತಾಳಗುಪ್ಪ ದಲ್ಲಿ ನಡೆದ ರೈತರ ಸಮಾವೇಶಕ್ಕೆ ಬಂದು ಸಿದ್ಧಾಪುರ ಮಳಲವಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರಾ? ರಾಜ್ಯ ಸರ್ಕಾರ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದ (ರು). ಕೋಡಿಹಳ್ಳಿ ವಿರೋಧ ಪಕ್ಷಗಳು ಮಾಡುವ ಕೆಲಸವನ್ನು ಸಂಘ ಪರಿವಾರದ ಅಂಗ ಸಂಸ್ಥೆಗಳು ಮಾಡುತ್ತಿವೆ. ರಾಜ್ಯದ ಅರಾಜಕ ಸ್ಥಿತಿಗೆ ಕಾರಣವಾಗಿರುವ ಸಂಘದ ಅಂಗಸಂಸ್ಥೆಗಳನ್ನು ನಿಯಂತ್ರಿಸದ ಮುಖ್ಯಮಂತ್ರಿ ಮುಖ್ಯಮಂತ್ರಿ ಆಗಿ ಉಳಿಯುವ ನೈತಿಕತೆ ಕಳೆದುಕೊಂಡಿದ್ದಾರೆ. ೪೦ ಪರ್ಸೆಟೇಜ್ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಪ್ರತಿಪಕ್ಷವಾಗಿ ಜವಾಬ್ಧಾರಿಯಿಂದ ಕೆಲಸಮಾಡದ ಕಾಂಗ್ರೆಸ್ ಮತ್ತು ಆಡಳಿ ತಾರೂಢ ಬಿ.ಜೆ.ಪಿ.ಗಳಿಗೆ ಜನರ ಬಳಿ ಹೋಗಲು ನೈತಿಕತೆ ಇಲ್ಲ ಎಂದರು.
ದೇಶದಲ್ಲಿ ಇಂದು ಬಂಡವಾಳಶಾಹಿಗಳ ಪರ ಕಾರ್ಪೋರೇಟ್ ಸರ್ಕಾರ ನಡೆಯುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಬವಣೆ
ಕೇಳುವವರಿಲ್ಲ ಬಂಡವಾಳಶಾಹಿಗಳ ದೇಶಮಾಡಲು ಹೊರಟಿರುವವರ ವಿರುದ್ಧ ಜನಜಾಗೃತಿ ಮಾಡಿ ಜನಪರ ಆಡಳಿತ ಜಾರಿಗೊಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಪಂಜಾಬ್ ನಲ್ಲಿ ಆದ ಪವಾಡ ರಾಜ್ಯದಲ್ಲೂ ಆಗುವ ಕಾಲ ದೂರವಿಲ್ಲ ಈ ಹಿನ್ನೆಲೆಯಲ್ಲಿ ಇದೇ ಏ೨೧ ರಿಂದ ಜನಾಂದೋಲನ ಪ್ರಾರಂಭವಾಗಲಿದೆ ಎಂದು ಚಂದ್ರಶೇಖರ್ ಪ್ರಕಟಿಸಿದರು.
. ಸರ್ಕಾರ ನಡೆಸುವ ಪರಿವಾರ ಜನವಿರೋಧಿಯಾಗಿ ವರ್ತಿಸುತ್ತಿದೆ. ರೈತರು ಬೆಳೆದ ಮಾವನ್ನು ಮುಸ್ಲಿಂ ರು ಖರೀದಿಸುತಿದ್ದಾರೆ. ರೈತರಿಗೆ ಖರೀದಿ ವ್ಯವಸ್ಥೆ ಮಾಡದೆ ಮುಸ್ಲಿಂ ರಿಗೆ ಮಾರಬೇಡಿ ಎನ್ನುವವರನ್ನು ನಿಯಂತ್ರಿಸದ ಸರ್ಕಾರ ರೈತವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಸರ್ಕಾರಕ್ಕೆ ತಾಕತ್ತಿದ್ದರೆ ರೈತರ ಉತ್ಫನ್ನ ಖರೀದಿಸಲಿ, ರೈತರಿಗೆ ಬೆಂಬಲಬೆಲೆ ಕೊಟ್ಟು ರೈತರ ಹಿತ ಕಾಪಾಡಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದ ಕೋಡಿಹಳ್ಳಿ ದೇಶದ ೬೦ ಪ್ರತಿಶತ ರೈತರು ಹಿಂದುಗಳಲ್ಲವೆ? ರೈತರು ಹಾನಿ ಅನುಭವಿಸಿ ಆತ್ಮಹತ್ಯೆಗೆ ಶರಣಾಗುತಿದ್ದಾರೆ. ಹಿಂದೂ, ಹಿಂದುತ್ವ ಎನ್ನುವ ಸರ್ಕಾರ ಹಿಂದೂ ರೈತರನ್ನು ರಕ್ಷಿಸುವ ಹೊಣೆ ಹೊರಬೇಕಲ್ಲವೆ? ಆಡಳಿತ ಪಕ್ಷ, ವಿರೋಧ ಪಕ್ಷ ಳೆಲ್ಲಾ ಬ್ರಷ್ಟರಾಗಿರುವುದರಿಂದ ದೇಶದ ಪರಿಸ್ಥಿತಿ ಹದಗೆಟ್ಟದೆ. ಈ ಅವ್ಯವಸ್ಥೆಗಳಿಗೆ ಪರ್ಯಾಯ ಸರ್ಕಾರವೊಂದೇ ಪರಿಹಾರ ಅದುಕೂಡಾ ಸಾಧ್ಯವಾಗುವ ಕಾಲ ದೂರವಿಲ್ಲ ಎಂದರು.


_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
