ಪ್ರಥಮ ಚುಂಬನಂ ದಂತಭಗ್ನಂನಂತಾದ ಹೋಬಳಿಮಟ್ಟದ ಕುಂದುಕೊರತೆಗಳ (ಜಿಲ್ಲಾಧಿಕಾರಿಗಳ) ಪರಿಶೀಲನಾ ಕಾರ್ಯಕ್ರಮ


ಸರ್ಕಾರದ ಕಾರ್ಯಕ್ರಮಗಳಿಗೆ ಸ್ಫಷ್ಟತೆ ಇದ್ದರೆ ಅವುಗಳಿಂದ ಸಾರ್ವಜನಿಕರಿಗೆ ನೆರವಾಗುತ್ತದೆ. ಆದರೆ ಸರ್ಕಾರಿ ಕಾರ್ಯಕ್ರಮಗಳು ಕಾಟಾಚಾರಕ್ಕೆ ಎಂಬಂತೆ ನಡೆದರೆ ಅವುಗಳಿಂದ ಸಾರ್ವಜನಿಕರಿಗೆ ಲಾಭವೂ ಆಗುವುದಿಲ್ಲ,ಸರ್ಕಾರದ ಉದ್ದೇಶವೂ ಈಡೇರಿದಂತಾಗುವುದಿಲ್ಲ. ಇದೇ ವರ್ಷ ಪ್ರಾರಂಭವಾದ ಹೋಬಳಿ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಂದ ಸಾರ್ವಜನಿಕ ಕುಂದುಕೊರತೆಗಳ ಪರಿಶೀಲನಾ ಸಭೆ ಇಂಥ ವಿಫಲ ಕಾರ್ಯಕ್ರಮಗಳಿಗೊಂದು ಉದಾಹರಣೆ. ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳ ಹೋಬಳಿ ಮಟ್ಟದ ಸಾರ್ವಜನಿಕ ಕುಂದು ಕೊರತೆಗಳ ಪ್ರಗತಿ ಪರಶೀಲನಾ ಸಭೆ ಪ್ರಥಮ ಚುಂಬನಂ,ದಂತಭಗ್ನಂ ಎಂಬಂತಾಯಿತು.


ಸಿದ್ಧಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್‌ ನಲ್ಲಿ ನಡೆದ ಈ ಸಭೆಗಾಗಿ ಸ್ಥಳಿಯಾಡಳಿತ ಎಲ್ಲಾ ವ್ಯವಸ್ಥೆಗಳನ್ನು ಮಾಡಿತ್ತು. ಸ್ವಾಗತಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಕುಂಬಮೇಳ! ಜಿಲ್ಲಾಧಿಕಾರಿಗಳ ಸ್ವಾಗತಕ್ಕೆ ಯಕ್ಷಗಾನ ವೇಶಧಾರಿ ಹೀಗೆ ಬಾಹ್ಯ ಆಕರ್ಷಣೆಯಾಗಿ ಕಾರ್ಯಕ್ರಮ ಜಿಲ್ಲೆಯ ಗಮನ ಸೆಳೆದಂತಿತ್ತು. ಜಿಲ್ಲಾಡಳಿತದ ಪೂರ್ವತಯಾರಿಯಿಂದ ಸಾಕಷ್ಟು ಜನರೂ ಆಗಮಿಸಿದ್ದರು. ಆದರೆ ವಿಶಿಷ್ಟ ತಯಾರಿಯಿಂದ ಪ್ರಾರಂಭವಾದ ಕಾರ್ಯಕ್ರಮಕ್ಕೆ ತಕ್ಕಂತೆ ಸಾರ್ವಜನಿಕರ ಅಹವಾಲು ಹೇಳಲು ಅವಕಾಶವಾಗಲಿಲ್ಲ. ಜಿಲ್ಲಾಧಿಕಾರಿಗಳನ್ನು ಮುತ್ತಿಕೊಂಡ ಸಾರ್ವಜನಿಕರು ತಮ್ಮ ಅಹವಾಲು ಹೇಳಲು ಗೋಳಾಡಿದರು. ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು  ತಂದ ಅರ್ಜಿಗಳನ್ನು ನೀಡಿ ವೇದಿಕೆಯಲ್ಲಿ ಏನಾಗುತ್ತಿದೆ ಎಂದು ತಿಳಿಯದ ಸಾರ್ವಜನಿಕರು ಪರದಾಡಿದರು.

ಹೋಬಳಿಮಟ್ಟದ ಕುಂದುಕೊರತೆ ಕೇಳಲು ಬಂದ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿದರಾದರೂ ಸಾರ್ವಜನಿಕರಿಗೆ ತಮ್ಮ ಅಹವಾಲುಗಳ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿದ ಉತ್ತರ ಸಮಧಾನ ತರಲಿಲ್ಲ. ಪೂರ್ಣಕುಂಭ ಸ್ವಾಗತ ನೀಡಿದ ಅಂಗನವಾಡಿ ಕಾರ್ಯಕರ್ತೆಯರು ಬಿಸಿಲಲ್ಲಿ ನಿಂತು ಹೆಣಗಿದ್ದು, ಕೆಲವು ಪ್ರಮುಖ ಅಹವಾಲುಗಳನ್ನಾದರೂ ಸಾರ್ವಜನಿಕರಿಗೆ ಕೇಳುವಂತೆ ಧ್ವನಿವರ್ಧಕದ ಮೂಲಕ ಹೇಳಿಸಿ ಅವುಗಳಿಗೆ ಜಿಲ್ಲಾಧಿಕಾರಿಗಳೂ ಮೈಕ್‌ ನಲ್ಲೇ ಉತ್ತರಿಸಿದ್ದರೆ ಸೇರಿದ್ದ ಸಾರ್ವಜನಿಕರಿಗೆ ಈ ಕುಂದುಕೊರತೆಗಳ ಪರಿಶೀಲನೆ ಅರ್ಥವಾಗುತಿತ್ತೇನೋ. ಒಟ್ಟಾರೆ ಬಹುನಿರೀಕ್ಷೆಯ ಜಿಲ್ಲಾಮಟ್ಟದ ಕಾರ್ಯಕ್ರಮ ಹೋಬಳಿಮಟ್ಟದ ಕುಂದುಕೊರತೆಗಳ ಪರಿಶೀಲನಾ ಸಭೆಯ ಪ್ರಾರಂಭೋತ್ಸವ ಸರ್ಕಾರದ ಅಗ್ಗದ ಕಾರ್ಯಕ್ರಮ ಎನ್ನುವ ಟೀಕೆಗೆ ಒಳಗಾಗುವಂತಾಯಿತು. ಹೋಬಳಿ ಮಟ್ಟದ ವೈಯಕ್ತಿಕ ಸಮಸ್ಯೆಗಳಷ್ಟೇ ಅಲ್ಲದೆ ಸಾರ್ವಜನಿಕ ಅಹವಾಲುಗಳಿಗೂ ಸರಿಯಾದ ಉತ್ತರ ಪರಿಹಾರದ ಭರವಸೆ ದೊರೆಯದಿರುವುದು ಈ ಕಾರ್ಯಕ್ರಮದ ವಿಫಲತೆಯ ವಿಷಯ ವೈರಲ್‌ ಆಗುವುದಕ್ಕೆ ಸೀಮಿತವಾದಂತಾಗಿದೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮೀನು ಕಚ್ಚಿ ಸಾವು!

ದೇವಬಾಗ್: ಬಲೆಗೆ ಬಿದ್ದಿದ್ದ ‘jellyfish’ ಕುಟುಕಿ ಮೀನುಗಾರ ಸಾವು! ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು...

ತೈಲ ಬೆಲೆ ಏರಿಕೆ ಪ್ರತಿಭಟನೆ ವೇಳೆ ಹೃದಯಾಘಾತ: BJP ಮಾಜಿ MLC ಎಂ.ಬಿ ಭಾನುಪ್ರಕಾಶ್ ನಿಧನ

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದ್ದಾರೆ. ಭಾನುಪ್ರಕಾಶ್ ಶಿವಮೊಗ್ಗ: ಇಂಧನ ಮೇಲಿನ ವ್ಯಾಟ್ ಏರಿಕೆ ವಿರೋಧಿಸಿ...

ಪ.ಪಂ. ರಸ್ತೆ, ಚರಂಡಿ ನಿರ್ವಹಣೆಗೆ ಆದ್ಯತೆ ನೀಡಲು ಶಾಸಕರ ಸೂಚನೆ

ಸಿದ್ಧಾಪುರ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ರಸ್ತೆಗಳ ನಿರ್ವಹಣೆ,ಹಾಗೂ ಚರಂಡಿ ಮತ್ತು ನೀರಿನ ವ್ಯವಸ್ಥೆಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡಲು ಶಾಸಕ ಭೀಮಣ್ಣ ನಾಯ್ಕ ಸೂಚಿಸಿದರು....

fake modi menia…….. ಮೋದಿ ಭಜನೆಯಿಂದ ಕಾಂಗ್ರೆಸ್‌ ಸೋಲು! ಕಾಂಗ್ರೆಸ್‌ ಸೋಲಿಗೆ ಕಾರಣ ಭಾಗ-೦೫ : ಕ್ರಾಂತಿ ಚಿರಾಯುವಾಗದೆ ಅನ್ಯ ದಾರಿಯೆ ಇಲ್ಲ.

ಸಾಹಿತ್ಯ, ಚಿಂತನೆ, ಹೋರಾಟಗಳೆಲ್ಲ ಯಾಕೆ ಬೇಕು ಎನ್ನುವ ಮನಸ್ಥಿತಿ ಹಲವರಲ್ಲಿದೆ. ಸಾಹಿತ್ಯ ಪ್ರಭುತ್ವವನ್ನು ಪ್ರಶ್ನಿಸಿ ಆಡಳಿತವನ್ನು ಜನಪರವಾಗಿಸುವತ್ತ ಕೆಲಸ ಮಾಡುತ್ತದೆ. ಚಿಂತನೆ ಹೊಸ ಹೊಳಹುಗಳ...

ದುರಹಂಕಾರ ಪಟ್ಟವರನ್ನು ಶ್ರೀರಾಮನೇ 240 ಸೀಟುಗಳಿಗೆ ತಡೆದ: RSS ನಾಯಕ ಇಂದ್ರೇಶ್ ಕುಮಾರ್ ವಾಗ್ದಾಳಿ

ಲೋಕಸಭಾ ಚುನಾವಣೆಯ ಫಲಿತಾಂಶಗಳ ನಂತರ ಆರೆಸ್ಸೆಸ್‌ ನಾಯಕ ಇಂದ್ರೇಶ್‌ ಕುಮಾರ್ ಆಡಳಿತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ ಹಾಗೂ ʼಅಹಂಕಾರʼಕ್ಕಾಗಿ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ....

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *