ಇದು ನನ್ನ ಅಳಲು ಕೂಡಾ! ನಾವು ಈ ಕಾಲದವರಲ್ಲ ಬಿಡಿ…

ಈ ಶೀರ್ಷಿಕೆಯನ್ನಷ್ಟೇ ಬರೆದು ಸುಮ್ಮನಾಗಬೇಕಿತ್ತು. ಹೀಗೆ ಸುಮ್ಮನಾಗಲು ಬೇಕಷ್ಟು ಕಾರಣಗಳೂ,ಸಬೂಬುಗಳು ಇವೆ. ಬಟ್‌,

ಲಂಕೇಶ್‌ ಕಾಲದಲ್ಲಿ ಬೇಕಷ್ಟು ಲಂಕೇಶ್‌ ಆಗಲು ಅವಕಾಶವಿದ್ದವು. ವಡ್ಡರ್ಸೆ ಕಾಲದಲ್ಲಿ ಹಾಗಿಲ್ಲದೇ ಇದ್ದಿದ್ದರೆ ಶೆಟ್ಟರು ಕನ್ನಡ ಸಾರಸ್ವತ ಲೋಕವನ್ನು ಅಲುಗಾಡಿಸುತಿದ್ದರೆ?

ಹೀಗೆಲ್ಲಾ ಚಿಂತಿಸುವ ಮುನ್ನ ನಮ್ಮ ಕಾಲದ ಲೆಟರ್ಹೆಡ್‌ ಪತ್ರಕರ್ತರು, ಗುರುತಿನ ಚೀಟಿ,ಪ್ರೆಸ್‌ ಲೇಬಲ್‌ ನ ಅಕ್ಷರ ಲೋಕದ ಲಾಭಕೋರರೇ ಎದುರು ಬರುತಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಯಮಾನುಸಾರ ಸದಸ್ಯನಾಗಲೂ ಅರ್ಹನೇ ಅಲ್ಲ, ಬಹುತೇಕ ಪತ್ರಕರ್ತರು ಪದವಿ,ಅರ್ಹತೆ, ಯೋಗ್ಯತೆಗಳಿಲ್ಲದೆ ಪತ್ರಕರ್ತರು, ಸಂಘದ ಸದಸ್ಯರು, ಪದಾಧಿಕಾರಿಗಳೆಲ್ಲಾ ಆಗುತ್ತಾರೆ. ಸಮಾಜದ ನ್ಯೂನ್ಯತೆ ಹೇಳುವ ಮಾಧ್ಯಮದ ಮಂದಿಗಳಿಗೆ ಗುರುತಿನ ಚೀಟಿ, ಲೆಟರ್ಹೆಡ್‌,ಸಂಘದ ಸದಸ್ಯತ್ವಗಳೇ ಅರ್ಹತೆಗಳಾಗುತ್ತವೆ. ನಾವು ಯೋಗಿ,ಮೋದಿ ಕಾಲದಲ್ಲಿದ್ದೇವೆ. ಆದರೆ ನಾವೆಲ್ಲಾ ಇಲ್ಲದಿದ್ದರೆ ಈ ದುರುಳರು ಇನ್ನಷ್ಟು ನಿರ್ಭೀಡೆಯಿಂದ ಸತ್ಯವನ್ನು ಸುಳ್ಳುಮಾಡುತಿದ್ದರು,ಸುಳ್ಳನ್ನು ಸತ್ಯ ಮಾಡುತಿದ್ದರು. ಈಗಲೂ ಕಾಲ ಮಿಂಚಿಲ್ಲ ಈ ಅಚ್ಚೇ ದಿನ ಮಾಯವಾಗಿ ನಮ್ಮ ವಾಸ್ತವದ ದಿನಗಳು ಭರದಿಂದ ಬರಲು ಸಜ್ಜಾ ಗುತ್ತಿವೆ. ಕಾಯೋಣ ತಾಳ್ಮೆಯಿಂದ ನಿಮಗೆ, ನಿಮ್ಮ ಅಭಿಮಾನಿಗಳಿಗೆ ವಿಶ್ವ ವ್ಯಂಗ್ಯಚಿತ್ರ ದಿನಾಚರಣೆಯ ಶುಭಾಶಯಗಳು.

ಸುಮಾರು ಇಪ್ಪತ್ತೆರಡು ವರ್ಷಗಳ ಹಿಂದೆ ಕಾರ್ಟೂನ್ ಎನ್ನುವ ಕಲೆಯನ್ನು ನೆಚ್ಚಿ ಇದನ್ನೇ ವೃತ್ತಿಯಾಗಿ ಆಯ್ದುಕೊಂಡು ಕೂತುಬಿಟ್ಟೆ ನಾನು. ಕೈಯಲ್ಲಿ ಎಚ್ ಎ ಎಲ್ ನ ಇಂಟರ್ವ್ಯೂ ಲೆಟರ್ ಇತ್ತು. ಆಗೆಲ್ಲ ಚೂರು ಪಾರು ಲಂಚದೊಂದಿಗೆ ಸುಲಭವಾಗಿ ಸಿಕ್ಕಿ ಬಿಡಬಹುದಾದ ಕೇಂದ್ರ ಸರ್ಕಾರದ ನೌಕರಿಯಾಗಿತ್ತದು. ಕಾರ್ಟೂನ್ ನ ಹುಚ್ಚು ಹಿಡಿಸಿಕೊಂಡ ನಾನು ಅತ್ತ ತಿರುಗಿಯೂ ನೋಡಲಿಲ್ಲ. ಮಡಿಕೇರಿಯ ಸ್ಥಳೀಯ ಪತ್ರಿಕೆಯೊಂದರಲ್ಲಿ ಮಾತಾಡಿಕೊಂಡು ನಿತ್ಯ ಕಾರ್ಟೂನ್ ಆರಂಭಿಸಿಯೇಬಿಟ್ಟೆ. ನನಗೆ ಸರಿಯಾಗಿ ನೆನಪಿದೆ. ನನ್ನ ಮೊತ್ತ ಮೊದಲನೇ ಕಾರ್ಟೂನಿನ ಬಗ್ಗೆಯೇ ಸಂಘಪರಿವಾರದ ಚಿಳ್ಳೆಪಿಳ್ಳೆಗಳು ಎಡಿಟರ್‌ಗೆ ದೂರಿತ್ತವು. ಗಣೇಶಹಬ್ಬದ ದಿನ ವಾಹನ ಪಾರ್ಕಿಂಗ್ ಜಾಗದಲ್ಲಿ ತನ್ನ ವಾಹನವಾದ ಇಲಿಯನ್ನು ಗಣೇಶ ಪಾರ್ಕಿಂಗ್ ಮಾಡಿದ್ದ ಕಾರ್ಟೂನ್ ಅದು. ನನ್ನ ವಾದದ ಮುಂದೆ ಆ ಚಿಳ್ಳೆಪಿಳ್ಳೆಗಳು ಸಪ್ಪೆಹೊಡೆದು ಸುಮ್ಮನಾಗಿಬಿಟ್ಟವು. ಅಲ್ಲಿಂದ ಆರಂಭವಾದ ಕಾರ್ಟೂನ್ ಸಂಬಂಧಿತ ತಗಾದೆಗಳನ್ನು ತೀರಾ ಮೊನ್ನೆ ಮೊನ್ನೆಯವರೆಗೂ ಎದುರುಗೊಳ್ಳುತ್ತಲೇ ಬಂದೆ.ಬರೋಬ್ಬರಿ ಇಪ್ಪತ್ತೆರಡು ವರ್ಷಗಳ ನಂತರ ಸುಮ್ಮನೆ ಒಂದು ನಿಲುದಾಣದಲ್ಲಿ ನಿಂತು ನೋಡುತ್ತಿದ್ದೇನೆ. ಕಾರ್ಟೂನ್ ಕುರಿತಾದ ಅಸಹಿಷ್ಣುತೆಗೆ ಪ್ರಭುತ್ವದ ಬೆಂಬಲ ಸಿಕ್ಕಿದೆ ಈಗ.

ಈಗಲೂ ನನಗೊಮ್ಮೊಮ್ಮೆ ತೀವ್ರವಾಗಿ ಅನಿಸುವುದೇನೆಂದರೆ, ವಡ್ಡರ್ಸೆ ರಘುರಾಮ ಶೆಟ್ಟರ ಕಾಲದಲ್ಲಿ ಕಾರ್ಟೂನಿಸ್ಟ್ ಆಗಿರಬೇಕಿತ್ತು ನಾನು. ಲಂಕೇಶ್ ಕಾಲದಲ್ಲಿ ಚಾಲ್ತಿಯಲ್ಲಿರಬೇಕಾದ ಕಾರ್ಟೂನಿಸ್ಟ್ ಆಗಿರಬೇಕಿತ್ತು ನಾನು. ಹೋಗಿ ಹೋಗಿ ಈಗಿನ ‘ವಾಣಿ’ಗಳ ಕಾಲದಲ್ಲಿ ಹುಟ್ಟಿಬಿಟ್ಟೆ! Write profession in wrong period! ನಮ್ಮ ಸಾಧನೆಯಲ್ಲಿ ನಮ್ಮ ಬೌದ್ಧಿಕ ಸರಕುಗಳ ಪಾಲೆಷ್ಟಿದೆಯೋ, ಅಷ್ಟೇ ಪಾಲು ನಮಗೆ ದಕ್ಕುವ ಅವಕಾಶಗಳದ್ದೂ ಇದೆ. ಅವಕಾಶವೇ ಇಲ್ಲದ ದರಿದ್ರ ಕಾಲದಲ್ಲಿ ಕಾರ್ಟೂನ್ ಎಂಬ ಮುತ್ತನ್ನು ಹಿಡಿದು ನಿಂತಿದ್ದೇನೆ. ನೀವೇನೋ ಹೇಳಬಹುದು; ಸೋಷಿಯಲ್ ಮೀಡಿಯಾ ಇದೆಯಲ್ಲ ಅಂತೆಲ್ಲ. ಇದರಲ್ಲಿ ಹೊಟ್ಟೆ ಪಾಡಿನ ಹುಕಿಯೂ ಇರುವುದನ್ನು ಯಾರೂ ಗಮನಿಸಿಸುವುದೇ ಇಲ್ಲ ನೋಡಿ.ಸಮಾನ ಸಿದ್ಧಾಂತಿಗಳ ಬೆಂಬಲವೋ, ಅವಕಾಶವೋ ವೇದಿಕೆಯೋ- ಇವುಗಳ ಹಿಂದಿನ ಹಿಪಾಕ್ರಸಿಗಳ ಚಿತ್ರಾನ್ನ ಮೆದ್ದು ಅಜೀರ್ಣಗೊಂಡಿದ್ದೇನೆ. ಸುತ್ತಲಿನ ಜಗತ್ತನ್ನು ದೂರುವುದರಲ್ಲಿ ಯಾವ ಅರ್ಥವೂ ಇಲ್ಲ ಅನಿಸುತ್ತಿದೆ.

ಅದೇಕೋ ಈ ಕಾಲ ವಿಚಿತ್ರವಾದ ಚರ್ಬಿ ಬೆಳೆಸಿಕೊಂಡು ಬೋರಲು ಬಿದ್ದುಕೊಂಡಂತಿದೆ. ದುಷ್ಕಾಲದಲ್ಲಿ ಹಗ್ಗವೂ ಹಾವಾಗಿ ಕಡಿಯುತ್ತದಂತೆ! ಗಾಂಧಿ ವೇಷದ ಗೋಡ್ಸೆಗಳ ಕಾಲವಿದು. ಪ್ರಜಾಪ್ರಭುತ್ವ ವಿಚಾರವಾಗಿ ಚೀರುತ್ತ ತನ್ನ ಅಂತ್ಯರೋಧನೆಯನ್ನು ಮಾಡುತ್ತಿರುವಂತಿದೆ. ಅದರ ಆರ್ತನಾದದೆದುರು ನಮ್ಮವು ಯಾವುದೋ ರೋಮಸಂಧಿಯ ಅಳಲು ಅಷ್ಟೆ.ನನಗೆ ಖೇದ ಇಷ್ಟೆ. ನಿಮ್ಮ ಕಾಲದ ಕಾರ್ಟೂನಿಸ್ಟ್ ಒಬ್ಬನನ್ನು ನೀವು ಕಳೆದುಕೊಳ್ಳುವ ಬಗೆಗಿನ ವಿಷಾದ ವರ್ತಮಾನ ಇಲ್ಲಿದೆ. ನಿಮ್ಮ ಕಾಲದ ‘ವಾಣಿ’ಗಳು ಮಾಡೊದ ಭೀಕರ ಕಗ್ಗೊಲೆ ಗಳಲ್ಲಿ ಇದೂ ಕೂಡಾ ಒಂದು. ಇತಿಹಾಸದ ಗರ್ಭದಲ್ಲಿ ಸಂದುಹೋದ ಪಿಳ್ಳೆ ಹುಳುವೊಂದರ ಸಾವಿನಂತೆ ಇದೂ ಆಗಿಹೋಗಲಿರುವ ಘಟನೆಯಷ್ಟೆ. ಯಾರ ಅನುಕಂಪವನ್ನೂ ಲೆಕ್ಕಕ್ಕೇ ತೆಗೆದುಕೊಳ್ಳದ ಅದರ ಬಿರುಬೀಸು ನಡಿಗೆಯೆದುರು ಎಲ್ಲ ಹಳಹಳಿಕೆಗಳೂ ನಿರರ್ಥಕ. ಕಡೆಯದಾಗಿ ಹೇಳುತ್ತೇನೆ. ಘೋಷಿತ ಶತ್ದುಗಳನ್ನಾದರೂ ನಂಬಿಬಿಡಬಹುದು. ವೇಷದ ಮಿತ್ರರನ್ನಲ್ಲ..

ನಾವು ನಮ್ಮವರೆಂದುಕೊಂಡವರು ನಮ್ಮವರಲ್ಲ ಅಂತ ಅರ್ಥವಾದಾಗ ಆಗುವ ನೋವು ಅಪಾರವಾದದ್ದು.ಇಪ್ಪತ್ತೆರಡು ವರ್ಷಗಳ ಹಿಂದೆ ಯಾವೆಲ್ಲ ಅವಕಾಶಗಳನ್ನು ನಿರಾಕರಿಸಿ ಕಲೆಯ ಕೈ ಹಿಡಿದಿದ್ದೆನೋ, ಅದೀಗ ನನ್ನನ್ನು ಅಣಕಿಸುತ್ತಿದೆ. ನಿರಾಕರಿಸಿದ ಅವಕಾಶಗಳು ಪ್ರೇತರೂಪಿಯಾಗಿ ಕಿರುಚುತ್ತಿವೆ. ಪಾಪದ ಕಲೆ ಕಾರ್ಟೂನ್! ಅನಾಥಾಶ್ರಮದಲ್ಲಿ ಹೆರಳು ಬಿಚ್ಚುತ್ತ ಸುಳ್ಳೇ ಅಭಿಮಾನ ಪಡುತ್ತಿದೆ.Shame on this time! -ದಿನೇಶ್‌ ಕುಕ್ಕುಜಡ್ಕ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ...

ಕಾಗೇರಿ ವ್ಯಂಗ್ಯಕ್ಕೆ ಕಾಂಗ್ರೆಸ್‌ ಉತ್ತರ……! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-04-

ಬಿ.ಜೆ.ಪಿ. ಮಟ್ಟಿಗೆ ಉತ್ತರ ಕನ್ನಡದ ವರಿಷ್ಠರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮಗೋಷ್ಠಿ ನಡೆಸುವುದರಲ್ಲಿ ಮಾಧ್ಯಮಗಳಿಗೆ ಬೇಕಾದಷ್ಟೇ ಚುಟುಕಾಗಿ ಉತ್ತರಿಸುವುದರಲ್ಲಿ ನಿ಼ಷ್ಣಾತರು. ಆಗಾಗ ಮಾಧ್ಯಮಗೋಷ್ಠಿ...

ನಾಯಕರಿಗೆ ಇಂಬು, ಕಾರ್ಯಕರ್ತರಿಗೆ ಚೊಂಬು!!! ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! -part-03-

ಬಿ.ಜೆ.ಪಿ. ಸೋಲಿಸಲು ಸಾಧ್ಯವಿಲ್ಲ, ಕಾಂಗ್ರೆಸ್‌ ಗೆ ಅಧಿಕಾರವಿಲ್ಲದೆ ಅಲ್ಲಿಯ ಕಾರ್ಯಕರ್ತರು ಅನಿವಾರ್ಯವಾಗಿ ಬಿ.ಜೆ.ಪಿ. ಸೇರುತ್ತಾರೆ. ಹೀಗಾದರೆ ನೀವೆಲ್ಲಾ ಕಾಂಗ್ರೆಸ್‌ ನಲ್ಲಿದ್ದು ಏನು ಪ್ರಯೋಜನ? ಎಂದು...

ಭೀಮ ಗಧೆಗೆ ಮೂರು ಚೂರಾದ ಬಿ.ಜೆ.ಪಿ.! part-02- ವೀಶ್ವೇಶ್ವರ ಹೆಗಡೆಗೆ ಮೃಧುವಾಗೇ ತಿವಿಯುತ್ತಿರುವ ಗ್ಯಾರಂಟಿಯಣ್ಣ!

ಮೇಲ್ವರ್ಗದ ಓಲೈಕೆ, ವೈದಿಕ ತುಷ್ಟೀಕರಣಗಳ ಬಿ.ಜೆ.ಪಿ. ಅನಿವಾರ್ಯವಾದಾಗ, ಮೇಲ್ನೋಟಕ್ಕೆ ಪ್ರದರ್ಶನಕ್ಕೆ ಅಹಿಂದ್‌ ಗಳನ್ನು ಬಳಸುವುದನ್ನು ಬಿಟ್ಟರೆ ಅದು ತನ್ನ ಅಜೆಂಡಾ ಉಳ್ಳವರ ಪರ ನೀತಿಯನ್ನು...

don,t do it- ಮಗುವಿನೊಂದಿಗೆ ಪೋಷಕರ ಅಪಾಯಕಾರಿ ಸೆಲ್ಫಿ; ಸ್ಮಾರ್ಟ್ ಸಿಸಿಟಿವಿಯಿಂದ ತಪ್ಪಿದ ಸಂಭಾವ್ಯ ದುರಂತ!

ಗೋಕರ್ಣ: ಪೊಲೀಸರ ಈ ಮುನ್ನೆಚ್ಚರಿಕಾ ಕ್ರಮ ಗೋಕರ್ಣದಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು ತಮ್ಮನ್ನು ಕ್ಯಾಮರಾ ಮೂಲಕ ನೋಡುತ್ತಿದ್ದಾರೆ ಎಂದು ದಂಪತಿಗೆ ತಿಳಿದಿರಲಿಲ್ಲ. ಮಗುವಿನೊಂದಿಗೆ ಪೋಷಕರ...

Latest Posts

ಅಕ್ಷತಾ ಸಾವು… ಆಶಯ ಮಾತಿನ ನೋವು……

ಸಿದ್ದಾಪುರದಲ್ಲಿ ಶೋಕ…. rcb ಕಲ್ತುಳಿತದ ಶವ ಸಿದ್ಧಾಪುರಕ್ಕೆ……. ಅಕ್ಷತಾ ಅಂಬಳ್ಳಿ ಅಂತ್ಯ ಕ್ರೀಯೆಗೆ ತಯ್ಯಾರಿ breaking…… rcb ಕಲ್ತುಳಿತದ ಪ್ರತ್ಯಕ್ಷ ಅನುಭವ…… ಆಶಯ ಅಂಬಳ್ಳಿ ಮಾತು….. ಬೆoಗಳೂರಿನ ಚಿನ್ನಸ್ವಾಮಿ ಕ್ರೀಡಾoಗಣ ದಲ್ಲಿ ಕಲ್ತುಳಿತಕ್ಕೆ ಒಳಗಾಗಿ ಜೀವತೆತ್ತ ಅಕ್ಷತಾ ಪೈ ಶವ ಸಿದ್ಧಾಪುರಕ್ಕೆ ಆಗಮಿಸಿದೆ. ಮೃತ ಅಕ್ಷತಾ ಪತಿ ಆಶಯ ನಿನ್ನೆ ಅಲ್ಲಿದ್ದರು. ನಿನ್ನೆಯ ಘಟನೆಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *