ಆಡಳಿತ ವ್ಯವಸ್ಥೆಯ ತಾರತಮ್ಯದಿಂದ ಕಂಗಾಲಾದ ಉ.ಕ. ಜಿಲ್ಲೆಯ ಪ್ರವಾಹ ಸಂತ್ರಸ್ತರನ್ನು ಕೇಳುವವರಿಲ್ಲದ ಸ್ಥಿತಿ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಎರಡು ದಿವಸಗಳಿಂದ ಭರ್ಜರಿ ಮಳೆ ಸುರಿಯುತ್ತಿದೆ. ಮುಂಗಾರು ಮಳೆ ಜನಜೀವನ ಅಸ್ತವ್ಯಸ್ತಮಾಡುವ ಮೂಲಕ ಜನರನ್ನು ಚಿಂತೆಗೀಡು ಮಾಡಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಅಂಕೋಲಾ, ಹೊನ್ನಾವರ, ಸಿದ್ಧಾಪುರ ಶಿರಸಿಗಳಲ್ಲಿ ಮಳೆ,ಪ್ರವಾಹದಿಂದ ಅಪಾರ ತೊಂದರೆಗಳಾಗಿವೆ. ಮಳೆ ಬಂತೆಂದರೆ ಮೈಜುಮ್ಮೆನ್ನುವಂತೆ ಮಾಡಿರುವ ಪ್ರವಾಹ  ಸಂತ್ರಸ್ತರನ್ನು ಆತಂಕಕ್ಕೀಡುಮಾಡಿದೆ.


೨೦೧೯-೨೦ ರಲ್ಲಿ ನಿರಂತರ ಸುರಿದ ಮಳೆಯಲ್ಲಿ ನೂರಾರು ಮನೆಗಳು ಕುಸಿದುಬಿದ್ದು ಜನ ಸಮಸ್ಯೆಗೆ ಸಿಲುಕಿದ್ದರು. ಅಲ್ಲಿಂದ ಮೂರು ವರ್ಷಗಳ ಈಚೆಗೆ ಪ್ರತಿವರ್ಷವೆಂಬಂತೆ ಮಳೆ ಸುರಿದು ಪ್ರವಾಹದ ತೊಂದರೆಗಳಾಗಿವೆ. ಆದರೆ ಪ್ರವಾಹ ಪೀಡಿತರಿಗೆ ನೆರವು ನೀಡುವ ವಿಚಾರದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ತಾರತಮ್ಯ ನೀತಿ ಎದ್ದುಕಾಣುವಂತಾಗಿದೆ. ಶಿರಸಿಯ ಮೊಗವಳ್ಳಿ,ಸಿದ್ಧಾಪುರದ ಗುಂಜಗೋಡಿನ ಕೆಲವು ಮನೆಗಳಿಗೆ ಸಂತ್ರಸ್ತರಿಗೆ ೫ ಲಕ್ಷ ರೂಪಾಯಿಗಳ ವರೆಗೆ ಪರಿಹಾರ ನೀಡಿರುವ ಜಿಲ್ಲಾಡಳಿತ ಸಿದ್ಧಾಪುರದ ಹೆಮ್ಮನಬೈಲ್‌, ಅಕ್ಕುಂಜಿಗಳ ಸಂತ್ರಸ್ತರಿಗೆ ಈ ವರೆಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನೂ ನೀಡಿಲ್ಲ.


ಪ್ರತಿವರ್ಷ ಮಳೆಗಾಲದಲ್ಲಿ ತೊಂದರೆಗೆ ಸಿಲುಕುವ ಅಂಕೋಲಾ,ಹೊನ್ನಾವರ,ಯಲ್ಲಾಪುರ, ಸಿದ್ದಾಪುರ ಶಿರಸಿ ತಾಲೂಕುಗಳ ಜನರು ಸರ್ಕಾರದ ತಾರತಮ್ಯ ನೀತಿ, ಆಡಳಿತಶಾಹಿಗಳ ನಿರ್ಲಕ್ಷಗಳಿಗೆ ಗುರಿಯಾಗುವಂತಾಗಿದೆ. ಈ ವರ್ಷ ಮೇ ತಿಂಗಳಲ್ಲೇ ಪ್ರಾರಂಭವಾಗಿರುವ ಮುಂಗಾರು ಮಳೆ ಜನರ ಆತಂಕ, ಅನುಮಾನಗಳನ್ನು ಹೆಚ್ಚಿಸಿದೆ.ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಾಶ್ರಿತರಾದವರಿಗೆ ಪ್ರಕೃತಿ ವಿಕೋಪದಿಂದ ಬಾಧಿರಾದವರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಿಲ್ಲ. ಬಡವರು ನಿರ್ಗತಿಕರಿಗೆ ಆಶ್ರಯ ಮನೆಗಳು ಸಿಗದೆ ತೊಂದರೆಯಾಗಿದೆ. ರಾಜ್ಯದ ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ವಸತಿ ಯೋಜನೆಗಳ ನೆರವು ಸಿಕ್ಕಿಲ್ಲ. ಪ್ರವಾಹದಿಂದ ಬಾಧಿತರಾದ ಅನೇಕರಿಗೆ ಸಿಗಬೇಕಾದ ೫ ಲಕ್ಷಗಳ ಪರಿಹಾರ ಧನದಲ್ಲಿ ಈವರೆಗೆ ಒಂದು ಲಕ್ಷ ರೂಪಾಯಿಗಳೂ ಕೈಗೆ ಸಿಕ್ಕಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳ ಸ್ಥಿತಿ ಹೀಗಿರುವುದರಿಂದ ಸಹಜವಾಗಿ ಈ ವರ್ಷದ ಮಳೆ, ಪ್ರವಾಹದ  ಭೀತಿ ಜನಸಾಮಾನ್ಯರನ್ನು ಕಂಗೆಡೆಸಿದೆ. ಮಳೆಗಾಲದ ಮೂರುತಿಂಗಳು ದುಡಿಮೆ, ಆದಾಯ ಇಲ್ಲದ ಜಿಲ್ಲೆಯ ಶ್ರಮಿಕರು ಸರ್ಕಾರದ ನಿರ್ಲಕ್ಷ, ತಾರತಮ್ಯ ನೀತಿಯಿಂದ ಕಂಗೆಟ್ಟಂತಿದ್ದಾರೆ. ಆಡಳಿತ ವ್ಯವಸ್ಥೆ, ಸರ್ಕಾರ  ಇಂಥ ಆಪತ್ತಿನ ವೇಳೆಯಲ್ಲಿ ನೆರವಿಗೆ ಬಾರದಿದ್ದರೆ ಅಂಥ ಸರ್ಕಾರದಿಂದ ಜನರಿಗೆ ಏನು ಉಪಯೋಗ ಎನ್ನುವ ಪ್ರಶ್ನೆ ಎದ್ದಿದೆ. 


 ಈ ಬಗ್ಗೆ ಸಮಾಜಮುಖಿ ಡಾಟ್‌ ನೆಟ್ ಪ್ರತಿನಿಧಿ ಜೊತೆ ಮಾತನಾಡಿದ ಸೋವಿನಕೊಪ್ಪ ಗ್ರಾಮ ಪಂಚಾಯತ್‌ ಅಧ್ಯಕ್ಷ ಮೋಹನ ಗೌಡ ಈಗಿನ ಸರ್ಕಾರ ಅಭಿವೃದ್ಧಿಯ ಬಗ್ಗೆ ಪ್ರಚಾರ ಮಾಡುತ್ತಿದೆ. ಆದರೆ ಕಳೆದ ಮೂರುವರ್ಷಗಳಿಂದ ಗ್ರಾಮೀಣ ಬಡ ಜನರಿಗೆ ನೀಡುವ ಸೌಲಭ್ಯಗಳನ್ನೇ ನೀಡಿಲ್ಲ ನಮ್ಮ ಗ್ರಾ.ಪಂ.ವ್ಯಾಪ್ತಿ, ತಾಲೂಕು, ಕ್ಷೇತ್ರ ಜಿಲ್ಲೆಗಳಲ್ಲಿ ಪ್ರವಾಹ ಪೀಡಿತರಿಗೆ ನೀಡಬೇಕಾದ ಪರಿಹಾರ ಧನ, ವಸತಿ ಯೋಜನೆಯ ಸಹಾಯಧನಗಳನ್ನು ನೀಡಿಲ್ಲ ಭಾರತದ ಅಭಿವೃದ್ಧಿಯೆಂದರೆ ನಗರಗಳು,ಶ್ರೀಮಂತರಿಗೆ ಅನುಕೂಲ ಮಾಡುವುದಲ್ಲ ಗ್ರಾಮೀಣ ಪ್ರದೇಶಗಳ ಜನ ಜೀವನ,ಸಂರಚನೆ ಸುಧಾರಿಸಿದರೆ ಆ ವ್ಯವಸ್ಥೆ, ಸರ್ಕಾರಕ್ಕೆ ಗೌರವ ಎಂದಿದ್ದಾರೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *