ಕಾನಗೋಡು ಕೆರೆಭೇಟೆ ದೇವಸ್ಥಾನ ಸಮೀತಿ ವಿರುದ್ಧ ಒಂದು, ಭೇಟೆಗಾರರ ವಿರುದ್ಧ ಒಟ್ಟೂ೫ ಪೊಲೀಸ್‌ ದೂರುಗಳು!

ಸಾಗರ,ಸೊರಬ ಜನರಿಂದ ಪೊಲೀಸರ ಮೇಲೆ ಹಲ್ಲೆ…

ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅವಾಚ್ಯ ಶಬ್ದದಿಂದ ಬೈದು ಕಲ್ಲಿನಿಂದ ಹಲ್ಲೆ ನಡೆಸಿರುವ 11 ಜನರ ಮೇಲೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ
ಕಾನುಗೋಡು ಕೆರೆ ಬೇಟೆಯಲ್ಲಿ ಕರ್ತವ್ಯದಲ್ಲಿದ್ದ ಸಿದ್ದಾಪುರ ಠಾಣೆಯ ಪಿ ಎಸ್ ಐ ಮಾಂತಪ್ಪ ಜಿ ಕುಂಬಾರ ಹಾಗೂ ಸಿಬ್ಬಂದಿಗಳ ಮೇಲೆ ಕೆರೆಯಲ್ಲಿ ಮೀನು ಸಿಗಲಿಲ್ಲ ಎಂದು ಆಕ್ರೋಶಗೊಂಡ ಮೀನುಗಾರರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ ಠಾಣೆಯ ಪಿಎಸ್ಐ ಮಹಾಂತಪ್ಪ ಜಿ ಕುಂಬಾರ್ ಸಿಬ್ಬಂದಿಗಳಾದ ಪ್ರಕಾಶ್ ತಲ್ವಾರ್ ರಮೇಶ್ ಕೂಡಲ್ , ಸಂದೀಪ ನಾಯ್ಕ್ , ಮಹಮ್ಮದ್ ಗೌಸ್, ವಾಣಿ ನೇತ್ರೇಕರ್, ಸುಲೋಚನ ನಾಯ್ಕ್, ಸರ ಸ್ವತಿ ಗುಗ್ಗರಿ ಎನ್ನುವವರ ಮೇಲೆ ಹಲ್ಲೆ ಗಳಾಗಿದ್ದು
ಹಲ್ಲೆ ನಡೆಸಿದ ರಾಮಚಂದ್ರ ಈರಪ್ಪ ಸಾಗರ, ಮಂಜಪ್ಪ ಶಿವಪ್ಪ ಹುಲ್ತಿಕೊಪ್ಪ , ದೇವರಾಜ್ ಮೂಕಪ್ಪ ಮಡಿವಾಳ ಹಾನಗಲ್ , ಕೃಷ್ಣ ಕೆರಿಯಪ್ಪ ಕಮರೂರು, ಭರತ್ ಜಯಪ್ಪ ಚನ್ನಯ್ಯ ಸೊರಬ, ದೀಪಕ್ ಶಾಮಣ್ಣ ಜಿಗಳೆಮನೆ, ಮಾಲ್ತೇಶ್ ಈರಪ್ಪ ಚಂದ್ರಗುತ್ತಿ ,ಗಂಗಾಧರ ಈರಪ್ಪ ಹೊಸಳ್ಳಿ ಆನವಟ್ಟಿ, ಗಿರೀಶ್ ಮಂಜಪ್ಪ ಸುಳ್ಳುರ್, ಶ್ರೀಧರ್ ನೀಲಪ್ಪ ಹಾನಗಲ್ , ವೀರೇಶ್ ಮಾಲ್ತೇಶ್ ಹಾನಗಲ್ ಎನ್ನುವವರ ಮೇಲೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಕೆರೆಮೀನು ಬೇಟೆಗೆ ಬಂದ ಬೇಟೆಗಾರರು ಕೆರೆಯಲ್ಲಿ ಮೀನುಗಳು ಸಿಗಲಿಲ್ಲ ಎಂದು ಕೋಪಗೊಂಡವರು ಕಾನಗೋಡ್ ನಲ್ಲಿ ದುಂಡಾವರ್ತನೆ ಮಾಡಿದ್ದು ಮನೆ, ಅಂಗಡಿ ಒಳಗೆ ಅಕ್ರಮವಾಗಿ ಪ್ರವೇಶವನ್ನು ಮಾಡಿ ಹಲವಾರು ವಸ್ತುಗಳನ್ನು ಧ್ವಂಸ ಮಾಡಿ ನಾಶ ಪಡಿಸಿದ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವೀರಭದ್ರ ಮೈಲಾ ನಾಯ್ಕ ರವರ ಮನೆಯ ಸೌಂಡ್ ಬಾಕ್ಸ್, ಮೈಕ್, ಎಂಪಿ ಪ್ಲೇಯರ್ಸ್ ಒಡೆದು ನಾಶ ಮಾಡಿ ಒಟ್ಟು 1,26,000 ರೂ ನಷ್ಟಪಡಿಸಿದ್ದಾರೆ.


ಅದೇ ರೀತಿ ಮಾರುತಿ ರಾಮ ನಾಯ್ಕ್ ರವರ ಮನೆಗೆ ಅಕ್ರಮವಾಗಿ ಪ್ರವೇಶವನ್ನು ಮಾಡಿ ಫ್ರಿಜ್ಜು ಶೋಕೇಸ್ ಚಪ್ಪಡಿ ಕಲ್ಲು ನಾಶಪಡಿಸಿ ಅಕ್ರಮವಾಗಿ ಅಂಗಡಿಯ ಸೆಟ್ರೆಸ್ ಮುರಿದು ಒಳನುಗ್ಗಿ ಸಕ್ಕರೆಯ ಚೀಲ ನೋಟ್ಬುಕ್ ಹಾಗೂ 14 ಸಾವಿರ ನಗದು ಸೇರಿದಂತೆ ಎರಡು ಲಕ್ಷ ರೂಪಾಯಿ ನಷ್ಟ ಪಡಿಸಿದ್ದಾರೆ
ಮಂಜುನಾಥ್ ಸಣ್ಣ ನಾಯ್ಕ ರವರ ಅಂಗಡಿಯ ಬೀಗವನ್ನು ಒಡೆದು ಅಕ್ರಮವಾಗಿ ಒಳಪ್ರವೇಶಿಸಿ ಅಂಗಡಿಯಲ್ಲಿದ್ದ ಮಿಲ್ಕ್ ಆನ್ಲೈಸೆರ್, ತೂಕಮಾಡುವ ಎಲೆಕ್ಟ್ರಿಕಲ್ ಯಂತ್ರ, ಪ್ಲಾಸ್ಟಿಕ್ ಕುರ್ಚಿಗಳನ್ನು ಮುರಿದು ಒಟ್ಟು 60 ಸಾವಿರ ಮೌಲ್ಯದ ವಸ್ತುಗಳನ್ನು ನಾಶ ಪಡಿಸುವ ಬಗ್ಗೆ ದೂರು ನೀಡಿದ್ದಾರೆ
ಹಾಗೆ ವಾಸು ಚನ್ನ ನಾಯ್ಕ್ ಇವರ ಅಂಗಡಿಯಲ್ಲಿ ಫ್ರಿಡ್ಜು ಹಿಟ್ಟಿನ ಕಂಪ್ಯೂಟರ್ ಜೆರಾಕ್ಸ್ ಮಶೀನ್ ಎಲೆಕ್ಟ್ರಿಕಲ್ ತೂಕದ ಯಂತ್ರ ಅಂಗಡಿಯಲ್ಲಿದ್ದ ಕಿರಣಿ 1.50 ಲಕ್ಷ ನಗದು ಹಾಗೂ ವಸ್ತುಗಳ ಮೌಲ್ಯ ಒಟ್ಟು 1,80,000 ಮೌಲ್ಯ ದ ವಸ್ತು ನಾಶಪಡಿಸಿದ್ದಾರೆ ಘಟನೆ ಗೆ ಸಂಬಂಧಿಸಿದಂತೆ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ

ಕಾನಗೋಡು ಈಶ್ವರ ದೇವಸ್ಥಾನದ ಕಮಿಟಿಯವರು ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಊರಿನ ಕೆರೆಯಲ್ಲಿ ಮೀನು ಇಲ್ಲದಿರುವ ವಿಷಯ ತಿಳಿದಿದ್ದರೂ ಕೆರೆಯಲ್ಲಿ ದೊಡ್ಡ ದೊಡ್ಡ ಮೀನುಗಳಿವೆ ಎಂದು ಕರ ಪತ್ರ ಮುದ್ರಿಸಿ ಪ್ರಚಾರವನ್ನು ಮಾಡಿ ಮೋಸ ಮಾಡಿರುವ ಬಗ್ಗೆ ಹಾನಗಲ್ ಮೂಲದ ಹನುಮಂತಪ್ಪ ಎನ್ನುವವರು ಠಾಣೆಯಲ್ಲಿ ದೂರು ನೀಡಿದ್ದಾರೆ
ಒಂದು ಕೂಣಿ ಗೆ 600 ರೂ ನಿಗದಿಪಡಿಸಿ 4ಸಾವಿರ ಜನರಿಂದ ಒಟ್ಟು 24 ಲಕ್ಷ ರೂಪಾಯಿ ಸಂಗ್ರಹ ಮಾಡಿ ಮೋಸ ಮಾಡಿರುವ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *